Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲಕ್ಕೆ ಸಂಚಕಾರ: GST ಹೊಸ ನಿಯಮ ಹಿಂಪಡೆಯಲು ಹಣಕಾಸು ಸಚಿವೆ ನಿರ್ಮಲಾಗೆ ವ್ಯಾಪಾರಿಗಳಿಂದ ಒತ್ತಾಯ

ಸರಕು ಮತ್ತು ಸೇವಾ ತೆರಿಗೆ (GST)ಯ ಹೊಸ ಸೂಚನೆಗಳನ್ನು ಹಿಂಪಡೆಯುವಂತೆ ವ್ಯಾಪಾರಿಗಳು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಹಾಗೂ ಜಿಎಸ್​ಟಿ ಕೌನ್ಸಿಲ್​ನ್ನು ಕೇಳಿಕೊಂಡಿದ್ದಾರೆ.

ಸಾಲಕ್ಕೆ ಸಂಚಕಾರ: GST ಹೊಸ ನಿಯಮ ಹಿಂಪಡೆಯಲು ಹಣಕಾಸು ಸಚಿವೆ ನಿರ್ಮಲಾಗೆ ವ್ಯಾಪಾರಿಗಳಿಂದ ಒತ್ತಾಯ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ 2021 ಮಂಡನೆ
Follow us
TV9 Web
| Updated By: ganapathi bhat

Updated on:Apr 06, 2022 | 11:13 PM

ದೆಹಲಿ: ಸರಕು ಮತ್ತು ಸೇವಾ ತೆರಿಗೆ (GST)ಯ ಹೊಸ ನಿಯಮಗಳನ್ನು ಹಿಂಪಡೆಯುವಂತೆ ವ್ಯಾಪಾರಿಗಳು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಹಾಗೂ ಜಿಎಸ್​ಟಿ ಕೌನ್ಸಿಲ್​ ಮನವಿ ಮಾಡಿಕೊಂಡಿದ್ದಾರೆ. ಹೊಸ ಜಿಎಸ್​ಟಿ ನಿಯಮಗಳನ್ನು ಕೆಲ ದಿನಗಳ ಹಿಂದಷ್ಟೇ ಹೊರಡಿಸಲಾಗಿತ್ತು. ಇದೀಗ ಅವುಗಳನ್ನು ಹಿಂಪಡೆದು, ಬದಲಾವಣೆ ತರುವಂತೆ ವ್ಯಾಪಾರಿಗಳು ಒತ್ತಾಯಿಸಿದ್ದಾರೆ.

ಸ್ಕ್ರಾಪ್ ರೂಲ್ಸ್ 86B ಮತ್ತು 36(4), ಜನವರಿ 1, 2021ರಿಂದ ಜಾರಿಯಾಗಲಿದೆ. ಆದರೆ ಈ ಹೊಸ ನಿಯಮಗಳು ಜಿಎಸ್​ಟಿಯ ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್ (ITC)ಗೆ ತೊಡಕನ್ನು ಉಂಟುಮಾಡಲಿವೆ. ಆ ಮೂಲಕ, ಜಿಎಸ್​ಟಿಯ ಮೂಲಭೂತ ವಿಚಾರಕ್ಕೆ ವಿರುದ್ಧವಾಗಲಿದೆ ಎಂದು ವ್ಯಾಪಾರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿ.ಕೆ. ಬನ್ಸಾಲ್ ತಿಳಿಸಿದ್ದಾರೆ.

ಸೆಂಟ್ರಲ್ ಬೋರ್ಡ್ ಆಫ್ ಇಂಡೈರೆಕ್ಟ್ ಟ್ಯಾಕ್ಸಸ್ ಹಾಗೂ ಕಸ್ಟಮ್ಸ್ (CBIC) ನಿಯಮ 86B ಯನ್ನು ಜಿಎಸ್​ಟಿಯೊಂದಿಗೆ ಪರಿಚಯಿಸಿದೆ. ಈ ಮೂಲಕ, ತಿಂಗಳಿಗೆ ರೂ. 50 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ಇರುವ ವಾಣಿಜ್ಯ ವ್ಯವಹಾರಗಳು, ಖಡ್ಡಾಯವಾಗಿ ಕನಿಷ್ಠ ಶೇ. 1ರಷ್ಟು ಜಿಎಸ್​ಟಿಯನ್ನು ನಗದು ರೂಪದಲ್ಲಿ ನೀಡಬೇಕಾಗುತ್ತದೆ.

ನೂತನ ನಿಯಮ 36(4) ಅನುಸಾರ ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್​ನ್ನು (Input Tax Credit -ITC) ಬಳಕೆ ಮಾಡುವುದಕ್ಕೆ ನಿರ್ಬಂಧ ಹೇರುತ್ತದೆ. ವಹಿವಾಟುದಾರರು ಇನ್​ವಾಯ್ಸ್​/ ಸಾಲದ ಕರಾರು ಸಲ್ಲಿಸದಿದ್ದಲ್ಲಿ ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್​ ಸೌಲಭ್ಯ ಪಡೆಯುವ ವಿಚಾರದಲ್ಲಿ ನಿಯಂತ್ರಣ ವಿಧಿಸಿದೆ. GSTR 2B ಬಾಬತ್ತಿನಲ್ಲಿ ಪಡೆಯುವ ಸಾಲದ ಮೊತ್ತವನ್ನು ಶೇ. 10 ರಿಂದ ಶೇ. 5ಕ್ಕೆ ಕುಗ್ಗಿಸಿದೆ. ಇದರಿಂದ ವಹಿವಾಟುದಾರರಿಗೆ ಆ  ಎಕ್ಸ್​ಟ್ರಾ ಶೆ. 5ರಷ್ಟು ಮೊತ್ತದ ಖೋತಾ ಆಗಲಿದ್ದು, ಅದಕ್ಕೆ ವಹಿವಾಟುದಾರರು ಅಸಮಾಧಾನಗೊಂಡಿದ್ದಾರೆ.  ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್​ನ್ನು ಯಥಾಸ್ಥಿತಿಗೆ ತರುವಂತೆ ಮನವಿ ಮಾಡಿದ್ದಾರೆ.

Published On - 1:06 pm, Mon, 28 December 20

ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
ಹತ್ಯೆಯಾದ ಮಹಿಳೆಯ ಮೂರನೇ ಗಂಡ ಪತ್ನಿ ಮತ್ತು ಇತರರನ್ನು ಕೊಂದನೇ?
ಹತ್ಯೆಯಾದ ಮಹಿಳೆಯ ಮೂರನೇ ಗಂಡ ಪತ್ನಿ ಮತ್ತು ಇತರರನ್ನು ಕೊಂದನೇ?