AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶಸ್ಸಿನ ಕಥೆ: ಛಲಬಿಡದ ಅಭಿಲಾಶಾ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ಹೀಗೆ!

Success story: ನಾಲ್ಕನೇ ಪ್ರಯತ್ನದಲ್ಲಿ, ಅಭಿಲಾಷಾ ಪ್ರಭಾವಶಾಲಿಯಾಗಿ ಅಖಿಲ ಭಾರತ ಮಟ್ಟದಲ್ಲಿ AIR 68 ಶ್ರೇಣಿಯನ್ನು ಪಡೆದರು. ಈ ಮಧ್ಯೆ, 2017 ರಲ್ಲಿ ಅಭಿಲಾಷಾ ವಿವಾಹವಾದರು. ತಮ್ಮ ಪತಿ ಅಂಕಿತ್‌ಗೆ ತನ್ನ ಯಶಸ್ಸನ್ನು ಅಂಕಿತಗೊಳಿಸಿದರು.

ಯಶಸ್ಸಿನ ಕಥೆ: ಛಲಬಿಡದ ಅಭಿಲಾಶಾ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ಹೀಗೆ!
ಛಲಬಿಡದ ಅಭಿಲಾಶಾ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ಹೀಗೆ! Image Credit source: daijiworld.com
ಸಾಧು ಶ್ರೀನಾಥ್​
|

Updated on:Dec 11, 2023 | 12:19 PM

Share

ಹರಿಯಾಣ, ಡಿಸೆಂಬರ್​ 11: ಅಭಿಲಾಷಾ ಶರ್ಮಾ ಹುಟ್ಟಿ ಬೆಳೆದದ್ದು ಹರಿಯಾಣದಲ್ಲಿ. ಕಠಿಣವಾದ ಐಎಎಸ್​/ ಐಪಿಎಸ್​​ ಆಗಲು UPSC ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಅದರಲ್ಲಿ ಆರಂಭಿಕ ಪ್ರಯತ್ನಗಳಲ್ಲಿ ಅವರು ಅಗಾಧವಾದ ಕಷ್ಟಗಳನ್ನು ಎದುರಿಸಿ, ಯಶಸ್ಸು ಸಾಧಿಸಿದ್ದಾರೆ. ಕೇವಲ ಸಂಪೂರ್ಣ ಏಕಾಗ್ರತೆ, ಛಲ ಮತ್ತು ದೃಢ ನಿರ್ಧಾರದ ಮೂಲಕ ಅವರು ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್​​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

UPSC ಯಲ್ಲಿ ಅಭಿಲಾಷಾ ಅವರ ಮೊದಲ ಪ್ರಯತ್ನ 2013 ರಲ್ಲಿ ನಡೆದಿತ್ತು. ಅದಾದಮೇಲೆ ಸತತ ಮೂರು ಪ್ರಯತ್ನಗಳು ವಿಫಲವಾದವು. ಅದರಿಂದ ಅವರು ಸಂದಿಗ್ಧತೆಗೆ ಸಿಲುಕಿದರು. ಆದಾಗ್ಯೂ, ತಮ್ಮನ್ನು ತಾನೇ ಹುರಿದುಂಬಿಸುತ್ತಾ, ಅವರು ದಿನದಲ್ಲಿ 15 ರಿಂದ 16 ಗಂಟೆಗಳ ಕಾಲ ಶ್ರಮದಾಯಕ ಅಧ್ಯಯನಗಳಿಗೆ ಮೀಸಲಿಡಲು ಪ್ರಾರಂಭಿಸಿದಳು. ಅವರು ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ರಾಜಕೀಯ ವಿಜ್ಞಾನವನ್ನು ತನ್ನ ಐಚ್ಛಿಕ ವಿಷಯಗಳಾಗಿ ಆರಿಸಿಕೊಂಡಿದ್ದರು ಎಂದು daijiworld.com ವರದಿ ಮಾಡಿದೆ.

ತನ್ನ ನಾಲ್ಕನೇ ಪ್ರಯತ್ನದಲ್ಲಿ, ಅಭಿಲಾಷಾ ಪ್ರಭಾವಶಾಲಿಯಾಗಿ ಅಖಿಲ ಭಾರತ ಮಟ್ಟದಲ್ಲಿ AIR 68 ಶ್ರೇಣಿಯನ್ನು ಪಡೆದರು. ಈ ಮಧ್ಯೆ, 2017 ರಲ್ಲಿ ಅಭಿಲಾಷಾ ವಿವಾಹವಾದರು. ತಮ್ಮ ಪತಿ ಅಂಕಿತ್‌ಗೆ ತನ್ನ ಯಶಸ್ಸನ್ನು ಅಂಕಿತಗೊಳಿಸಿದರು. ಅಭಿಲಾಷಾ ಪ್ರಕಾರ ಅವರ ಸಂಬಂಧವು ಸ್ನೇಹದಿಂದ ಪ್ರೀತಿಗೆ ತಿರುಗಿತ್ತು. ಮುಂದೆ ಮದುವೆಯಲ್ಲಿ ಕೊನೆಗೊಂಡಿತು. ಐಎಎಸ್ ಅಧಿಕಾರಿಯಾಗಬೇಕೆಂಬ ಹಂಬಲದಲ್ಲಿ ಅಭಿಲಾಷಾಳನ್ನು ಮನಃಪೂರ್ವಕವಾಗಿ ಬೆಂಬಲಿಸಿದ ಪ್ರೇರಕ ಅಂಶವೆಂದರೆ ಅಂಕಿತ್.

