AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಪರೇಶನ್ ಅನಿಕಾ: 20 ದಿನಗಳಿಂದ NCB ಅಧಿಕಾರಿಗಳ ಗೌಪ್ಯ ಕಾರ್ಯಾಚರಣೆ ಹೀಗೆ ನಡೆದಿತ್ತು..

ಬೆಂಗಳೂರು:ಇಡೀ ಸ್ಯಾಂಡಲ್​ವುಡ್​ಅನ್ನೇ ತಲ್ಲಣಗೊಳಿಸಿರುವ ಡ್ರಗ್ಸ್ ಪ್ರಕರಣ, ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಡ್ರಗ್ ಡೀಲರ್​ ಅನಿಕಾಳನ್ನು ಖೆಡ್ಡಾಕ್ಕೆ ಕೆಡವಲು NCB ಯಿಂದ 20 ದಿನಗಳ ‘ಆಪರೇಷನ್ ಅನಿಕಾ’ ಕಾರ್ಯಾಚರಣೆ ನಡೆದಿತ್ತು ಎನ್ನಲಾಗಿದೆ. ಮುಂಬೈ NCB ವಲಯಾಧಿಕಾರಿ ಉಗಮ್ ಧನ್ ಚರಣ್ ಹಾಗೂ ಬೆಂಗಳೂರು NCB ವಲಯಾಧಿಕಾರಿ ಅಮಿತ್ ಗವಾಟೆ ನೇತೃತ್ವದಲ್ಲಿ ಈ ಕಾರ್ಯಾಚರಣೆ ನೆಡೆದಿದೆ. ಬೆಂಗಳೂರಿನ ಅಧಿಕಾರಿಗಳು ಜುಲೈ 31 ರಂದು ಮಾಡಿದ್ದ ಕಾರ್ಯಾಚರಣೆಯಲ್ಲಿ, ಬೆಂಗಳೂರಿನ ಫಾರಿನ್ ಪೋಸ್ಟ್ ಅಫೀಸ್​ನಲ್ಲಿ 159 ಗ್ರಾಂ MDMA ಮಾತ್ರೆಗಳನ್ನ ಸೀಜ್ […]

ಆಪರೇಶನ್ ಅನಿಕಾ: 20 ದಿನಗಳಿಂದ NCB ಅಧಿಕಾರಿಗಳ ಗೌಪ್ಯ ಕಾರ್ಯಾಚರಣೆ ಹೀಗೆ ನಡೆದಿತ್ತು..
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Aug 28, 2020 | 3:23 PM

Share

ಬೆಂಗಳೂರು:ಇಡೀ ಸ್ಯಾಂಡಲ್​ವುಡ್​ಅನ್ನೇ ತಲ್ಲಣಗೊಳಿಸಿರುವ ಡ್ರಗ್ಸ್ ಪ್ರಕರಣ, ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಡ್ರಗ್ ಡೀಲರ್​ ಅನಿಕಾಳನ್ನು ಖೆಡ್ಡಾಕ್ಕೆ ಕೆಡವಲು NCB ಯಿಂದ 20 ದಿನಗಳ ‘ಆಪರೇಷನ್ ಅನಿಕಾ’ ಕಾರ್ಯಾಚರಣೆ ನಡೆದಿತ್ತು ಎನ್ನಲಾಗಿದೆ.

ಮುಂಬೈ NCB ವಲಯಾಧಿಕಾರಿ ಉಗಮ್ ಧನ್ ಚರಣ್ ಹಾಗೂ ಬೆಂಗಳೂರು NCB ವಲಯಾಧಿಕಾರಿ ಅಮಿತ್ ಗವಾಟೆ ನೇತೃತ್ವದಲ್ಲಿ ಈ ಕಾರ್ಯಾಚರಣೆ ನೆಡೆದಿದೆ. ಬೆಂಗಳೂರಿನ ಅಧಿಕಾರಿಗಳು ಜುಲೈ 31 ರಂದು ಮಾಡಿದ್ದ ಕಾರ್ಯಾಚರಣೆಯಲ್ಲಿ, ಬೆಂಗಳೂರಿನ ಫಾರಿನ್ ಪೋಸ್ಟ್ ಅಫೀಸ್​ನಲ್ಲಿ 159 ಗ್ರಾಂ MDMA ಮಾತ್ರೆಗಳನ್ನ ಸೀಜ್ ಮಾಡಿದ್ದರು.

ಇದೇ ಮಾಹಿತಿ ಆಧಾರದ ಮೇಲೆ ಆಗಸ್ಟ್ 10 ರಂದು ಮುಂಬೈನ ಎರಡು ಕಡೆ NCB ದಾಳಿ ಮಾಡಿತ್ತು. ಈ ದಾಳಿಯಲ್ಲಿ ಎಚ್.ಎ. ಚೌಧರಿ ಹಾಗೂ ಆರ್ ಭಾತ್ರಿ ಎಂಬ ದಂಪತಿಯನ್ನು ಅಧಿಕಾರಿಗಳು ಬಂಧಿಸಿದರು. ಇದೇ ದಂಪತಿ ಭಾರತದ ಬಹುತೇಕ ನಗರಗಳ ಪ್ರತಿಷ್ಠಿತರ ಪಾರ್ಟಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎಂಬುದು ತನಿಖೆಯಿಂದ ಬಯಲಾಗಿತ್ತು.

ಇವರ ಮಾಹಿತಿ ಅಧಾರದ ಮೇಲೆ ರೆಹಮಾನ್ ಎಂಬಾತನನ್ನ ಮುಂಬೈನಲ್ಲಿ NCB ತಂಡ ಬಂಧಿಸಿತ್ತು. ನಂತರ ಆಗಸ್ಟ್ 21 ರಂದು ಬೆಂಗಳೂರಿನ ಕಲ್ಯಾಣ ನಗರದ ರಾಯಲ್ ಸ್ಯೂಟ್ಸ್ ಅಪರಾರ್ಟ್ ಮೆಂಟ್ ನಲ್ಲಿ ಕಾರ್ಯಾಚರಣೆ ನೆಡೆಸಿದ NCB ತಂಡ ಅನೂಪ್​ನನ್ನು ಬಂಧಿಸುವುದರ ಜೊತೆಗೆ ಸಾಕಷ್ಟು ಡ್ರಗ್ಸ್ ವಶಕ್ಕೆ ಪಡೆದಿತ್ತು.

ಬಂಧಿತ ಅನೂಪ್ ಮಾಹಿತಿ ಮೇರೆಗೆ ಇಬ್ಬರು ಮಹಿಳಾ ಅಧಿಕಾರಿಗಳೊಂದಿಗೆ ತೆರಳಿದ್ದ NCB ಅಧಿಕಾರಿಗಳು, ದೊಡ್ಡ ಗುಬ್ಬಿಯಲ್ಲಿ ಡ್ರಗ್ಸ್ ಸೇವನೆ ಮಾಡಿದ್ದ ಅನಿಕಾ‌ಳನ್ನು ಬಂಧಿಸಿದರು.ಜೊತೆಗೆ ಮನೆಯಲ್ಲಿದ್ದ ಸಾಕಷ್ಟು ಡ್ರಗ್ಸ್​ನ್ನು ವಶಕ್ಕೆ ಪಡೆದಿದ್ದರು.

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