AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಳ್ಳೆಯ ಕುಟುಂಬ ಯೋಜನೆ ಅಳವಡಿಸಿಕೊಳ್ಳಿ: ವಲಸೆ ಬಂದ ಮುಸ್ಲಿಮರಿಗೆ ಅಸ್ಸಾಂ ಮುಖ್ಯಮಂತ್ರಿ ಸಲಹೆ

Himanta Biswa Sarma: ನಾವು ಜನಸಂಖ್ಯೆಯನ್ನು ನಿಯಂತ್ರಿಸಬಹುದಾದರೆ, ನಾವು ಹಲವಾರು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಬಹುದು. ವಲಸೆ ಬಂದ ಮುಸ್ಲಿಮರು ಯೋಗ್ಯವಾದ ಕುಟುಂಬ ಯೋಜನೆಗಳನ್ನು ಅಳವಡಿಸಿಕೊಳ್ಳಬಹುದಾದರೆ - ಇದು ಅವರಿಗೆ ನನ್ನ ಮನವಿ" ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.

ಒಳ್ಳೆಯ ಕುಟುಂಬ ಯೋಜನೆ ಅಳವಡಿಸಿಕೊಳ್ಳಿ: ವಲಸೆ ಬಂದ ಮುಸ್ಲಿಮರಿಗೆ ಅಸ್ಸಾಂ ಮುಖ್ಯಮಂತ್ರಿ ಸಲಹೆ
ಹಿಮಂತ ಬಿಸ್ವ ಶರ್ಮಾ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jun 11, 2021 | 1:30 PM

Share

ದಿಸ್​ಪುರ್: ವಲಸೆ ಬಂದ ಮುಸ್ಲಿಮರು ಕುಟುಂಬ ಯೋಜನೆಗಳನ್ನು ಅನುಸರಿಸಿದರೆ ಮತ್ತು ಅವರ ಜನಸಂಖ್ಯೆಯನ್ನು ನಿಯಂತ್ರಿಸಿದರೆ ಭೂ ಅತಿಕ್ರಮಣದಂತಹ ಸಾಮಾಜಿಕ ಭೀತಿಗಳನ್ನು ಪರಿಹರಿಸಬಹುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ. ಜನಸಂಖ್ಯಾ ಸ್ಫೋಟ ಮುಂದುವರಿದರೆ, ಒಂದು ದಿನ ಕಾಮಖ್ಯ ದೇವಾಲಯದ ಭೂಮಿಯನ್ನು ಸಹ ಅತಿಕ್ರಮಿಸಲಾಗುವುದು. ನನ್ನ ಮನೆ ಕೂಡ (ಅತಿಕ್ರಮಣಗೊಳ್ಳುತ್ತದೆ) ಎಂದು ಅವರು ರಾಜ್ಯದ ಪ್ರಸಿದ್ಧ ಯಾತ್ರಾ ಕೇಂದ್ರವನ್ನು ಉಲ್ಲೇಖಿಸಿ ಶರ್ಮಾ ಈ ರೀತಿ ಹೇಳಿದ್ದಾರೆ. ಕೇವಲ ಒಂದು ತಿಂಗಳು ಅಧಿಕಾರ ಪೂರೈಸಿದ ಮುಖ್ಯಮಂತ್ರಿ ಶರ್ಮಾ ಗುವಾಹಟಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ್ದು, ಅತಿಕ್ರಮಣ ವಿರೋಧಿ ಡ್ರೈವ್‌ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಸ್ಥಳಾಂತರಗೊಂಡ ಜನರು ವಲಸೆ ಬಂದ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದಿದ್ದಾರೆ.

ಮಧ್ಯ ಮತ್ತು ಕೆಳ ಅಸ್ಸಾಂನ ಬಂಗಾಳಿ ಮಾತನಾಡುವ ಮುಸ್ಲಿಮರನ್ನು ಬಾಂಗ್ಲಾದೇಶದಿಂದ ವಲಸೆ ಬಂದ ಮುಸ್ಲಿಮರೆಂದು ಪರಿಗಣಿಸಲಾಗುತ್ತದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ, ಅಸ್ಸಾಂನ ಸ್ಥಳೀಯ ಸಮುದಾಯಗಳನ್ನು ಅವರ ವಿರುದ್ಧ ರಕ್ಷಿಸುವುದಾಗಿ ಬಿಜೆಪಿಯ ಭರವಸೆ ನೀಡಿತ್ತು.  ವಲಸೆ ಬಂದ ಮುಸ್ಲಿಮರು ಅಸ್ಸಾಂನ 3.12 ಕೋಟಿ ಜನಸಂಖ್ಯೆಯ ಶೇಕಡಾ 31 ರಷ್ಟನ್ನು ಹೊಂದಿದ್ದಾರೆ ಮತ್ತು 126 ವಿಧಾನಸಭಾ ಸ್ಥಾನಗಳಲ್ಲಿ 35 ಸ್ಥಾನವು ನಿರ್ಣಾಯಕವಾಗಿದೆ.

