Bihar Bridge Collapse: ಮೂರನೇ ಬಾರಿ ಕುಸಿದು ಬಿತ್ತು ಬಿಹಾರದಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆ

ಅಧಿಕಾರಿಗಳ ಪ್ರಕಾರ, ಒಂಬತ್ತು ಮತ್ತು ಹತ್ತು ಸೇತುಬಂಧಗಳ ನಡುವಿನ ರಚನೆಯು ಸುಲ್ತಂಗಂಜ್‌ನಿಂದ ಭಾಗಲ್ಪುರದ ಅಗ್ವಾನಿ ಘಾಟ್‌ವರೆಗೆ ವ್ಯಾಪಿಸಿದ್ದು, ಇದು ಗಂಗಾನದಿಗೆ ಬಿದ್ದಿದೆ. ಎಸ್‌ಪಿ ಸಿಂಗ್ಲಾ ಕನ್‌ಸ್ಟ್ರಕ್ಷನ್ ಪ್ರೈ.ಲಿ.ನಿಂದ ರೂ.1710 ಕೋಟಿ ವೆಚ್ಚದಲ್ಲಿ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಇದು ಬಿಹಾರ ರಾಜ್ಯ ಪುಲ್ ನಿರ್ಮಾಣ್ ನಿಗಮ್ ಲಿಮಿಟೆಡ್‌ಗೆ ಸೇರಿದ್ದು.

Bihar Bridge Collapse: ಮೂರನೇ ಬಾರಿ ಕುಸಿದು ಬಿತ್ತು ಬಿಹಾರದಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆ
ಬಿಹಾರದಲ್ಲಿ ಕುಸಿದ ಸೇತುವೆ
Follow us
|

Updated on: Aug 17, 2024 | 4:47 PM

ಪಾಟ್ನಾ ಆಗಸ್ಟ್ 17:  ಬಿಹಾರದಲ್ಲಿ (Bihar) ಆಗುವನಿ ಘಾಟ್ ಮತ್ತು ಸುಲ್ತಂಗಂಜ್ ನಡುವೆ ಗಂಗಾ ನದಿಯ (River Ganga) ಮೇಲೆ ನಿರ್ಮಾಣ ಹಂತದಲ್ಲಿರುವ ನಾಲ್ಕು ಪಥದ ಸೇತುವೆಯ ಒಂದು ಭಾಗವು ಶನಿವಾರ ಬೆಳಿಗ್ಗೆ ಮತ್ತೆ ಕುಸಿದಿದೆ. ನಿರ್ಮಾಣ ಹಂತದಲ್ಲಿದ್ದ ಸೇತುವೆಯ ವಿವಿಧ ಭಾಗಗಳು ಕುಸಿದಿರುವುದು ಇದು ಮೂರನೇ ಬಾರಿ ಎಂದು ರಸ್ತೆ ನಿರ್ಮಾಣ ವಿಭಾಗದ (RCD) ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಒಂಬತ್ತು ಮತ್ತು ಹತ್ತು ಸೇತುಬಂಧಗಳ ನಡುವಿನ ರಚನೆಯು ಸುಲ್ತಂಗಂಜ್‌ನಿಂದ ಭಾಗಲ್ಪುರದ ಅಗ್ವಾನಿ ಘಾಟ್‌ವರೆಗೆ ವ್ಯಾಪಿಸಿದ್ದು, ಇದು ಗಂಗಾನದಿಗೆ ಬಿದ್ದಿದೆ. ಎಸ್‌ಪಿ ಸಿಂಗ್ಲಾ ಕನ್‌ಸ್ಟ್ರಕ್ಷನ್ ಪ್ರೈ.ಲಿ.ನಿಂದ ರೂ.1710 ಕೋಟಿ ವೆಚ್ಚದಲ್ಲಿ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಇದು ಬಿಹಾರ ರಾಜ್ಯ ಪುಲ್ ನಿರ್ಮಾಣ್ ನಿಗಮ್ ಲಿಮಿಟೆಡ್‌ಗೆ ಸೇರಿದ್ದು.

ಕಳೆದ ವರ್ಷ ಜೂನ್ 5 ರಂದು, 3.11 ಕಿಮೀ ಉದ್ದದ ನಾಲ್ಕು ಪಥದ ಸೇತುವೆಯ ಒಂಬತ್ತರಿಂದ ಹನ್ನೊಂದು ಪಿಲ್ಲರ್‌ಗಳ ಮೇಲಿನ ಸೇತುವೆಯ ಚಪ್ಪಡಿಗಳು ನದಿಗೆ ಬಿದ್ದಿತ್ತು. ಅದೇ ಸೇತುವೆಯ ಇನ್ನೊಂದು ಭಾಗವು ಏಪ್ರಿಲ್ 2022 ರಲ್ಲಿ ಕುಸಿದಿತ್ತು.

