AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್​ ಮೊಬೈಲ್​ನ ಬಳಸೋಕೆ ಬರ್ತಿಲ್ಲ, ನೀವೇ ಇಟ್ಕೊಳ್ಳಿ ಅಂತಾ ವಾಪಸ್​ ಮಾಡಿದ ಪ್ರಾಮಾಣಿಕ ಕಳ್ಳ

ಕೊಲ್ಕತ್ತಾ: ಕದ್ದ ಮೊಬೈಲ್​ನ ಬಳಸೋಕೆ ಬರುತ್ತಿಲ್ಲ ಅಂತಾ ಕಳ್ಳನೊಬ್ಬ ಅದನ್ನ ಅದರ ಮಾಲೀಕನಿಗೆ ವಾಪಸ್​ ಮಾಡಿರುವ ಸ್ವಾರಸ್ಯಕರ ಘಟನೆ ಪಶ್ಚಿಮ ಬಂಗಾಳದಲ್ಲಿ ಬೆಳಕಿಗೆ ಬಂದಿದೆ. ವಸ್ತುವೊಂದನ್ನು ಖರೀದಿಸಲು ವ್ಯಕ್ತಿಯೊಬ್ಬ ಕಳೆದ ಸೋಮವಾರ ಅಂಗಡಿಯೊಂದಕ್ಕೆ ಭೇಟಿಕೊಟ್ಟಿದ್ದನಂತೆ. ಖರೀದಿ ಬಳಿಕ ಅಲ್ಲಿಂದ ಹೊರನಡೆದವನು ತನ್ನ ಫೋನ್​ನ ಮರೆತು ಅಂಗಡಿಯಲ್ಲೇ ಬಿಟ್ಟಿದ್ದ. ಇದನ್ನು ಗಮನಿಸಿದ್ದ ಚಾಲಾಕಿ ಕಳ್ಳ ಮೊಬೈಲ್​ನ ಮೆಲ್ಲಗೆ ತನ್ನ ಜೇಬಿನಲ್ಲಿ ಇಟ್ಟುಕೊಂಡು ಪರಾರಿಯಾಗಿದ್ದನಂತೆ. ಸ್ವಲ್ಪ ಸಮಯದ ನಂತರ ಮರೆತು ಹೋಗಿದ್ದ ಮೊಬೈಲ್​ನ ನೆನಪಸಿಕೊಂಡು ಅದರ ಮಾಲೀಕ ಅಂಗಡಿಗೆ ಬಂದ. […]

ನಿಮ್​ ಮೊಬೈಲ್​ನ ಬಳಸೋಕೆ ಬರ್ತಿಲ್ಲ, ನೀವೇ ಇಟ್ಕೊಳ್ಳಿ ಅಂತಾ ವಾಪಸ್​ ಮಾಡಿದ ಪ್ರಾಮಾಣಿಕ ಕಳ್ಳ
KUSHAL V
|

Updated on: Sep 08, 2020 | 7:49 PM

Share

ಕೊಲ್ಕತ್ತಾ: ಕದ್ದ ಮೊಬೈಲ್​ನ ಬಳಸೋಕೆ ಬರುತ್ತಿಲ್ಲ ಅಂತಾ ಕಳ್ಳನೊಬ್ಬ ಅದನ್ನ ಅದರ ಮಾಲೀಕನಿಗೆ ವಾಪಸ್​ ಮಾಡಿರುವ ಸ್ವಾರಸ್ಯಕರ ಘಟನೆ ಪಶ್ಚಿಮ ಬಂಗಾಳದಲ್ಲಿ ಬೆಳಕಿಗೆ ಬಂದಿದೆ.

ವಸ್ತುವೊಂದನ್ನು ಖರೀದಿಸಲು ವ್ಯಕ್ತಿಯೊಬ್ಬ ಕಳೆದ ಸೋಮವಾರ ಅಂಗಡಿಯೊಂದಕ್ಕೆ ಭೇಟಿಕೊಟ್ಟಿದ್ದನಂತೆ. ಖರೀದಿ ಬಳಿಕ ಅಲ್ಲಿಂದ ಹೊರನಡೆದವನು ತನ್ನ ಫೋನ್​ನ ಮರೆತು ಅಂಗಡಿಯಲ್ಲೇ ಬಿಟ್ಟಿದ್ದ. ಇದನ್ನು ಗಮನಿಸಿದ್ದ ಚಾಲಾಕಿ ಕಳ್ಳ ಮೊಬೈಲ್​ನ ಮೆಲ್ಲಗೆ ತನ್ನ ಜೇಬಿನಲ್ಲಿ ಇಟ್ಟುಕೊಂಡು ಪರಾರಿಯಾಗಿದ್ದನಂತೆ.

ಸ್ವಲ್ಪ ಸಮಯದ ನಂತರ ಮರೆತು ಹೋಗಿದ್ದ ಮೊಬೈಲ್​ನ ನೆನಪಸಿಕೊಂಡು ಅದರ ಮಾಲೀಕ ಅಂಗಡಿಗೆ ಬಂದ. ಅದು ಅಲ್ಲಿ ಕಾಣಿಸದಿದ್ದಾಗ ತನ್ನ ನಂಬರ್​ಗೆ ಕರೆಮಾಡಿದ್ದಾನೆ. ಆದರೆ, ಅಷ್ಟರಲ್ಲಿ ಚಾಲಾಕಿ ಕಳ್ಳ ಮೊಬೈಲ್​ ಸ್ವಿಚ್​ ಆಫ್​ ಮಾಡಿಬಿಟ್ಟಿದ್ದ.

