AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಡಿಯನ್ ಆರ್ಮಿಯಲ್ಲಿ ಸಿಗದ ಅವಕಾಶ; ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್​​ ಸೇನೆ ಸೇರಿದ ತಮಿಳುನಾಡು ಯುವಕ

ಮನೆಗೆ ಬಂದ ಪೊಲೀಸರು ಯುವಕನ ಕೋಣೆಯನ್ನೆಲ್ಲ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಆತನ ರೂಮ್​ನ ಗೋಡೆಯ ಮೇಲೆಲ್ಲ ಹಲವು ಯೋಧರ ಚಿತ್ರಗಳೇ ಇರುವುದು ಕಂಡುಬಂದಿದೆ. 

ಇಂಡಿಯನ್ ಆರ್ಮಿಯಲ್ಲಿ ಸಿಗದ ಅವಕಾಶ; ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್​​ ಸೇನೆ ಸೇರಿದ ತಮಿಳುನಾಡು ಯುವಕ
ಉಕ್ರೇನ್ ಸೇನೆ ಸೇರಿಕೊಂಡ ತಮಿಳುನಾಡು ಯುವಕ
TV9 Web
| Edited By: |

Updated on:Mar 08, 2022 | 12:30 PM

Share

ಕೊಯಂಬತ್ತೂರು: ತಮಿಳುನಾಡಿನ ಯುವಕನೊಬ್ಬ ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್​ ಆರ್ಮಿ ಸೇರಿಕೊಂಡಿದ್ದಾರೆ. ಬಲಿಷ್ಠ ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್​​ ಸೇನೆಯಷ್ಟೇ ಅಲ್ಲ, ಅಲ್ಲಿನ ನಾಗರಿಕರೂ ಪಣತೊಟ್ಟು ನಿಂತಿದ್ದಾರೆ. ಕೈಯಲ್ಲಿ ಬಂದೂಕು ಹಿಡಿದು ತರಬೇತಿ ಪಡೆದು, ರಷ್ಯಾ ಸೈನ್ಯವನ್ನು ಎದುರಿಸುತ್ತಿದ್ದಾರೆ. ಇದರ ಮಧ್ಯೆ 52 ದೇಶಗಳ ಸುಮಾರು 20 ಸಾವಿರ ಸ್ವಯಂ ಸೇವಕರು ರಷ್ಯಾ ವಿರುದ್ಧ ಹೋರಾಟ ಮಾಡಲು ಉಕ್ರೇನ್​ಗೆ ತೆರಳಿದ್ದಾರೆ. ಈ ಸ್ವಯಂ ಸೇವಕರನ್ನು ಒಳಗೊಂಡ ಘಟಕಕ್ಕೆ ಜಾರ್ಜಿಯನ್​ ನ್ಯಾಶನಲ್​ ಲೀಜನ್​ ಅರೆಸೇನಾಪಡೆ ಘಟಕ ಎಂದು ಕರೆಯಲಾಗಿದ್ದು, ತಮಿಳುನಾಡಿನ 21 ವರ್ಷದ ಏರೋಸ್ಪೇಸ್ ಇಂಜಿನಿಯರಿಂಗ್ ವಿದ್ಯಾರ್ಥಿ ಕೂಡ ಈಗ ಅಲ್ಲಿಗೆ ಸೇರಿಕೊಂಡಿದ್ದಾರೆ. ಅಂದಹಾಗೇ, ಈ ಯುವಕ ಎತ್ತರ ಕಡಿಮೆ ಇದೆ ಎಂಬ ಕಾರಣಕ್ಕೆ ಭಾರತೀಯ ಸೇನೆಯಿಂದ ಎರಡು ಬಾರಿ ತಿರಸ್ಕೃತಗೊಂಡಿದ್ದರು. 

