ಕೊವಿಡ್-19 ಬೂಸ್ಟರ್ ಡೋಸ್‌ನ ಅಗತ್ಯವಿದೆಯೇ ಎಂಬುದರ ಬಗ್ಗೆ ಇನ್ನೂ ನಿರ್ಧರಿಸಲಾಗಿಲ್ಲ: ದೆಹಲಿ ಹೈಕೋರ್ಟ್‌ಗೆ ಕೇಂದ್ರ

Booster doses ರಾಷ್ಟ್ರೀಯ ಕೊವಿಡ್-19 ವ್ಯಾಕ್ಸಿನೇಷನ್ ಕಾರ್ಯಕ್ರಮದ ಪ್ರಸ್ತುತ ಆದ್ಯತೆಯು ಸಂಪೂರ್ಣ ಅರ್ಹ ಜನಸಂಖ್ಯೆಯನ್ನು ಸಂಪೂರ್ಣ ವ್ಯಾಕ್ಸಿನೇಷನ್‌ನೊಂದಿಗೆ ಒಳಗೊಳ್ಳುವುದಾಗಿದೆ. ಪ್ರಸ್ತುತ ಎರಡು ಪರಿಣಿತ ಸಂಸ್ಥೆಗಳಿಂದ ಬೂಸ್ಟರ್ ಡೋಸ್‌ಗಳ ನೀಡಿಕೆ ಬಗ್ಗೆ ಯಾವುದೇ ಮಾರ್ಗಸೂಚಿಗಳಿಲ್ಲ ಎಂದ ಕೇಂದ್ರ ಸರ್ಕಾರ.

ಕೊವಿಡ್-19 ಬೂಸ್ಟರ್ ಡೋಸ್‌ನ ಅಗತ್ಯವಿದೆಯೇ ಎಂಬುದರ ಬಗ್ಗೆ ಇನ್ನೂ ನಿರ್ಧರಿಸಲಾಗಿಲ್ಲ: ದೆಹಲಿ ಹೈಕೋರ್ಟ್‌ಗೆ ಕೇಂದ್ರ
ಪ್ರಾತಿನಿಧಿಕ ಚಿತ್ರ
Updated By: ರಶ್ಮಿ ಕಲ್ಲಕಟ್ಟ

