AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಭಾಷ್​ ಚಂದ್ರ ಬೋಸ್​ ಪುಣ್ಯತಿಥಿ ಎಂಬ ಕಾಂಗ್ರೆಸ್​ ಟ್ವೀಟ್​ಗೆ ಟಿಎಂಸಿ ಆಕ್ಷೇಪ; ಭಾವನೆಗಳೊಂದಿಗೆ ಆಟ ಬೇಡ ಎಂದು ಪ್ರತಿಕ್ರಿಯೆ

ಅದೆಲ್ಲದರ ಮಧ್ಯೆ, ಸುಭಾಷ್​ ಚಂದ್ರ ಬೋಸ್​ ಅವರ ಪುಣ್ಯ ತಿಥಿ ಆಗಸ್ಟ್​ 18ರಂದು ಎಂದು 2019ರಲ್ಲಿ, ಪ್ರೆಸ್​ ಇನ್​ಫಾರ್ಮೇಶನ್​ ಬ್ಯೂರೋ ಟ್ವೀಟ್​ ಮಾಡಿತ್ತು. ಇದು ಮತ್ತೆ ಪ್ರತಿಭಟನೆಗಳಿಗೆ ಕಾರಣವಾಗಿ, ಅದನ್ನು ಹಿಂಪಡೆದಿತ್ತು.

ಸುಭಾಷ್​ ಚಂದ್ರ ಬೋಸ್​ ಪುಣ್ಯತಿಥಿ ಎಂಬ ಕಾಂಗ್ರೆಸ್​ ಟ್ವೀಟ್​ಗೆ ಟಿಎಂಸಿ ಆಕ್ಷೇಪ; ಭಾವನೆಗಳೊಂದಿಗೆ ಆಟ ಬೇಡ ಎಂದು ಪ್ರತಿಕ್ರಿಯೆ
ನೇತಾಜಿ ಸುಭಾಷ್​ ಚಂದ್ರ ಬೋಸ್​
TV9 Web
| Updated By: Lakshmi Hegde|

Updated on: Aug 18, 2021 | 6:43 PM

Share

ಇಂದು ಕಾಂಗ್ರೆಸ್​​ ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರ ಪುಣ್ಯತಿಥಿ ಎಂದು ಟ್ವೀಟ್ ಮಾಡಿದ್ದನ್ನು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್​​ ಆಕ್ಷೇಪಿಸಿದೆ. ತೃಣಮೂಲ ಕಾಂಗ್ರೆಸ್​ ರಾಜಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಗಳನ್ನಿಡುತ್ತಲೇ ಮುಂದೆ ಬಂದಿದೆ. ತೃಣಮೂಲ ಕಾಂಗ್ರೆಸ್​ಗೆ ಬಿಜೆಪಿಯೊಂದಿಗೆ ಇದ್ದಷ್ಟು ವೈರತ್ವ ಕಾಂಗ್ರೆಸ್​ನೊಂದಿಗಿಲ್ಲ. ಅದರಲ್ಲೂ 2024ರ ಲೋಕಸಭಾ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್​​ನೊಟ್ಟಿಗೆ ಸೇರಿ ಬಿಜೆಪಿಯನ್ನು ಸೋಲಿಸಲು ಯೋಜನೆ ರೂಪಿಸುತ್ತಿರುವ ತೃಣಮೂಲ ಕಾಂಗ್ರೆಸ್​ ಇದೀಗ ಕಾಂಗ್ರೆಸ್​ನೊಂದಿಗೆ ಸಣ್ಣ ಪ್ರಮಾಣದಲ್ಲಿ ಭಿನ್ನಾಭಿಪ್ರಾಯ ಮೂಡಿಸಿಕೊಂಡಿದೆ.

