AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಚಿತ್ರವೆನಿಸಿದ್ರೂ ಸತ್ಯ: ಮೃತ ವ್ಯಕ್ತಿಗೆ ಉಸಿರು ಮರಳಿಸಿದ ರಸ್ತೆಗುಂಡಿ

ರಸ್ತೆಗುಂಡಿಗಳು ಎನ್ನುವ ಶಬ್ದ ಕೇಳಿದಾಕ್ಷಣ ನಿಮ್ಮ ಮುಖದಲ್ಲಿ ನಗು ಮೂಡುವುದಿಲ್ಲ ಬದಲಾಗಿ ಮುಖ ಕೆಂಪಾಗುತ್ತದೆ. ರಸ್ತೆಗುಂಡಿಗಳು ಜೀವತೆಗೆದಿರುವುದನ್ನು ಕೇಳಿದ್ದೇವೆ, ಅಪಘಾತದಿಂದ ಸಾಕಷ್ಟು ಮಂದಿ ಗಂಭೀರ ಸ್ವರೂಪದ ಗಾಯಗಳನ್ನು ಕೂಡ ಅನುಭವಿಸಿದ್ದಾರೆ, ಆದರೆ ಜೀವಕೊಟ್ಟಿರುವುದನ್ನು ನೋಡಿದ್ದೀರಾ, ಈ ಘಟನೆ ವಿಚಿತ್ರವೆನಿಸಿದರೂ ಸತ್ಯ. 80 ವರ್ಷದ ವ್ಯಕ್ತಿಗೆ ಈ ರಸ್ತೆಗುಂಡಿಯೇ ಜೀವರಕ್ಷಕ ಎಂದರೆ ತಪ್ಪಾಗಲಾರದು.

ವಿಚಿತ್ರವೆನಿಸಿದ್ರೂ  ಸತ್ಯ: ಮೃತ ವ್ಯಕ್ತಿಗೆ ಉಸಿರು ಮರಳಿಸಿದ ರಸ್ತೆಗುಂಡಿ
ಆಸ್ಪತ್ರೆImage Credit source: NDTV
Follow us
ನಯನಾ ರಾಜೀವ್
|

Updated on: Jan 13, 2024 | 7:54 AM

ರಸ್ತೆಗುಂಡಿಗಳು(Patholes) ಎನ್ನುವ ಶಬ್ದ ಕೇಳಿದಾಕ್ಷಣ ನಿಮ್ಮ ಮುಖದಲ್ಲಿ ನಗು ಮೂಡುವುದಿಲ್ಲ ಬದಲಾಗಿ ಮುಖ ಕೆಂಪಾಗುತ್ತದೆ. ರಸ್ತೆಗುಂಡಿಗಳು ಜೀವತೆಗೆದಿರುವುದನ್ನು ಕೇಳಿದ್ದೇವೆ, ಅಪಘಾತದಿಂದ ಸಾಕಷ್ಟು ಮಂದಿ ಗಂಭೀರ ಸ್ವರೂಪದ ಗಾಯಗಳನ್ನು ಕೂಡ ಅನುಭವಿಸಿದ್ದಾರೆ, ಆದರೆ ಜೀವಕೊಟ್ಟಿರುವುದನ್ನು ನೋಡಿದ್ದೀರಾ, ಈ ಘಟನೆ ವಿಚಿತ್ರವೆನಿಸಿದರೂ ಸತ್ಯ. ಹರ್ಯಾಣದ  80 ವರ್ಷದ ವ್ಯಕ್ತಿಗೆ ಈ ರಸ್ತೆಗುಂಡಿಯೇ ಜೀವರಕ್ಷಕ ಎಂದರೆ ತಪ್ಪಾಗಲಾರದು.

ವೈದ್ಯರು ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಘೋಷಿಸಿಬಿಟ್ಟಿದ್ದು, ಕುಟುಂಬಸ್ಥರೆಲ್ಲರೂ ಅಳುತ್ತಾ ಶವವನ್ನು ಆಂಬ್ಯುಲೆನ್ಸ್​ನಲ್ಲಿ ಮನೆಗೆ ಸಾಗಿಸುತ್ತಿದ್ದರು. ಒಂದೆಡೆ ಅಂತ್ಯಕ್ರಿಯೆಗೆ ಕಟ್ಟಿಗೆಗಳನ್ನು ಸಂಗ್ರಹಿಸಲಾಗುತ್ತಿತ್ತು.