ಈ ಯುವಕನ ಹೆಸರು ಸಾಯಿನಿಖೇಶ್ ರವಿಚಂದ್ರನ್. ತಮಿಳುನಾಡಿನ ಕೊಯಂಬತ್ತೂರಿನ  ಸಮೀಪದ ತುಡಿಯಾಲೂರ್​ ನ ಸುಬ್ರಹ್ಮಣಿಯಂಪಾಳಯಂನ ನಿವಾಸಿ. ಈತ ಉಕ್ರೇನ್​​ ಪರ ಹೋರಾಟಲು ಅಲ್ಲಿನ ಪ್ಯಾರಾಮಿಲಿಟರಿ ಸೇರ್ಪಡೆಯಾಗುತ್ತಿದ್ದಂತೆ ಇತ್ತ ಗುಪ್ತಚರ ಇಲಾಖೆ ಗೂಢಚಾರರು ಆತನ ಮನೆಗೆ ಭೇಟಿ ಕೊಟ್ಟಿದ್ದರು. ಪಾಲಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಯುವಕನ ಹಿನ್ನೆಲೆಯ, ಉಕ್ರೇನ್​ ಆರ್ಮಿ ಸೇರಿಕೊಳ್ಳಲು ಆತ ನಿರ್ಧಾರ ಮಾಡಿದ್ಯಾಕೆ ಎಂಬ ಬಗ್ಗೆ ಸವಿಸ್ತಾರವಾದ ವರದಿ ತಯಾರಿಸಿ ಅದನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಸಾಯಿನಿಖೇಶ್​ ಉಕ್ರೇನ್​ ಸೇನೆಯನ್ನು ಸೇರಿಕೊಳ್ಳುವುದನ್ನು ತಡೆಯಲು ಆತನ ಕುಟುಂಬದವರು ತುಂಬ ಪ್ರಯತ್ನ ಪಟ್ಟಿದ್ದಾರೆ. ಮನೆಗೆ ವಾಪಸ್ ಬರುವಂತೆ ಪರಿಪರಿಯಾಗಿ ಹೇಳಿದ್ದಾರೆ. ಆದರೆ ಆತ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ ಎಂದು ಈ ವಿಷಯವನ್ನು ವಿಚಾರಣೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಹೇಳಿದ್ದಾಗಿ ಟೈಮ್ಸ್ ಆಫ್​ ಇಂಡಿಯಾ ವರದಿ ಮಾಡಿದೆ. ಇನ್ನು ಮನೆಗೆ ಬಂದ ಪೊಲೀಸರು ಯುವಕನ ಕೋಣೆಯನ್ನೆಲ್ಲ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಆತನ ರೂಮ್​ನ ಗೋಡೆಯ ಮೇಲೆಲ್ಲ ಹಲವು ಯೋಧರ ಚಿತ್ರಗಳೇ ಇರುವುದು ಕಂಡುಬಂದಿದೆ.

ಸಾಯಿನಿಖೇಶ್​ 2018ರಲ್ಲಿ ವಿದ್ಯಾ ವಿಕಾಸಿನಿ ಮೆಟ್ರಿಕ್ಯುಲೇಷನ್ ಸಂಸ್ಥೆಯಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ತಿಗೊಳಿಸಿದ್ದರು. 12ನೇ ತರಗತಿ ಮುಗಿದಾಗಿನಿಂದ ಭಾರತೀಯ ಸೇನೆ ಸೇರುವ ಪ್ರಯತ್ನ ನಡೆಸುತ್ತಲೇ ಇದ್ದರು. ಆದರೆ ಎತ್ತರದ ಕಾರಣದಿಂದ ರಿಜೆಕ್ಟ್ ಆಗುತ್ತಿದ್ದರು. ಚೆನ್ನೈನಲ್ಲಿರುವ ಯುಎಸ್​ನ ರಾಯಭಾರಿಯನ್ನೊಮ್ಮೆ ಸಾಯಿನಿಖೇಶ್​ ಭೇಟಿಯಾಗಿ, ನಾನು ಅಮೆರಿಕನ್​ ಸೈನ್ಯ ಸೇರಲು ಅವಕಾಶ ಇದೆಯೇ ಎಂದು ವಿಚಾರಿಸಿದ್ದರು. ಈ ಬಗ್ಗೆ ಯುವಕನ ಕುಟುಂಬ ತಿಳಿಸಿದೆ. ಅದಾದ ಬಳಿಕ ಅವರು 2018ರ ಸೆಪ್ಟೆಂಬರ್​ನಲ್ಲಿ ಖಾರ್ಕೀವ್​ನಲ್ಲಿರುವ ನ್ಯಾಶನಲ್​ ಎರೋಸ್ಪೇಸ್​ ಯೂನಿವರ್ಸಿಟಿ ಸೇರಿಕೊಂಡಿದ್ದಾರೆ ಹಾಗೂ ಅದೇ ಯೂನಿವರ್ಸಿಟಿಯ ಹಾಸ್ಟೆಲ್​​ನಲ್ಲಿ ವಾಸವಾಗಿದ್ದರು. ಇದೀಗ ಉಕ್ರೇನ್​ ಪರ ಹೋರಾಟಕ್ಕೆ ಇಳಿದಿದ್ದಾರೆ.

