AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆದದ್ದು ಆಗಲಿ ಎಂದು ಬಂಕರ್​​ನಿಂದ ಹೊರಬಂದು ರೈಲ್ವೆ ಸ್ಟೇಶನ್​​ನತ್ತ ಹೊರಟ ಭಾರತದ ವಿದ್ಯಾರ್ಥಿಗಳು; 1000 ಜನರಿಂದ ಕಾಲ್ನಡಿಗೆ

ವೆಂಕಟೇಶ್​ ಅವರ ಪುತ್ರ ಅಮಿತ್​ (23). ನಿನ್ನೆ ಮೃತಪಟ್ಟ ವಿದ್ಯಾರ್ಥಿ ನವೀನ್​ ಮತ್ತು ಅಮಿತ್​ ಎಲ್ಲ ಒಂದೇ ಬಂಕರ್​​ನಲ್ಲಿಯೇ ಇದ್ದರು. ಅಮಿತ್ ಖಾರ್ಕೀವ್​ ವೈದ್ಯಕೀಯ ಕಾಲೇಜಿನಲ್ಲಿ ಐದನೇ ವರ್ಷದ ಮೆಡಿಕಲ್​ ಓದುತ್ತಿದ್ದರೆ, ನವೀನ್​ ನಾಲ್ಕನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಆದದ್ದು ಆಗಲಿ ಎಂದು ಬಂಕರ್​​ನಿಂದ ಹೊರಬಂದು ರೈಲ್ವೆ ಸ್ಟೇಶನ್​​ನತ್ತ ಹೊರಟ ಭಾರತದ ವಿದ್ಯಾರ್ಥಿಗಳು; 1000 ಜನರಿಂದ ಕಾಲ್ನಡಿಗೆ
ಬಂಕರ್​​ನಿಂದ ಹೊರಟಿರುವ ವಿದ್ಯಾರ್ಥಿಗಳು
Follow us
TV9 Web
| Updated By: Lakshmi Hegde

Updated on:Mar 02, 2022 | 2:52 PM

ಉಕ್ರೇನ್​​ನಲ್ಲಿ ರಷ್ಯಾ ಮಾಡುತ್ತಿರುವ ಮಿಲಿಟರಿ ಕಾರ್ಯಾಚರಣೆಯಿಂದ ಕಂಗಾಲಾಗಿರುವ ಭಾರತೀಯರು ಮತ್ತು ಇತರ ದೇಶಗಳ ಪ್ರಜೆಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಂಕರ್​, ಬೇಸ್​ಮೆಂಟ್​ಗಳಲ್ಲಿ ಆಶ್ರಯ ಪಡೆದಿದ್ದಾರೆ. ಜೀವ ರಕ್ಷಣೆಗಾಗಿ ನೆಲದಾಳಕ್ಕೆ ಹೋಗಿರುವ ಜನರಿಗೆ ಈಗೀಗ ಊಟ-ತಿಂಡಿ ಸಿಗುತ್ತಿಲ್ಲ. ಶೌಚಗೃಹ ಇಲ್ಲದೆ ಪರದಾಡುವಂತಾಗಿದೆ. ಎಲ್ಲಿ ನೋಡಿದರೂ ಬಾಂಬ್​, ಮಿಸೆಲ್​, ರಾಕೆಟ್​, ಫೈರಿಂಗ್ ಶಬ್ದವೇ ಕಿವಿಗೆ ಅಪ್ಪಳಿಸುತ್ತಿದೆ. ಅದರಲ್ಲೂ ನಿನ್ನೆ ಖಾರ್ಕೀವ್​​ನಲ್ಲಿ ಭಾರತದ ವಿದ್ಯಾರ್ಥಿ ನವೀನ್​ ರಷ್ಯಾ ದಾಳಿಯಿಂದ ಮೃತಪಟ್ಟ ನಂತರ ಭಾರತ ಸೇರಿ ಇನ್ನಿತರ ಕೆಲವು ದೇಶಗಳ ವಿದ್ಯಾರ್ಥಿಗಳು, ಉದ್ಯೋಗಿಗಳೆಲ್ಲ ಇಂದು ಖಾರ್ಕೀವ್​​ನಿಂದ ನಡೆದುಕೊಂಡೇ  ಸಮೀಪದ ರೈಲ್ವೆ ಸ್ಟೇಶನ್​ಗೆ ಹೊರಟಿದ್ದಾರೆ. ಭಾರತ 700 ಮಂದಿ ಸೇರಿ ಸುಮಾರು 1000 ಜನರು, ಆದದ್ದು ಆಗಲಿ, ದೇವರಿದ್ದಾನೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಕೈಯಲ್ಲಿ ಭಾರತದ ಧ್ವಜ ಹಿಡಿದು, ತಮ್ಮ ಬಂಕರ್​​ನಿಂದ ಏಳು ಕಿಲೋಮೀಟರ್​ ದೂರದಲ್ಲಿರುವ ರೈಲ್ವೆ ಸ್ಟೇಶನ್​​ಗೆ ಕಾಲ್ನಡಿಗೆಯಲ್ಲಿ ಹೊರಟಿದ್ದಾರೆ. ಇದರಲ್ಲಿ ಕರ್ನಾಟಕದ ಹಲವು ವಿದ್ಯಾರ್ಥಿಗಳೂ ಸೇರಿದ್ದಾರೆ ಎಂದು ಹಾವೇರಿ ಮೂಲದ ವೆಂಕಟೇಶ ವೈಶ್ಯರ್ ಎಂಬುವರು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

