AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಳೆ ಕೆಂಪುಕೋಟೆಯಲ್ಲಿ ಧ್ವಜಾರೋಹಣದ ಬಳಿಕ ಇದೆ ಒಂದು ವಿಶೇಷತೆ; 2 ಹೆಲಿಕಾಪ್ಟರ್​ಗಳು ಸಿದ್ಧ

Independence Day: ಎರಡೂ ಹೆಲಿಕಾಪ್ಟರ್​ಗಳು ಭಾರತೀಯ ವಾಯುಪಡೆಗೆ ಸೇರಿದವು. ಮೊದಲನೇ ಹೆಲಿಕಾಪ್ಟರ್​​ನ ಕಮಾಂಡರ್​ ಬಲ್​ದೇವ್​ ಸಿಂಗ್​ ಬಿಶತ್​ ಆಗಿದ್ದು ಎರಡನೇ ಹೆಲಿಕಾಪ್ಟರ್​ನ ಕ್ಯಾಪ್ಟನ್​ ವಿಂಗ್​ ಕಮಾಂಡರ್​ ನಿಖಿಲ್​ ಮೆಹ್ರೋತ್ರಾ.

ನಾಳೆ ಕೆಂಪುಕೋಟೆಯಲ್ಲಿ ಧ್ವಜಾರೋಹಣದ ಬಳಿಕ ಇದೆ ಒಂದು ವಿಶೇಷತೆ; 2 ಹೆಲಿಕಾಪ್ಟರ್​ಗಳು ಸಿದ್ಧ
ಕೆಂಪುಕೋಟೆ (ಚಿತ್ರಕೃಪೆ -ಪಿಟಿಐ)
TV9 Web
| Edited By: |

Updated on:Aug 14, 2021 | 7:25 PM

Share

ನಾಳೆ (ಆಗಸ್ಟ್​ 15) ಭಾರತದ ಪಾಲಿಗೆ ವಿಶೇಷ ದಿನ. 75ನೇ ಸ್ವಾತಂತ್ರ್ಯ ದಿನಾಚರಣೆ (Independence Day)ಯ ಹಿನ್ನೆಲೆಯಲ್ಲಿ ಮುಂಜಾನೆ ಪ್ರಧಾನಮಂತ್ರಿ ಮೋದಿಯವರು, ಐತಿಹಾಸಿಕ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜ ಹಾರಿಸಲಿದ್ದಾರೆ (Flag Hoisting). ನಂತರ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇವಿಷ್ಟು ಪ್ರತಿವರ್ಷ ಸ್ವಾತಂತ್ರ್ಯೋತ್ಸವದ ದಿನದಂದು ನಡೆಯುತ್ತದೆ. ಆದರೆ ಈ ಬಾರಿ ಧ್ವಜಾರೋಹಣದ ಸಂದರ್ಭದಲ್ಲಿ ವಿಶೇಷತೆಯೊಂದು ಇದೆ. ಇಷ್ಟುವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿ (Narendra Modi)ಯವರು ಧ್ವಜಾರೋಹಣ ಮಾಡುತ್ತಿದ್ದಂತೆ ಸ್ಥಳದಲ್ಲಿ ಹೂವಿನ ಎಸಳುಗಳ ಸುರಿಮಳೆಯಾಗಲಿದೆ.

ಈ ಬಾರಿ ಭಾರತ ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಸಂಭ್ರಮದಲ್ಲಿದೆ. ಹೀಗೆ ಅಪಾರ ಪ್ರಮಾಣದಲ್ಲಿ ಹೂವಿನ ಎಸಳುಗಳನ್ನು ಮೇಲಿನಿಂದ ಉದಿರಿಸಲು ಎರಡು ಹೆಲಿಕಾಪ್ಟರ್​​ಗಳನ್ನು ರೆಡಿಯಾಗಿವೆ. ರಾಷ್ಟ್ರಧ್ವಜಾರೋಹಣ ಆಗುತ್ತಿದ್ದಂತೆ ಭಾರತೀಯ ವಾಯುಸೇನೆಯ ಎಂಐ-17 1ವಿ (Mi-17 1V) ಎರಡು ಹೆಲಿಕಾಪ್ಟರ್​​ಗಳು ಹೂವಿನ ಎಸಳುಗಳ ಸುರಿಮಳೆ ಸುರಿಸಲಿವೆ.