ಇಂದು ಟ್ವೀಟ್​ ಮಾಡಿದ್ದ ಕಾಂಗ್ರೆಸ್​, ಇಂದು ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರ ಪುಣ್ಯತಿಥಿ ಎಂದು ಹೇಳಿದೆ. ಫೋಟೋ ಹಾಕಿ, ಭಾರತದ ಸ್ವಾತಂತ್ರ್ಯ ಚಳುವಳಿಯ ಹೀರೋ ಎನಿಸಿಕೊಂಡಿರುವ ಸುಭಾಷ್​ ಚಂದ್ರ ಬೋಸ್​​ ಅವರಿಗೆ ಗೌರವ ಸಲ್ಲಿಸುತ್ತೇವೆ. ಅವರೊಬ್ಬ ಧೀರ ಸ್ವಾತಂತ್ರ್ಯ ಹೋರಾಟಗಾರ. ಉತ್ಕಟ ದೇಶಭಕ್ತ ಮತ್ತು ರಾಷ್ಟ್ರದ ಹೆಮ್ಮೆಯ ಪುತ್ರ. ದೇಶಕ್ಕೆ ಸುಭಾಷ್​ ಚಂದ್ರ ಬೋಸ್​ ಅವರ ಕೊಡುಗೆ ಸದಾ ಸ್ಮರಣೀಯ ಎಂದು ಹೇಳಿತ್ತು. ಆದರೆ ಈ ಟ್ವೀಟ್​ಗೆ ತೃಣಮೂಲ ಕಾಂಗ್ರೆಸ್​ ಆಕ್ಷೇಪ ವ್ಯಕ್ತಪಡಿಸಿದೆ. ಕಾಂಗ್ರೆಸ್​ ತನ್ನ ಟ್ವೀಟ್​ನಲ್ಲಿ ಸುಭಾಷ್​ ಚಂದ್ರ ಬೋಸ್​ ಮೃತಪಟ್ಟಿದ್ದು, 1945ರ ಆಗಸ್ಟ್​ 18 ಎಂದು ಉಲ್ಲೇಖಿಸಿದೆ. ಆದರೆ ಅವರು ಮೃತಪಟ್ಟ ದಿನಾಂಕ ಇನ್ನೂ ಸ್ಪಷ್ಟವಾಗಿಲ್ಲ. ನೇತಾಜಿ ಸುಭಾಷ್​ ಚಂದ್ರ ಬೋಸ್​ರ ಕೊನೇ ದಿನಗಳು, ಅವರ ಸಾವಿನ ದಿನಾಂಕಗಳನ್ನು ಪತ್ತೆ ಹಚ್ಚಲು ಕಾಂಗ್ರೆಸ್​ ಮತ್ತು ಬಿಜೆಪಿ ಸರ್ಕಾರಗಳೆರಡೂ ಪ್ರಯತ್ನ ಮಾಡಲಿಲ್ಲ. ಈಗ ಪಶ್ಚಿಮ ಬಂಗಾಳ ಮತ್ತು ಭಾರತೀಯರ ಭಾವನೆಗಳೊಂದಿಗೆ ಆಟ ಆಡುವ ಅಗತ್ಯವಿಲ್ಲ. ಸುಭಾಷ್ ಚಂದ್ರ ಬೋಸ್​ ಅವರ ಸಾವನ್ನು ಸಾಬೀತು ಪಡಿಸಿ..ವರ್ಗೀಕರಿಸಲಾದ ಫೈಲ್​ಗಳನ್ನು ಪ್ರಕಟಿಸಿ ಎಂದು ಟಿಎಂಸಿ ನಾಯಕ ಕುನಾಲ್​ ಘೋಷ್​ ಹೇಳಿದ್ದಾರೆ.

