AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಳಿ ಹಬ್ಬದ ನಿಮಿತ್ತ ವಿಶೇಷ ರೈಲು ಸಂಚಾರ; ದಕ್ಷಿಣ ಮಧ್ಯ ರೈಲ್ವೆಯಿಂದ 4 ಟ್ರೇನ್​ಗಳ ವ್ಯವಸ್ಥೆ, ಇಲ್ಲಿದೆ ವೇಳಾಪಟ್ಟಿ

ದೇಶಾದ್ಯಂತ ಮಾರ್ಚ್​ 28-29ರಂದು ಹೋಳಿ ಹಬ್ಬ ಆಚರಣೆ ನಡೆಯಲಿದ್ದು, ದೇಶದೆಲ್ಲೆಡೆ ಜನರು ಇದನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಹಾಗೇ, ಹಬ್ಬ ಸಮೀಪಿಸುತ್ತಿದ್ದಂತೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಜನರ ಸಂಚಾರವೂ ಹೆಚ್ಚಾಗಿರುತ್ತದೆ.

ಹೋಳಿ ಹಬ್ಬದ ನಿಮಿತ್ತ ವಿಶೇಷ ರೈಲು ಸಂಚಾರ; ದಕ್ಷಿಣ ಮಧ್ಯ ರೈಲ್ವೆಯಿಂದ 4 ಟ್ರೇನ್​ಗಳ ವ್ಯವಸ್ಥೆ, ಇಲ್ಲಿದೆ ವೇಳಾಪಟ್ಟಿ
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on: Mar 23, 2021 | 3:30 PM

Share

ಸಿಕಂದರಾಬಾದ್​: ಹೋಳಿ ಹಬ್ಬದ ನಿಮಿತ್ತ ದಕ್ಷಿಣ ಮಧ್ಯ ರೈಲ್ವೆ ವಲಯ ನಾಲ್ಕು ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ. ಇದರ ಅನ್ವಯ, ಸಿಕಂದರಾಬಾದ್​ ಮತ್ತು ಉತ್ತರಪ್ರದೇಶದ ಗೋರಖ್​ಪುರ ನಡುವೆ 2 ರೈಲುಗಳು ಹಾಗೂ ಹೈದರಾಬಾದ್​ ಮತ್ತು ಬಿಹಾರದ ರಕ್ಸೌಲ್​ ನಡುವೆ 2 ವಿಶೇಷ ಟ್ರೇನ್​​ಗಳು ಸಂಚಾರ ಮಾಡಲಿವೆ.

ದೇಶಾದ್ಯಂತ ಮಾರ್ಚ್​ 28-29ರಂದು ಹೋಳಿ ಹಬ್ಬ ಆಚರಣೆ ನಡೆಯಲಿದ್ದು, ದೇಶದೆಲ್ಲೆಡೆ ಜನರು ಇದನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಹಾಗೇ, ಹಬ್ಬ ಸಮೀಪಿಸುತ್ತಿದ್ದಂತೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಜನರ ಸಂಚಾರವೂ ಹೆಚ್ಚಾಗಿರುತ್ತದೆ. ಈ ಕಾರಣಕ್ಕಾಗಿ ದಕ್ಷಿಣ ಮಧ್ಯ ರೈಲ್ವೆ ವಲಯ ಹೆಚ್ಚುವರಿ ರೈಲುಗಳನ್ನು ಬಿಡಲು ನಿರ್ಧರಿಸಿದೆ.

ಹೀಗಿದೆ ಟ್ರೇನ್​ ನಂಬರ್​ ಮತ್ತು ವೇಳಾಪಟ್ಟಿ 07003 ನಂಬರ್​ನ ಟ್ರೇನ್​ ರಾತ್ರಿ 9.25ಕ್ಕೆ ಸಿಕಂದರಾಬಾದ್​ನಿಂದ ಹೊರಟು ಮುಂಜಾನೆ 06.25ಕ್ಕೆ ಗೋರಖ್​ಪುರ ತಲುಪುತ್ತದೆ. ಹಾಗೇ 07004 ನಂಬರ್​ನ ರೈಲು ಪ್ರತಿದಿನ ಸಂಜೆ 5.25ಕ್ಕೆ ಗೋರಖ್​​ಪುರದಿಂದ ಹೊರಟು ಮರುದಿನ ಮುಂಜಾನೆ 4.10ಕ್ಕೆ ಸಿಕಂದರಾಬಾದ್​​ಗೆ ಬರುತ್ತದೆ.

ಹಾಗೇ, ಟ್ರೇನ್​ ನಂಬರ್​ 07040 ಪ್ರತಿದಿನ ಸಂಜೆ 9.40ಕ್ಕೆ ಹೈದರಾಬಾದ್​​ನಿಂದ ಹೊರಟು ಮರುದಿನ ಮುಂಜಾನೆ 4.50ಕ್ಕೆ ರಕ್ಸೌಲ್​ ತಲುಪುತ್ತದೆ. ಹಾಗೇ ಇನ್ನೊಂದು ರೈಲು ಅಂದರೆ ಟ್ರೇನ್​ ನಂಬರ್​ 07039, ಪ್ರತಿದಿನ ಮುಂಜಾನೆ 3.25ಕ್ಕೆ ರಕ್ಸೌಲ್​​ನಿಂದ ಹೊರಟು, ರಾತ್ರಿ 10.15ರ ಹೊತ್ತಿಗೆ ಹೈದರಾಬಾದ್​ ತಲುಪಲಿದೆ. ಈ ವಿಶೇಷ ರೈಲುಗಳಲ್ಲಿ ಪ್ರಯಾಣ ಮಾಡಲಿಚ್ಛಿಸುವ ಪ್ರಯಾಣಿಕರು ಮೊದಲೇ ಟಿಕೆಟ್​ ಕಾಯ್ದಿರಿಸಬೇಕಾಗಿದೆ. ಇನ್ನು ಉತ್ತರ ರೈಲ್ವೆ ವಲಯ ಕೂಡ ವಿವಿಧ ಪ್ರದೇಶಗಳ ನಡುವೆ ವಿಶೇಷ ರೈಲು ಸಂಚಾರ ಪ್ರಾರಂಭಿಸಲು ನಿರ್ಧರಿಸಿದೆ.

ಇದನ್ನೂ ಓದಿ: ಯುವರತ್ನ ಸಿನಿಮಾದಲ್ಲಿ ನನ್ನ ಪಾತ್ರ ರಿವೀಲ್ ಮಾಡಬಾರ್ದು ಅಂತ ಪ್ರಾಮಿಸ್ ಮಾಡಿಸ್ಕೋಂಡಿದ್ದಾರೆ – ನಟಿ ಸೋನುಗೌಡ

Roberrt: ರಾಜ್ಯಾದ್ಯಂತ ಇನ್ಮೇಲೆ ಡಿ ಬಾಸ್​ ಜಾತ್ರೆ! ಫ್ಯಾನ್ಸ್​ಗೆ ಧನ್ಯವಾದ ಹೇಳಲು ದರ್ಶನ್​ ದೊಡ್ಡ ನಿರ್ಧಾರ!

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