ನಾವು ಈಗಾಗಲೇ ಕಳೆದ ವಿಧಾನಸಭೆ ಅಧಿವೇಶನದಲ್ಲಿ ಜನಸಂಖ್ಯಾ ನೀತಿಯನ್ನು ಜಾರಿಗೆ ತಂದಿದ್ದೇವೆ. ಆದರೆ ಜನಸಂಖ್ಯೆಯ ಹೊರೆಯನ್ನು ಕಡಿಮೆ ಮಾಡಲು ನಾವು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದೊಂದಿಗೆ ಕೆಲಸ ಮಾಡಲು ಬಯಸುತ್ತೇವೆ ಎಂದು ಶರ್ಮಾ ಹೇಳಿದರು.

ಜನಸಂಖ್ಯಾ ಸ್ಫೋಟವು ಬಡತನ ಮತ್ತು ಅತಿಕ್ರಮಣದಂತಹ ಸಾಮಾಜಿಕ ದುಷ್ಕೃತ್ಯಗಳಿಗೆ ಕಾರಣವಾಗುತ್ತದೆ. ವೈಷ್ಣವ ಮಠಗಳಿಗೆ ಸೇರಿದ ಅರಣ್ಯ, ದೇವಾಲಯ ಮತ್ತು ಸತ್ರ ಜಮೀನುಗಳಲ್ಲಿ ಅತಿಕ್ರಮಣವನ್ನು ಅನುಮತಿಸಲಾಗುವುದಿಲ್ಲ. ಆದರೆ ಇದು ಜನಸಂಖ್ಯೆಯ ಹೆಚ್ಚಿನ ಬೆಳವಣಿಗೆಯಿಂದಾಗಿ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ನಾನು ಇನ್ನೊಂದು ಬದಿಯ ಒತ್ತಡವನ್ನು ಅರ್ಥಮಾಡಿಕೊಂಡಿದ್ದೇನೆ. ಜನರು ಎಲ್ಲಿ ಉಳಿಯುತ್ತಾರೆ?

ನಾವು ಜನಸಂಖ್ಯೆಯನ್ನು ನಿಯಂತ್ರಿಸಬಹುದಾದರೆ, ನಾವು ಹಲವಾರು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಬಹುದು. ವಲಸೆ ಬಂದ ಮುಸ್ಲಿಮರು ಯೋಗ್ಯವಾದ ಕುಟುಂಬ ಯೋಜನೆಗಳನ್ನು ಅಳವಡಿಸಿಕೊಳ್ಳಬಹುದಾದರೆ – ಇದು ಅವರಿಗೆ ನನ್ನ ಮನವಿ ಎಂದು ಶರ್ಮಾ ಹೇಳಿದರು. ಈ ವಿಷಯದಲ್ಲಿ ಬದ್ರುದ್ದೀನ್ ಅಜ್ಮಲ್ ಅವರ ಪಕ್ಷದ ಎಐಯುಡಿಎಫ್ ಮತ್ತು ಆಲ್ ಅಸ್ಸಾಂ ಅಲ್ಪಸಂಖ್ಯಾತ ವಿದ್ಯಾರ್ಥಿ ಸಂಘ ಅಥವಾ ಎಎಎಂಎಸ್‌ಯು ಸೇರಿದಂತೆ ಎಲ್ಲರೊಂದಿಗೆ ನಾನು ಕೆಲಸ ಮಾಡಲು ಸಿದ್ಧ ಎಂದು ಶರ್ಮಾ ಹೇಳಿದ್ದಾರೆ.

ಮುಖ್ಯಮಂತ್ರಿಯವರ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ ಮತ್ತು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡಿದೆ ಎಂದು ಎಐಯುಡಿಎಫ್ ಪ್ರಧಾನ ಕಾರ್ಯದರ್ಶಿ ಮತ್ತು ಮಂಚಾಚಾರ್ ಕ್ಷೇತ್ರದ ಶಾಸಕ ಅನಿಮುಲ್ ಇಸ್ಲಾಂ ಪ್ರತಿಕ್ರಿಯಿಸಿದ್ದಾರೆ.

