ನಿಸರ್ಗ ಚಂಡಮಾರುತದ ಅಬ್ಬರಕ್ಕೆ ಇಬ್ಬರು ಬಲಿ

ದೆಹಲಿ: ಕೊರೊನಾ ಕೂಪದಲ್ಲಿ ಭಯದಿಂದ ನರಳುವಾಗಲೇ ಸೈಕ್ಲೋನ್​ಗಳ ಸರಮಾಲೆ ಭಾರತದ ಕರಾವಳಿಯನ್ನು ತತ್ತರಿಸುವಂತೆ ಮಾಡಿದೆ. ನಿನ್ನೆ ಕೂಡ ಸುಳಿಗಾಳಿಯೊಂದು ಭಾರತದ ಕರಾವಳಿಯನ್ನ ಸೋಕಿ ಹೋಗಿದೆ. ಅರಬ್ಬಿ ಸಮುದ್ರದಿಂದ ಸುರುಳಿ ಸುತ್ತುತ್ತಾ ಬಂದ ರಾಕ್ಷಸ ಗಾಳಿ, ಅಕ್ಷರಶಃ ರಕ್ಕಸನಂತೆಯೇ ಭಾರತದ ನೆಲಕ್ಕೆ ಅಪ್ಪಳಿಸಿ ನೂರಾರು ಅವಾಂತರ ಸೃಷ್ಟಿಸಿದೆ. ಈ ರಾಕ್ಷಸ ಗಾಳಿಗೆ ಮನೆಯ ಛಾವಣಿಗಳು ಹಾರಿ ಹೋಗಿವೆ. ಮರಗಳು ಧರೆಗೆ ಉರುಳಿವೆ. ಇದಿಷ್ಟೇ ಅಲ್ಲ ನಿಂತಲ್ಲೇ ಕಾರು, ಬೈಕ್ ಪಲ್ಟಿಯಾಗಿವೆ. ವಿದ್ಯುತ್ ಕಂಬಗಳು ನಿಸರ್ಗ ಚಂಡಮಾರುತದ ಚಂಡಿ ಅವತಾರವನ್ನ […]

ನಿಸರ್ಗ ಚಂಡಮಾರುತದ ಅಬ್ಬರಕ್ಕೆ ಇಬ್ಬರು ಬಲಿ
ಆಯೇಷಾ ಬಾನು

Updated on: Jun 04, 2020 | 3:15 PM

ದೆಹಲಿ: ಕೊರೊನಾ ಕೂಪದಲ್ಲಿ ಭಯದಿಂದ ನರಳುವಾಗಲೇ ಸೈಕ್ಲೋನ್​ಗಳ ಸರಮಾಲೆ ಭಾರತದ ಕರಾವಳಿಯನ್ನು ತತ್ತರಿಸುವಂತೆ ಮಾಡಿದೆ. ನಿನ್ನೆ ಕೂಡ ಸುಳಿಗಾಳಿಯೊಂದು ಭಾರತದ ಕರಾವಳಿಯನ್ನ ಸೋಕಿ ಹೋಗಿದೆ. ಅರಬ್ಬಿ ಸಮುದ್ರದಿಂದ ಸುರುಳಿ ಸುತ್ತುತ್ತಾ ಬಂದ ರಾಕ್ಷಸ ಗಾಳಿ, ಅಕ್ಷರಶಃ ರಕ್ಕಸನಂತೆಯೇ ಭಾರತದ ನೆಲಕ್ಕೆ ಅಪ್ಪಳಿಸಿ ನೂರಾರು ಅವಾಂತರ ಸೃಷ್ಟಿಸಿದೆ.

ಈ ರಾಕ್ಷಸ ಗಾಳಿಗೆ ಮನೆಯ ಛಾವಣಿಗಳು ಹಾರಿ ಹೋಗಿವೆ. ಮರಗಳು ಧರೆಗೆ ಉರುಳಿವೆ. ಇದಿಷ್ಟೇ ಅಲ್ಲ ನಿಂತಲ್ಲೇ ಕಾರು, ಬೈಕ್ ಪಲ್ಟಿಯಾಗಿವೆ. ವಿದ್ಯುತ್ ಕಂಬಗಳು ನಿಸರ್ಗ ಚಂಡಮಾರುತದ ಚಂಡಿ ಅವತಾರವನ್ನ ಬಿಡಿಸಿ ಬಿಡಿಸಿ ಹೇಳ್ತಿವೆ.

ಮತ್ತೊಂದು ಮಹಾವಿಪತ್ತಿನಿಂದ ಮುಂಬೈ ಜಸ್ಟ್ ಮಿಸ್!
ಮುಂಬೈ ನಗರ ಕೊರೊನಾದಿಂದ ನಲುಗಿದೆ. ದಿನವೊಂದಕ್ಕೆ ಸಾವಿರಾರು ಜನರಿಗೆ ಕೊರೊನಾ ಅಟ್ಯಾಕ್ ಆಗುತ್ತಿದೆ. ಈಮಧ್ಯೆ ಮುಂಬೈಗೆ ಮತ್ತೊಂದು ಆತಂಕ ಶುರುವಾಗಿತ್ತು.‌ ಭಾರಿ ಭೀತಿ ಹುಟ್ಟುಹಾಕಿದ್ದ ನಿಸರ್ಗ ಸೈಕ್ಲೋನ್‌ ಹೊಡೆತದಿಂದ ಮುಂಬೈ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ನಿನ್ನೆ ಮಧ್ಯಾಹ್ನ 1 ಗಂಟೆ ವೇಳೆಗೆ ಮಹಾರಾಷ್ಟ್ರದ ಅಲಿಬಾಗ್​ಗೆ ಪ್ರವೇಶಿಸಿದ ಸೈಕ್ಲೋನ್‌ ತನ್ನ ವೇಗವನ್ನ ತಗ್ಗಿಸಿದ್ದು, ಭಾರಿ ಅನಾಹುತ ತಪ್ಪಿದೆ. ಆದರೆ ಮಹಾರಾಷ್ಟ್ರದ ಪುಣೆಯಲ್ಲಿ ಸೈಕ್ಲೋನ್‌ಗೆ ಇಬ್ಬರು ಬಲಿಯಾಗಿದ್ದಾರೆ. ಮೂವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ವಿದ್ಯುತ್ ತಂತಿ ಸ್ಪರ್ಶಿಸಿ 2 ಜಾನುವಾರು ಕೂಡ ಮೃತಪಟ್ಟಿವೆ.

