AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಗ್ರನ ದಾಳಿಗೆ ಬಲಿಯಾದ ಪೊಲೀಸ್​ ಅಧಿಕಾರಿಯ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನ ಭಾಗಿ; ಡಿಪಿ ಚೇಂಜ್​ ಮಾಡಿದ ಪೊಲೀಸ್ ಸಿಬ್ಬಂದಿ

Arshid Ashraf Mir: ಅರ್ಷಿದ್​ ಅವರು ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ತುಂಬ ಪ್ರತಿಭಾವಂತ, ಬುದ್ಧಿವಂತರಾಗಿದ್ದ ಅವರು ವಿದ್ಯಾಭ್ಯಾಸದಲ್ಲೂ ಕೂಡ ಮುಂದಿದ್ದರು. ಎರಡೇ ವರ್ಷಗಳ ಹಿಂದೆ ಪೊಲೀಸ್ ಹುದ್ದೆಗೆ ನೇಮಕಗೊಂಡಿದ್ದರು.

ಉಗ್ರನ ದಾಳಿಗೆ ಬಲಿಯಾದ ಪೊಲೀಸ್​ ಅಧಿಕಾರಿಯ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನ ಭಾಗಿ; ಡಿಪಿ ಚೇಂಜ್​ ಮಾಡಿದ ಪೊಲೀಸ್ ಸಿಬ್ಬಂದಿ
ಹುತಾತ್ಮರಾದ ಅರ್ಷಿದ್​ ಅಶ್ರಫ್​
TV9 Web
| Edited By: |

Updated on: Sep 13, 2021 | 1:31 PM

Share

ಜಮ್ಮು-ಕಾಶ್ಮಿರದ ಶ್ರೀನಗರದಲ್ಲಿ ನಿನ್ನೆ (ಭಾನುವಾರ) ಉಗ್ರರ ದಾಳಿಗೆ ಹುತಾತ್ಮರಾದ 25ವರ್ಷ ಪೊಲೀಸ್​ ಅಧಿಕಾರಿ ಅರ್ಷಿದ್​ ಅಶ್ರಫ್​ ಮಿರ್(Arshid Ashraf Mir)​​ ಅಂತ್ಯಕ್ರಿಯೆ (Funerals) ಸಾವಿರಾರು ಜನರು ಪಾಲ್ಗೊಂಡು, ಕೊನೇ ಗೌರವ ಸಲ್ಲಿಸಿದ್ದಾರೆ. ಅರ್ಷಿದ್​ ​ ಅವರ ಸ್ವಗ್ರಾಮವಾದ, ಕುಪ್ವಾರಾ ಜಿಲ್ಲೆಯ ಕಲ್ಮೂನಾಕ್ಕೆ ಮೃತದೇಹ ತೆಗೆದುಕೊಂಡು ಹೋಗಿ ಅಲ್ಲಿಯೇ ಅಂತ್ಯಕ್ರಿಯೆ (Arshid Ashraf Mir Funeral) ಮಾಡಲಾಗಿದೆ.  ಪೊಲೀಸರು ವಶಪಡಿಸಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ನಿನ್ನೆ ವೈದ್ಯಕೀಯ ತಪಾಸಣೆಗಾಗಿ ಅರ್ಷಿದ್​ ಅಶ್ರಫ್​ ನಿನ್ನೆ ಖನ್ಯಾರಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಪಿಸ್ತೂಲ್​ ಹಿಡಿದು ಬಂದಿದ್ದ ಉಗ್ರನೊಬ್ಬ ಅರ್ಷಿದ್​ರಿಗೆ ಶೂಟ್ ಮಾಡಿದ್ದ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.  