ಸುಭಾಷ್​ ಚಂದ್ರ ಬೋಸ್​ ಅವರ ಕೊನೇ ದಿನಕ್ಕೆ ಸಂಬಂಧಪಟ್ಟಂತೆ ಇನ್ನೂ ಗೊಂದಲಗಳಿವೆ. 1940ರ ಡಿಸೆಂಬರ್​​ಲ್ಲಿ ಸುಭಾಷ್​ ಚಂದ್ರ ಬೋಸ್​ರನ್ನು ಜೈಲಿನಿಂದ ಬಿಡುಗಡೆ ಮಾಡಿದ್ದ ಬ್ರಿಟಿಷರು, 1941ರ ಜನವರಿ 16ರಂದು ಕೋಲ್ಕತ್ತದಲ್ಲೇ ಅವರಿಗೆ ಗೃಹ ಬಂಧನ ವಿಧಿಸಿದ್ದರು. ಆದರೆ ನೇತಾಜಿ ಅಂದು ರಾತ್ರಿ ತಪ್ಪಿಸಿಕೊಂಡವರು ಕೊನೆಗೆ ಹಿಂತಿರುಗಲೇ ಇಲ್ಲ. ನೇತಾಜಿಯವರ ಕಣ್ಮರೆ ಬಗ್ಗೆ ಜನರು ಮೂರು ರೀತಿಯಲ್ಲಿ ಈಗಲೂ ಚರ್ಚಿಸುತ್ತಾರೆ. ಒಂದು 1945ರಲ್ಲಿ ತೈವಾನ್​​ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಬೋಸ್​ ಸತ್ತಿದ್ದಾರೆ ಎಂದು ಹೇಳಲಾಯಿತು. ಇನ್ನೊಂದು, ರಷ್ಯಾದಲ್ಲಿ ಮೃತಪಟ್ಟಿದ್ದಾರೆ ಎಂಬುದು ಹಾಗೂ ಮತ್ತೊಂದು ಅವರು ಆಗ ಸತ್ತಿಲ್ಲ, 1970ರಲ್ಲಿ ಉತ್ತರ ಪ್ರದೇಶದ ಫೈಜಾಬಾದ್​​ನಲ್ಲಿ ಒಬ್ಬರು ಗುಮ್ನಾಮಿ ಬಾಬಾ ಕಾಣಿಸಿಕೊಂಡಿದ್ದರು. ಅದು ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರೇ ಮಾರುವೇಷದಲ್ಲಿ ಬಂದಿದ್ದು ಎಂದೂ ಹೇಳಲಾಗುತ್ತದೆ.

ನೇತಾಜಿ ಸುಭಾಷ್​ ಚಂದ್ರ ಬೋಸ್​ ಸಾವಿನ ತನಿಖೆ ನಡೆಸಲು ಭಾರತ ಸರ್ಕಾರದಿಂದ ಮೂರು ಆಯೋಗಗಳು ರಚಿತವಾದವು. ಮೊದಲು 1956ರಲ್ಲಿ ಶಾಹ್​ ನವಾಜ್​ ಸಮಿತಿ ರಚನೆಯಾಯ್ತು. 1974ರಲ್ಲಿ ಖೋಸ್ಲಾ ಆಯೋಗ ಮತ್ತು 2005ರಲ್ಲಿ ನ್ಯಾಯಮೂರ್ತಿ ಮುಖರ್ಜಿ ಆಯೋಗ ರಚನೆಯಾದವು. ಇದರಲ್ಲಿ ಮೊದಲೆರಡು ಆಯೋಗಗಳು ಸುಭಾಷ್​ ಚಂದ್ರ ಬೋಸ್ ಅವರು 1945ರ ಆಗಸ್ಟ್​ 18ರಂದು ತೈವಾನ್​​ನ ಮಿಲಿಟರಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ ಎಂದೇ ವರದಿ ನೀಡಿದವು. ಆದರೆ ನ್ಯಾಯಮೂರ್ತಿ ಮುಖರ್ಜಿ ಆಯೋಗ, ಸುಭಾಷ್​ ಚಂದ್ರ ಬೋಸ್​ ಅವರು ಅಂದಿನ ವಿಮಾನ ಅಪಘಾತದಲ್ಲಿ ಸತ್ತಿಲ್ಲ. ಜಪಾನ್​ ದೇಗುಲದಲ್ಲಿರುವ ಚಿತಾಭಸ್ಮ ನೇತಾಜಿಯವರದ್ದಲ್ಲ ಎಂದೂ ಪ್ರತಿಪಾದಿಸಿತ್ತು.

