Floccinaucinihilipilification: ಕೊವಿಡ್ ಔಷಧಿಗಳಿಗೆ ಉಚ್ಚರಿಸಲು ಅಸಾಧ್ಯವಾದ ಹೆಸರು ಇಟ್ಟದ್ದು ಶಶಿ ತರೂರ್ ಆಗಿರಬಹುದೇ; ತೆಲಂಗಾಣ ಸಚಿವ ಕೆಟಿಆರ್ ಪ್ರಶ್ನೆ

Shashi Tharoor: ಶಶಿ ತರೂರ್ ತಮ್ಮ ಟ್ವೀಟ್​ನಲ್ಲಿ ಬಳಸಿದ floccinaucinihilipilification ಮತ್ತು procrustean ಎಂಬ ಪದದ ಅರ್ಥ ಏನು ನೆಟ್ಟಿಗರು ಗೂಗಲ್​ನಲ್ಲಿ ಎಂದು ಹುಡುಕಿದ್ದಾರೆ. ಫ್ಲೋಕಿನೌಸಿನಿಹಿಲಿಪಿಲಿಫಿಕೇಶನ್ ಅಂದರೆ ಯಾವುದೇ ವಸ್ತುವನ್ನಾದರೂ ನಿಷ್ಪಯೋಜಕ ಎಂದು ಅಂದಾಜಿಸುವ ಹವ್ಯಾಸ. ಪ್ರೊಕ್ರುಸ್ಟಿಯನ್ ಎಂದರೆ ಹೆಚ್ಚು ವ್ಯತ್ಯಾಸವನ್ನು ಪರಿಗಣಿಸದೆ ಅನುಸರಣೆಯನ್ನು ಜಾರಿಗೊಳಿಸುವವನು ಎಂದರ್ಥ.

Floccinaucinihilipilification: ಕೊವಿಡ್ ಔಷಧಿಗಳಿಗೆ ಉಚ್ಚರಿಸಲು ಅಸಾಧ್ಯವಾದ ಹೆಸರು ಇಟ್ಟದ್ದು ಶಶಿ ತರೂರ್ ಆಗಿರಬಹುದೇ; ತೆಲಂಗಾಣ ಸಚಿವ ಕೆಟಿಆರ್ ಪ್ರಶ್ನೆ
ಕೆಟಿಆರ್- ಶಶಿತರೂರ್
Follow us
| Updated By: Digi Tech Desk

Updated on:May 22, 2021 | 10:04 AM

ಹೈದರಾಬಾದ್: ಕೆಟಿಆರ್ ಎಂದೇ ಜನಪ್ರಿಯರಾಗಿರುವ ತೆಲಂಗಾಣ ಸಚಿವ ಕೆ. ತಾರಕ ರಾಮ ರಾವ್ ಅವರು ಕೊವಿಡ್ ಔಷಧಿಗಳಿಗೆ ಹೆಸರನ್ನಿಟ್ಟವರಾರು ಎಂದು ತಲೆಕೆಡಿಸಿಕೊಂಡಿದ್ದಾರೆ. ಕೊವಿಡ್ ಎರಡನೇ ಅಲೆ ಹೊತ್ತಲ್ಲಿ ಕೊವಿಡ್ ಔಷಧಿಗಳ ಹೆಸರುಗಳು ಮನೆ ಮಾತಾಗಿರುವಾಗ ಉಚ್ಚರಿಸಲು ಅಸಾಧ್ಯವಾದ ಹೆಸರನ್ನು ಈ ಔಷಧಿಗಳಿಗೆ ಯಾರು ಇಟ್ಟಿದ್ದು? Posaconazole, Cresemba, Tocilizumab, Remdesivir, Liposomal Amphotericin, Flavipiravir, Molnupiravir, Baricitinib ಮೊದಲಾದ ಔಷಧಿಗಳ ಹೆಸರು ಪಟ್ಟಿ ಮಾಡಿದ ಕೆಟಿಆರ್,ಈ ರೀತಿಯ ಹೆಸರುಗಳನ್ನಿಡುವಲ್ಲಿ ಸಂಸದ ಶಶಿ ತರೂರ್ ಕೈವಾಡವಿರಬಹುದೇ? ಎಂದು ಕಿಚಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶಶಿ ತರೂರ್, ಈ ಔಷಧಿಗಳಿಗೆ ಹೆಸರಿಟ್ಟಿದ್ದು ನಾನಲ್ಲ. ಈ ರೀತಿಯ ನಿಷ್ಪ್ರಯೋಜಕ ಕೆಲಸದಲ್ಲಿ ನನ್ನನ್ನು ನೀವು ಭಾಗಿಮಾಡಿದ್ದೇಕೆ? ಒಂದು ವೇಳೆ ನಾನು ಈ ಕೆಲಸ (ಔಷಧಿಗಳಿಗೆ ಹೆಸರಿಡುವ ಕೆಲಸ)ಮಾಡುತ್ತಿದ್ದರೆ ‘CoroNil’, ‘CoroZero’ ಮತ್ತು ‘GoCoronaGo’ ಎಂದು ಹೆಸರಿಡುತ್ತಿದ್ದೆ. ಆದರೆ ಈ ಫಾರ್ಮಸಿಸ್ಟ್ ಗಳು procrustean ಎಂದು ಹೇಳಿದ್ದಾರೆ.

