AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶಸ್ಸಿನ ಕಥೆ: ಛಲಬಿಡದ ಅಭಿಲಾಶಾ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ಹೀಗೆ!

Success story: ನಾಲ್ಕನೇ ಪ್ರಯತ್ನದಲ್ಲಿ, ಅಭಿಲಾಷಾ ಪ್ರಭಾವಶಾಲಿಯಾಗಿ ಅಖಿಲ ಭಾರತ ಮಟ್ಟದಲ್ಲಿ AIR 68 ಶ್ರೇಣಿಯನ್ನು ಪಡೆದರು. ಈ ಮಧ್ಯೆ, 2017 ರಲ್ಲಿ ಅಭಿಲಾಷಾ ವಿವಾಹವಾದರು. ತಮ್ಮ ಪತಿ ಅಂಕಿತ್‌ಗೆ ತನ್ನ ಯಶಸ್ಸನ್ನು ಅಂಕಿತಗೊಳಿಸಿದರು.

ಯಶಸ್ಸಿನ ಕಥೆ: ಛಲಬಿಡದ ಅಭಿಲಾಶಾ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ಹೀಗೆ!
ಛಲಬಿಡದ ಅಭಿಲಾಶಾ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ಹೀಗೆ! Image Credit source: daijiworld.com
Follow us
ಸಾಧು ಶ್ರೀನಾಥ್​
|

Updated on:Dec 11, 2023 | 12:19 PM

ಹರಿಯಾಣ, ಡಿಸೆಂಬರ್​ 11: ಅಭಿಲಾಷಾ ಶರ್ಮಾ ಹುಟ್ಟಿ ಬೆಳೆದದ್ದು ಹರಿಯಾಣದಲ್ಲಿ. ಕಠಿಣವಾದ ಐಎಎಸ್​/ ಐಪಿಎಸ್​​ ಆಗಲು UPSC ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಅದರಲ್ಲಿ ಆರಂಭಿಕ ಪ್ರಯತ್ನಗಳಲ್ಲಿ ಅವರು ಅಗಾಧವಾದ ಕಷ್ಟಗಳನ್ನು ಎದುರಿಸಿ, ಯಶಸ್ಸು ಸಾಧಿಸಿದ್ದಾರೆ. ಕೇವಲ ಸಂಪೂರ್ಣ ಏಕಾಗ್ರತೆ, ಛಲ ಮತ್ತು ದೃಢ ನಿರ್ಧಾರದ ಮೂಲಕ ಅವರು ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್​​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

UPSC ಯಲ್ಲಿ ಅಭಿಲಾಷಾ ಅವರ ಮೊದಲ ಪ್ರಯತ್ನ 2013 ರಲ್ಲಿ ನಡೆದಿತ್ತು. ಅದಾದಮೇಲೆ ಸತತ ಮೂರು ಪ್ರಯತ್ನಗಳು ವಿಫಲವಾದವು. ಅದರಿಂದ ಅವರು ಸಂದಿಗ್ಧತೆಗೆ ಸಿಲುಕಿದರು. ಆದಾಗ್ಯೂ, ತಮ್ಮನ್ನು ತಾನೇ ಹುರಿದುಂಬಿಸುತ್ತಾ, ಅವರು ದಿನದಲ್ಲಿ 15 ರಿಂದ 16 ಗಂಟೆಗಳ ಕಾಲ ಶ್ರಮದಾಯಕ ಅಧ್ಯಯನಗಳಿಗೆ ಮೀಸಲಿಡಲು ಪ್ರಾರಂಭಿಸಿದಳು. ಅವರು ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ರಾಜಕೀಯ ವಿಜ್ಞಾನವನ್ನು ತನ್ನ ಐಚ್ಛಿಕ ವಿಷಯಗಳಾಗಿ ಆರಿಸಿಕೊಂಡಿದ್ದರು ಎಂದು daijiworld.com ವರದಿ ಮಾಡಿದೆ.

ತನ್ನ ನಾಲ್ಕನೇ ಪ್ರಯತ್ನದಲ್ಲಿ, ಅಭಿಲಾಷಾ ಪ್ರಭಾವಶಾಲಿಯಾಗಿ ಅಖಿಲ ಭಾರತ ಮಟ್ಟದಲ್ಲಿ AIR 68 ಶ್ರೇಣಿಯನ್ನು ಪಡೆದರು. ಈ ಮಧ್ಯೆ, 2017 ರಲ್ಲಿ ಅಭಿಲಾಷಾ ವಿವಾಹವಾದರು. ತಮ್ಮ ಪತಿ ಅಂಕಿತ್‌ಗೆ ತನ್ನ ಯಶಸ್ಸನ್ನು ಅಂಕಿತಗೊಳಿಸಿದರು. ಅಭಿಲಾಷಾ ಪ್ರಕಾರ ಅವರ ಸಂಬಂಧವು ಸ್ನೇಹದಿಂದ ಪ್ರೀತಿಗೆ ತಿರುಗಿತ್ತು. ಮುಂದೆ ಮದುವೆಯಲ್ಲಿ ಕೊನೆಗೊಂಡಿತು. ಐಎಎಸ್ ಅಧಿಕಾರಿಯಾಗಬೇಕೆಂಬ ಹಂಬಲದಲ್ಲಿ ಅಭಿಲಾಷಾಳನ್ನು ಮನಃಪೂರ್ವಕವಾಗಿ ಬೆಂಬಲಿಸಿದ ಪ್ರೇರಕ ಅಂಶವೆಂದರೆ ಅಂಕಿತ್.

