AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡನೇ ಬಾರಿಗೆ ಕೊರೊನಾ ಕುಣಿತದ ಆತಂಕ: ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ!

ಮಾರುಕಟ್ಟೆ ಕುಸಿತ ಕಂಡ ನಡುವೆಯೂ ಪ್ರಮುಖ 580 ಷೇರುಗಳು ಏರಿಕೆ ಕಂಡರೆ, 2,381 ಷೇರು ಕುಸಿತಗೊಂಡಿವೆ. 163 ಷೇರುಗಳು ಯಾವುದೇ ಬದಲಾವಣೆ ಕಂಡಿಲ್ಲ. ಎರಡನೇ ಅಲೆ ಅಬ್ಬರಿಸುವ ಬಗ್ಗೆ ತಜ್ಞರು ಎಚ್ಚರಿಸುತ್ತಿದ್ದಂತೆ ವಿಶ್ವದ ಬಹುತೇಕ ಮಾರುಕಟ್ಟೆ ಡೌನ್​ ಆಗಿದೆ.

ಎರಡನೇ ಬಾರಿಗೆ ಕೊರೊನಾ ಕುಣಿತದ ಆತಂಕ: ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ!
ಷೇರು ಮಾರುಕಟ್ಟೆ
ರಾಜೇಶ್ ದುಗ್ಗುಮನೆ
|

Updated on: Dec 21, 2020 | 5:58 PM

Share

ಮುಂಬೈ: ಬ್ರಿಟನ್​ನಲ್ಲಿ ಕೊರೊನಾ ವೈರಸ್​ ಎರಡನೇ ಅಲೆಯ ಭೀತಿ ಎದುರಾಗಿದೆ. ರೂಪಾಂತರಗೊಂಡಿರುವ ಕೊರೊನಾ ವೈರಸ್​ ಸಾಕಷ್ಟು ಅಪಾಯಕಾರಿ ಎನ್ನುವ ವಾದವನ್ನು ತಜ್ಞರು ಮುಂದಿಡುತ್ತಿದ್ದಂತೆ ವಿಶ್ವದ ಷೇರು ಮಾರುಕಟ್ಟೆ ಇಳಿಕೆ ಹಾದಿ ಹಿಡಿದೆ. ಭಾರತದ ಷೇರು ಮಾರುಕಟ್ಟೆ ಕೂಡ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದೆ.

ಮಧ್ಯಾಹ್ನದ ವೇಳೆಗೆ ಸೆನ್ಸೆಕ್ಸ್​ ಸೂಚ್ಯಂಕ​  2,037 ಅಂಕ ಕಳೆದುಕೊಂಡು 44,923 ಅಂಕಕ್ಕೆ ಇಳಿಕೆ ಆಗಿತ್ತು. ನಂತರ ಮಾರುಕಟ್ಟೆ ಕೊಂಚ ಚೇತರಿಕೆ ಕಂಡಿತ್ತು. ಮಧ್ಯಾಹ್ನ 3:30ಕ್ಕೆ ಷೇರು ವಹಿವಾಟು ಮುಕ್ತಗೊಳ್ಳುವ ವೇಳೆಗೆ ಸೆನ್ಸೆಕ್ಸ್​ ಸೂಚ್ಯಂಕ ಶೇ. 3.00 ಅಥವಾ 1,406.73 ಅಂಕ ಕಳೆದುಕೊಂಡು 45553.96 ಅಂಕಕ್ಕೆ  ನಿಂತಿದೆ. ಇನ್ನು, ನಿಫ್ಟಿ ಶೇ. 3.14 ಅಥವಾ 432.10 ಅಂಕ ಕಳೆದುಕೊಂಡು 13328.40 ಅಂಕಕ್ಕೆ ಕುಸಿದಿದೆ.

