Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀಮಿಯಂ ವಂದೇ ಭಾರತ್​ ರೈಲಿನಲ್ಲಿ ಕಾಲಿಡಲು ಜಾಗವಿಲ್ಲ, ಜನವೋ ಜನ

ಪ್ರಧಾನಿ ಮೋದಿಯವರ ಕನಸಿನ ಯೋಜನೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಎಂದು ಹೆಸರಿಡಲಾಗಿದೆ. ಈ ರೈಲು ದೇಶದ ಅತಿ ವೇಗದ ರೈಲುಗಳಲ್ಲಿ ಒಂದಾಗಿದೆ. ಸೌಲಭ್ಯಗಳು ಬಹುತೇಕ ವಿಮಾನದಲ್ಲಿ ಇದ್ದಂತೆ. ಅಷ್ಟರಮಟ್ಟಿಗೆ ಎಸಿ, ಸ್ವಯಂಚಾಲಿತ ಬಾಗಿಲುಗಳು, ಬಯೋ ಟಾಯ್ಲೆಟ್, ಪ್ರೀಮಿಯಂ ಸೀಟುಗಳು, ಆಧುನಿಕ ಲೈಟಿಂಗ್, ಜಿಪಿಎಸ್, ಮನರಂಜನಾ ವೈಶಿಷ್ಟ್ಯಗಳು, ದಿನಪತ್ರಿಕೆ, ಆಹಾರ ಪದಾರ್ಥಗಳು ಹೀಗೆ ಎಲ್ಲಾ ಸೌಲಭ್ಯಗಳಿವೆ.

ಪ್ರೀಮಿಯಂ ವಂದೇ ಭಾರತ್​ ರೈಲಿನಲ್ಲಿ ಕಾಲಿಡಲು ಜಾಗವಿಲ್ಲ, ಜನವೋ ಜನ
Follow us
ನಯನಾ ರಾಜೀವ್
|

Updated on: Jun 11, 2024 | 11:53 AM

ಇಷ್ಟು ದಿನ ಸಾಧಾರಣ ರೈಲುಗಳಲ್ಲಿ ಸಾಮಾನ್ಯ ಟಿಕೆಟ್​ ಖರೀದಿಸಿ ಎಸಿ ಕೋಚ್​ನಲ್ಲಿ ಕೂರುವುದು ಅಥವಾ ಟಿಕೆಟ್ ಇಲ್ಲದೆ ರೈಲು ಹತ್ತುವ ಘಟನೆಗಳು ನಡೆಯುತ್ತಿದ್ದವು. ಇದೀಗ ಅದೇ ಪರಿಸ್ಥಿತಿ ವಂದೇ ಭಾರತ್​ ರೈಲಿಗೂ ಬಂದಿದೆ. ಪ್ರಧಾನಿ ಮೋದಿಯವರ ಕನಸಿನ ಯೋಜನೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಎಂದು ಹೆಸರಿಡಲಾಗಿದೆ. ಈ ರೈಲು ದೇಶದ ಅತಿ ವೇಗದ ರೈಲುಗಳಲ್ಲಿ ಒಂದಾಗಿದೆ. ಸೌಲಭ್ಯಗಳು ಬಹುತೇಕ ವಿಮಾನದಲ್ಲಿ ಇದ್ದಂತೆ. ಅಷ್ಟರಮಟ್ಟಿಗೆ ಎಸಿ, ಸ್ವಯಂಚಾಲಿತ ಬಾಗಿಲುಗಳು, ಬಯೋ ಟಾಯ್ಲೆಟ್, ಪ್ರೀಮಿಯಂ ಸೀಟುಗಳು, ಆಧುನಿಕ ಲೈಟಿಂಗ್, ಜಿಪಿಎಸ್, ಮನರಂಜನಾ ವೈಶಿಷ್ಟ್ಯಗಳು, ದಿನಪತ್ರಿಕೆ, ಆಹಾರ ಪದಾರ್ಥಗಳು ಹೀಗೆ ಎಲ್ಲಾ ಸೌಲಭ್ಯಗಳಿವೆ. ಇಲ್ಲಿಯವರೆಗೆ 51 ವಂದೇ ಭಾರತ್ ರೈಲುಗಳನ್ನು ನಿಯೋಜಿಸಲಾಗಿದೆ.

ಜನರು ಸಾಗರೋಪಾದಿಯಲ್ಲಿ ರೈಲನ್ನು ಹತ್ತುತ್ತಿದ್ದಾರೆ, ಒಮ್ಮೆ ರೈಲಿನ ಬಾಗಿಲು ಹಾಕಿದರೆ ಮುಂದಿನ ನಿಲ್ದಾಣದಲ್ಲೇ ತೆರೆಯುತ್ತದೆ. ಟಿಕೆಟ್​ ಪಡೆದಿದ್ದಾರೆಯೋ ಇಲ್ಲವೋ ಎಂದು ಪರಿಶೀಲಿಸಲು ಕೂಡ ಸಾಧ್ಯವಾಗುತ್ತಿಲ್ಲ ಎಂಬುದು ಅಧಿಕಾರಿಗಳ ಅಳಲಾಗಿದೆ.