ವೆಂಕಟೇಶ್​ ಅವರ ಪುತ್ರ ಅಮಿತ್​ (23). ನಿನ್ನೆ ಮೃತಪಟ್ಟ ವಿದ್ಯಾರ್ಥಿ ನವೀನ್​ ಮತ್ತು ಅಮಿತ್​ ಎಲ್ಲ ಒಂದೇ ಬಂಕರ್​​ನಲ್ಲಿಯೇ ಇದ್ದರು. ಅಮಿತ್ ಖಾರ್ಕೀವ್​ ವೈದ್ಯಕೀಯ ಕಾಲೇಜಿನಲ್ಲಿ ಐದನೇ ವರ್ಷದ ಮೆಡಿಕಲ್​ ಓದುತ್ತಿದ್ದರೆ, ನವೀನ್​ ನಾಲ್ಕನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ನವೀನ್ ಸಾವಿನಿಂದ ಶಾಕ್ ಆಗಿರುವ ಇವರೆಲ್ಲ, ಇನ್ನು ಬಂಕರ್​​ನಲ್ಲಿ ಕುಳಿತರೆ ಪ್ರಯೋಜನವಿಲ್ಲ. ಏನಾದರೂ ರಿಸ್ಕ್​ ತೆಗೆದುಕೊಂಡ ವಿನಃ ಪಾರಾಗಲು ಸಾಧ್ಯವಿಲ್ಲ ಎಂದು ಗಟ್ಟಿಮನಸು ಮಾಡಿದ್ದಾರೆ. ಹೀಗಾಗಿ ಅಮಿತ್​, ಅವರ ಕಸಿನ್​ ಸುಮನ್​ ಮತ್ತು ಇತರರೆಲ್ಲ ಸೇರಿ ಕಾಲ್ನಡಿಗೆ ಮೂಲಕ ಹೊರಟಿದ್ದಾರೆ ಎಂದು ಹೇಳಲಾಗಿದೆ.

ನವೀನ್​ ಮೃತಪಟ್ಟ ಬೆನ್ನಲ್ಲೇ ಅವರ ಸೀನಿಯರ್ ಆಗಿದ್ದ ಅಮಿತ್​ ಅವರ ತಂದೆ ವೆಂಕಟೇಶ್​ ಅವರನ್ನು ಹಲವು ಮಾಧ್ಯಮಗಳು ಮಾತನಾಡಿಸಿವೆ. ಪಿಟಿಐಗೆ ಕೂಡ ವೆಂಕಟೇಶ್ ಪ್ರತಿಕ್ರಿಯೆ ನೀಡಿ, ನನ್ನ ಮಗ ಸೇರಿ ಅಲ್ಲಿರುವ ಎಲ್ಲರೂ ಮೂರ್ನಾಲ್ಕು ದಿನಗಳಿಂದ ಊಟ-ತಿಂಡಿ ಮಾಡಿಲ್ಲ. ಚಾಕಲೇಟ್​, ಬಿಸ್ಕಟ್​ ತಿಂದುಕೊಂಡಿದ್ದಾರೆ. ಅವರ ಪರಿಸ್ಥಿತಿ ನೋಡುತ್ತಿದ್ದರೆ ಕರುಳು ಕಿವುಚಿದಂತಾಗುತ್ತದೆ ಎಂದಿದ್ದಾರೆ. ಇನ್ನೊಂದೆಡೆ, ನವೀನ್​ ಮೃತದೇಹದ ಫೋಟೋ ಇಂದು ವಾಟ್ಸ್​ಆ್ಯಪ್​​ನಲ್ಲಿ ಹರಿದಾಡುತ್ತಿದೆ. ಅದನ್ನು ನೋಡಿದ ನವೀನ್​ ಪಾಲಕರು, ಸೋದರ ಆಕ್ರಂದಿಸುತ್ತಿದ್ದಾರೆ.

