ಕಾರಿನ ಕಿಟಕಿಯಿಂದ ತಲೆ ಹೊರಗೆ ಹಾಕಿ ಮದುವೆ ನೋಡುತ್ತಿದ್ದ ಬಾಲಕಿ, ನಿರ್ಲಕ್ಷ್ಯದಿಂದ ಡೋರ್ ಹಾಕಿದ ಚಾಲಕ, ಉಸಿರುಗಟ್ಟಿ ಮಗು ಸಾವು

ಇದರಿಂದ ಅಲ್ಲಿಯವರೆಗೂ ಸುಗಮವಾಗಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ದಿಢೀರನೆ ಬೇಸರದ ಛಾಯೆ ಆವರಿಸಿದೆ. ಮಗುವಿನ ತಂದೆ ವೆಂಕಟೇಶ್ವರಲು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರು ಚಾಲಕ ಶೇಖರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರಿನ ಕಿಟಕಿಯಿಂದ ತಲೆ ಹೊರಗೆ ಹಾಕಿ ಮದುವೆ ನೋಡುತ್ತಿದ್ದ ಬಾಲಕಿ, ನಿರ್ಲಕ್ಷ್ಯದಿಂದ ಡೋರ್ ಹಾಕಿದ ಚಾಲಕ, ಉಸಿರುಗಟ್ಟಿ ಮಗು ಸಾವು
ಕಾರಿನ ಕಿಟಕಿಯಿಂದ ತಲೆ ಹೊರಗೆ ಹಾಕಿದ್ದ ಬಾಲಕಿ ಸಾವು
Edited By:

Updated on: May 23, 2023 | 1:17 PM

ಸಂಬಂಧಿಕರ ಮನೆಯಲ್ಲಿ ನಡೆಯುತ್ತಿದ್ದ ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದ ಬಾಲಕಿ ಸಾವನ್ನಪ್ಪಿದೆ. ಕಾರು ಚಾಲಕನ ನಿರ್ಲಕ್ಷ್ಯದಿಂದ ಮದುವೆ ಮನೆಯಲ್ಲಿ ದುರಂತದ ಛಾಯೆ (Wedding Tragedy) ಆವರಿಸಿದೆ. ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯಲ್ಲಿ ಭಾನುವಾರ (ಮೇ 21) ಈ ದಾರುಣ ಘಟನೆ ನಡೆದಿದೆ. ವಿವರಗಳನ್ನು ನೋಡುವುದಾದರೆ…

ಸೂರ್ಯಪೇಟ ಜಿಲ್ಲೆಯ ಅನಂತಗಿರಿ ಮಂಡಲದ ಬೊಜ್ಜಗುಡೆಂ ಗ್ರಾಮದಲ್ಲಿ ಭಾನುವಾರ ರಾತ್ರಿ ಮದುವೆ ಸಮಾರಂಭ ನಡೆಯುತ್ತಿತ್ತು. ವರ ಹಾಗೂ ವಧುವಿನ ನೃತ್ಯ ಕಾರ್ಯಕ್ರಮ ನಡೆಯುತ್ತಿತ್ತು. ಬಾನೋಟು ಇಂದ್ರಜಾ (9) ಎಂಬ ಮಗು ಕಾರಿನ ಹಿಂದಿನ ಸೀಟಿನಲ್ಲಿ ಒಂಟಿಯಾಗಿ ಕುಳಿತು ಕಿಟಕಿಯಿಂದ ತಲೆ ಹಾಕಿಕೊಂಡು ನೃತ್ಯಗಳನ್ನು ವೀಕ್ಷಿಸುತ್ತಿತ್ತು. ಆದರೆ ಅದೇ ವೇಳೆ ಮಗುವನ್ನು ಗಮನಿಸದ ಕಾರು ಚಾಲಕ ಎಲ್ಲಿಂದಲೋ ಡೋರ್ ಮಿರರ್ ಬಟನ್ ಒತ್ತಿದ್ದಾನೆ. ಇದರಿಂದ ಕಾರಿನ ಕಿಟಕಿಯಲ್ಲಿ ಮಗುವಿನ ಕುತ್ತಿಗೆ ಸಿಲುಕಿಕೊಂಡಿದೆ. ಯಾರೂ ಗಮನಿಸದ ಕಾರಣ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ.

read more: Telangana Assembly Elections: ಡಿಸೆಂಬರ್​​ನಲ್ಲಿ ಅಸೆಂಬ್ಲಿ ಚುನಾವಣೆ -ತೆಲಂಗಾಣದಲ್ಲಿ ಬಿಜೆಪಿ ತಯಾರಿ ಹೀಗಿದೆ ನೋಡಿ

ಇದರಿಂದ ಅಲ್ಲಿಯವರೆಗೂ ಸುಗಮವಾಗಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ದಿಢೀರನೆ ಬೇಸರದ ಛಾಯೆ ಆವರಿಸಿದೆ. ಮಗುವಿನ ತಂದೆ ವೆಂಕಟೇಶ್ವರಲು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರು ಚಾಲಕ ಶೇಖರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಸಮಗ್ರ ತನಿಖೆ ನಡೆಸಿ, ಮಾಹಿತಿ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