ಯಾವುದೇ ಭರವಸೆ ಉಳಿದಿಲ್ಲ, ಪತ್ನಿ ಓಡಿ ಹೋಗಿದ್ದಕ್ಕೆ ನಾಲ್ವರು ಮಕ್ಕಳೊಂದಿಗೆ ನದಿಗೆ ಹಾರಿದ ವ್ಯಕ್ತಿ

ಪತ್ನಿ ಬೇರೊಬ್ಬ ವ್ಯಕ್ತಿ ಜತೆ ಓಡಿ ಹೋಗಿದ್ದಕ್ಕೆ ಪತಿ ತನ್ನ ಮಕ್ಕಳ ಜತೆ ನೀರಿಗೆ ಹಾರಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಶನಿವಾರ, ಗುಲಿಸ್ತಾ ಪೊಲೀಸರನ್ನು ಸಂಪರ್ಕಿಸಿದ್ದಾರೆ, ಅವರು ತಕ್ಷಣ ಸ್ಥಳಕ್ಕೆ ತಲುಪಿ ಡೈವರ್‌ಗಳ ಸಹಾಯದಿಂದ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಸಿಂಗ್ ಮಾತನಾಡಿ, ಮಕ್ಕಳನ್ನು ಮೆಹೆಕ್ (12), ಶಿಫಾ (5), ಅಮನ್ (3) ಮತ್ತು ಎಂಟು ತಿಂಗಳ ಶಿಶು ಇನೈಶಾ ಎಂದು ಗುರುತಿಸಲಾಗಿದೆ.

ಯಾವುದೇ ಭರವಸೆ ಉಳಿದಿಲ್ಲ, ಪತ್ನಿ ಓಡಿ ಹೋಗಿದ್ದಕ್ಕೆ ನಾಲ್ವರು ಮಕ್ಕಳೊಂದಿಗೆ ನದಿಗೆ ಹಾರಿದ ವ್ಯಕ್ತಿ
ನದಿಗೆ ಹಾರಿದ್ದ ವ್ಯಕ್ತಿ

Updated on: Oct 05, 2025 | 1:29 PM

ಲಕ್ನೋ, ಅಕ್ಟೋಬರ್ 05: ಜೀವನ(Life)ದಲ್ಲಿ ಯಾವುದೇ ಭರವಸೆ ಉಳಿದಿಲ್ಲ ಎಂದು ವಿಡಿಯೋ ಮಾಡಿಟ್ಟು, ವ್ಯಕ್ತಿಯೊಬ್ಬ ನಾಲ್ವರು ಮಕ್ಕಳೊಂದಿಗೆ ನದಿಗೆ ಹಾರಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪತ್ನಿ ಬೇರೊಬ್ಬ ವ್ಯಕ್ತಿಯೊಂದಿಗೆ ಓಡಿ ಹೋಗಿದ್ದಳು, ಇದರಿಂದ ಮನೆಯಲ್ಲಿ ಅಶಾಂತಿ ನೆಲೆಸಿತ್ತು, ಸಲ್ಮಾನ್ ಶುಕ್ರವಾರ ತನ್ನ ಪತ್ನಿಯೊಂದಿಗಿನ ಜಗಳವಾಡಿದ್ದ, ಬಳಿಕ ಈ ತಪ್ಪು ನಿರ್ಧಾರ ತೆಗೆದುಕೊಂಡಿದ್ದಾರೆ.
ಆತ್ಮಹತ್ಯೆಗೂ ಮೊದಲು ವೀಡಿಯೊ ರೆಕಾರ್ಡ್ ಮಾಡಿ ತನ್ನ ಸಹೋದರಿ ಗುಲಿಸ್ತಾಗೆ ಕಳುಹಿಸಿದ್ದಾನೆ.

ಅದರಲ್ಲಿ ತನ್ನ ಪತ್ನಿ ಖುಷ್ನುಮಾ ಮತ್ತು ಆಕೆಯ ಪ್ರಿಯಕರನೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.
ಶನಿವಾರ, ಗುಲಿಸ್ತಾ ಪೊಲೀಸರನ್ನು ಸಂಪರ್ಕಿಸಿದ್ದಾರೆ, ಅವರು ತಕ್ಷಣ ಸ್ಥಳಕ್ಕೆ ತಲುಪಿ ಡೈವರ್‌ಗಳ ಸಹಾಯದಿಂದ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಸಿಂಗ್ ಮಾತನಾಡಿ, ಮಕ್ಕಳನ್ನು ಮೆಹೆಕ್ (12), ಶಿಫಾ (5), ಅಮನ್ (3) ಮತ್ತು ಎಂಟು ತಿಂಗಳ ಶಿಶು ಇನೈಶಾ ಎಂದು ಗುರುತಿಸಲಾಗಿದೆ.

ಮತ್ತಷ್ಟು ಓದಿ: ಆಸ್ತಿ ವಿವಾದ, ತಂದೆಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ಆತ್ಮಹತ್ಯೆ ಬೆದರಿಕೆ ಹಾಕಿದ ಮಗ

ಸಲ್ಮಾನ್ ಮತ್ತು ಖುಷ್ನುಮಾ ಮದುವೆಯಾಗಿ 15 ವರ್ಷಗಳಾಗಿವೆ ಎಂದು ಕುಟುಂಬ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ, ಆದರೆ ಇತ್ತೀಚಿನ ತಿಂಗಳುಗಳಲ್ಲಿ ಜಗಳಗಳು ಹೆಚ್ಚಾಗಿದ್ದವು.ಈ ಶುಕ್ರವಾರ ಮತ್ತೆ ಜಗಳ ನಡೆದಿತ್ತು, ಬಳಿಕ ಆಕೆ ತನ್ನ ಗೆಳೆಯನ ಜತೆ ಓಡಿ ಹೋಗಿದ್ದಳು.

ಆ ದಿನ ನಂತರ, ಸಲ್ಮಾನ್ ತನ್ನ ನಾಲ್ವರು ಮಕ್ಕಳನ್ನು ಯಮುನಾ ಸೇತುವೆಗೆ ಕರೆದುಕೊಂಡು ಹೋಗಿ ನದಿಗೆ ಹಾರಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ, ಅವರಿಗಾಗಿ ನದಿಯಲ್ಲಿ ಶೋಧ ನಡೆಯುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us