AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಪರೇಶನ್ ಅನಿಕಾ: 20 ದಿನಗಳಿಂದ NCB ಅಧಿಕಾರಿಗಳ ಗೌಪ್ಯ ಕಾರ್ಯಾಚರಣೆ ಹೀಗೆ ನಡೆದಿತ್ತು..

ಬೆಂಗಳೂರು:ಇಡೀ ಸ್ಯಾಂಡಲ್​ವುಡ್​ಅನ್ನೇ ತಲ್ಲಣಗೊಳಿಸಿರುವ ಡ್ರಗ್ಸ್ ಪ್ರಕರಣ, ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಡ್ರಗ್ ಡೀಲರ್​ ಅನಿಕಾಳನ್ನು ಖೆಡ್ಡಾಕ್ಕೆ ಕೆಡವಲು NCB ಯಿಂದ 20 ದಿನಗಳ ‘ಆಪರೇಷನ್ ಅನಿಕಾ’ ಕಾರ್ಯಾಚರಣೆ ನಡೆದಿತ್ತು ಎನ್ನಲಾಗಿದೆ. ಮುಂಬೈ NCB ವಲಯಾಧಿಕಾರಿ ಉಗಮ್ ಧನ್ ಚರಣ್ ಹಾಗೂ ಬೆಂಗಳೂರು NCB ವಲಯಾಧಿಕಾರಿ ಅಮಿತ್ ಗವಾಟೆ ನೇತೃತ್ವದಲ್ಲಿ ಈ ಕಾರ್ಯಾಚರಣೆ ನೆಡೆದಿದೆ. ಬೆಂಗಳೂರಿನ ಅಧಿಕಾರಿಗಳು ಜುಲೈ 31 ರಂದು ಮಾಡಿದ್ದ ಕಾರ್ಯಾಚರಣೆಯಲ್ಲಿ, ಬೆಂಗಳೂರಿನ ಫಾರಿನ್ ಪೋಸ್ಟ್ ಅಫೀಸ್​ನಲ್ಲಿ 159 ಗ್ರಾಂ MDMA ಮಾತ್ರೆಗಳನ್ನ ಸೀಜ್ […]

ಆಪರೇಶನ್ ಅನಿಕಾ: 20 ದಿನಗಳಿಂದ NCB ಅಧಿಕಾರಿಗಳ ಗೌಪ್ಯ ಕಾರ್ಯಾಚರಣೆ ಹೀಗೆ ನಡೆದಿತ್ತು..
ಸಾಧು ಶ್ರೀನಾಥ್​
|

Updated on: Aug 28, 2020 | 3:23 PM

Share

ಬೆಂಗಳೂರು:ಇಡೀ ಸ್ಯಾಂಡಲ್​ವುಡ್​ಅನ್ನೇ ತಲ್ಲಣಗೊಳಿಸಿರುವ ಡ್ರಗ್ಸ್ ಪ್ರಕರಣ, ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಡ್ರಗ್ ಡೀಲರ್​ ಅನಿಕಾಳನ್ನು ಖೆಡ್ಡಾಕ್ಕೆ ಕೆಡವಲು NCB ಯಿಂದ 20 ದಿನಗಳ ‘ಆಪರೇಷನ್ ಅನಿಕಾ’ ಕಾರ್ಯಾಚರಣೆ ನಡೆದಿತ್ತು ಎನ್ನಲಾಗಿದೆ.

ಮುಂಬೈ NCB ವಲಯಾಧಿಕಾರಿ ಉಗಮ್ ಧನ್ ಚರಣ್ ಹಾಗೂ ಬೆಂಗಳೂರು NCB ವಲಯಾಧಿಕಾರಿ ಅಮಿತ್ ಗವಾಟೆ ನೇತೃತ್ವದಲ್ಲಿ ಈ ಕಾರ್ಯಾಚರಣೆ ನೆಡೆದಿದೆ. ಬೆಂಗಳೂರಿನ ಅಧಿಕಾರಿಗಳು ಜುಲೈ 31 ರಂದು ಮಾಡಿದ್ದ ಕಾರ್ಯಾಚರಣೆಯಲ್ಲಿ, ಬೆಂಗಳೂರಿನ ಫಾರಿನ್ ಪೋಸ್ಟ್ ಅಫೀಸ್​ನಲ್ಲಿ 159 ಗ್ರಾಂ MDMA ಮಾತ್ರೆಗಳನ್ನ ಸೀಜ್ ಮಾಡಿದ್ದರು.

ಇದೇ ಮಾಹಿತಿ ಆಧಾರದ ಮೇಲೆ ಆಗಸ್ಟ್ 10 ರಂದು ಮುಂಬೈನ ಎರಡು ಕಡೆ NCB ದಾಳಿ ಮಾಡಿತ್ತು. ಈ ದಾಳಿಯಲ್ಲಿ ಎಚ್.ಎ. ಚೌಧರಿ ಹಾಗೂ ಆರ್ ಭಾತ್ರಿ ಎಂಬ ದಂಪತಿಯನ್ನು ಅಧಿಕಾರಿಗಳು ಬಂಧಿಸಿದರು. ಇದೇ ದಂಪತಿ ಭಾರತದ ಬಹುತೇಕ ನಗರಗಳ ಪ್ರತಿಷ್ಠಿತರ ಪಾರ್ಟಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎಂಬುದು ತನಿಖೆಯಿಂದ ಬಯಲಾಗಿತ್ತು.

ಇವರ ಮಾಹಿತಿ ಅಧಾರದ ಮೇಲೆ ರೆಹಮಾನ್ ಎಂಬಾತನನ್ನ ಮುಂಬೈನಲ್ಲಿ NCB ತಂಡ ಬಂಧಿಸಿತ್ತು. ನಂತರ ಆಗಸ್ಟ್ 21 ರಂದು ಬೆಂಗಳೂರಿನ ಕಲ್ಯಾಣ ನಗರದ ರಾಯಲ್ ಸ್ಯೂಟ್ಸ್ ಅಪರಾರ್ಟ್ ಮೆಂಟ್ ನಲ್ಲಿ ಕಾರ್ಯಾಚರಣೆ ನೆಡೆಸಿದ NCB ತಂಡ ಅನೂಪ್​ನನ್ನು ಬಂಧಿಸುವುದರ ಜೊತೆಗೆ ಸಾಕಷ್ಟು ಡ್ರಗ್ಸ್ ವಶಕ್ಕೆ ಪಡೆದಿತ್ತು.

ಬಂಧಿತ ಅನೂಪ್ ಮಾಹಿತಿ ಮೇರೆಗೆ ಇಬ್ಬರು ಮಹಿಳಾ ಅಧಿಕಾರಿಗಳೊಂದಿಗೆ ತೆರಳಿದ್ದ NCB ಅಧಿಕಾರಿಗಳು, ದೊಡ್ಡ ಗುಬ್ಬಿಯಲ್ಲಿ ಡ್ರಗ್ಸ್ ಸೇವನೆ ಮಾಡಿದ್ದ ಅನಿಕಾ‌ಳನ್ನು ಬಂಧಿಸಿದರು.ಜೊತೆಗೆ ಮನೆಯಲ್ಲಿದ್ದ ಸಾಕಷ್ಟು ಡ್ರಗ್ಸ್​ನ್ನು ವಶಕ್ಕೆ ಪಡೆದಿದ್ದರು.

ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?