ಮಾರುಕಟ್ಟೆ ಕುಸಿತ ಕಂಡ ನಡುವೆಯೂ ಪ್ರಮುಖ 580 ಷೇರುಗಳು ಏರಿಕೆ ಕಂಡರೆ, 2,381 ಷೇರು ಕುಸಿತಗೊಂಡಿವೆ. 163 ಷೇರುಗಳು ಯಾವುದೇ ಬದಲಾವಣೆ ಕಂಡಿಲ್ಲ. ನಿಫ್ಟಿ ಫಿಫ್ಟಿ ಷೇರುಗಳಾದ ಒಎನ್​ಜಿಸಿ, ಟಾಟಾ ಮೋಟಾರ್ಸ್​, ಗೈಲ್​, ಹಿಂಡ್​ಲಾಕ್​ ಮತ್ತು ಐಒಎಸ್​ ಷೇರುಗಳು ಅತಿ ಹೆಚ್ಚು ಕುಸಿತ ಕಂಡ ಷೇರುಗಳು.

ಎರಡನೇ ಅಲೆಯ ಎಫೆಕ್ಟ್​ ಅಮೆರಿಕ ಚುನಾವಣೆ ಫಲಿತಾಂಶ ಹಾಗೂ ಕೊರೊನಾ ವೈರಸ್​ ಲಸಿಕೆ  ಸುದ್ದಿಗಳಿಂದ ಭಾರತದ ಷೇರು ಮಾರುಕಟ್ಟೆ ಐತಿಹಾಸಿಕ ಏರಿಕೆ ಕಂಡಿತ್ತು. ಆದರೆ, ಬ್ರಿಟನ್​​ನಲ್ಲಿ ಕೊರೊನಾ ವೈರಸ್​ ಎರಡನೇ ಅಲೆ ಕಾಣಿಸಿಕೊಂಡಿದೆ. ಈ ಮಧ್ಯೆ ಡಿಸೆಂಬರ್​ 31ರವರೆಗೆ ಬ್ರಿಟನ್​ ವಿಮಾನಗಳ ಸಂಚಾರ ರದ್ದು ಮಾಡಲಾಗಿದೆ. ಕೊರೊನಾ ವೈರಸ್​ ರೂಪಾಂತರ ತಾಳಿದ್ದು, ಇದು ಹೆಚ್ಚು ಅಪಾಯಕಾರಿ ಎನ್ನಲಾಗುತ್ತಿದೆ. ಇದರ ಪರಿಣಾಮದಿಂದ ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ ನಡೆದಿದೆ.

ಬಹುತೇಕ ಮಾರುಕಟ್ಟೆ ಡೌನ್​ ಎರಡನೇ ಅಲೆ ಅಬ್ಬರಿಸುವ ಬಗ್ಗೆ ತಜ್ಞರು ಎಚ್ಚರಿಸುತ್ತಿದ್ದಂತೆ ವಿಶ್ವದ ಬಹುತೇಕ ಮಾರುಕಟ್ಟೆ ಡೌನ್​ ಆಗಿದೆ. ಅಮೆರಿಕ, ಬ್ರಿಟನ್​ ಸೇರಿ ಎಲ್ಲ ಕಡೆಗಳಲ್ಲಿ ಕರಡಿ ಕುಣಿತ ಮುಂದುವರಿದಿದೆ. ನಾಳೆಯೂ ಮಾರುಕಟ್ಟೆ ಚೇತರಿಸಿಕೊಳ್ಳುವುದು ಅನುಮಾನ ಎನ್ನಲಾಗುತ್ತಿದೆ.

ಕೊರೊನಾ ಅವತಾರ್​ 2ಗೆ ಪತರಗುಟ್ಟುತ್ತಿದೆ ಬ್ರಿಟನ್​.. ಅಲ್ಲಿಯ ಪ್ರಧಾನಿ ನಮ್ಮ 72ನೇ ಗಣರಾಜ್ಯೋತ್ಸವ ಮುಖ್ಯ ಅತಿಥಿ: ಸ್ವಾಗತಾರ್ಹವೇ?

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!