ಉತ್ತರ ಬಿಹಾರವನ್ನು ಅದರ ದಕ್ಷಿಣದೊಂದಿಗೆ ಸಂಪರ್ಕಿಸಲು ಗಂಗಾ ನದಿಯ ಮೇಲೆ ಆರನೆಯ ಸೇತುವೆಯು ಸುಲ್ತಾನಗ್ಂಜ್, ಖಗರಿಯಾ, ಸಹರ್ಸಾ, ಮಾಧೇಪುರ ಮತ್ತು ಸುಪೌಲ್‌ಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಇದು ಗಂಗಾ ನದಿಗೆ ಅಡ್ಡಲಾಗಿ NH 31 ಮತ್ತು NH 80 ಅನ್ನು ಕೂಡ ಸಂಪರ್ಕಿಸುತ್ತದೆ.

ಐಐಟಿ-ರೂರ್ಕಿ ತಜ್ಞರು ಗಮನಿಸಿದ ನಿರ್ಮಾಣ ಸಾಮಗ್ರಿಗಳಲ್ಲಿ ಎದ್ದುಕಾಣುವ ವಿನ್ಯಾಸ ದೋಷ ಮತ್ತು ಗುಣಮಟ್ಟದ ರಾಜಿಗಳ ಹೊರತಾಗಿಯೂ, ಸೇತುವೆಯನ್ನು ಮರುನಿರ್ಮಾಣ ಮಾಡಲು RCD ನಿರ್ಮಾಣ ಸಂಸ್ಥೆಗೆ ಅನುಮತಿ ನೀಡಿತು. ಇಲಾಖೆಯು ಆರಂಭದಲ್ಲಿ ಕಪ್ಪು ಪಟ್ಟಿ ಸೇರಿದಂತೆ ನಿರ್ಮಾಣ ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪ್ರಸ್ತಾಪಿಸಿತ್ತು, ಆದರೆ ನಂತರ ಸೇತುವೆಯನ್ನು ಮರುನಿರ್ಮಾಣ ಮಾಡಲು ಸಂಸ್ಥೆ ಅನುಮತಿಸಿತ್ತು.

ಇದನ್ನೂ ಓದಿ: Himachal Pradesh Cloudburst: ಹಿಮಾಚಲದಲ್ಲಿ ಮೇಘಸ್ಫೋಟದಿಂದ 58 ರಸ್ತೆಗಳು ಬಂದ್; ಆಗಸ್ಟ್ 20ರವರೆಗೆ ಭಾರೀ ಮಳೆ

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು (ಪಿಐಎಲ್) ಎಂದು ಪಾಟ್ನಾ ಹೈಕೋರ್ಟ್‌ನಲ್ಲಿ ಸಲ್ಲಿಸಿದ ವ್ಯಕ್ತಿಗಳು ಎತ್ತಿರುವ ಮನವಿಗಳನ್ನೂ ಇಲಾಖೆ ನಿರ್ಲಕ್ಷಿಸಿದೆ. ನಿರ್ಮಾಣ ಸಂಸ್ಥೆಯು ಸೇತುವೆ ನಿರ್ಮಾಣಕ್ಕೆ ಗುಣಮಟ್ಟವಿಲ್ಲದ ನಿರ್ಮಾಣ ಸಾಮಗ್ರಿಗಳನ್ನು ಬಳಸುತ್ತಿದೆ ಎಂದು ಪಿಐಎಲ್‌ಗಳು ಆರೋಪಿಸಿದ್ದು, ಇಲಾಖೆ ಅಧಿಕಾರಿಗಳು ಅಕ್ರಮಗಳ ಬಗ್ಗೆ ಮೌನ ವಹಿಸಿದ್ದಾರೆ.

ಆರ್‌ಸಿಡಿ ಪೋರ್ಟ್‌ಫೋಲಿಯೋ ಹೊಂದಿರುವ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರ್‌ಸಿಡಿ) ಪ್ರತ್ಯಯ್ ಅಮೃತ್ ಅವರಿಂದ ಇಲ್ಲಿವರೆಗೆ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಇದೆ ಎಂದ ಡಿಕೆ ಸುರೇಶ್
ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಇದೆ ಎಂದ ಡಿಕೆ ಸುರೇಶ್
ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ
ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು