AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Floccinaucinihilipilification: ಕೊವಿಡ್ ಔಷಧಿಗಳಿಗೆ ಉಚ್ಚರಿಸಲು ಅಸಾಧ್ಯವಾದ ಹೆಸರು ಇಟ್ಟದ್ದು ಶಶಿ ತರೂರ್ ಆಗಿರಬಹುದೇ; ತೆಲಂಗಾಣ ಸಚಿವ ಕೆಟಿಆರ್ ಪ್ರಶ್ನೆ

Shashi Tharoor: ಶಶಿ ತರೂರ್ ತಮ್ಮ ಟ್ವೀಟ್​ನಲ್ಲಿ ಬಳಸಿದ floccinaucinihilipilification ಮತ್ತು procrustean ಎಂಬ ಪದದ ಅರ್ಥ ಏನು ನೆಟ್ಟಿಗರು ಗೂಗಲ್​ನಲ್ಲಿ ಎಂದು ಹುಡುಕಿದ್ದಾರೆ. ಫ್ಲೋಕಿನೌಸಿನಿಹಿಲಿಪಿಲಿಫಿಕೇಶನ್ ಅಂದರೆ ಯಾವುದೇ ವಸ್ತುವನ್ನಾದರೂ ನಿಷ್ಪಯೋಜಕ ಎಂದು ಅಂದಾಜಿಸುವ ಹವ್ಯಾಸ. ಪ್ರೊಕ್ರುಸ್ಟಿಯನ್ ಎಂದರೆ ಹೆಚ್ಚು ವ್ಯತ್ಯಾಸವನ್ನು ಪರಿಗಣಿಸದೆ ಅನುಸರಣೆಯನ್ನು ಜಾರಿಗೊಳಿಸುವವನು ಎಂದರ್ಥ.

Floccinaucinihilipilification: ಕೊವಿಡ್ ಔಷಧಿಗಳಿಗೆ ಉಚ್ಚರಿಸಲು ಅಸಾಧ್ಯವಾದ ಹೆಸರು ಇಟ್ಟದ್ದು ಶಶಿ ತರೂರ್ ಆಗಿರಬಹುದೇ; ತೆಲಂಗಾಣ ಸಚಿವ ಕೆಟಿಆರ್ ಪ್ರಶ್ನೆ
ಕೆಟಿಆರ್- ಶಶಿತರೂರ್
ರಶ್ಮಿ ಕಲ್ಲಕಟ್ಟ
| Updated By: Digi Tech Desk|

Updated on:May 22, 2021 | 10:04 AM

Share

ಹೈದರಾಬಾದ್: ಕೆಟಿಆರ್ ಎಂದೇ ಜನಪ್ರಿಯರಾಗಿರುವ ತೆಲಂಗಾಣ ಸಚಿವ ಕೆ. ತಾರಕ ರಾಮ ರಾವ್ ಅವರು ಕೊವಿಡ್ ಔಷಧಿಗಳಿಗೆ ಹೆಸರನ್ನಿಟ್ಟವರಾರು ಎಂದು ತಲೆಕೆಡಿಸಿಕೊಂಡಿದ್ದಾರೆ. ಕೊವಿಡ್ ಎರಡನೇ ಅಲೆ ಹೊತ್ತಲ್ಲಿ ಕೊವಿಡ್ ಔಷಧಿಗಳ ಹೆಸರುಗಳು ಮನೆ ಮಾತಾಗಿರುವಾಗ ಉಚ್ಚರಿಸಲು ಅಸಾಧ್ಯವಾದ ಹೆಸರನ್ನು ಈ ಔಷಧಿಗಳಿಗೆ ಯಾರು ಇಟ್ಟಿದ್ದು? Posaconazole, Cresemba, Tocilizumab, Remdesivir, Liposomal Amphotericin, Flavipiravir, Molnupiravir, Baricitinib ಮೊದಲಾದ ಔಷಧಿಗಳ ಹೆಸರು ಪಟ್ಟಿ ಮಾಡಿದ ಕೆಟಿಆರ್,ಈ ರೀತಿಯ ಹೆಸರುಗಳನ್ನಿಡುವಲ್ಲಿ ಸಂಸದ ಶಶಿ ತರೂರ್ ಕೈವಾಡವಿರಬಹುದೇ? ಎಂದು ಕಿಚಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶಶಿ ತರೂರ್, ಈ ಔಷಧಿಗಳಿಗೆ ಹೆಸರಿಟ್ಟಿದ್ದು ನಾನಲ್ಲ. ಈ ರೀತಿಯ ನಿಷ್ಪ್ರಯೋಜಕ ಕೆಲಸದಲ್ಲಿ ನನ್ನನ್ನು ನೀವು ಭಾಗಿಮಾಡಿದ್ದೇಕೆ? ಒಂದು ವೇಳೆ ನಾನು ಈ ಕೆಲಸ (ಔಷಧಿಗಳಿಗೆ ಹೆಸರಿಡುವ ಕೆಲಸ)ಮಾಡುತ್ತಿದ್ದರೆ ‘CoroNil’, ‘CoroZero’ ಮತ್ತು ‘GoCoronaGo’ ಎಂದು ಹೆಸರಿಡುತ್ತಿದ್ದೆ. ಆದರೆ ಈ ಫಾರ್ಮಸಿಸ್ಟ್ ಗಳು procrustean ಎಂದು ಹೇಳಿದ್ದಾರೆ.