150ರ ಲೆಕ್ಕ.. 40 ಕಿಲೋಮೀಟರ್ ಪಕ್ಕಾ!
ಅಂದಹಾಗೆ ಮಹಾರಾಷ್ಟ್ರ ಪ್ರವೇಶಿಸುವ ಮುನ್ನ ನಿಸರ್ಗ ಸೈಕ್ಲೋನ್ ದಕ್ಷಿಣದ ಕಡೆ ತನ್ನ ಪಥ ಬದಲಿಸಿದ್ದು ಇದರ ಪ್ರಭಾವ ಕಡಿಮೆಯಾಗಲು ಕಾರಣವಾಗಿದೆಯಂತೆ. ಅರಬ್ಬಿ ಸಮುದ್ರದಲ್ಲಿ ಹುಟ್ಟಿದ್ದ ನಿಸರ್ಗ ಸೈಕ್ಲೋನ್‌ ಮಹಾರಾಷ್ಟ್ರದಲ್ಲಿ ಭಾರೀ ಆತಂಕ ಮೂಡಿಸಿತ್ತು. ಮೊದಲೇ ಕೊರೊನಾದಿಂದ ಕಂಗಾಲಾಗಿದ್ದ ಮುಂಬೈಗೆ ನಿಸರ್ಗ ಮತ್ತೊಂದು ಶಾಪವಾಗುತ್ತೆ ಅಂತಾ ಹೇಳಲಾಗಿತ್ತು. ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿತ್ತು.

ಇದು 150 ಕಿಲೋ ಮೀಟರ್​ಗೂ ತಲುಪುವ ಸಾಧ್ಯತೆ ಇದೆ‌ ಎನ್ನಲಾಗಿತ್ತು. ಆದ್ರೆ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಅಲಿಬಾಗ್‌ ಸಮೀಪ ಭೂಮಿಗಪ್ಪಳಿಸಿದ ನಿಸರ್ಗ ಸೈಕ್ಲೋನ್‌ ತನ್ನ ವೇಗವನ್ನ 40 ಕಿಲೋ ಮೀಟರ್​ಗೆ ತಗ್ಗಿಸಿತು. ಹೀಗಾಗಿ ಮುಂಬೈ ಜನ ನಿಟ್ಟುಸಿರುಬಿಟ್ರು. ಮಹಾನಗರಿ ಮುಂಬೈನಲ್ಲಿ ಗಾಳಿ ಮತ್ತು ಮಳೆ ಆಗ್ತಿರೋದನ್ನ ಬಿಟ್ರೆ ಭಾರಿ ಅನಾಹುತಗಳು ಸಂಭವಿಸಿಲ್ಲ. ಹೀಗಿದ್ದರೂ ಮುಂಬೈನಲ್ಲಿ ಇಂದು ಮಧ್ಯಾಹ್ನದವರೆಗೂ ಜನರ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ.

ಒಟ್ನಲ್ಲಿ ಕರಾವಳಿಗೆ ಅಪ್ಪಳಿಸುವ ಮೊದಲೇ ಭಾರಿ ಆತಂಕ ಸೃಷ್ಟಿಸಿದ್ದ ನಿಸರ್ಗ ಚಂಡಮಾರುತ ವೀಕ್ ಆಗಿದೆ. ಇದು ಅಪಾಯದ ಮುನ್ಸೂಚನೆಯಲ್ಲಿದ್ದ ಪ್ರದೇಶಗಳಲ್ಲಿ ನೆಮ್ಮದಿ ತಂದಿದೆ. ಆದ್ರೂ ಒಂದು ಬಲಿ ಪಡೆದಿರುವ ನಿಸರ್ಗ ಸೈಕ್ಲೋನ್ ಇನ್ನೂ ತಣ್ಣಗಾಗಿಲ್ಲ. ಮಧ್ಯಪ್ರದೇಶದ ಹಲವು ಜಿಲ್ಲೆಗಳು ನಿಸರ್ಗ ಸೈಕ್ಲೋನ್ ಸುಳಿಗೆ ಸಿಲುಕಿ, ಭಾರಿ ಮಳೆಯ ಪರಿಣಾಮ ಎದುರಿಸುವ ಸಾಧ್ಯತೆ ಇದೆ. ಹೀಗಾಗಿ ಅಪಾಯದ ಮುನ್ಸೂಚನೆ ಇರುವ ಪ್ರದೇಶಗಳಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.

Published On - 7:49 am, Thu, 4 June 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us