Updated on: Dec 14, 2021 | 3:53 PM

ದೆಹಲಿ: ದೇಶದ ಉನ್ನತ ಪರಿಣಿತ ಸಂಸ್ಥೆಗಳಿಂದ ಕೊವಿಡ್ -19 (Covid 19) ಬೂಸ್ಟರ್ ಡೋಸ್‌ಗಳ (booster doses) ನೀಡುವಿಕೆ ಬಗ್ಗೆ ಪ್ರಸ್ತುತ ಯಾವುದೇ ಮಾರ್ಗಸೂಚಿಗಳಿಲ್ಲ ಎಂದು ಕೇಂದ್ರವು ಮಂಗಳವಾರ ದೆಹಲಿ ಹೈಕೋರ್ಟ್‌ಗೆ (Delhi High Court) ತಿಳಿಸಿದೆ. ಇಮ್ಯುನೈಸೇಶನ್‌ನ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (NTAGI) ಮತ್ತು ಕೊವಿಡ್-19 ಗಾಗಿ ಲಸಿಕೆ ನಿರ್ವಹಣೆಯ ರಾಷ್ಟ್ರೀಯ ತಜ್ಞರ ಗುಂಪು( (NEGVAC) ಕೊವಿಡ್ -19 ಲಸಿಕೆಗಳ ಡೋಸ್ ವೇಳಾಪಟ್ಟಿಗೆ ಸಂಬಂಧಿಸಿದ ವೈಜ್ಞಾನಿಕ ಪುರಾವೆಗಳನ್ನು ಚರ್ಚಿಸುತ್ತಿದೆ ಮತ್ತು ಬೂಸ್ಟರ್ ಡೋಸ್‌ಗಳ ಅಗತ್ಯ ಮತ್ತು ಸಮರ್ಥನೆಯನ್ನು ಪರಿಗಣಿಸುತ್ತಿದೆ ಎಂದು ಸರ್ಕಾರ ಹೇಳಿದೆ.  ರಾಷ್ಟ್ರೀಯ ಕೊವಿಡ್-19 ವ್ಯಾಕ್ಸಿನೇಷನ್ ಕಾರ್ಯಕ್ರಮದ ಪ್ರಸ್ತುತ ಆದ್ಯತೆಯು ಸಂಪೂರ್ಣ ಅರ್ಹ ಜನಸಂಖ್ಯೆಯನ್ನು ಸಂಪೂರ್ಣ ವ್ಯಾಕ್ಸಿನೇಷನ್‌ನೊಂದಿಗೆ ಒಳಗೊಳ್ಳುವುದಾಗಿದೆ. ಪ್ರಸ್ತುತ ಎರಡು ಪರಿಣಿತ ಸಂಸ್ಥೆಗಳಿಂದ ಬೂಸ್ಟರ್ ಡೋಸ್‌ಗಳ ನೀಡಿಕೆ ಬಗ್ಗೆ ಯಾವುದೇ ಮಾರ್ಗಸೂಚಿಗಳಿಲ್ಲ ಎಂದು ಅದು ಹೇಳಿದೆ.  ಭಾರತದಲ್ಲಿ ಕೊವಿಡ್ -19 ಲಸಿಕೆಗಳು ನೀಡುವ ರೋಗನಿರೋಧಕತೆಯ ಅವಧಿಯ ಬಗ್ಗೆ ಪ್ರಸ್ತುತ ಜ್ಞಾನವು ಸೀಮಿತವಾಗಿದೆ ಮತ್ತು ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಕೇಂದ್ರ ಹೇಳಿದೆ.ಬೂಸ್ಟರ್ ಅಗತ್ಯವೆಂದು ಪರಿಗಣಿಸಿದರೆ ಬೂಸ್ಟರ್ ಡೋಸ್‌ಗಳ ಪ್ರಸ್ತಾವಿತ ರೋಲ್‌ಔಟ್‌ನ ಟೈಮ್‌ಲೈನ್ ಅನ್ನು ಸಲ್ಲಿಸುವಂತೆ ಕಳೆದ ತಿಂಗಳು ಹೈಕೋರ್ಟ್ ಕೇಂದ್ರವನ್ನು ಕೇಳಿದ ನಂತರ ಸರ್ಕಾರದ ಪ್ರತಿಕ್ರಿಯೆ ಬಂದಿದೆ.

ಕೊವಿಡ್-19 ವ್ಯಾಕ್ಸಿನೇಷನ್ ಕುರಿತು ದೇಶದ ಉನ್ನತ ತಾಂತ್ರಿಕ ಸಲಹಾ ಸಂಸ್ಥೆಯಲ್ಲಿ ಪ್ರಾಥಮಿಕ ಒಮ್ಮತವಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಈ ಹಿಂದೆ ವರದಿ ಮಾಡಿದೆ. ಆದಾಗ್ಯೂ ಕೊರೊನಾವೈರಸ್ ಸೋಂಕಿನಿಂದ ಕ್ಷೀಣಿಸುತ್ತಿರುವ ಲಸಿಕೆ-ಪ್ರೇರಿತ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಲವಾರು ದೇಶಗಳು ನೀಡುತ್ತಿರುವ ಬೂಸ್ಟರ್ ಲಸಿಕೆ ಅನ್ನು ಶಿಫಾರಸು ಮಾಡುವ ಅಂತಿಮ ನಿರ್ಧಾರವನ್ನು ಇನ್ನೂ ತೆಗೆದುಕೊಳ್ಳಬೇಕಾಗಿದೆ. ಕಳೆದ ವಾರ, ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಲೋಕಸಭೆಗೆ ಭಾರತದ ಬೂಸ್ಟರ್ ಡೋಸ್ ನೀತಿಯು ರಾಜಕೀಯ ನಿರ್ಧಾರವಾಗುವುದಿಲ್ಲ. ಆದರೆ ಕೇವಲ ಎರಡು ಪರಿಣಿತ ಸಂಸ್ಥೆಗಳ ಅನುಮೋದನೆಯ ಆಧಾರದ ಮೇಲೆ ಇರುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ: ಬೆಂಗಳೂರಿನಿಂದ ದಕ್ಷಿಣ ಆಫ್ರಿಕಾಗೆ ಒಮಿಕ್ರಾನ್ ಸೋಂಕಿತ ಪರಾರಿ; ನಕಲಿ ಕೊವಿಡ್ ನೆಗೆಟಿವ್ ವರದಿ ನೀಡಿದ್ದ ನಾಲ್ವರ ಬಂಧನ