ಇದನ್ನೂ ಓದಿ: ಮೈಮುರಿದು ದುಡಿದರೆ ಭೂತಾಯಿ ಕೈ ಹಿಡಿಯುತ್ತಾಳೆ ಎನ್ನುವ ಭಾಲ್ಕಿ ರೈತ ಗೋಲ್ಡನ್ ಸೀತಾಫಲ ಬೆಳೆದು ಬದುಕು ಬಂಗಾರವಾಗಿಸಿಕೊಂಡಿದ್ದಾರೆ!

ಐಎಎಸ್‌ ಆಕಾಂಕ್ಷಿಗಳಿಗೆ ದಿನಪತ್ರಿಕೆಗಳನ್ನು ಓದುವುದನ್ನು ದಿನಚರಿಯಾಗಿ ಮಾಡಿಕೊಳ್ಳುವಂತೆ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು ಮಾಹಿತಿ ಪಡೆಯುವಂತೆ ಅಭಿಲಾಷಾಗೆ ಅವರು ಸಲಹೆ ನೀಡಿದ್ದಾರೆ. ಅಧ್ಯಯನ ಮಾಡುವಾಗ ಸರಿಯಾಗಿ ಗಮನ ಕೇಂದ್ರೀಕರಿಸದಿದ್ದರೆ ಅದು ದೊಡ್ಡ ಅಡಚಣೆಯಾಗಬಹುದು ಎಂದು ಅಭಿಲಾಷಾ ಜೋಡಿ ಚೆನ್ನಾಗಿ ಅರಿತಿದ್ದರು. ಅದರಂತೆ ಕಠಿಣ ಪರಿಶ್ರಮ ಹಾಕಿ, 68 ಶ್ರೇಣಿಯಲ್ಲಿ UPSC ಪಾಸ್ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:54 am, Mon, 11 December 23

ಟೆಸ್ಟ್‌ ಚಾಂಪಿಯನ್​ಶಿಪ್ ಗೆಲ್ಲುತ್ತಿದ್ದಂತೆ ಭಾವುಕರಾದ ಆಫ್ರಿಕಾ ಆಟಗಾರರು
ಟೆಸ್ಟ್‌ ಚಾಂಪಿಯನ್​ಶಿಪ್ ಗೆಲ್ಲುತ್ತಿದ್ದಂತೆ ಭಾವುಕರಾದ ಆಫ್ರಿಕಾ ಆಟಗಾರರು
ಕನ್ನಡ ಸಿನಿಮಾ ಚೆನ್ನಾಗಿ ಓಡುತ್ತಿದ್ದರೂ, ಹಿಂದಿ ಸಿನಿಮಾಕ್ಕ ಅವಕಾಶ
ಕನ್ನಡ ಸಿನಿಮಾ ಚೆನ್ನಾಗಿ ಓಡುತ್ತಿದ್ದರೂ, ಹಿಂದಿ ಸಿನಿಮಾಕ್ಕ ಅವಕಾಶ
ನೀರು ಹುಡುಕುತ್ತಾ ಒಣಗಿದ ಬಾವಿಗೆ ಬಿದ್ದ ಚಿರತೆ
ನೀರು ಹುಡುಕುತ್ತಾ ಒಣಗಿದ ಬಾವಿಗೆ ಬಿದ್ದ ಚಿರತೆ
ಮಂಗಳೂರಿನಲ್ಲಿ ಭಾರೀ ಮಳೆ: ಪಂಪ್‌ವೆಲ್ ಮತ್ತೆ ಮುಳುಗಡೆ, ವಿಡಿಯೋ ನೋಡಿ
ಮಂಗಳೂರಿನಲ್ಲಿ ಭಾರೀ ಮಳೆ: ಪಂಪ್‌ವೆಲ್ ಮತ್ತೆ ಮುಳುಗಡೆ, ವಿಡಿಯೋ ನೋಡಿ
ಖಾದಿಗಳಿಗಿಂತ ಖಾಕಿಗಳು ಬ್ಯಾಟ್ ಚೆನ್ನಾಗಿ ಬೀಸಬಲ್ಲರು!
ಖಾದಿಗಳಿಗಿಂತ ಖಾಕಿಗಳು ಬ್ಯಾಟ್ ಚೆನ್ನಾಗಿ ಬೀಸಬಲ್ಲರು!
ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ RV ಕಾಲೇಜು ಮಂಡಳಿ
ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ RV ಕಾಲೇಜು ಮಂಡಳಿ
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!
ಅಸಹನೆಯಿಂದ ಬಿಸಿನೀರು ಕೊಡುವಂತೆ ಅಂಗರಕ್ಷನಿಗೆ ಹೇಳಿದ ಮಲ್ಲಿಕಾರ್ಜುನ ಖರ್ಗೆ
ಅಸಹನೆಯಿಂದ ಬಿಸಿನೀರು ಕೊಡುವಂತೆ ಅಂಗರಕ್ಷನಿಗೆ ಹೇಳಿದ ಮಲ್ಲಿಕಾರ್ಜುನ ಖರ್ಗೆ
ಸಿದ್ದರಾಮಯ್ಯ ಅಪ್ರಮಾಣಿಕ ಮುಖ್ಯಮಂತ್ರಿಯಾಗಿ ಉಳಿದುಬಿಡುತ್ತಾರೆ: ವಿಶ್ವನಾಥ್
ಸಿದ್ದರಾಮಯ್ಯ ಅಪ್ರಮಾಣಿಕ ಮುಖ್ಯಮಂತ್ರಿಯಾಗಿ ಉಳಿದುಬಿಡುತ್ತಾರೆ: ವಿಶ್ವನಾಥ್