ತ್ರಿಪುರಾ: ಹಿಜಾಬ್ ಧರಿಸಿ ಶಾಲೆಗೆ ಪ್ರವೇಶಿಸದಂತೆ ತಡೆದ ಹಿಂದೂ ಯುವಕರು, ಇದನ್ನು ಪ್ರಶ್ನಿಸಿದ ಹುಡುಗನಿಗೆ ಥಳಿತ

ಹಿಂದೂ ಯುವಕರು ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಶಾಲೆ ಒಳಗೆ ಪ್ರವೇಶಿಸದಂತೆ ತಡೆದಿದ್ದಾರೆ, ಇದನ್ನು ಪ್ರಶ್ನಿಸಿದ ಅನ್ಯಕೋಮಿನ ಹುಡುಗನನ್ನು ಥಳಿಸಿದ್ದಾರೆ.

ತ್ರಿಪುರಾ: ಹಿಜಾಬ್ ಧರಿಸಿ ಶಾಲೆಗೆ ಪ್ರವೇಶಿಸದಂತೆ ತಡೆದ ಹಿಂದೂ ಯುವಕರು, ಇದನ್ನು ಪ್ರಶ್ನಿಸಿದ ಹುಡುಗನಿಗೆ ಥಳಿತ
ಸಾಂದರ್ಭಿಕ ಚಿತ್ರ Image Credit source: pexels
Follow us
|

Updated on: Aug 05, 2023 | 11:13 AM

ಗುವಾಹಟಿ, ಆ.5: ಹಿಂದೂ ಯುವಕರು ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಶಾಲೆ ಒಳಗೆ ಪ್ರವೇಶಿಸದಂತೆ ತಡೆದಿದ್ದಾರೆ, ಇದನ್ನು ಪ್ರಶ್ನಿಸಿದ ಅನ್ಯಕೋಮಿನ ಹುಡುಗನನ್ನು ಥಳಿಸಿರುವ ಘಟನೆ ಶುಕ್ರವಾರ (ಆ.4) ತ್ರಿಪುರಾದಲ್ಲಿ ನಡೆದಿದೆ. 10ನೇ ತರಗತಿಯ ವಿದ್ಯಾರ್ಥಿಯನ್ನು ಶಾಲೆಯ ಮುಂದೆ ಎಳೆದೊಯ್ದು ಥಳಿಸಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ಘಟನೆ ಮುಖ್ಯೋಪಾಧ್ಯಾಯರು ಮತ್ತು ಇತರ ಶಿಕ್ಷಕರ ಮುಂದೆಯೇ ನಡೆದಿದ್ದರು ಯಾರು ಕೂಡ ಆ ಹುಡುಗನನ್ನು ಕಾಪಾಡಲು ಬರಲಿಲ್ಲ, ಈ ಘಟನೆಯನ್ನು ವಿರೋಧಿಸಿ ಸ್ಥಳೀಯರು ಶಾಲೆಯ ಮುಂದೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಇನ್ನು ಈ ಹಿಂದೂ ಯುವಕರು ಹೊರಗಿನವರು, ಅವರಿಗೂ ಶಾಲೆಗೂ ಯಾವುದೇ ಸಂಬಂಧವಿಲ್ಲ ಎಂದು ವರದಿ ತಿಳಿಸಿದೆ. ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಸದ್ಯ ಪರಿಸ್ಥಿತಿ ನಿಯಂತ್ರದಲ್ಲಿದ್ದು, ಘಟನೆಯ ನಂತರ ಸೆಪಹಿಜಾಲಾ ಜಿಲ್ಲೆಯ ಬಿಶಾಲ್‌ಘರ್​​ದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿತ್ತು ಎಂದು ಪೊಲೀಸ್​​ ಅಧಿಕಾರಿಗಳು ತಿಳಿಸಿದ್ದಾರೆ.

ಶಾಲೆಯ ಸಿಬ್ಬಂದಿಗಳ ಪ್ರಕಾರ, ದಾಳಿ ಮಾಡಿದ ಹಿಂದೂ ಯುವಕರು ಶಾಲೆಯ ಹಿರಿಯ ವಿದ್ಯಾರ್ಥಿಗಳಾಗಿದ್ದು, ಈ ಹಿಂದೆ ಶಾಲೆಯಲ್ಲಿ ಹಿಜಾಬ್​​​ ಧರಿಸಲು ಅವಕಾಶ ನೀಡಬಾರದು ಎಂದು ಮುಖ್ಯೋಪಾಧ್ಯಾಯರನ್ನು ಮನವಿ ಮಾಡಿಕೊಂಡಿದ್ದರು. ಬಳಿಕ ಮುಖ್ಯೋಪಾಧ್ಯಾಯರು ಈ ಬಗ್ಗೆ ಒಂದು ಆದೇಶವನ್ನು ನೀಡಿ ಹಿಜಾಬ್​​ ಧರಿಸಬಾರದು ಎಂದು ಹೇಳಿದ್ದಾರೆ. ಅದರೂ ಕೆಲವು ವಿದ್ಯಾರ್ಥಿನಿಯರು ಸಮಸ್ತ್ರದ ಮೇಲೆ ಹಿಜಾಬ್​​ ಧರಿಸಿಕೊಂಡು ಬಂದಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಿಜಾಬ್​ಗೆ ಅವಕಾಶ ನಿರಾಕರಣೆ; ಪರೀಕ್ಷೆ ಬರೆಯಲಿಲ್ಲ ಉಡುಪಿಯ ಇಬ್ಬರು ವಿದ್ಯಾರ್ಥಿನಿಯರು

ಇಂತಹ ನಿಯಮದ ಬಗ್ಗೆ ಸಂಬಂಧಪಟ್ಟ ಸರಕಾರಿ ಇಲಾಖೆಯಿಂದ ಸ್ಪಷ್ಟ ಸೂಚನೆ ಇಲ್ಲದ ಕಾರಣ ಶಾಲೆಯಲ್ಲಿ ಹಿಜಾಬ್ ಧರಿಸದಂತೆ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳಿಗೆ ಮೌಖಿಕವಾಗಿ ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿರುವುದರಿಂದ ಇದು ಕೋಮುವಾದ ವಿಷಯವಲ್ಲ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.

ಈ ಪ್ರದೇಶದಲ್ಲಿ ಹಿಂದೂ -ಮುಸ್ಲಿಂ ಸಮುದಾಯದ ಜನ ಇರುವುದರಿಂದ ಇಲ್ಲಿ ಹೆಚ್ಚಿನ ಪೊಲೀಸ್​​ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಶಾಲೆಗೆ ರಜೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