AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋಹನ್​ ಭಾಗವತ್​ ಸೇರಿ ಆರ್​ಎಸ್​ಎಸ್​ನ ಪ್ರಮುಖ ನಾಯಕರ ಟ್ವಿಟರ್ ಖಾತೆಯ ಬ್ಲ್ಯೂಟಿಕ್ ಕೂಡ ಮಾಯ..!

ಯಾವುದೇ ಅಕೌಂಟ್​​ಗೆ ಬ್ಲ್ಯೂಟಿಕ್​ ಕೊಡುವಾಗ ಒಂದು ಹೆಸರಿದ್ದು, ಬಳಿಕ ಆ ಬಳಕೆದಾರರು ಹೆಸರನ್ನು ಬದಲಿಸಿಕೊಂಡರೆ ತಕ್ಷಣವೇ ಅವರಿಗೆ ನೀಡಲಾಗಿದ್ದ ದೃಢೀಕರಣ ಬ್ಯಾಡ್ಜ್​​ನ್ನು ತೆಗೆದುಹಾಕಲಾಗುವುದು ಎಂದು ಟ್ವಿಟರ್​ ತನ್ನ ವೆರಿಫಿಕೇಶನ್​ ನಿಯಮದಲ್ಲೇ ಉಲ್ಲೇಖಿಸಿದೆ.

ಮೋಹನ್​ ಭಾಗವತ್​ ಸೇರಿ ಆರ್​ಎಸ್​ಎಸ್​ನ ಪ್ರಮುಖ ನಾಯಕರ ಟ್ವಿಟರ್ ಖಾತೆಯ ಬ್ಲ್ಯೂಟಿಕ್ ಕೂಡ ಮಾಯ..!
ಟ್ವಿಟರ್ ಖಾತೆಯಿಂದ ಬ್ಲ್ಯೂಟಿಕ್​ ತೆಗೆದುಹಾಕಿರುವುದು
TV9 Web
| Edited By: |

Updated on:Jun 05, 2021 | 12:21 PM

Share

ದೆಹಲಿ: ಇಂದು ಬೆಳಗ್ಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರವರ ವೈಯಕ್ತಿಕ ಖಾತೆಯ ಬ್ಲ್ಯೂಟಿಕ್​​ನ್ನು ತೆಗೆದುಹಾಕುವ ಮೂಲಕ ಟ್ವಿಟರ್​ ವಿವಾದ ಸೃಷ್ಟಿಸಿತ್ತು. ಹಲವು ಗಣ್ಯರು ಟ್ವಿಟರ್​ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು. ಆಕ್ಷೇಪಣೆಗಳು ಸಲ್ಲಿಕೆಯಾದ ಬೆನ್ನಲ್ಲೇ ಮತ್ತೆ ಆ ದೃಢೀಕರಣ ಬ್ಯಾಡ್ಜ್​​ನ್ನು ನೀಡಿತ್ತು. ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆ ಹಲವು ತಿಂಗಳುಗಳಿಂದಲೂ ನಿಷ್ಕ್ರಿಯವಾಗಿದ್ದ ಕಾರಣ ತೆಗೆದಿದ್ದಾಗಿ ಹೇಳಿತ್ತು. ಆದರೆ ಟ್ವಿಟರ್​ ಕೇವಲ ವೆಂಕಯ್ಯ ನಾಯ್ಡು ಖಾತೆಯದ್ದಷ್ಟೇ ಅಲ್ಲದೆ, ಹಲವು ಆರ್​ಎಸ್​ಎಸ್​ ನಾಯಕ ವೈಯಕ್ತಿಕ ಖಾತೆಯ ನೀಲಿ ಟಿಕ್​ನ್ನು ತೆಗೆದಿದ್ದು ಬೆಳಕಿಗೆ ಬಂದಿದೆ.

