AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ಸಿನಿಮಾ ಮಾದರಿಯಲ್ಲಿ ಭಾರೀ ಚಿನ್ನಾಭರಣ ಕಳ್ಳತನ, ಕುಕ್ಕರ್​​ಗೆ ಹಾಕಿ ಹೊಳಪು ನೀಡುತ್ತೇವೆ ಎಂದಿದ್ದರು ಆಗಂತಕರು!

ಚಿನ್ನಾಭರಣ ತಂದುಕೊಟ್ಟರೆ ಅದನ್ನೂ ಹೊಳೆಯುವಂತೆ ಮಾಡಿಕೊಡುತ್ತೇವೆ ಎಂದು ಪುಸಲಾಯಿಸಿದ್ದಾರೆ. ಇದರಿಂದ ಮನವರಿಕೆಯಾದ ರಮೇಶ್ 25 ಚಿನ್ನಾಭರಣಗಳನ್ನು ತಂದು ಇಬ್ಬರು ಯುವಕರಿಗೆ ನೀಡಿದ್ದಾರೆ. ಕುಕ್ಕರ್ ತರುವುದಾಗಿ ಹೇಳಿದ ಯುವಕರು, ರಮೇಶ್ ಕಣ್ಣೆದುರೇ ಕುಕ್ಕರ್ ನೊಳಕ್ಕೆ ಚಿನ್ನಾಭರಣಗಳನ್ನು ಹಾಕಿದ್ದಾರೆ. ಬಳಿಕ ಅರಿಶಿನ ತರಬೇಕು ಎಂದಿದ್ದಾರೆ. ಅದಕ್ಕೆ ರಮೇಶ್ ಮನೆಯೊಳಗೆ ಹೋಗಿದ್ದಾರೆ. ಜಸ್ಟ್​ ಆ ವೇಳೆಯೇ

ತೆಲುಗು ಸಿನಿಮಾ ಮಾದರಿಯಲ್ಲಿ ಭಾರೀ ಚಿನ್ನಾಭರಣ ಕಳ್ಳತನ, ಕುಕ್ಕರ್​​ಗೆ ಹಾಕಿ ಹೊಳಪು ನೀಡುತ್ತೇವೆ ಎಂದಿದ್ದರು ಆಗಂತಕರು!
ತೆಲುಗು ಸಿನಿಮಾ ಮಾದರಿಯಲ್ಲಿ ಭಾರೀ ಚಿನ್ನಾಭರಣ ಕಳ್ಳತನ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Sep 15, 2023 | 12:43 PM

Share

ಗುಂಟೂರು, ಸೆಪ್ಟೆಂಬರ್ 15: ಮೋಸಗಾರರು ಜನರಲ್ಲಿನ ಅಮಾಯಕತ್ವ, ಮುಗ್ಧತೆಯನ್ನು ಲಾಭ ಮಾಡಿಕೊಳ್ಲುತ್ತಾರೆ. ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಜನರೂ ಎಚ್ಚೆತ್ತಿಲ್ಲ. ಗುಂಟೂರಿನಲ್ಲಿ ಇಂತಹದ್ದೇ ಘಟನೆ ನಡೆದಿದೆ. ಚಿನ್ನಾಭರಣವನ್ನು (Gold Jewellery) ಕುಕ್ಕರ್‌ನಲ್ಲಿ ಬೇಯಿಸಿ, ಅದರ ಗುಣಮಟ್ಟ (Polishing) ಸುಧಾರಿಸುವುದಾಗಿಯೂ, ಫಳಫಳ ಹೊಳೆಯುವಂತೆ ಮಾಡುವುದಾಗಿಯೂ ಹೇಳಿ ಕಳ್ಳರ ತಂಡ (Gang Of Thieves) ಚಿನ್ನಾಭರಣ ದೋಚಿರುವ ಘಟನೆ ನಡೆದಿದೆ.

ಗುಂಟೂರು ನಗರದ ಫಂಡರಿಪುರಂ 5ನೇ ಸಾಲಿನಲ್ಲಿ ರಮೇಶ್ ಎಂಬುವವರ ಮನೆಗೆ ಇಬ್ಬರು ಬಂದಿದ್ದರು. ಮನೆಯಲ್ಲಿ ರಮೇಶ್ ಒಬ್ಬರೇ ಇರುವುದು ಪತ್ತೆಯಾಗಿದೆ. ಮನೆಯ ಬಾಗಿಲು ತಟ್ಟಿ ಒಳಗೆ ಹೋದರು. ಮನೆಯಲ್ಲಿ ಬೆಳ್ಳಿ ಮತ್ತು ತಾಮ್ರದ ಆಭರಣಗಳು ಫಳಫಳ ಹೊಳೆಯುವಂತೆ ಮಾಡುತ್ತೇವೆ ಎಂದು ಹೇಳಿದರು. ನಿಮ್ಮ ಕಣ್ಣೆದುರೇ ಇಲ್ಲೇ ಮಾಡಿಕೊಡುವುದರಿಂದ ಹೆಚ್ಚು ಖರ್ಚು ಬೀಳುವುದಿಲ್ಲ ಎಂದು ಹೇಳಿದರು. ಹೀಗಾಗಿ ರಮೇಶ್ ಅವರು ಮನೆಗೆ ಬಂದಿದ್ದ ಇಬ್ಬರ ಕೈಗೆ ಬೆಳ್ಳಿ ಮತ್ತು ತಾಮ್ರದ ವಸ್ತುಗಳನ್ನು ನೀಡಿದ್ದಾರೆ. ಅಲ್ಲಿ ಸ್ವಲ್ಪ ಹೊತ್ತು ಅದೂಇದೂ ಮಾಡಿ ಬಂದಿದ್ದ ಯುವಕರಿಬ್ಬರು ಹೊಳೆಯುತ್ತಿದ್ದ ತಾಮ್ರ, ಬೆಳ್ಳಿ ವಸ್ತುಗಳನ್ನು ರಮೇಶ್ ಗೆ ಹಿಂತಿರುಗಿಸಿದರು.