ಆದಾಗ್ಯೂ, ಶಶಿ ತರೂರ್ ತಮ್ಮ ಟ್ವೀಟ್​ನಲ್ಲಿ ಬಳಸಿದ floccinaucinihilipilification ಮತ್ತು procrustean ಎಂಬ ಪದದ ಅರ್ಥ ಏನು ನೆಟ್ಟಿಗರು ಗೂಗಲ್​ನಲ್ಲಿ ಎಂದು ಹುಡುಕಿದ್ದಾರೆ. ಫ್ಲೋಕಿನೌಸಿನಿಹಿಲಿಪಿಲಿಫಿಕೇಶನ್ ಅಂದರೆ ಯಾವುದೇ ವಸ್ತುವನ್ನಾದರೂ ನಿಷ್ಪಯೋಜಕ ಎಂದು ಅಂದಾಜಿಸುವ ಹವ್ಯಾಸ. ಪ್ರೊಕ್ರುಸ್ಟಿಯನ್ ಎಂದರೆ ಹೆಚ್ಚು ವ್ಯತ್ಯಾಸವನ್ನು ಪರಿಗಣಿಸದೆ ಅನುಸರಣೆಯನ್ನು ಜಾರಿಗೊಳಿಸುವವನು ಎಂದರ್ಥ

ಬಾಬಾ ರಾಮದೇವ್ ಅವರ ಪತಂಜಲಿ ಕಂಪನಿಯ ರೋಗಪ್ರತಿರೋಧ ಶಕ್ತಿ ವರ್ಧಕ ಔಷಧಿಯಾಗಿದೆ ಕೊರೊನಿಲ್. ಅದೇ ವೇಳೆ 2020 ರಲ್ಲಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ನಾಯಕ ರಾಮದಾಸ್ ಅಠವಾಳೆ ಅವರ ಕೊರೊನಾ ಓಡಿಸುವ ಘೋಷಣೆಯಾಗಿದೆ ‘ಗೋ ಕರೋನಾ ಗೋ’.

ಮಾರ್ಚ್-ಏಪ್ರಿಲ್‌ನಿಂದ ಕೊವಿಡ್ -19 ಪ್ರಕರಣಗಳು ಮತ್ತು ಮೇ ತಿಂಗಳಲ್ಲಿ ಮ್ಯೂಕೋರ್ಮೈಕೋಸಿಸ್ ಪ್ರಕರಣಗಳು ಏರಿಕೆಯಾಗುತ್ತಿದ್ದಂತೆ, ಹಲವಾರು ಔಷಧಿಗಳ ಹೆಸರುಗಳು ದೈನಂದಿನ ಸಂಭಾಷಣೆಯಲ್ಲಿ ಬಂದು ಹೋಗುತ್ತಿವೆ. ವಿವಿಧ ವೇದಿಕೆಗಳಲ್ಲಿ ವೈದ್ಯರು ಯಾವಾಗ ಔಷಧಿ ತೆಗೆದುಕೊಳ್ಳಬೇಕು ಮತ್ತು ಯಾವಾಗ ತೆಗೆದುಕೊಳ್ಳಬಾರದು ಎಂದು ಜನರಲ್ಲಿ ಹೇಳುತ್ತಿದ್ದಾರೆ. ಶೇ 80 ರಷ್ಟು ಕೊವಿಡ್ -19 ಸೋಂಕುಗಳಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಬಹುದಾಗಿರುವುದರಿಂದ, ಕೇಂದ್ರ ಆರೋಗ್ಯ ಸಚಿವಾಲಯವು ಕ್ಲಿನಿಕಲ್ ನಿರ್ವಹಣೆಯ ವಿವರವಾದ ಸಲಹೆಯನ್ನು ನೀಡಿದ್ದು, ಸೋಂಕಿನ ಯಾವ ಹಂತದಲ್ಲಿ ಯಾವ ಔಷಧಿಯನ್ನು ತೆಗೆದುಕೊಳ್ಳಬಹುದು ಎಂಬುದನ್ನು ಸೂಚಿಸುತ್ತದೆ.

ಇದನ್ನೂ ಓದಿ:  Kerala Assembly Elections 2021: ಬಿಜೆಪಿಯವರು ಸೃಷ್ಟಿಸುವ ಲವ್ ಜಿಹಾದ್ ಭೀತಿ, ಕೋಮುವಾದ ಕೇರಳದಲ್ಲಿ ನಡೆಯಲ್ಲ: ಶಶಿ ತರೂರ್

ಸರ್ಕಾರಿ ವೇತನದಲ್ಲಿನ ತಾರತಮ್ಯ ಉಲ್ಲೇಖಿಸಿ ಶಶಿ ತರೂರ್ ಟ್ವೀಟ್; ನೆಟ್ಟಿಗರಲ್ಲಿ ಚರ್ಚೆ

Published On - 5:24 pm, Fri, 21 May 21

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