ಆರ್​​ಎಸ್​​ಎಸ್​ನ ಪ್ರಮುಖ ನಾಯಕರಾದ ಮೋಹನ್​ ಭಾಗವತ್,​​ ಸುರೇಶ್​ ಜೋಶಿ, ಅರುಣ್​ ಕುಮಾರ್​, ಕೃಷ್ಣನ್​ ಗೋಪಾಲ್​ ಮತ್ತಿತರರ ವೈಯಕ್ತಿಕ ಟ್ವಿಟರ್ ಖಾತೆಗೆ ಇದ್ದ ಬ್ಲ್ಯೂಟಿಕ್​​​ಗಳು ಇಂದು ಬೆಳಗ್ಗೆ ಮಾಯವಾಗಿವೆ. ಈ ಬಗ್ಗೆ ನಾವು ಟ್ವಿಟರ್​ಗೆ ತಿಳಿಸಿದರೂ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ರಾಜೀವ್​ ತುಳಿ ಎಂಬುವರು ಟ್ವೀಟ್ ಮಾಡಿದ್ದಾರೆ. ಟ್ವಿಟರ್​​ನಲ್ಲಿ ಬ್ಲ್ಯೂಟಿಕ್​ ಯಾವುದೇ ಗಣ್ಯರು ಈ ಬ್ಲ್ಯೂಟಿಕ್​ ಪಡೆಯಬೇಕು ಎಂದರೆ ಅವರು ಅದರಲ್ಲಿ ಸಕ್ರಿಯರಾಗಿರಬೇಕು. ಅವರದ್ದೇ ಅಧಿಕೃತ ಖಾತೆ ಎಂದು ದೃಢೀಕರಿಸಬೇಕು. ಆದರೆ ಇತ್ತೀಚೆಗೆ ಟ್ವಿಟರ್​ ಪರಿಶೀಲನೆ ನಡೆಸಿದಾಗ ಕೆಲವು ಖಾತೆಗಳು ತುಂಬದಿನಗಳಿಂದ ಬಳಕೆಯಾಗಿಲ್ಲ ಎಂಬುದು ಗೊತ್ತಾಗಿದೆ. ಹಾಗಾಗಿ ಅಂಥ ಟ್ವಿಟರ್ ಖಾತೆಗಳ ದೃಢೀಕರಣ ಬ್ಯಾಡ್ಜ್​ಗಳನ್ನು ತೆಗೆದುಹಾಕಿದೆ.

ಇನ್ನು ಯಾವುದೇ ಅಕೌಂಟ್​​ಗೆ ಬ್ಲ್ಯೂಟಿಕ್​ ಕೊಡುವಾಗ ಒಂದು ಹೆಸರಿದ್ದು, ಬಳಿಕ ಆ ಬಳಕೆದಾರರು ಹೆಸರನ್ನು ಬದಲಿಸಿಕೊಂಡರೆ ತಕ್ಷಣವೇ ಅವರಿಗೆ ನೀಡಲಾಗಿದ್ದ ದೃಢೀಕರಣ ಬ್ಯಾಡ್ಜ್​​ನ್ನು ತೆಗೆದುಹಾಕಲಾಗುವುದು ಎಂದು ಟ್ವಿಟರ್​ ತನ್ನ ವೆರಿಫಿಕೇಶನ್​ ನಿಯಮದಲ್ಲೇ ಉಲ್ಲೇಖಿಸಿದೆ. ಇಂದು ವೆಂಕಯ್ಯ ನಾಯ್ಡು ವೈಯಕ್ತಿಕ ಖಾತೆಯ ಬ್ಲ್ಯೂಟಿಕ್​ ತೆಗೆದುಹಾಕಿದ್ದ ಟ್ವಿಟರ್​, ಆಕ್ಷೇಪಣೆಗಳು ವ್ಯಕ್ತವಾದ ಬೆನ್ನಲ್ಲೇ ಅದನ್ನು ಮತ್ತೆ ನೀಡಿದೆ.

Mohan Bhagwat

ಮೋಹನ್​ ಭಾಗವತ್​ ಅವರ ಟ್ವಿಟರ್​ ಖಾತೆಗಿಲ್ಲ ಬ್ಲ್ಯೂಟಿಕ್​

ಇದನ್ನೂ ಓದಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವೈಯಕ್ತಿಕ ಖಾತೆಗೆ ನೀಡಿದ್ದ ಬ್ಲ್ಯೂಟಿಕ್​ ತೆಗೆದುಹಾಕಿದ್ದ ಟ್ವಿಟರ್​; ಕಾರಣವೇನು?

ಕಲಬುರಗಿ ಪೊಲೀಸ್ ಠಾಣೆಯಿಂದ ನೂತನ ಪ್ರಯೋಗ; ವಾಟ್ಸಾಪ್ ಮತ್ತು ಫೇಸ್​ಬುಕ್ ಮೂಲಕ ದೂರು ದಾಖಲಿಸಲು ಅವಕಾಶ

Published On - 12:16 pm, Sat, 5 June 21

Follow Us
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್