ಇಷ್ಟೇ ಅಲ್ಲ ಚಿನ್ನಾಭರಣ ತಂದುಕೊಟ್ಟರೆ ಅದನ್ನೂ ಹೊಳೆಯುವಂತೆ ಮಾಡಿಕೊಡುತ್ತೇವೆ ಎಂದು ಪುಸಲಾಯಿಸಿದ್ದಾರೆ. ಇದರಿಂದ ಮನವರಿಕೆಯಾದ ರಮೇಶ್ 25 ಚಿನ್ನಾಭರಣಗಳನ್ನು ತಂದು ಇಬ್ಬರು ಯುವಕರಿಗೆ ನೀಡಿದ್ದಾರೆ. ಕುಕ್ಕರ್ ತರುವುದಾಗಿ ಹೇಳಿದ ಯುವಕರು, ರಮೇಶ್ ಕಣ್ಣೆದುರೇ ಕುಕ್ಕರ್ ನೊಳಕ್ಕೆ ಚಿನ್ನಾಭರಣಗಳನ್ನು ಹಾಕಿದ್ದಾರೆ. ಬಳಿಕ ಅರಿಶಿನ ತರಬೇಕು ಎಂದಿದ್ದಾರೆ. ಅದಕ್ಕೆ ರಮೇಶ್ ಮನೆಯೊಳಗೆ ಹೋಗಿದ್ದಾರೆ. ಜಸ್ಟ್​ ಆ ವೇಳೆಯೇ ಬಂದಿದ್ದ ಯುವಕರು ಕುಕ್ಕರ್‌ನಲ್ಲಿದ್ದ ಚಿನ್ನಾಭರಣಗಳನ್ನು ತಮ್ಮ ಬ್ಯಾಗ್‌ನಲ್ಲಿ ಹಾಕಿಕೊಂಡಿದ್ದಾರೆ. ಅರಿಶಿನ ತಂದ ರಮೇಶ್ ಕಣ್ಣೆದುರೇ ಕುಕ್ಕರ್ ನೊಳಕ್ಕೆ ಸ್ವಲ್ಪ ಅರಿಶಿಣ ಹಾಕಿದರು. ಹತ್ತು ನಿಮಿಷಗಳ ನಂತರ ಕುಕ್ಕರ್ ತೆರೆಯಿರಿ. ಅದರಲ್ಲಿ ಫಳಫಳ ಹೊಳೆಯುವ ಚಿನ್ನದ ಆಭರಣಗಳನ್ನು ತೆಗೆದುಕೊಳ್ಳಿ ಎಂದಿದ್ದಾರೆ.

Also Read: ಕಳ್ಳತನ ಆರೋಪಕ್ಕೆ ಹೆದರಿ ವ್ಯಕ್ತಿ ಆತ್ಮಹತ್ಯೆ, ಒಂದೂವರೆ ಕೋಟಿ ರೂ. ಮೌಲ್ಯದ ಚಿನ್ನಾಭರಣ ಕದ್ದಿದ್ದು ಮೃತನ ಪತ್ನಿ

ಅಷ್ಟು ಹೇಳಿ ಇಬ್ಬರು ಯುವಕರು ಅಲ್ಲಿಂದ ಓಡಿ ಹೋದರು. ಆದರೆ ಹತ್ತು ನಿಮಿಷದ ನಂತರ ಕುಕ್ಕರ್ ತೆರೆದಾಗ ಅದರಲ್ಲಿ ಚಿನ್ನಾಭರಣ ಪತ್ತೆಯಾಗಿಲ್ಲ. ರಮೇಶ್ ಪಟ್ಟಾಭಿಪುರಂ ಪೊಲೀಸರನ್ನು ಸಂಪರ್ಕಿಸಿ, ನಡೆದಿದ್ದನ್ನು ಹೇಳಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಗಂಗಾನದಿಯಲ್ಲಿ ಅದ್ದಿದರೆ ಚಿನ್ನ ದುಪ್ಪಟ್ಟಾಗುತ್ತದೆ ಎಂದು ಇಂದ್ರ ಚಿತ್ರದಲ್ಲಿ ವಂಚಿಸಿದಂತೆಯೇ ಇಲ್ಲೂ ವಂಚನೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:42 pm, Fri, 15 September 23

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​