ನಾವು ಒಬ್ಬ ಧೈರ್ಯಶಾಲಿ, ಕಿರಿಯ ಅಧಿಕಾರಿಯನ್ನು ಕಳೆದುಕೊಂಡಿದ್ದೇವೆ. ಆರೋಪಿಯೊಬ್ಬನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆತನ ತಪಾಸಣೆ ಮುಗಿದ ಬಳಿಕ ಅರ್ಷಿದ್​ ಹೊರಗೆ ಬಂದಿದ್ದಾರೆ. ಅದೇ ಹೊತ್ತಿಗೆ ಅವರ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಡಿಜಿಪಿ ದಿಲ್​ಬಗ್​ ಸಿಂಗ್​ ವಿಷಾದ ವ್ಯಕ್ತಪಡಿಸಿದ್ದಾರೆ. ದಾಳಿ ನಡೆಸಿದ ಉಗ್ರನ ಗುರುತು ಸ್ಪಷ್ಟವಾಗಿದೆ. ಖಂಡಿತ ಶೀಘ್ರದಲ್ಲೇ ಹಿಡಿಯುತ್ತೇವೆ ಎಂದೂ ಹೇಳಿದ್ದಾರೆ.

ಗ್ರಾಮದಲ್ಲಿ ಮಡುಗಟ್ಟಿದ ದುಃಖ ಅರ್ಷಿದ್​ ಅಶ್ರಫ್​ ಮೃತದೇಹವನ್ನು ಅವರ ಗ್ರಾಮಕ್ಕೆ ತೆಗೆದುಕೊಂಡು ಹೋಗುತ್ತಿದ್ದಂತೆ ಅಲ್ಲಿನ ಜನರೆಲ್ಲ ಅಕ್ಷರಶಃ ಶಾಕ್​ ಆದರು. ಅಲ್ಲಿನ ಪ್ರತಿಯೊಬ್ಬರೂ ಕಣ್ಣೀರು ಹಾಕಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾಗಿ ಡೆಕ್ಕನ್​ ಹೆರಾಲ್ಡ್​ ವರದಿ ಮಾಡಿದೆ. ‘ಅರ್ಷಿದ್ ಈ ಮಣ್ಣಿನ ಮಗ, ಅವರನ್ನು ಉಗ್ರ ಕೊಂದಿದ್ದಾನೆಂದರೆ ನಂಬಲು ಆಗುತ್ತಿಲ್ಲ..ನಮಗೆಲ್ಲ ತುಂಬ ಶಾಕ್​ ಆಗಿದೆ’ ಎಂದೇ ಗ್ರಾಮಸ್ಥರು ಆಕ್ರಂದಿಸುತ್ತಿದ್ದಾರೆ ಎಂದು ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಅರ್ಷಿದ್​ ಅವರು ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ತುಂಬ ಪ್ರತಿಭಾವಂತ, ಬುದ್ಧಿವಂತರಾಗಿದ್ದ ಅವರು ವಿದ್ಯಾಭ್ಯಾಸದಲ್ಲೂ ಕೂಡ ಮುಂದಿದ್ದರು. ಎರಡೇ ವರ್ಷಗಳ ಹಿಂದೆ ಪೊಲೀಸ್ ಹುದ್ದೆಗೆ ನೇಮಕಗೊಂಡಿದ್ದರು. ವೃತ್ತಿಯಲ್ಲೂ ಸಹ ಹಿರಿಯ ಅಧಿಕಾರಿಗಳಿಂದ ಶಹಬ್ಬಾಸ್​ ಎನ್ನಿಸಿಕೊಂಡಿದ್ದರು. ಇಂದು ಅವರ ಮೃತದೇಹವನ್ನು ಹೊತ್ತು ಹೋದ ಪೊಲೀಸ್ ಸಿಬ್ಬಂದಿಯ ಕಣ್ಣಲ್ಲೂ ನೀರು ಜಿನುಗಿತ್ತು. ಹಾಗೇ, ಮೃತ ಅಧಿಕಾರಿಯ ತಂದೆ, ಮೊಹಮ್ಮದ್​ ಅಶ್ರಫ್​ ಮಿರ್​ ಕೂಡ ಗೋಳಾಡಿದ್ದಾರೆ. ‘ನನ್ನ ಮಗನ ತಪ್ಪು ಏನಿತ್ತು? ಈ ಎರಡು ವರ್ಷದ ಸೇವೆಯಲ್ಲಿ ಅವನು ಮಾಡಿದ ತಪ್ಪೇನು’ ಎಂದು ಕಣ್ಣೀರು ಹಾಕಿದ್ದಾರೆ.