ಆದಾಗ್ಯೂ, ಶಶಿ ತರೂರ್ ತಮ್ಮ ಟ್ವೀಟ್​ನಲ್ಲಿ ಬಳಸಿದ floccinaucinihilipilification ಮತ್ತು procrustean ಎಂಬ ಪದದ ಅರ್ಥ ಏನು ನೆಟ್ಟಿಗರು ಗೂಗಲ್​ನಲ್ಲಿ ಎಂದು ಹುಡುಕಿದ್ದಾರೆ. ಫ್ಲೋಕಿನೌಸಿನಿಹಿಲಿಪಿಲಿಫಿಕೇಶನ್ ಅಂದರೆ ಯಾವುದೇ ವಸ್ತುವನ್ನಾದರೂ ನಿಷ್ಪಯೋಜಕ ಎಂದು ಅಂದಾಜಿಸುವ ಹವ್ಯಾಸ. ಪ್ರೊಕ್ರುಸ್ಟಿಯನ್ ಎಂದರೆ ಹೆಚ್ಚು ವ್ಯತ್ಯಾಸವನ್ನು ಪರಿಗಣಿಸದೆ ಅನುಸರಣೆಯನ್ನು ಜಾರಿಗೊಳಿಸುವವನು ಎಂದರ್ಥ

ಬಾಬಾ ರಾಮದೇವ್ ಅವರ ಪತಂಜಲಿ ಕಂಪನಿಯ ರೋಗಪ್ರತಿರೋಧ ಶಕ್ತಿ ವರ್ಧಕ ಔಷಧಿಯಾಗಿದೆ ಕೊರೊನಿಲ್. ಅದೇ ವೇಳೆ 2020 ರಲ್ಲಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ನಾಯಕ ರಾಮದಾಸ್ ಅಠವಾಳೆ ಅವರ ಕೊರೊನಾ ಓಡಿಸುವ ಘೋಷಣೆಯಾಗಿದೆ ‘ಗೋ ಕರೋನಾ ಗೋ’.

ಮಾರ್ಚ್-ಏಪ್ರಿಲ್‌ನಿಂದ ಕೊವಿಡ್ -19 ಪ್ರಕರಣಗಳು ಮತ್ತು ಮೇ ತಿಂಗಳಲ್ಲಿ ಮ್ಯೂಕೋರ್ಮೈಕೋಸಿಸ್ ಪ್ರಕರಣಗಳು ಏರಿಕೆಯಾಗುತ್ತಿದ್ದಂತೆ, ಹಲವಾರು ಔಷಧಿಗಳ ಹೆಸರುಗಳು ದೈನಂದಿನ ಸಂಭಾಷಣೆಯಲ್ಲಿ ಬಂದು ಹೋಗುತ್ತಿವೆ. ವಿವಿಧ ವೇದಿಕೆಗಳಲ್ಲಿ ವೈದ್ಯರು ಯಾವಾಗ ಔಷಧಿ ತೆಗೆದುಕೊಳ್ಳಬೇಕು ಮತ್ತು ಯಾವಾಗ ತೆಗೆದುಕೊಳ್ಳಬಾರದು ಎಂದು ಜನರಲ್ಲಿ ಹೇಳುತ್ತಿದ್ದಾರೆ. ಶೇ 80 ರಷ್ಟು ಕೊವಿಡ್ -19 ಸೋಂಕುಗಳಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಬಹುದಾಗಿರುವುದರಿಂದ, ಕೇಂದ್ರ ಆರೋಗ್ಯ ಸಚಿವಾಲಯವು ಕ್ಲಿನಿಕಲ್ ನಿರ್ವಹಣೆಯ ವಿವರವಾದ ಸಲಹೆಯನ್ನು ನೀಡಿದ್ದು, ಸೋಂಕಿನ ಯಾವ ಹಂತದಲ್ಲಿ ಯಾವ ಔಷಧಿಯನ್ನು ತೆಗೆದುಕೊಳ್ಳಬಹುದು ಎಂಬುದನ್ನು ಸೂಚಿಸುತ್ತದೆ.

ಇದನ್ನೂ ಓದಿ:  Kerala Assembly Elections 2021: ಬಿಜೆಪಿಯವರು ಸೃಷ್ಟಿಸುವ ಲವ್ ಜಿಹಾದ್ ಭೀತಿ, ಕೋಮುವಾದ ಕೇರಳದಲ್ಲಿ ನಡೆಯಲ್ಲ: ಶಶಿ ತರೂರ್

ಸರ್ಕಾರಿ ವೇತನದಲ್ಲಿನ ತಾರತಮ್ಯ ಉಲ್ಲೇಖಿಸಿ ಶಶಿ ತರೂರ್ ಟ್ವೀಟ್; ನೆಟ್ಟಿಗರಲ್ಲಿ ಚರ್ಚೆ

Published On - 5:24 pm, Fri, 21 May 21

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