ಮಹಾರಾಷ್ಟ್ರದಲ್ಲಿ ಮನಸ್ಸಿಲ್ಲದ ಮೈತ್ರಿ; ಮುಂದಿನ ಚುನಾವಣೆಗಳಲ್ಲಿ ಪ್ರತ್ಯೇಕವಾಗಿಯೇ ಸ್ಪರ್ಧಿಸುತ್ತೇವೆಂದ ಕಾಂಗ್ರೆಸ್, ಶುಭಕೋರಿದ ಶಿವಸೇನೆ

ನಾನಾ ಪಟೋಲೆಯವರು ತಿವಾಸಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತ, 2024ರಲ್ಲಿ ನಾನಾ ಪಟೋಲೆಯನ್ನು ನೀವು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸುವುದಿಲ್ಲವಾ ಎಂದು ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಮನಸ್ಸಿಲ್ಲದ ಮೈತ್ರಿ; ಮುಂದಿನ ಚುನಾವಣೆಗಳಲ್ಲಿ ಪ್ರತ್ಯೇಕವಾಗಿಯೇ ಸ್ಪರ್ಧಿಸುತ್ತೇವೆಂದ ಕಾಂಗ್ರೆಸ್, ಶುಭಕೋರಿದ ಶಿವಸೇನೆ
ನಾನಾ ಪಟೋಲೆ ಮತ್ತು ಪ್ರಿಯಾಂಕಾ ಚತುರ್ವೇದಿ
Updated By: Lakshmi Hegde

Updated on: Jun 13, 2021 | 5:39 PM

ದೆಹಲಿ: ಮಹಾರಾಷ್ಟ್ರದಲ್ಲಿ ಮುಂಬರುವ ಎಲ್ಲ ಸ್ಥಳೀಯ ಆಡಳಿತಗಳ ಮತ್ತು ವಿಧಾನಸಭೆ ಚುನಾವಣೆಗಳನ್ನು ಕಾಂಗ್ರೆಸ್​ ಪ್ರತ್ಯೇಕವಾಗಿಯೇ ಎದುರಿಸಲಿದೆ. ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಅಲ್ಲಿನ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಹೇಳಿಕೆ ನೀಡಿದ ಬೆನ್ನಲ್ಲೇ ಅದಕ್ಕೆ ಪ್ರತಿಕ್ರಿಯೆ ನೀಡಿದ ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ, ಮುಂಬರುವ ಚುನಾವಣೆಗಳಲ್ಲಿ ಏಕಾಂಗಿಯಾಗಿಯೇ ಸ್ಪರ್ಧಿಸಲಿರುವ ಕಾಂಗ್ರೆಸ್​ಗೆ ನಾವು ಶುಭ ಹಾರೈಸುತ್ತೇವೆ ಎಂದು ಹೇಳಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಏನು ಮಾಡುತ್ತದೆ ಎಂಬುದನ್ನು ಆ ಪಕ್ಷದ ನಾಯಕರು ನಿರ್ಧರಿಸುತ್ತಾರೆ. ನಮ್ಮ ಮಹಾರಾಷ್ಟ್ರ ಸರ್ಕಾರಕ್ಕೆ ಜನರ ಒಳಿತು ಮುಖ್ಯ. ನಾವು ಮೈತ್ರಿಯಲ್ಲಿ ಮುಂದುವರಿದು, ಜನರ ಸೇವೆ ಮಾಡುತ್ತೇವೆ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ ನಾಯಕ ಸಂಜಯ್​ ರಾವತ್​, ಪ್ರತಿಯೊಬ್ಬರೂ ಅವರವರ ಪಕ್ಷವನ್ನು ಬಲಪಡಿಸಲು ಮತ್ತು ವಿಸ್ತರಿಸಲು ಸ್ವತಂತ್ರ್ಯರಾಗಿದ್ದಾರೆ ಎಂದು ಹೇಳಿದ್ದಾರೆ. ಮಹಾ ವಿಕಾಸ್ ಅಘಾಡಿಯಲ್ಲಿ ಮೂರು ಪಕ್ಷಗಳು ಒಂದರೊಳಗೊಂದು ವಿಲೀನಗೊಂಡಿಲ್ಲ. ಬದಲಿಗೆ ಮೂರು ಪಕ್ಷಗಳು ಮೈತ್ರಿ ಮಾಡಿಕೊಂಡಿವೆಯಷ್ಟೇ. ಎಲ್ಲ ಚುನಾವಣೆಗಳನ್ನೂ ಒಟ್ಟಿಗೇ ಎದುರಿಸುತ್ತೇವೆ ಎಂಬ ಒಪ್ಪಂದವೂ ನಮ್ಮ ಮಧ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ 2.5ವರ್ಷದ ನಂತರ ಉದ್ಧವ್​ ಠಾಕ್ರೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ ಎಂಬುದನ್ನು ಅಲ್ಲಗಳೆದ ಸಂಜಯ್​ ರಾವತ್, ಇದು ಸುಳ್ಳು..ಇಂಥ ವದಂತಿಗಳನ್ನು ನಂಬಬೇಡಿ ಎಂದು ಹೇಳಿದರು.

2024ರ ಹೊತ್ತಿಗೆ ಕಾಂಗ್ರೆಸ್​ ಬಲಿಷ್ಠ ಪಕ್ಷ
ನಾನಾ ಪಟೋಲೆಯವರು ತಿವಾಸಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತ, 2024ರಲ್ಲಿ ನಾನಾ ಪಟೋಲೆಯನ್ನು ನೀವು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸುವುದಿಲ್ಲವಾ ಎಂದು ಪ್ರಶ್ನಿಸಿದ್ದಾರೆ. ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಶಿವಸೇನೆಯನ್ನು ಹೊಗಳಿದ್ದಕ್ಕೆ ಮುನಿಸಿಕೊಂಡಿರುವ ನಾನಾ ಪಟೋಲೆ, ಕಾಂಗ್ರೆಸ್​ ಮೂಲ ಪಕ್ಷ. ನಮಗೆ ಯಾರದ್ದೂ ಸರ್ಟಿಫಿಕೇಟ್​ ಬೇಡ. ಯಾರೇ ನಮ್ಮನ್ನು ಸೈಡ್​ಲೈನ್ ಮಾಡಲು ಪ್ರಯತ್ನಿಸಿದರೂ ಅದು ಸಾಧ್ಯವಿಲ್ಲ. 2024ರ ಹೊತ್ತಿಗೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್​ ಬಲಿಷ್ಠ, ಉನ್ನತ ಪಕ್ಷವಾಗಿ ಬೆಳೆಯುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Dhaka Premier League: ಅಂಪೈರ್ಸ್, ಮ್ಯಾಚ್ ರೆಫರಿಗಳು ಪ್ರಯಾಣಿಸುತ್ತಿದ್ದ ಬಸ್​ ಮೇಲೆ ಇಟ್ಟಿಗೆ, ಕಲ್ಲುಗಳಿಂದ ದಾಳಿ!

Shiv Sena wishes congress after Nana Patole says Congress to go solo in future elections in Maharashtra

Published On - 5:36 pm, Sun, 13 June 21