ರಾಜ್ಯ ಸರ್ಕಾರವು ಜನಸಂಖ್ಯಾ ನೀತಿಯನ್ನು ರೂಪಿಸಿದಾಗ, ನಾವು ಅದನ್ನು ಎಂದಿಗೂ ವಿರೋಧಿಸಲಿಲ್ಲ. ಆದರೆ ವಲಸೆ ಬಂದ ಮುಸ್ಲಿಮರನ್ನು ಅವರು ಉಲ್ಲೇಖಿಸುತ್ತಿರುವ ಜನರಲ್ಲಿ ಜನಸಂಖ್ಯೆ ಹೆಚ್ಚಾಗಲು ಮುಖ್ಯ ಕಾರಣವನ್ನು ಮುಖ್ಯಮಂತ್ರಿ ನೋಡದಿರುವುದು ದುರದೃಷ್ಟಕರ. ಇದು ಹೆಚ್ಚಾಗಿ ಬಡತನ ಮತ್ತು ಅನಕ್ಷರತೆಯಿಂದಾಗಿದೆ. ಬಡತನ ಮತ್ತು ಅನಕ್ಷರತೆಯ ದೃಷ್ಟಿಯಿಂದ ಅವರು ತಮ್ಮ ಯೋಜನೆಯನ್ನು ಉಚ್ಚರಿಸಲಿಲ್ಲ ”ಎಂದು ಎನ್‌ಡಿಟಿವಿ ಜತೆ ಮಾತನಾಡಿದ ಅನಿಮುಲ್ ಇಸ್ಲಾಂ ಹೇಳಿದ್ದಾರೆ.

ಈ ಹಿಂದೆ ಹಲವಾರು ಬಿಜೆಪಿ ನಾಯಕರು ಈ ವಿಷಯದ ಬಗ್ಗೆ ಟೀಕಿಸಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿದೆ. 2018 ರ ಜನವರಿಯಲ್ಲಿ, ರಾಜಸ್ಥಾನದ ಬಿಜೆಪಿ ಶಾಸಕ ಬನ್ವಾರಿ ಲಾಲ್ ಸಿಂಘಾಲ್, “ಹಿಂದೂಗಳನ್ನು ಮೀರಿಸುವ ಮತ್ತು 2030 ರ ವೇಳೆಗೆ ದೇಶದ ಮೇಲೆ ಹಿಡಿತ ಸಾಧಿಸುವ” ಉದ್ದೇಶದಿಂದ ಮುಸ್ಲಿಮರು ಹೆಚ್ಚಿನ ಮಕ್ಕಳನ್ನು ಹೆತ್ತಿದ್ದಾರೆ ಎಂದು ಹೇಳಿದ್ದರು. “ಮುಸ್ಲಿಮರು 12-14 ಮಕ್ಕಳಿಗೆ ಜನ್ಮ ನೀಡುತ್ತಿದ್ದರು … ಹಿಂದೂಗಳು ಈ ಸಂಖ್ಯೆಯನ್ನು ಒಂದು ಅಥವಾ ಎರಡಕ್ಕೆ ಸೀಮಿತಗೊಳಿಸಿದ್ದಾರೆ” ಎಂದು ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಾಕಿದ್ದರು.

ಅದೇ ವರ್ಷದ ಜುಲೈನಲ್ಲಿ, ಉತ್ತರ ಪ್ರದೇಶದ ಮಾಜಿ ಬಿಜೆಪಿ ಸಂಸದ ಹರಿ ಓಂ ಪಾಂಡೆ ಪ್ರಚೋದನಾಕಾರಿ ಭಾಷಣದಲ್ಲಿ, ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿರುವ ಕಾರಣ ದೇಶದಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಹೆಚ್ಚುತ್ತಿವೆ. ಸೂಕ್ಷ್ಮವಾಗಿ ಗಮನಿಸಿದರೆ, ಸ್ವಾತಂತ್ರ್ಯದ ಸಮಯದಿಂದ ಮುಸ್ಲಿಮರ ಶೇಕಡಾವಾರು ಸಂಖ್ಯೆಯಲ್ಲಿ ಶೀಘ್ರ ಏರಿಕೆ ಕಂಡುಬಂದಿದೆ” ಎಂದು ಅವರು ಹೇಳಿದ್ದರು.

ಇದನ್ನೂ ಓದಿ: Assam Assembly polls: ಅಸ್ಸಾಮ್ ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮಾರನ್ನು ಪ್ರಚಾರದಲ್ಲಿ ತೊಡಗದಂತೆ ನಿಷೇಧಿಸಿದ ಚುನಾವಣಾ ಆಯೋಗ

(Social menaces like Land Encroachment can be solved if the immigrant Muslims follow a Family Planning norms says Assam CM Himanta Biswa Sarma)

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