ಶಬರಿಮಲೆ ವಿಗ್ರಹದಿಂದ ನಾಪತ್ತೆಯಾಗಿದ್ದ 4 ಕೆಜಿ ಚಿನ್ನ ಪತ್ತೆ, ಎಲ್ಲಿತ್ತು ಗೊತ್ತಾ?

ಕೇರಳದ ಪ್ರಸಿದ್ಧ ಶಬರಿಮಲೆ(Sabarimala) ದೇವಸ್ಥಾನದಿಂದ ಕಣ್ಮರೆಯಾಗಿದ್ದ ಚಿನ್ನ ಸಿಕ್ಕಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ದೇವಸ್ಥಾನದ ವಿಗ್ರಹದಿಂದ 4 ಕೆಜಿ ತೂಕದ ಕೋಟಿಗಟ್ಟಲೆ ಬೆಲೆ ಬಾಳುವ ಚಿನ್ನ ನಿಗೂಢವಾಗಿ ಕಣ್ಮರೆಯಾಗಿತ್ತು. ದೇವಾಲಯದ ಆಡಳಿತ ಮಂಡಳಿಗೆ ಈ ವಿಷಯ ತಿಳಿದಾಗ, ಕೋಲಾಹಲ ಭುಗಿಲೆದ್ದಿತ್ತು. ಈ ವಿಷಯ ಹೈಕೋರ್ಟ್ ಮೆಟ್ಟಿಲೇರಿತು, ಅದು ಈಗ ತನಿಖೆಗೆ ಆದೇಶಿಸಿತ್ತು. 2019 ರಲ್ಲಿ, ಶಬರಿಮಲೆ ದೇವಸ್ಥಾನದ ಗರ್ಭಗುಡಿಯ (ಸನ್ನಿಧಾನಂ) ಕೆಲಸ ಪ್ರಾರಂಭವಾಯಿತು.

ಶಬರಿಮಲೆ ವಿಗ್ರಹದಿಂದ ನಾಪತ್ತೆಯಾಗಿದ್ದ 4 ಕೆಜಿ ಚಿನ್ನ ಪತ್ತೆ, ಎಲ್ಲಿತ್ತು ಗೊತ್ತಾ?
ಶಬರಿಮಲೆ

Updated on: Sep 29, 2025 | 2:54 PM

ಶಬರಿಮಲೆ, ಸೆಪ್ಟೆಂಬರ್ 29: ಕೇರಳದ ಪ್ರಸಿದ್ಧ ಶಬರಿಮಲೆ(Sabarimala) ದೇವಸ್ಥಾನದಿಂದ ಕಣ್ಮರೆಯಾಗಿದ್ದ ಚಿನ್ನ ಸಿಕ್ಕಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ದೇವಸ್ಥಾನದ ವಿಗ್ರಹದಿಂದ 4 ಕೆಜಿ ತೂಕದ ಕೋಟಿಗಟ್ಟಲೆ ಬೆಲೆ ಬಾಳುವ ಚಿನ್ನ ನಿಗೂಢವಾಗಿ ಕಣ್ಮರೆಯಾಗಿತ್ತು. ದೇವಾಲಯದ ಆಡಳಿತ ಮಂಡಳಿಗೆ ಈ ವಿಷಯ ತಿಳಿದಾಗ, ಕೋಲಾಹಲ ಭುಗಿಲೆದ್ದಿತ್ತು. ಈ ವಿಷಯ ಹೈಕೋರ್ಟ್ ಮೆಟ್ಟಿಲೇರಿತು, ಅದು ಈಗ ತನಿಖೆಗೆ ಆದೇಶಿಸಿತ್ತು. 2019 ರಲ್ಲಿ, ಶಬರಿಮಲೆ ದೇವಸ್ಥಾನದ ಗರ್ಭಗುಡಿಯ (ಸನ್ನಿಧಾನಂ) ಕೆಲಸ ಪ್ರಾರಂಭವಾಯಿತು.