ಇದರಲ್ಲಿ ಮೊದಲನೇ ಹೆಲಿಕಾಪ್ಟರ್​​ನ ಕಮಾಂಡರ್​ ಬಲ್​ದೇವ್​ ಸಿಂಗ್​ ಬಿಶತ್​ ಆಗಿದ್ದು ಎರಡನೇ ಹೆಲಿಕಾಪ್ಟರ್​ನ ಕ್ಯಾಪ್ಟನ್​ ವಿಂಗ್​ ಕಮಾಂಡರ್​ ನಿಖಿಲ್​ ಮೆಹ್ರೋತ್ರಾ. ರಾಷ್ಟ್ರಧ್ವಜಾರೋಹಣವಾಗುತ್ತಿದ್ದಂತೆ ಇವೆರಡೂ ಹೆಲಿಕಾಪ್ಟರ್​ಗಳಿಂದ ಹೂವಿನ ಸಿಂಪಡಣೆ ಆಗಲಿದ್ದು, ನಂತರ ಪ್ರಧಾನ ಮಂತ್ರಿ ದೇಶವನ್ನುದ್ದೇಶಿಸಿ ಮಾತನಾಡುವರು. ಭಾಷಣದ ಬಳಿಕ ನ್ಯಾಷನಲ್​ ಕೆಡೆಟ್ಸ್​ ಕಾರ್ಪ್ಸ್(NCC)​ ರಾಷ್ಟ್ರಗೀತೆ ಹಾಡಲಿದೆ. ಭೂ, ನೌಕಾ ಮತ್ತು ವಾಯುಸೇನೆಯ ವಿವಿಧ ಶಾಲೆಗಳಿಂದ ಒಟ್ಟು 500 ಕೆಡೆಟ್​ಗಳು ಈ ಹೊತ್ತಲ್ಲಿ ಪಾಲ್ಗೊಳ್ಳಲಿವೆ.

ಒಲಿಂಪಿಕ್ಸ್​ ಅಥ್ಲೀಟ್​ಗಳು ಭಾಗಿ ಇನ್ನು ಈ ಬಾರಿ ಒಲಿಂಪಿಕ್ಸ್​ನಲ್ಲಿ ಭಾರತ ಅಮೋಘ ಸಾಧನೆ ಮಾಡಿದ್ದು, ಅದರಲ್ಲಿ ಪಾಲ್ಗೊಂಡ ಆಟಗಾರರನ್ನು ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವಕ್ಕೆ ಆಹ್ವಾನಿಸಲಾಗಿದೆ. ಚಿನ್ನದ ಪದಕ ವಿಜೇತ ನೀರಜ್​ ಚೋಪ್ರಾ ಸೇರಿ 32 ಅಥ್ಲೀಟ್​ಗಳು ಪಾಲ್ಗೊಳ್ಳುವರು.

ಕೆಂಪುಕೋಟೆಯಲ್ಲಿ ಬಿಗಿ ಭದ್ರತೆ 75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಕೆಂಪುಕೋಟೆಯಲ್ಲಿ ಬಿಗಿ ಭದ್ರತೆ ಮಾಡಲಾಗಿದೆ. ಎನ್​ಎಸ್​ಜಿ ಸ್ನಿಪರ್​ಗಳು ಸೇರಿ, ವಿವಿಧ ಭದ್ರತಾ ಪಡೆಗಳ ಕಮಾಂಡೋಗಳನ್ನು ನೇಮಿಸಲಾಗಿದೆ. ಭಾರಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ. ಜನವರಿ 26ರಂದು ರೈತರ ಹೋರಾಟ ಕೆಂಪುಕೋಟೆ ಬಳಿ ಹಿಂಸಾಚಾರ ಸೃಷ್ಟಿಸಿತ್ತು. ಕೆಂಪುಕೋಟೆಯ ಮೇಲೆ ಭಾರತದ ಧ್ವಜದೊಟ್ಟಿಗೆ ಸಿಖ್​ ಧ್ವಜ ಹಾರಿಸಲಾಗಿತ್ತು.

ಇದನ್ನೂ ಓದಿ: ಮೇಕೆದಾಟು ಯೋಜನೆ ಜಾರಿಗೆ ನಮ್ಮ ಸರ್ಕಾರ ಸಿದ್ಧವಿದೆ; ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿ ಗೋವಿಂದ ಕಾರಜೋಳ ಮಾತು

ಮನನೊಂದು ಮುಂದಿನ ಸೀಸನ್​ನಿಂದ ಜಡ್ಜ್ ಆಗುವುದಿಲ್ಲ ಎಂದು ಹೇಳಿ ಶಾಕ್ ಕೊಟ್ಟ ಗಾಯಕ!

Published On - 6:39 pm, Sat, 14 August 21

Follow Us
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