AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್ ಶ್ವಾನಗಳಿಗೆ ಹೆದರಿ, ಕದ್ದ ಹಣವನ್ನು ಇನ್​​ಸ್ಟಾಲ್​​ಮೆಂಟ್​​ನಲ್ಲಿ ಹಿಂದಿರುಗಿಸಿದ ಕಳ್ಳ; ಅವನ್ಯಾರೆಂಬುದು ಮಾತ್ರ ಗೊತ್ತಾಗಿಲ್ಲ

ತನಿಖೆಯ ಮೊದಲ ಹಂತವಾಗಿ ಅಪರಾಧ ವಿಭಾಗದ ಪೊಲೀಸರು, ಶ್ವಾನದಳದೊಂದಿಗೆ ರೈತನ ಮನೆಯ ಬಳಿ ತೆರಳಿದ್ದರು. ಈ ಎಲ್ಲ ಚಟುವಟಿಕೆಗಳ ಮೇಲೆ ಕಳ್ಳ ಕಣ್ಣಿಟ್ಟಿದ್ದ. ಯಾವಾಗ ಶ್ವಾನದಳ ಅಪರಾಧ ನಡೆದ ಸ್ಥಳಕ್ಕೆ ಭೇಟಿ ನೀಡಿತೋ, ಆತ ಅಕ್ಷರಶಃ ಹೆದರಿದ್ದ.

ಪೊಲೀಸ್ ಶ್ವಾನಗಳಿಗೆ ಹೆದರಿ, ಕದ್ದ ಹಣವನ್ನು ಇನ್​​ಸ್ಟಾಲ್​​ಮೆಂಟ್​​ನಲ್ಲಿ ಹಿಂದಿರುಗಿಸಿದ ಕಳ್ಳ; ಅವನ್ಯಾರೆಂಬುದು ಮಾತ್ರ ಗೊತ್ತಾಗಿಲ್ಲ
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on:Mar 24, 2021 | 7:17 PM

Share

ಹೈದರಾಬಾದ್​: ವಾಸನೆಯಿಂದಲೇ ಅಪರಾಧಿಗಳನ್ನು ಪತ್ತೆಹಚ್ಚುವ ಸ್ನಿಫರ್ ಶ್ವಾನಗಳಿಂದ ಅದೆಷ್ಟೋ ಅಪರಾಧ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ. ಹಲವು ತಳಿಯ ನಾಯಿಗಳನ್ನು ಸ್ನಿಫರ್ ಶ್ವಾನಗಳ ವಿಭಾಗಕ್ಕೆ ಸೇರಿಸಲಾಗಿದ್ದು, ಸೈನ್ಯ ಹಾಗೂ ಪೊಲೀಸ್​ ಇಲಾಖೆಯಲ್ಲಿ ಹೆಚ್ಚು ಬಳಕೆಯಾಗುತ್ತವೆ. ಇದೀಗ ಇಂಥ ಪೊಲೀಸ್ ಸ್ನಿಫರ್​ ನಾಯಿಗಳಿಗೆ ಹೆದರಿ ಕಳ್ಳನೊಬ್ಬ ತಾನು ಕದ್ದ ಹಣವನ್ನು ಸದ್ದಿಲ್ಲದೆ ಮರಳಿಸಿದ್ದಾನೆ.

ಈ ಘಟನೆ ನಡೆದದ್ದು ಹೈದರಾಬಾದ್​​ನ ಖಮ್ಮಮ್​ ಜಿಲ್ಲೆಯ ದುಬ್ಬತಾಂಡಾ ಗ್ರಾಮದಲ್ಲಿ. ಕಳ್ಳನೊಬ್ಬ ರೈತ ಗುಗುಲೋತ್ ಲಚ್ಚರಾಮ್ ಮನೆಯಿಂದ 1ಲಕ್ಷ ರೂಪಾಯಿಯನ್ನು ಕಳವು ಮಾಡಿದ್ದ. ಗುಗಲೋತ್​ ಅವರು, ತಮ್ಮ ಮನೆಯಿಂದ ಮಾರ್ಚ್​ 17ರಂದು, 1.7ಲಕ್ಷ ರೂ. ಕಳವಾಗಿದೆ ಎಂದು ದೂರು ನೀಡಿದ್ದರು. ಪೊಲೀಸರು ಮಾ.20ರಿಂದ ತನಿಖೆಯನ್ನೂ ಪ್ರಾರಂಭಿಸಿದ್ದರು.

ಅದರ ಮೊದಲ ಹಂತವಾಗಿ ಅಪರಾಧ ವಿಭಾಗದ ಪೊಲೀಸರು, ಶ್ವಾನದಳದೊಂದಿಗೆ ರೈತನ ಮನೆಯ ಬಳಿ ತೆರಳಿದ್ದರು. ಈ ಎಲ್ಲ ಚಟುವಟಿಕೆಗಳ ಮೇಲೆ ಕಳ್ಳ ಕಣ್ಣಿಟ್ಟಿದ್ದ. ಯಾವಾಗ ಶ್ವಾನದಳ ಅಪರಾಧ ನಡೆದ ಸ್ಥಳಕ್ಕೆ ಭೇಟಿ ನೀಡಿತೋ, ಆತ ಅಕ್ಷರಶಃ ಹೆದರಿದ್ದ. ಮಾರ್ಚ್​ 21ರಂದು, ಅಂದರೆ ಪೊಲೀಸರು ತನಿಖೆ ಶುರು ಮಾಡಿದ ಮರುದಿನವೇ ರೈತ ಲಚ್ಚರಾಮ್ ಮನೆಯೆದುರು 1 ಲಕ್ಷ ರೂ. ಇಟ್ಟು ಹೋಗಿದ್ದ. ಮಾರ್ಚ್​ 22ರಂದು ಉಳಿದ 70,000 ರೂ.ನ್ನೂ ಇಟ್ಟ. ಹಣವನ್ನು ರೈತ ವಾಪಸ್​ ಪಡೆದರೂ, ನಾವು ತನಿಖೆ ಮುಂದುವರಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ. ಕಳ್ಳ ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: 20 ವಿದೇಶಿ ತಳಿಯ ಶ್ವಾನಗಳ ಪಾಲನೆ: ಬೀದರ್ ರಾಜಕಾರಣಿಯ ಶ್ವಾನ ಪ್ರೀತಿ ಇತರರಿಗೆ ಮಾದರಿ

‘ಮಹಿಳೆಯರು 8ರ ಶೇಪ್​ ಕಳೆದುಕೊಳ್ಳುತ್ತಿದ್ದಾರೆ.. ಸೊಂಟವೆಲ್ಲ ದೊಡ್ಡದಾಗುತ್ತಿದೆ’-ಅಸಭ್ಯ ಕೈಸನ್ನೆಯೊಂದಿಗೆ, ವಿವಾದಾತ್ಮಕ ಹೇಳಿಕೆ ನೀಡಿದ ರಾಜಕಾರಣಿ

Published On - 7:15 pm, Wed, 24 March 21

ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