ಇದನ್ನೂ ಓದಿ: ಮೈಮುರಿದು ದುಡಿದರೆ ಭೂತಾಯಿ ಕೈ ಹಿಡಿಯುತ್ತಾಳೆ ಎನ್ನುವ ಭಾಲ್ಕಿ ರೈತ ಗೋಲ್ಡನ್ ಸೀತಾಫಲ ಬೆಳೆದು ಬದುಕು ಬಂಗಾರವಾಗಿಸಿಕೊಂಡಿದ್ದಾರೆ!

ಐಎಎಸ್‌ ಆಕಾಂಕ್ಷಿಗಳಿಗೆ ದಿನಪತ್ರಿಕೆಗಳನ್ನು ಓದುವುದನ್ನು ದಿನಚರಿಯಾಗಿ ಮಾಡಿಕೊಳ್ಳುವಂತೆ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು ಮಾಹಿತಿ ಪಡೆಯುವಂತೆ ಅಭಿಲಾಷಾಗೆ ಅವರು ಸಲಹೆ ನೀಡಿದ್ದಾರೆ. ಅಧ್ಯಯನ ಮಾಡುವಾಗ ಸರಿಯಾಗಿ ಗಮನ ಕೇಂದ್ರೀಕರಿಸದಿದ್ದರೆ ಅದು ದೊಡ್ಡ ಅಡಚಣೆಯಾಗಬಹುದು ಎಂದು ಅಭಿಲಾಷಾ ಜೋಡಿ ಚೆನ್ನಾಗಿ ಅರಿತಿದ್ದರು. ಅದರಂತೆ ಕಠಿಣ ಪರಿಶ್ರಮ ಹಾಕಿ, 68 ಶ್ರೇಣಿಯಲ್ಲಿ UPSC ಪಾಸ್ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:54 am, Mon, 11 December 23

Follow Us
ಅಮ್ಮಾ ನೀನು ಅಷ್ಟು ವರ್ಷ ನನ್ನ ಹೊತ್ತಿಲ್ವಾ, ಈಗ ನನ್ನ ಸರದಿ
ಅಮ್ಮಾ ನೀನು ಅಷ್ಟು ವರ್ಷ ನನ್ನ ಹೊತ್ತಿಲ್ವಾ, ಈಗ ನನ್ನ ಸರದಿ
ಬರೋಬ್ಬರಿ 209 ಎಸೆತಗಳು ಬಾಕಿ... ಹೀನಾಯ ಸೋಲುಂಡ ಪಾಕಿಸ್ತಾನ್
ಬರೋಬ್ಬರಿ 209 ಎಸೆತಗಳು ಬಾಕಿ... ಹೀನಾಯ ಸೋಲುಂಡ ಪಾಕಿಸ್ತಾನ್
ಎಲ್‌ಪಿಜಿ ಸಿಲಿಂಡರ್​ ಬಿಕ್ಕಟ್ಟು: ಪೆಟ್ರೋಲಿಯಂ ಸಚಿವಾಲಯದಿಂದ ಮಹತ್ವದ ಹೇಳಿಕ
ಎಲ್‌ಪಿಜಿ ಸಿಲಿಂಡರ್​ ಬಿಕ್ಕಟ್ಟು: ಪೆಟ್ರೋಲಿಯಂ ಸಚಿವಾಲಯದಿಂದ ಮಹತ್ವದ ಹೇಳಿಕ
ಮನೆಯಲ್ಲಿ ಸೂರ್ಯರಶ್ಮಿ ನೇರವಾಗಿ ಬೀಳುವುದರಿಂದ ಎಷ್ಟು ಲಾಭ ಗೊತ್ತಾ?
ಮನೆಯಲ್ಲಿ ಸೂರ್ಯರಶ್ಮಿ ನೇರವಾಗಿ ಬೀಳುವುದರಿಂದ ಎಷ್ಟು ಲಾಭ ಗೊತ್ತಾ?
ಇಂದು ಈ ರಾಶಿಯವರ ಕೆಲಸ ಕಾರ್ಯದಲ್ಲಿ ಶುಭ!
ಇಂದು ಈ ರಾಶಿಯವರ ಕೆಲಸ ಕಾರ್ಯದಲ್ಲಿ ಶುಭ!
ವಿವಾದಿತ ‘ದಿ ಕೇರಳ ಸ್ಟೋರಿ 2’ ಸಿನಿಮಾ ವೀಕ್ಷಿಸಿದ ಬಿಜೆಪಿ ಶಾಸಕರು
ವಿವಾದಿತ ‘ದಿ ಕೇರಳ ಸ್ಟೋರಿ 2’ ಸಿನಿಮಾ ವೀಕ್ಷಿಸಿದ ಬಿಜೆಪಿ ಶಾಸಕರು
ನಿಜವಾದ ಕೇರಳ ಸ್ಟೋರಿ: ಮುಸ್ಲಿಂ ಯುವಕನ ಜತೆ ಮದುವೆ ಆದ ಕುಂಭಮೇಳದ ಹುಡುಗಿ
ನಿಜವಾದ ಕೇರಳ ಸ್ಟೋರಿ: ಮುಸ್ಲಿಂ ಯುವಕನ ಜತೆ ಮದುವೆ ಆದ ಕುಂಭಮೇಳದ ಹುಡುಗಿ
ಕೊಪ್ಪಳದ ಗ್ರಾಮವೊಂದರಲ್ಲಿ ಹಾಡಹಗಲೇ ಚಿರತೆ ಓಡಾಟ: ವಿಡಿಯೋ ನೋಡಿ
ಕೊಪ್ಪಳದ ಗ್ರಾಮವೊಂದರಲ್ಲಿ ಹಾಡಹಗಲೇ ಚಿರತೆ ಓಡಾಟ: ವಿಡಿಯೋ ನೋಡಿ
ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