ಟ್ವಿಟರ್​​ನಲ್ಲಿ ಟ್ರೆಂಡ್ ಆಯ್ತು  WeAreAllArshid ಹ್ಯಾಷ್​ಟ್ಯಾಗ್​ ಅರ್ಷಿದ್​ ಹತ್ಯೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರವಾಗಿ ಖಂಡಿಸಲಾಗುತ್ತಿದೆ. ಈ ಮೂಲಕ ಉಗ್ರ ದಾಳಿಯನ್ನು ವಿರೋಧಿಸಲಾಗುತ್ತಿದೆ. WeAreAllArshid ಹ್ಯಾಷ್​ಟ್ಯಾಗ್​ ಟ್ವಿಟರ್​​ನಲ್ಲಿ ಟ್ರೆಂಡ್ ಆಗುತ್ತಿದೆ. ಸ್ಥಳೀಯ ಹಿರಿಯ ಪೊಲೀಸ್​ ಅಧಿಕಾರಿಗಳು ಅನೇಕರು ತಮ್ಮ ಟ್ವಿಟರ್​ ಡಿಸ್​ಪ್ಲೇ ನಲ್ಲಿ ಅರ್ಷಿದ್ ಅಶ್ರಫ್​ ಫೋಟೋ ಹಾಕಿಕೊಂಡಿದ್ದಾರೆ. ಅನೇಕರು ಯುವ ಅಧಿಕಾರಿಯ ಫೋಟೋವನ್ನೂ ಶೇರ್ ಮಾಡಿಕೊಂಡಿದ್ದಾರೆ.  ಇನ್ನು ಕೊವಿಡ್​ 19 ನಿಯಮಗಳನ್ನೆಲ್ಲ ಬದಿಗೊತ್ತಿ ಸಾವಿರಾರು ಜನರು ಅರ್ಷಿದ್​ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಅವರೆಷ್ಟು ಜನಪ್ರಿಯರಾಗಿದ್ದರು ಎಂಬುದನ್ನು ತೋರಿಸಿದ್ದಾರೆ. ಅದಕ್ಕೂ ಮೊದಲು ಜಿಲ್ಲಾ ಪೊಲಿಸ್​ ಕಚೇರಿಯಲ್ಲಿ ಮೃತ ಅಧಿಕಾರಿಗೆ ಪುಷ್ಪ ನಮನವನ್ನೂ ಸಲ್ಲಿಸಲಾಯಿತು. ಅದರಲ್ಲಿ ನಾಗರಿಕ ಆಡಳಿತ, ಪೊಲೀಸ್​ ಮತ್ತು ಇತರ ರಕ್ಷಣಾ ಸಿಬ್ಬಂದಿ, ಜಮ್ಮು-ಕಾಶ್ಮೀರ ಡಿಜಿಪಿ ಪಾಲ್ಗೊಂಡು ಅರ್ಷಿದ್​ಗೆ ಗೌರವ ಸಲ್ಲಿಸಿದರು.

ಇದನ್ನೂ ಓದಿ: ಈಶ್ವರಪ್ಪಗೂ, ನನಗೂ ಲವ್ ಆ್ಯಂಡ್ ಹೇಟ್ ಫ್ರೆಂಡ್​ಶಿಪ್​ ಇದೆ ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯ

PAN Card: ಕೇವಲ 10 ನಿಮಿಷದಲ್ಲಿ ಉಚಿತವಾಗಿ ಪ್ಯಾನ್ ಕಾರ್ಡ್ ಪಡೆಯಬಹುದು; ವಿವರ ಇಲ್ಲಿದೆ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!