AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಹತ್ಯೆಗೀಡಾದ ಇಬ್ಬರು ಉದ್ಯಮಿಗಳಿಗೂ ಇತ್ತು ಭಯೋತ್ಪಾದಕರೊಂದಿಗೆ ನಂಟು; ತನಿಖೆಗೆ ಆಗ್ರಹಿಸಿದ ಮುಫ್ತಿ

ಹತ್ಯೆಗೀಡಾದ ಉದ್ಯಮಿಗಳನ್ನು ಡಾ.ಮುಡ್ಸಿರ್​​ ಗುಲ್​ ಮತ್ತು ಅಲ್ತಾಫ್​ ಭಟ್​​ ಎಂದು ಗುರುತಿಸಲಾಗಿದೆ. ಹೈದರ್​ಪೋರಾದ ಕಮರ್ಷಿಯಲ್ ಕಾಂಪ್ಲೆಕ್ಸ್​​ ಇವರಿಬ್ಬರ ಉದ್ಯಮ ಕ್ಷೇತ್ರವಾಗಿತ್ತು.

ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಹತ್ಯೆಗೀಡಾದ ಇಬ್ಬರು ಉದ್ಯಮಿಗಳಿಗೂ ಇತ್ತು ಭಯೋತ್ಪಾದಕರೊಂದಿಗೆ ನಂಟು; ತನಿಖೆಗೆ ಆಗ್ರಹಿಸಿದ ಮುಫ್ತಿ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Nov 16, 2021 | 5:56 PM

Share

ಶ್ರೀನಗರ: ಇಲ್ಲಿ ನಿನ್ನೆ ಸಂಜೆ ನಡೆದ ಆ್ಯಂಟಿ ಟೆರರಿಸ್ಟ್​ (ಭಯೋತ್ಪಾದಕ ವಿರೋಧಿ) ಕಾರ್ಯಾಚರಣೆಯಲ್ಲಿ ಇಬ್ಬರು ಉದ್ಯಮಿಗಳು ಸೇರಿ ಒಟ್ಟು ನಾಲ್ಕು ಮಂದಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ.  ಅಂದರೆ ಈ ಸತ್ತವರಲ್ಲಿ ಇಬ್ಬರು ಉಗ್ರರಾಗಿದ್ದು, ಉಳಿದಿಬ್ಬರು ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಉದ್ಯಮಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  

ಹತ್ಯೆಗೀಡಾದ ಉದ್ಯಮಿಗಳನ್ನು ಡಾ.ಮುಡ್ಸಿರ್​​ ಗುಲ್​ ಮತ್ತು ಅಲ್ತಾಫ್​ ಭಟ್​​ ಎಂದು ಗುರುತಿಸಲಾಗಿದೆ. ಹೈದರ್​ಪೋರಾದ ಕಮರ್ಷಿಯಲ್ ಕಾಂಪ್ಲೆಕ್ಸ್​​ ಇವರಿಬ್ಬರ ಉದ್ಯಮ ಕ್ಷೇತ್ರವಾಗಿತ್ತು. ಮುಡ್ಸಿರ್​ ಮೂಲತಃ ಡೆಂಟಲ್​ ಸರ್ಜರಿಯಲ್ಲಿ ತರಬೇತಿ ಪಡೆದಿದ್ದ. ಆದರೆ ಕಂಪ್ಯೂಟರ್​ ಸೆಂಟರ್​ ನಡೆಸುತ್ತಿದ್ದ. ಅಲ್ತಾಫ್​ ಭಟ್​​ ಕಮರ್ಷಿಯಲ್​ ಕಾಂಪ್ಲೆಕ್ಸ್​​ನ ಮಾಲೀಕನಾಗಿದ್ದು, ಹಾರ್ಡವೇರ್​ ಮತ್ತು ಸಿಮೆಂಟ್​ ಅಂಗಡಿ ಇಟ್ಟುಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಮಧ್ಯೆ ಇವರಿಬ್ಬರ ಹತ್ಯೆಯ ಬಗ್ಗೆ ತನಿಖೆ ನಡೆಯಬೇಕು ಎಂದು ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆಗ್ರಹಿಸಿದ್ದಾರೆ. ಟ್ವೀಟ್​ ಮಾಡಿರುವ ಅವರು, ಇಲ್ಲಿನ ನಾಗರಿಕರನ್ನು ಮಾನವಗುರಾಣಿಗಳಂತೆ ಬಳಸಿ ನಂತರ ಅವರಿಗೆ ಗುಂಡು ಹೊಡೆದು ಕೊಲ್ಲಲಾಗುತ್ತಿದೆ. ಅದಾದ ಬಳಿಕ ಹತ್ಯೆ ಆದವರು ಉಗ್ರರಿಗಾಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ.  ಆದರೆ ಅದನ್ನು ಸುಮ್ಮನೆ ನಂಬಬಾರದು. ಈ ಇಬ್ಬರು ಉದ್ಯಮಿಗಳ ಹತ್ಯೆಯ ಬಗ್ಗೆ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.  ಮೃತ ಉದ್ಯಮಿಗಳ ಕುಟುಂಬದವರೂ ಕೂಡ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: ಪುನೀತ್​ ರಾಜ್​ಕುಮಾರ್​ಗೆ ಕರ್ನಾಟಕ ರತ್ನ ಘೋಷಣೆ: ಈ ಮೊದಲು ಕರ್ನಾಟಕ ರತ್ನ ಪ್ರಶಸ್ತಿ ಪಡೆದವರು ಇವರು