ಈ ಉದ್ದೇಶಕ್ಕಾಗಿ ದೇವಾಲಯದಿಂದ ಸುಮಾರು 42 ಕೆಜಿ ಚಿನ್ನವನ್ನು ತೆಗೆದುಕೊಳ್ಳಲಾಗಿದೆ. ಯೋಜನೆಯ ಪ್ರಕಾರ, ಈ ಚಿನ್ನದ ತಟ್ಟೆಗಳನ್ನು ವಿಶೇಷ ಪ್ರಕ್ರಿಯೆಯನ್ನು ಬಳಸಿಕೊಂಡು ಪುನಃ ಲೇಪಿಸಿ ನಂತರ ಗರ್ಭಗುಡಿಯಲ್ಲಿ ಮರು ಸ್ಥಾಪಿಸಬೇಕಾಗಿತ್ತು. ಈ ತಟ್ಟೆಗಳನ್ನು ಹಿಂತಿರುಗಿಸಿ ದೇವಾಲಯದಲ್ಲಿ ಸ್ಥಾಪಿಸಿದಾಗ, ಆಘಾತಕಾರಿ ಸತ್ಯ ಬಹಿರಂಗವಾಯಿತು, ಅವುಗಳ ತೂಕ ಸುಮಾರು 38 ಕೆಜಿಗೆ ಇಳಿದಿತ್ತು, ಅಂದರೆ ಸರಿಸುಮಾರು 4.45 ಕೆಜಿ ಚಿನ್ನ ಕಣ್ಮರೆಯಾಗಿತ್ತು.

ಇದೀಗ ಆ ಚಿನ್ನ ಸಿಕ್ಕಿದೆ ಎನ್ನುವ ಮಾಹಿತಿ ಸಿಕ್ಕಿದೆ. 2019ರಲ್ಲಿ ದೇವಸ್ಥಾನಕ್ಕೆ ಚಿನ್ನವನ್ನು ನೀಡಿದ್ದ ಪ್ರಾಯೋಜಕರ ಸಂಬಂಧಿಕರೊಬ್ಬರ ಮನೆಯಲ್ಲಿ ಈ ಚಿನ್ನ ಪತ್ತೆಯಾಗಿದೆ. ತಿರುವನಂತಪುರಂನ ಉಪನಗರದಲ್ಲಿರುವ ವೆಂಜರಮೂಡು ಎಂಬಲ್ಲಿ ಸಿಕ್ಕಿದೆ. ಟಿಡಿಬಿ ವಿಜಿಲೆನ್ಸ್ ಮತ್ತು ಭದ್ರತಾ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಕುಮಾರ್ ವಿ ನೇತೃತ್ವದ ತಂಡವು ಶನಿವಾರ ಬೆಂಗಳೂರಿನ ಮಲಯಾಳಿ ಉನ್ನಿಕೃಷ್ಣನ್ ಪೊಟ್ಟಿ ಅವರ ವೆಂಜರಮೂಡಿನಲ್ಲಿರುವ ಸಂಬಂಧಿಕರ ಮನೆಯಲ್ಲಿ ಇದನ್ನು ಪತ್ತೆಹಚ್ಚಿತ್ತು.

ನಾವು ಪೀಠವನ್ನು ವಶಪಡಿಸಿಕೊಂಡು ಶಬರಿಮಲೆಗೆ ಸ್ಥಳಾಂತರಿಸಿದ್ದೇವೆ. ಸೋಮವಾರ ಪ್ರಕರಣವನ್ನು ಪರಿಗಣಿಸುವಾಗ ಕೇರಳ ಹೈಕೋರ್ಟ್‌ಗೆ ವಿವರವಾದ ವರದಿಯನ್ನು ಸಲ್ಲಿಸಲಾಗುವುದು ಎಂದು ವಿಜಿಲೆನ್ಸ್ ಎಸ್‌ಪಿ ಸುನಿಲ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಹುಬ್ಬಳ್ಳಿ ಶಬರಿಮಲೆ ರೈಲು: ಅಯ್ಯಪ್ಪ ಭಕ್ತರಿಗಾಗಿ ನೈಋತ್ಯ ರೈಲ್ವೇಸ್ ವಿಶೇಷ ಕೊಡುಗೆ

ಸಚಿವ ಕೆ. ರಾಧಾಕೃಷ್ಣನ್ ಮಾತನಾಡಿ,ಶಬರಿಮಲೆಯಲ್ಲಿ ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿದೆ. ನ್ಯಾಯಾಲಯ ವರದಿಯನ್ನು ಪರಿಗಣಿಸಿದ ನಂತರ ಇತರ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಚಿನ್ನದ ಲೇಪನದಲ್ಲಿನ ಅಕ್ರಮಗಳನ್ನು ಹೈಕೋರ್ಟ್ ಪ್ರಶ್ನಿಸಿದ್ದಲ್ಲದೆ, ದೇವಾಲಯದೊಳಗಿನ ದ್ವಾರಪಾಲಕ ಪ್ರತಿಮೆಗಳು ಮತ್ತು ಇತರ ರಚನೆಗಳನ್ನು ತಕ್ಷಣ ಪರಿಶೀಲಿಸುವಂತೆ ಆದೇಶಿಸಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us