2021 ರ ಜುಲೈನಲ್ಲಿ ಒಮ್ಮೆ ಭಾರತಕ್ಕೆ ಬಂದು ತನ್ನ ಮನೆಯಲ್ಲಿ ಸುಮಾರು ಒಂದೂವರೆ ತಿಂಗಳು ಇದ್ದ ಸಾಯಿನಿಖೇಶ್​ ಅದಾದ ಮೇಲೆ ಬರಲಿಲ್ಲ. ಫೋನ್​ ಮೂಲಕ ಮನೆಯವರೊಂದಿಗೆ ಸಂಪರ್ಕದಲ್ಲಿದ್ದ. ಈಗೊಂದು ತಿಂಗಳ ಹಿಂದೆ ಮನೆಗೆ ಫೋನ್​ ಮಾಡಿದ್ದ ಸಂದರ್ಭದಲ್ಲಿ, ತನಗೆ ವಿಡಿಯೋ ಗೇಮ್ ಡೆವಲಪ್​ಮೆಂಟ್ ಕಂಪನಿಯೊಂದರಲ್ಲಿ ಪಾರ್ಟ್ ಟೈಂ ಕೆಲಸ ಸಿಕ್ಕಿದ್ದಾಗಿ ತಿಳಿಸಿದ್ದ. ಆದರೆ ಯುದ್ಧ ಶುರುವಾದ ಬಳಿಕ ಹೀಗೆ ಉಕ್ರೇನ್​ ಸೇನೆ ಸೇರಿಕೊಂಡಿದ್ದಾನೆ. ಆ ವರದಿಯನ್ನು ಮಾಧ್ಯಮಗಳಲ್ಲಿ ಓದಿದ ಮೇಲೆ ಗೊತ್ತಾಯಿತು. ಇದರು ತುಂಬ ಶಾಕ್​ ಉಂಟು ಮಾಡಿದೆ ಎಂದು ಸಾಯಿನಿಖೇಶ್​ ಕುಟುಂಬದ ಆಪ್ತರೊಬ್ಬರು ಹೇಳಿದ್ದಾರೆ.

ವಿಷಯ ಗೊತ್ತಾಗುತ್ತಿದ್ದಂತೆ ಕುಟುಂಬದವರು ಉಕ್ರೇನ್​ನಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ಇಮೇಲ್​ ಕಳಿಸಿದ್ದಾರೆ. ಸಾಯಿನಿಖೇಶ್ ಬಗ್ಗೆ ವಿಚಾರಣೆ ನಡೆಸಿ ಎಂದು ಮೇಲ್​​ನಲ್ಲಿ ಮನವಿ ಮಾಡಿದ್ದರು. ಒಂದಷ್ಟು ದಿನ ರಾಯಭಾರಿ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ನಂತರ ಕುಟುಂಬದಿಂದಲೇ ಯುವಕನ ಬಗ್ಗೆ ಮಾಹಿತಿ ತೆಗೆದುಕೊಂಡು ವಿಚಾರಿಸಿದ್ದಾಗ ಆತ ಉಕ್ರೇನ್​ ಪರ ಹೋರಾಟಕ್ಕೆ ಇಳಿದಿರುವುದು ದೃಢಪಟ್ಟಿದೆ. ಸದ್ಯ ಸಾಯಿನಿಖೇಶ್​ ತಂದೆ-ತಾಯಿ ತುಂಬ ಆತಂಕದಲ್ಲಿದ್ದಾರೆ. ಹೇಗಾದರೂ ಸರಿ ಆತನನ್ನು ವಾಪಸ್​ ಕರೆದುಕೊಂಡು ಬನ್ನಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡುತ್ತಿದ್ದಾರೆ.

ಇದನ್ನೂ ಓದಿ: ನಾನು MLC ಅಂದ್ರೂ ಬಿಡದ ಪೊಲೀಸರು! ಸಂಕಷ್ಟಕ್ಕೆ ಸಿಲುಕಿದ ಅರುಣ್ ಷಹಾಪೂರ

Published On - 12:26 pm, Tue, 8 March 22

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