Follow Us
ಗರ್ಭಗುಡಿಗೆ ನುಗ್ಗಿ ದೇವರ ವಿಗ್ರಹದ ಮೇಲಿರುವ ಚಿನ್ನಾಭರಣವನ್ನೇ ಕದ್ದ ಕಳ್ಳ!
ಗರ್ಭಗುಡಿಗೆ ನುಗ್ಗಿ ದೇವರ ವಿಗ್ರಹದ ಮೇಲಿರುವ ಚಿನ್ನಾಭರಣವನ್ನೇ ಕದ್ದ ಕಳ್ಳ!
ಮಳೆ ಅಬ್ಬರಕ್ಕೆ ಶಿವಮೊಗ್ಗದಲ್ಲಿ ಮನೆಗೆ ನುಗ್ಗಿದ ನೀರು: ಭಾರಿ ಅವಾಂತರ
ಮಳೆ ಅಬ್ಬರಕ್ಕೆ ಶಿವಮೊಗ್ಗದಲ್ಲಿ ಮನೆಗೆ ನುಗ್ಗಿದ ನೀರು: ಭಾರಿ ಅವಾಂತರ
VIDEO: ಬ್ಯಾಟ್ಸ್​ಮನ್​ನಿಂದ ಗಾಯಗೊಂಡ ಶ್ರೇಯಸ್ ಅಯ್ಯರ್
VIDEO: ಬ್ಯಾಟ್ಸ್​ಮನ್​ನಿಂದ ಗಾಯಗೊಂಡ ಶ್ರೇಯಸ್ ಅಯ್ಯರ್
ಶಿವಕುಮಾರ ಸ್ವಾಮೀಜಿ ಜನ್ಮದಿನೋತ್ಸವ: ಬೆಳ್ಳಂ ಬೆಳಿಗ್ಗೆ ಮಠಕ್ಕೆ ಭಕ್ತರ ದಂಡು
ಶಿವಕುಮಾರ ಸ್ವಾಮೀಜಿ ಜನ್ಮದಿನೋತ್ಸವ: ಬೆಳ್ಳಂ ಬೆಳಿಗ್ಗೆ ಮಠಕ್ಕೆ ಭಕ್ತರ ದಂಡು
ಎಡ ತಿರುವಿನಲ್ಲಿ ಬೈಕ್​ಗೆ ಡಿಕ್ಕಿ ಹೊಡೆದ ಟ್ರಕ್, ಹೊತ್ತಿಕೊಂಡ ಬೆಂಕಿ
ಎಡ ತಿರುವಿನಲ್ಲಿ ಬೈಕ್​ಗೆ ಡಿಕ್ಕಿ ಹೊಡೆದ ಟ್ರಕ್, ಹೊತ್ತಿಕೊಂಡ ಬೆಂಕಿ
ನೀವು ಸತ್ತಂತೆ ಕನಸು ಕಂಡಿದ್ದೀರಾ? ಇದರ ಹಿಂದಿನ ರಹಸ್ಯವೇನು ಗೊತ್ತಾ?
ನೀವು ಸತ್ತಂತೆ ಕನಸು ಕಂಡಿದ್ದೀರಾ? ಇದರ ಹಿಂದಿನ ರಹಸ್ಯವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಆರ್ಥಿಕವಾಗಿ ಉತ್ತಮ ದಿನ
ಇಂದು ಈ ರಾಶಿಯವರಿಗೆ ಆರ್ಥಿಕವಾಗಿ ಉತ್ತಮ ದಿನ
ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ ದಂಪತಿಯ ಮಗಳು ರಾಧ್ಯಾ ಬರ್ತ್​ಡೇ ವಿಡಿಯೋ
ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ ದಂಪತಿಯ ಮಗಳು ರಾಧ್ಯಾ ಬರ್ತ್​ಡೇ ವಿಡಿಯೋ
ನಾನು ಹುಟ್ಟಿದ್ದು ದೇಶಕ್ಕೆ ಸ್ವಾತಂತ್ರ್ಯ ಬಂದ ಮೂರು ತಿಂಗಳ ನಂತರ
ನಾನು ಹುಟ್ಟಿದ್ದು ದೇಶಕ್ಕೆ ಸ್ವಾತಂತ್ರ್ಯ ಬಂದ ಮೂರು ತಿಂಗಳ ನಂತರ
ಗ್ಯಾಸ್ ಟ್ರಬಲ್: ಅರಣ್ಯದಲ್ಲಿ ಸೌದೆಗಾಗಿ ಮುಗಿಬಿದ್ದ ಜನ
ಗ್ಯಾಸ್ ಟ್ರಬಲ್: ಅರಣ್ಯದಲ್ಲಿ ಸೌದೆಗಾಗಿ ಮುಗಿಬಿದ್ದ ಜನ