AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಹೈಕೋರ್ಟ್​ನ 10 ಹೆಚ್ಚುವರಿ ನ್ಯಾಯಾಧೀಶರ ಖಾಯಂ ನೇಮಕಾತಿಗೆ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು; ಇಲ್ಲಿದೆ ಪಟ್ಟಿ

ಕೇರಳ ಹೈಕೋರ್ಟ್​ ಜಡ್ಜ್​ಗಳ ಖಾಯಂಗಾಗಿ ಒಂದು ಮತ್ತು ಕರ್ನಾಟಕದ 10 ಹೆಚ್ಚುವರಿ ನ್ಯಾಯಾಧೀಶರ ಸಂಬಂಧ ಎರಡು ಪ್ರಕಟಣೆಯನ್ನು ಸುಪ್ರೀಂಕೋರ್ಟ್​ ಕೊಲಿಜಿಯಂ ಬಿಡುಗಡೆ ಮಾಡಿದೆ.

ಕರ್ನಾಟಕ ಹೈಕೋರ್ಟ್​ನ 10 ಹೆಚ್ಚುವರಿ ನ್ಯಾಯಾಧೀಶರ ಖಾಯಂ ನೇಮಕಾತಿಗೆ  ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು; ಇಲ್ಲಿದೆ ಪಟ್ಟಿ
ಸುಪ್ರೀಂಕೋರ್ಟ್​
TV9 Web
| Updated By: Lakshmi Hegde|

Updated on: Sep 08, 2021 | 6:11 PM

Share

ಕರ್ನಾಟಕ ಹೈಕೋರ್ಟ್ (Karnataka Highcourt)​ನ 10 ನ್ಯಾಯಾಧೀಶರು ಮತ್ತು ಕೇರಳ ಹೈಕೋರ್ಟ್ (Kerala Highcourt)​ನ ಇಬ್ಬರು ನ್ಯಾಯಾಧೀಶರನ್ನು ಆಯಾ ಹೈಕೋರ್ಟ್​ನಲ್ಲಿ ಖಾಯಂ ಮಾಡುವಂತೆ ನಿನ್ನೆ (ಸೆಪ್ಟೆಂಬರ್​ 8) ಸುಪ್ರೀಂಕೋರ್ಟ್(Supreme Court)​ನ ಕೊಲಿಜಿಯಂ ಶಿಫಾರಸ್ಸು ಮಾಡಿ, ಈ ಸಂಬಂಧ ಮೂರು ಪ್ರಕಟಣೆ ಹೊರಡಿಸಿದೆ.  ಕೇರಳ ಹೈಕೋರ್ಟ್​ ಜಡ್ಜ್​ಗಳ ಖಾಯಂಗಾಗಿ ಒಂದು ಮತ್ತು ಕರ್ನಾಟಕದ 10 ಹೆಚ್ಚುವರಿ ನ್ಯಾಯಾಧೀಶರ ಸಂಬಂಧ ಎರಡು ಪ್ರಕಟಣೆಯನ್ನು ಸುಪ್ರೀಂಕೋರ್ಟ್​ ಕೊಲಿಜಿಯಂ ಬಿಡುಗಡೆ ಮಾಡಿದೆ. 

ಇದೀಗ ಖಾಯಂ ನೇಮಕಾತಿಗಾಗಿ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿರುವ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ಇವರು.. 1. ನ್ಯಾಯಾಧೀಶ ಶಿವಶಂಕರ್​ ಅಮರಣ್ಣವರ್​ 2. ನ್ಯಾ.ಎಂ.ಗಣೇಶಯ್ಯ ಉಮಾ 3. ಜಸ್ಟೀಸ್​ ವೇದವ್ಯಾಸಾಚಾರ್​ ಶ್ರೀಶಾನಂದಾ 4. ಜಸ್ಟೀಸ್​ ಹಂಚಾಟೆ ಸಂಜೀವ್​ಕುಮಾರ್​ 5. ನ್ಯಾ.ಪದ್ಮರಾಜ್​ ನೇಮಾಚಂದ್ರ ದೇಸಾಯಿ 6. ಜಸ್ಟೀಸ್ ಪಿ.ಕೃಷ್ಣ ಭಟ್​ 7. ನ್ಯಾ.ಮರಲೂರ್​ ಇಂದ್ರಕುಮಾರ್ ಅರುಣ್​ 8. ಜಸ್ಟೀಸ್​ ಎಂಗಲಗುಪ್ಪೆ ಸೀತಾರಾಮಯ್ಯ ಇಂದಿರೇಶ್​ 9. ನ್ಯಾ.ರವಿ ವೆಂಕಪ್ಪ ಹೊಸ್ಮನಿ 10. ಸವಣೂರ್​ ವಿಶ್ವಜಿತ್ ಶೆಟ್ಟಿ

ಹಾಗೇ, ಕೇರಳ ಹೈಕೋರ್ಟ್ ಹೆಚ್ಚುವರಿ ನ್ಯಾಯಾಧೀಶರ ಪಟ್ಟಿ ಹೀಗಿದೆ.. 1.ಎಂ.ಆರ್​.ಅನಿತಾ 2.ಕೆ.ನಾಯರ್ ಹರಿಪಾಲ್​

ಕೇರಳದ ಈ ಇಬ್ಬರಲ್ಲಿ ಎಂ.ಆರ್​.ಅನಿತಾ 2020ರ ಮಾರ್ಚ್​ನಲ್ಲಿ ಮತ್ತು ಕೆ.ನಾಯರ್ ಹರಿಪಾಲ್​ ಮೇ ಅದೇ ವರ್ಷ ಮೇ ತಿಂಗಳಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಾಧೀಶರ ಪೈಕಿ, ನ್ಯಾ.ಇಂದ್ರಕುಮಾರ್ ಅರುಣ್​ ಮತ್ತು ನ್ಯಾ.ರವಿ ವೆಂಕಪ್ಪ ಹೊಸ್ಮನಿ 2020ರ ಜನವರಿಯಲ್ಲಿ, ನ್ಯಾ. ವಿಶ್ವಜಿತ್ ಶೆಟ್ಟಿಯವರು 2020ರ ಏಪ್ರಿಲ್​ನಲ್ಲಿ ಹೈಕೋರ್ಟ್​ಗೆ ನೇಮಕಗೊಂಡಿದ್ದಾರೆ. ಉಳಿದ ಆರೂ ನ್ಯಾಯಾಧೀಶರು 2020ರ ಮೇ ತಿಂಗಳಲ್ಲಿ ನೇಮಕಗೊಂಡವರು.

ಇದನ್ನೂ ಓದಿ: ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ 100 ಪ್ರಯಾಣಿಕರಿದ್ದ ಬೋಟ್​ಗಳು ಡಿಕ್ಕಿ; ದುರಂತದಲ್ಲಿ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ

ನವೆಂಬರ್​ನಲ್ಲಿ ಇನ್​ವೆಸ್ಟ್ ಕರ್ನಾಟಕ ಹೂಡಿಕೆ ಸಮಾವೇಶ: ಮುರುಗೇಶ್ ನಿರಾಣಿ