ತನ್ನ ಹಣೆಬರಹವನ್ನ ಶಪಿಸುತ್ತಾ ಅಲ್ಲಿಂದ ಹೋಗಿದ್ದ ಮಾಲೀಕ ಮತ್ತೊಮ್ಮೆ ಯಾಕೆ ತನ್ನ ನಂಬರ್​ಗೆ ಡೈಯಲ್​ ಮಾಡಬಾರದೆಂದು ಪ್ರಯತ್ನಿಸಿದ್ದಾನೆ. ಈ ವೇಳೆ ರಿಂಗ್​ ಆದ ಫೋನ್​ನ ಎತ್ತಿಕೊಂಡ ಕಳ್ಳ ನಿಮ್ಮ ಫೋನ್​ Use ಮಾಡೋಕೆ ಕಷ್ಟವಾಗ್ತಿದೆ. ನೀವೇ ಇಟ್ಕೊಳ್ಳಿ ಅಂತಾ ಮಾಲೀಕನಿಗೆ ಹೇಳಿ ಮೊಬೈಲ್​ ವಾಪಸ್​ ಮಾಡಿದ್ದಾನಂತೆ.

Follow Us
ಮಳೆಗೆ ವಿಧಾನಸೌಧ ಪಕ್ಕದಲ್ಲೇ ಗುಂಡಿಗೆ ಬಿದ್ದ ಪೊಲೀಸ್ ವಾಹನ
ಮಳೆಗೆ ವಿಧಾನಸೌಧ ಪಕ್ಕದಲ್ಲೇ ಗುಂಡಿಗೆ ಬಿದ್ದ ಪೊಲೀಸ್ ವಾಹನ
‘ಸುದೀಪ್ ಎಂಟ್ರಿ ಸೂಪರ್, ‘ಕೆಡಿ 2’ ಚಿತ್ರಕ್ಕಾಗಿ ಕಾಯ್ತೀವಿ’ ಎಂದ ಫ್ಯಾನ್ಸ್
‘ಸುದೀಪ್ ಎಂಟ್ರಿ ಸೂಪರ್, ‘ಕೆಡಿ 2’ ಚಿತ್ರಕ್ಕಾಗಿ ಕಾಯ್ತೀವಿ’ ಎಂದ ಫ್ಯಾನ್ಸ್
ಕಗಿಸೋ ರಬಾಡಗೆ ಸತತ 5 ಬೌಂಡರಿ ಬಾರಿಸಿದ ಕೊಹ್ಲಿ
ಕಗಿಸೋ ರಬಾಡಗೆ ಸತತ 5 ಬೌಂಡರಿ ಬಾರಿಸಿದ ಕೊಹ್ಲಿ
‘ಕೆಡಿ’ ಸಿನಿಮಾ: ನಿರ್ದೇಶಕ ಪ್ರೇಮ್​​ ಕಾಲಿಗೆ ನಮಸ್ಕರಿಸಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾ: ನಿರ್ದೇಶಕ ಪ್ರೇಮ್​​ ಕಾಲಿಗೆ ನಮಸ್ಕರಿಸಿದ ಧ್ರುವ ಸರ್ಜಾ
ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳಲ್ಲಿ ಕಳಪೆ ಕಾಮಗಾರಿ ಬಟಾಬಯಲು
ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳಲ್ಲಿ ಕಳಪೆ ಕಾಮಗಾರಿ ಬಟಾಬಯಲು
ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ
ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ
ತೆಲಂಗಾಣದ ಈ ಭೀಕರ ಅಪಘಾತ ನೋಡಿದರೆ ಎದೆ ಝಲ್ ಎನ್ನದಿರದು!
ತೆಲಂಗಾಣದ ಈ ಭೀಕರ ಅಪಘಾತ ನೋಡಿದರೆ ಎದೆ ಝಲ್ ಎನ್ನದಿರದು!
ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆದ ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್
ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆದ ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್
ರೈಲು ನಿಲ್ಲುವ ಮುನ್ನವೇ ಜಿಗಿದ ವ್ಯಕ್ತಿ, ಮುಂದೇನಾಯಿತು ನೋಡಿ
ರೈಲು ನಿಲ್ಲುವ ಮುನ್ನವೇ ಜಿಗಿದ ವ್ಯಕ್ತಿ, ಮುಂದೇನಾಯಿತು ನೋಡಿ
ಹಿಮಾಚಲ ಪ್ರದೇಶದ ಚಿಂತ್‌ಪುರಿ ಬಳಿ ಕಣಿವೆಗೆ ಉರುಳಿದ ಕಾರು; ಇಬ್ಬರು ಸಾವು
ಹಿಮಾಚಲ ಪ್ರದೇಶದ ಚಿಂತ್‌ಪುರಿ ಬಳಿ ಕಣಿವೆಗೆ ಉರುಳಿದ ಕಾರು; ಇಬ್ಬರು ಸಾವು