ಆಂಬ್ಯುಲೆನ್ಸ್​ ತೆರಳುತ್ತಿದ್ದಾಗ ರಸ್ತೆಗುಂಡಿಯೊಂದರ ಮೇಲೆ ಹಾದು ಹೋಯಿತು, ಅದಾದ ಬಳಿಕ ಕೈ ಚಲನೆ ಬಂದಿದ್ದನ್ನು ಅವರ ಮೊಮ್ಮಗ ನೋಡಿದ್ದ. ಹೃದಯಬಡಿತವನ್ನೂ ಗಮನಿಸಿದ, ತಕ್ಷಣ ಆಂಬ್ಯುಲೆನ್ಸ್​ ಡ್ರೈವರ್​​ಗೆ ತಕ್ಷಣ ಅಲ್ಲೇ ಹತ್ತಿರದಲ್ಲಿರುವ ಯಾವುದಾದರೂ ಆಸ್ಪತ್ರೆಗೆ ಕರೆದೊಯ್ಯುವಂತೆ ಮನವಿ ಮಾಡಲಾಯಿತು. ಅಲ್ಲಿನ ವೈದ್ಯರು ವ್ಯಕ್ತಿ ಬದುಕಿದ್ದಾರೆ ಎಂದು ಘೋಷಿಸಿದರು.

ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಇನ್ನೂ ಉಳಿದಿವೆ 7878 ರಸ್ತೆ ಗುಂಡಿ, ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸುವ ಸ್ಥಿತಿ

80 ವರ್ಷದ ವ್ಯಕ್ತಿ ದರ್ಶನ್ ಸಿಂಗ್  ಹೃದ್ರೋಗದಿಂದ ಬಳಲುತ್ತಿದ್ದು, ಕರ್ನಾಲ್​ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ. ಆದರೆ ಈ ಘಟನೆಯನ್ನು ಪವಾಡ ಎಂದೇ ಕುಟುಂಬದವರು ನಂಬಿದ್ದಾರೆ.

ದರ್ಶನ್ ಸಿಂಗ್ ಅವರ ಮೊಮ್ಮಗರಲ್ಲಿ ಒಬ್ಬರಾದ ಬಲ್ವಾನ್ ಸಿಂಗ್ ಕರ್ನಾಲ್ ಬಳಿಯ ನಿಸಿಂಗ್‌ನಲ್ಲಿ ವಾಸಿಸುತ್ತಿದ್ದರು. ನಾಲ್ಕು ದಿನಗಳಿಂದ ಅವರ ಅಜ್ಜ ವೆಂಟಿಲೇಟರ್‌ನಲ್ಲಿದ್ದರು ಮತ್ತು ಗುರುವಾರ ಬೆಳಿಗ್ಗೆ ಅವರ ಹೃದಯ ಬಡಿತ ನಿಂತಿದೆ ಎಂದು ವೈದ್ಯರು ಹೇಳಿದ್ದರು ಎಂದು ಮೊಮ್ಮಗ ತಿಳಿಸಿದ್ದಾರೆ.

ಅವರನ್ನು ವೆಂಟಿಲೇಟರ್‌ನಿಂದ ಹೊರತೆಗೆಯಲಾಯಿತು ಮತ್ತು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ನಾಲ್ಕು ದಿನಗಳಿಂದ ಅವರು ಪಟಿಯಾಲಾದಲ್ಲಿ ವೆಂಟಿಲೇಟರ್‌ನಲ್ಲಿದ್ದರು ಆದರೆ ಈಗ ಅವರು ಸ್ವಂತವಾಗಿ ಉಸಿರಾಡುತ್ತಿದ್ದಾರೆ ಎಂದು ಕುಟುಂಬ ಹೇಳಿದೆ. ಶೀಘ್ರ ಗುಣಮುಖರಾಗಲಿ ಎಂಬುದು ಎಲ್ಲರ ಹಾರೈಕೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!