Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಳಿ ಹಬ್ಬದ ನಿಮಿತ್ತ ವಿಶೇಷ ರೈಲು ಸಂಚಾರ; ದಕ್ಷಿಣ ಮಧ್ಯ ರೈಲ್ವೆಯಿಂದ 4 ಟ್ರೇನ್​ಗಳ ವ್ಯವಸ್ಥೆ, ಇಲ್ಲಿದೆ ವೇಳಾಪಟ್ಟಿ

ದೇಶಾದ್ಯಂತ ಮಾರ್ಚ್​ 28-29ರಂದು ಹೋಳಿ ಹಬ್ಬ ಆಚರಣೆ ನಡೆಯಲಿದ್ದು, ದೇಶದೆಲ್ಲೆಡೆ ಜನರು ಇದನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಹಾಗೇ, ಹಬ್ಬ ಸಮೀಪಿಸುತ್ತಿದ್ದಂತೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಜನರ ಸಂಚಾರವೂ ಹೆಚ್ಚಾಗಿರುತ್ತದೆ.

ಹೋಳಿ ಹಬ್ಬದ ನಿಮಿತ್ತ ವಿಶೇಷ ರೈಲು ಸಂಚಾರ; ದಕ್ಷಿಣ ಮಧ್ಯ ರೈಲ್ವೆಯಿಂದ 4 ಟ್ರೇನ್​ಗಳ ವ್ಯವಸ್ಥೆ, ಇಲ್ಲಿದೆ ವೇಳಾಪಟ್ಟಿ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on: Mar 23, 2021 | 3:30 PM

ಸಿಕಂದರಾಬಾದ್​: ಹೋಳಿ ಹಬ್ಬದ ನಿಮಿತ್ತ ದಕ್ಷಿಣ ಮಧ್ಯ ರೈಲ್ವೆ ವಲಯ ನಾಲ್ಕು ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ. ಇದರ ಅನ್ವಯ, ಸಿಕಂದರಾಬಾದ್​ ಮತ್ತು ಉತ್ತರಪ್ರದೇಶದ ಗೋರಖ್​ಪುರ ನಡುವೆ 2 ರೈಲುಗಳು ಹಾಗೂ ಹೈದರಾಬಾದ್​ ಮತ್ತು ಬಿಹಾರದ ರಕ್ಸೌಲ್​ ನಡುವೆ 2 ವಿಶೇಷ ಟ್ರೇನ್​​ಗಳು ಸಂಚಾರ ಮಾಡಲಿವೆ.

ದೇಶಾದ್ಯಂತ ಮಾರ್ಚ್​ 28-29ರಂದು ಹೋಳಿ ಹಬ್ಬ ಆಚರಣೆ ನಡೆಯಲಿದ್ದು, ದೇಶದೆಲ್ಲೆಡೆ ಜನರು ಇದನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಹಾಗೇ, ಹಬ್ಬ ಸಮೀಪಿಸುತ್ತಿದ್ದಂತೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಜನರ ಸಂಚಾರವೂ ಹೆಚ್ಚಾಗಿರುತ್ತದೆ. ಈ ಕಾರಣಕ್ಕಾಗಿ ದಕ್ಷಿಣ ಮಧ್ಯ ರೈಲ್ವೆ ವಲಯ ಹೆಚ್ಚುವರಿ ರೈಲುಗಳನ್ನು ಬಿಡಲು ನಿರ್ಧರಿಸಿದೆ.

ಹೀಗಿದೆ ಟ್ರೇನ್​ ನಂಬರ್​ ಮತ್ತು ವೇಳಾಪಟ್ಟಿ 07003 ನಂಬರ್​ನ ಟ್ರೇನ್​ ರಾತ್ರಿ 9.25ಕ್ಕೆ ಸಿಕಂದರಾಬಾದ್​ನಿಂದ ಹೊರಟು ಮುಂಜಾನೆ 06.25ಕ್ಕೆ ಗೋರಖ್​ಪುರ ತಲುಪುತ್ತದೆ. ಹಾಗೇ 07004 ನಂಬರ್​ನ ರೈಲು ಪ್ರತಿದಿನ ಸಂಜೆ 5.25ಕ್ಕೆ ಗೋರಖ್​​ಪುರದಿಂದ ಹೊರಟು ಮರುದಿನ ಮುಂಜಾನೆ 4.10ಕ್ಕೆ ಸಿಕಂದರಾಬಾದ್​​ಗೆ ಬರುತ್ತದೆ.

ಹಾಗೇ, ಟ್ರೇನ್​ ನಂಬರ್​ 07040 ಪ್ರತಿದಿನ ಸಂಜೆ 9.40ಕ್ಕೆ ಹೈದರಾಬಾದ್​​ನಿಂದ ಹೊರಟು ಮರುದಿನ ಮುಂಜಾನೆ 4.50ಕ್ಕೆ ರಕ್ಸೌಲ್​ ತಲುಪುತ್ತದೆ. ಹಾಗೇ ಇನ್ನೊಂದು ರೈಲು ಅಂದರೆ ಟ್ರೇನ್​ ನಂಬರ್​ 07039, ಪ್ರತಿದಿನ ಮುಂಜಾನೆ 3.25ಕ್ಕೆ ರಕ್ಸೌಲ್​​ನಿಂದ ಹೊರಟು, ರಾತ್ರಿ 10.15ರ ಹೊತ್ತಿಗೆ ಹೈದರಾಬಾದ್​ ತಲುಪಲಿದೆ. ಈ ವಿಶೇಷ ರೈಲುಗಳಲ್ಲಿ ಪ್ರಯಾಣ ಮಾಡಲಿಚ್ಛಿಸುವ ಪ್ರಯಾಣಿಕರು ಮೊದಲೇ ಟಿಕೆಟ್​ ಕಾಯ್ದಿರಿಸಬೇಕಾಗಿದೆ. ಇನ್ನು ಉತ್ತರ ರೈಲ್ವೆ ವಲಯ ಕೂಡ ವಿವಿಧ ಪ್ರದೇಶಗಳ ನಡುವೆ ವಿಶೇಷ ರೈಲು ಸಂಚಾರ ಪ್ರಾರಂಭಿಸಲು ನಿರ್ಧರಿಸಿದೆ.

ಇದನ್ನೂ ಓದಿ: ಯುವರತ್ನ ಸಿನಿಮಾದಲ್ಲಿ ನನ್ನ ಪಾತ್ರ ರಿವೀಲ್ ಮಾಡಬಾರ್ದು ಅಂತ ಪ್ರಾಮಿಸ್ ಮಾಡಿಸ್ಕೋಂಡಿದ್ದಾರೆ – ನಟಿ ಸೋನುಗೌಡ

Roberrt: ರಾಜ್ಯಾದ್ಯಂತ ಇನ್ಮೇಲೆ ಡಿ ಬಾಸ್​ ಜಾತ್ರೆ! ಫ್ಯಾನ್ಸ್​ಗೆ ಧನ್ಯವಾದ ಹೇಳಲು ದರ್ಶನ್​ ದೊಡ್ಡ ನಿರ್ಧಾರ!

ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು