TikTok ಮಾಡ ಬೇಡ ಅಂದಿದ್ದಕ್ಕೆ ಮೊದಲು ಪತ್ನಿ, ನಂತರ ಪುತ್ರ Suicide

ಹೈದರಾಬಾದ್: ಈ TikTok ಅದೆಷ್ಟು ಪ್ರತಿಭೆಗಳನ್ನು ಗುರುತಿಸಿದೆಯೋ, ಅದೆಷ್ಟು ಮನೆಗಳನ್ನು ಹಾಳು ಮಾಡಿದೆಯೋ ಅದರ ಸೃಷ್ಟಿಕರ್ತ ಚೀನಾನೇ ಹೇಳಬೇಕು! ಸದ್ಯಕ್ಕಂತೂ ಇದಕ್ಕೆ ಕೊನೆ-ಮೊದಲು ಇಲ್ಲ ಎಂಬಂತಾಗಿದೆ. ವಿಜಯವಾಡದಲ್ಲಿ ಇಂತಹ ತಾಜಾ ಪ್ರಕರಣವೊಂದು ನಡೆದಿದೆ. ಟಿಕ್​ಟಾಕ್​ ಮಾಡಬೇಡ ಎಂದು  ಮನೆಯ ಯಜಮಾನ ಪತಿರಾಯ ತನ್ನ ಹೆಂಡತಿಗೆ ಕ್ಲಾಸ್​ ತೆಗೆದುಕೊಂಡಿದ್ದಾನೆ. ಇಷ್ಟಕ್ಕೇ ಅದು ವಿಕೋಪಕ್ಕೆ ಹೋಗಿ ಎರಡು ಪ್ರಾಣಗಳಿಗೆ ಎರವಾಗಿದೆ. ಪತ್ನಿ ಮತ್ತು ಮಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯವಾಡದ ಜಕ್ಕಂಪೂಡಿ ವೈಎಸ್ಆ​ರ್ ಕಾಲೋನಿಯಲ್ಲಿ ನಡೆದಿದೆ. ಇದಕ್ಕೆ ಹೊಣೆ […]

TikTok ಮಾಡ ಬೇಡ ಅಂದಿದ್ದಕ್ಕೆ ಮೊದಲು ಪತ್ನಿ, ನಂತರ ಪುತ್ರ Suicide
ಸಾಧು ಶ್ರೀನಾಥ್​

Updated on: May 19, 2020 | 5:34 PM

ಹೈದರಾಬಾದ್: ಈ TikTok ಅದೆಷ್ಟು ಪ್ರತಿಭೆಗಳನ್ನು ಗುರುತಿಸಿದೆಯೋ, ಅದೆಷ್ಟು ಮನೆಗಳನ್ನು ಹಾಳು ಮಾಡಿದೆಯೋ ಅದರ ಸೃಷ್ಟಿಕರ್ತ ಚೀನಾನೇ ಹೇಳಬೇಕು! ಸದ್ಯಕ್ಕಂತೂ ಇದಕ್ಕೆ ಕೊನೆ-ಮೊದಲು ಇಲ್ಲ ಎಂಬಂತಾಗಿದೆ. ವಿಜಯವಾಡದಲ್ಲಿ ಇಂತಹ ತಾಜಾ ಪ್ರಕರಣವೊಂದು ನಡೆದಿದೆ. ಟಿಕ್​ಟಾಕ್​ ಮಾಡಬೇಡ ಎಂದು  ಮನೆಯ ಯಜಮಾನ ಪತಿರಾಯ ತನ್ನ ಹೆಂಡತಿಗೆ ಕ್ಲಾಸ್​ ತೆಗೆದುಕೊಂಡಿದ್ದಾನೆ. ಇಷ್ಟಕ್ಕೇ ಅದು ವಿಕೋಪಕ್ಕೆ ಹೋಗಿ ಎರಡು ಪ್ರಾಣಗಳಿಗೆ ಎರವಾಗಿದೆ. ಪತ್ನಿ ಮತ್ತು ಮಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯವಾಡದ ಜಕ್ಕಂಪೂಡಿ ವೈಎಸ್ಆ​ರ್ ಕಾಲೋನಿಯಲ್ಲಿ ನಡೆದಿದೆ.

ಇದಕ್ಕೆ ಹೊಣೆ ಯಾರು?:
ಹೆಂಡತಿ ಟಿಕ್​ಟಾಕ್ ಮಾಡುತ್ತಿದುದ್ದನ್ನು ನೋಡಿದ ಗಂಡ ಟಿಕ್​ಟಾಕ್ ವಿಡಿಯೋ ಮಾಡ ಬೇಡ ಎಂದು ಬೈದಿದ್ದಾನೆ. ಅದಕ್ಕೆ ಮನನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಸಹಿಸಲಾಗದೆ, ಮಗ ಕೂಡ ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಟುಂಬದಲ್ಲಿ ಈಗ ವಿಷಾದ ರಾಗವೇ ಕೇಳಿಬರುತ್ತಿದೆ. ಇದಕ್ಕೆ ಹೊಣೆ ಯಾರು ಎಂದು ಅಕ್ಕಪಕ್ಕದ ಜನ ಮಾತನಾಡಿಕೊಳ್ಳುವಂತಾಗಿದೆ.  ವಿಜಯವಾಡ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

Published On - 5:32 pm, Tue, 19 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us