ಜಪಾನ್​ ದಾಖಲೆಯಲ್ಲೇನಿತ್ತು? ನೇತಾಜಿ ಸಾವಿಗೆ ಸಂಬಂಧಪಟ್ಟ, 60ವರ್ಷಗಳಷ್ಟು ಹಳೆಯ ಜಪಾನ್​ ಸರ್ಕಾರದ ದಾಖಲೆಗಳು 2016ರಲ್ಲಿ ಬಹಿರಂಗಗೊಂಡಿವೆ. ಅದರಲ್ಲಿ ಅವರು 1945ರ ಆಗಸ್ಟ್​ 18ರಂದು, ತೈವಾನ್​ನಲ್ಲಿ ನಡೆದ ವಿಮಾನ ಅಪಘಾತದಲ್ಲಿಯೇ ಮೃತಪಟ್ಟಿದ್ದಾರೆಂದು ಉಲ್ಲೇಖಿಸಲಾಗಿದೆ. 1945ರ ಆಗಸ್ಟ್​ 18ರಂದು ಸುಭಾಷ್ ಚಂದ್ರ ಬೋಸ್​ ಪ್ರಯಾಣಿಸುತ್ತಿದ್ದ ವಿಮಾನ ಅಪಘಾತ ಆಯ್ತು. ಅದೇ ದಿನ ಸಂಜೆ ಅವರು ತೈಪೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಜಪಾನ್​​ ಸರ್ಕಾರ ಬಿಡುಗಡೆ ಮಾಡಿದ ಏಳು ಪೇಜ್​ಗಳ ವರದಿಯಲ್ಲಿ ಹೇಳಲಾಗಿತ್ತು. ಆದರೆ ಅದರಲ್ಲೂ ಕೂಡ ತೃಪ್ತಿಯಿಲ್ಲ. 1949ರಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್​ ಅವರು ರಷ್ಯಾದ ಸೆರೆಮನೆಯೊಂದರಲ್ಲಿ ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರನ್ನು ನೋಡಿದ್ದಾರೆ ಎಂಬಂತ ವರದಿಗಳೂ ಇದ್ದು, ಅದಕ್ಕೆ ಸಾಕ್ಷಿಯಿದೆ ಎಂದೂ ಹೇಳಲಾಗಿದೆ.

ಅದೆಲ್ಲದರ ಮಧ್ಯೆ, ಸುಭಾಷ್​ ಚಂದ್ರ ಬೋಸ್​ ಅವರ ಪುಣ್ಯ ತಿಥಿ ಆಗಸ್ಟ್​ 18ರಂದು ಎಂದು 2019ರಲ್ಲಿ, ಪ್ರೆಸ್​ ಇನ್​ಫಾರ್ಮೇಶನ್​ ಬ್ಯೂರೋ ಟ್ವೀಟ್​ ಮಾಡಿತ್ತು. ಇದು ಮತ್ತೆ ಪ್ರತಿಭಟನೆಗಳಿಗೆ ಕಾರಣವಾಗಿ, ಅದನ್ನು ಹಿಂಪಡೆದಿತ್ತು. ಸುಭಾಷ್​ ಚಂದ್ರ ಬೋಸ್​ ಕುಟುಂಬ ಅವರು ಸತ್ತಿದ್ದು ಆಗಸ್ಟ್​ 18ರ 1945ರಂದು ಎಂದೇ ನಂಬಿದ್ದರೂ ಅವರ ಅನುಯಾಯಿಗಳು ಒಪ್ಪುತ್ತಿಲ್ಲ. ಹಾಗೇ, ಇದೀಗ ಟಿಎಂಸಿ ಕೂಡ ಕಾಂಗ್ರೆಸ್​ ಟ್ವೀಟ್​ಗೆ ಆಕ್ಷೇಪ ವ್ಯಕ್ತಪಡಿಸಿದೆ. ನೇತಾಜಿ ಸಾವಿನ ಕುರಿತು ಸರಿಯಾದ ತನಿಖೆಯಾಗಬೇಕು ಎಂದೇ ಆಗ್ರಹಿಸುತ್ತಿದೆ.

ಇದನ್ನೂ ಓದಿ: ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ: ಮೂವರ ಬಂಧನ; ಘಟನೆ ಸಮರ್ಥಿಸಿಕೊಂಡ ಭಗವಂತ್ ಖೂಬಾ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