ಸೆಮಿ ಹೈಸ್ಪೀಡ್​ ವಂದೇ ಭಾರತ್ ರೈಲಿನಲ್ಲಿ ಜನರು ಕಕ್ಕಿರಿದು ತುಂಬಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಲಕ್ನೋ ಜಂಕ್ಷನ್ ಹಾಗೂ ಡೆಹ್ರಾಡೂನ್​ ನಡುವೆ ಚಲಿಸುವ ರೈಲಿನಲ್ಲಿ ಈ ದೃಶ್ಯ ಕಂಡುಬಂದಿದೆ. ಈ ರೈಲಿನಲ್ಲಿ ಎಲ್ಲೆ ನೋಡಿದರಲ್ಲಿ ಪ್ರಯಾಣಿಕರು, ಕುಳಿತ ಪ್ರಯಾಣಿಕರಿಗೂ ಉಸಿರುಗಟ್ಟಿಸುವಂತಿತ್ತು ಆ ದೃಶ್ಯ.

ಮತ್ತಷ್ಟು ಓದಿ: Vande Bharat Express: ಮೈಸೂರು ಚೆನ್ನೈ ಮಧ್ಯೆ ಇಂದಿನಿಂದ ಮತ್ತೊಂದು ವಂದೇ ಭಾರತ್ ಎಕ್ಸ್​ಪ್ರೆಸ್

ಬೇರೆ ಪ್ರಯಾಣಿಕರು ಹತ್ತಲು ಜಾಗ ಇರುವುದಿಲ್ಲ, ರೈಲಿನೊಳಗೆ ಇರುವವರಿಗೂ ನಿಂತುಕೊಳ್ಳಲು ಸಾಧ್ಯವಾಗದಂತೆ ಜನರು ಕಿಕ್ಕಿರಿದು ತುಂಬಿರುತ್ತಾರೆ, ಸಾಮಾನ್ಯ ರೈಲಿನಂತೆ ಈ ರೈಲಿನಲ್ಲಿಯೂ ಜನರು ಓಡಾಡುತ್ತಾರೆ. ದೇಶದ ನಾನಾ ಭಾಗಗಳಿಗೆ ಕೆಲಸ ಅರಸಿ ಹೋಗುವ ಉತ್ತರ ಭಾರತೀಯರಿಂದಲೇ ಈ ಸ್ಥಿತಿ ನಿರ್ಮಾಣವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಸಾಮಾನ್ಯ ರೈಲಿಗಾಗಿ ಕಾಯುತ್ತಿರುವ  ಜನರು ಈ ರೈಲನ್ನು ಹತ್ತುತ್ತಾರೆ, ಇಲ್ಲಿಯವರೆಗೂ ಅಧಿಕಾರಿಗಳು ಎಷ್ಟೇ ಪ್ರಯತ್ನಪಟ್ಟರೂ ಅದನ್ನು ತಡೆಯಲು ಸಾಧ್ಯವಾಗಿಲ್ಲ.

ಇದು ವಂದೇ ಭಾರತ್ ರೈಲಿನಲ್ಲಿ ಸ್ಥಳಾವಕಾಶವೇ ಇರಲಿಲ್ಲ, ಒಬ್ಬರನ್ನೊಬ್ಬರು ತಳ್ಳುತ್ತಾ ನಿಂತಿದ್ದರು, ಇದು ವಂದೇ ಭಾರತ್ ಎಕ್ಸ್​ಪ್ರೆಸ್​ ಆಗಿದ್ದರೂ ಸಾಮಾನ್ಯ ಕೋಟಾ ರೈಲಿನಂತೆಯೇ ಅನಿಸುತ್ತಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ
ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ
ಯುವತಿಯರೊಂದಿಗೆ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಕುಣಿದ ಗೃಹಿಣಿಯರು
ಯುವತಿಯರೊಂದಿಗೆ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಕುಣಿದ ಗೃಹಿಣಿಯರು
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ
‘ಅಪ್ಪು ಹವಾ’: ಸ್ಟಾರ್ ನಟರ ಹೊಸ ಸಿನಿಮಾಕ್ಕೂ ಸಿಗಲ್ಲ ಇಂಥಾ ಸ್ವಾಗತ
‘ಅಪ್ಪು ಹವಾ’: ಸ್ಟಾರ್ ನಟರ ಹೊಸ ಸಿನಿಮಾಕ್ಕೂ ಸಿಗಲ್ಲ ಇಂಥಾ ಸ್ವಾಗತ
ಅಧ್ಯಕ್ಷರು ಊಟಕ್ಕೆ ಕರೆದರೆ ಹೋಗದಿರಲಾಗುತ್ತದೆಯೇ? ಸತೀಶ್ ಜಾರಕಿಹೊಳಿ
ಅಧ್ಯಕ್ಷರು ಊಟಕ್ಕೆ ಕರೆದರೆ ಹೋಗದಿರಲಾಗುತ್ತದೆಯೇ? ಸತೀಶ್ ಜಾರಕಿಹೊಳಿ
ಬೆಂಗಳೂರಿನ ರೈಲಿನೊಳಗೆ ಯುವಕನಿಂದ ಮೂತ್ರ ವಿಸರ್ಜನೆ; ವಿಡಿಯೋ ವೈರಲ್
ಬೆಂಗಳೂರಿನ ರೈಲಿನೊಳಗೆ ಯುವಕನಿಂದ ಮೂತ್ರ ವಿಸರ್ಜನೆ; ವಿಡಿಯೋ ವೈರಲ್