ಮೃತ ನವೀನ್ ಕುಟುಂಬದೊಂದಿಗೆ ಈಗಾಗಲೇ ಪ್ರಧಾನಿ ಮೋದಿ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ಸಾಂತ್ವನ ಹೇಳಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನವೀನ್​ ಮೃತದೇಹವನ್ನು ಭಾರತಕ್ಕೆ ತರಲು ಎಷ್ಟಾಗತ್ತೋ ಅಷ್ಟು ಪ್ರಯತ್ನ ಮಾಡುತ್ತೇನೆ. ಆದರೂ ಕಷ್ಟವಾಗಬಹುದು. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​.ಜೈಶಂಕರ್​ ಜತೆಯೂ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಧ್ವಜದಿಂದಾಗಿ ಉಕ್ರೇನ್​ನಿಂದ ಸುರಕ್ಷಿತವಾಗಿ ಪಾರಾದ ಪಾಕಿಸ್ತಾನಿ, ಟರ್ಕಿಶ್ ವಿದ್ಯಾರ್ಥಿಗಳು!

Published On - 2:51 pm, Wed, 2 March 22

ಸಿಎಸ್​ಕೆ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ರೊಮಾರಿಯೊ ಶೆಫರ್ಡ್
ಸಿಎಸ್​ಕೆ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ರೊಮಾರಿಯೊ ಶೆಫರ್ಡ್
ಈ ಸೀಸನ್​ನ 7ನೇ ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ
ಈ ಸೀಸನ್​ನ 7ನೇ ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ
ವಿಜಯಪುರಕ್ಕೆ ಯತ್ನಾಳ್ ನೀಡಿರುವ ಕೊಡುಗೆ ಏನು? ಶಿವಾನಂದ ಪುತ್ರ
ವಿಜಯಪುರಕ್ಕೆ ಯತ್ನಾಳ್ ನೀಡಿರುವ ಕೊಡುಗೆ ಏನು? ಶಿವಾನಂದ ಪುತ್ರ
ಥೂ...ಛೀ..ಬೆಂಗಳೂರಿನಲ್ಲಿ ಬೆತ್ತಲೆಯಾಗಿ ಓಡಾಡಿದ ಯುವತಿ, ವಿಡಿಯೋ ವೈರಲ್
ಥೂ...ಛೀ..ಬೆಂಗಳೂರಿನಲ್ಲಿ ಬೆತ್ತಲೆಯಾಗಿ ಓಡಾಡಿದ ಯುವತಿ, ವಿಡಿಯೋ ವೈರಲ್
ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್
ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್
ಪಿಒಕೆಯಲ್ಲಿ ಸ್ಥಳೀಯರಿಗೆ ಪಾಕ್ ಸೇನೆಯಿಂದ ಶಸ್ತ್ರಾಸ್ತ್ರ ತರಬೇತಿ
ಪಿಒಕೆಯಲ್ಲಿ ಸ್ಥಳೀಯರಿಗೆ ಪಾಕ್ ಸೇನೆಯಿಂದ ಶಸ್ತ್ರಾಸ್ತ್ರ ತರಬೇತಿ
ನನ್ನ ಪತಿ ಮತ್ತು ಯತ್ನಾಳ್ ನಡುವಿನ ಜಗಳ ಅವರವರ ವೈಯಕ್ತಿಕ ವಿಚಾರ: ವೀಣಾ
ನನ್ನ ಪತಿ ಮತ್ತು ಯತ್ನಾಳ್ ನಡುವಿನ ಜಗಳ ಅವರವರ ವೈಯಕ್ತಿಕ ವಿಚಾರ: ವೀಣಾ
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!