Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ಸಿನಿಮಾ ಮಾದರಿಯಲ್ಲಿ ಭಾರೀ ಚಿನ್ನಾಭರಣ ಕಳ್ಳತನ, ಕುಕ್ಕರ್​​ಗೆ ಹಾಕಿ ಹೊಳಪು ನೀಡುತ್ತೇವೆ ಎಂದಿದ್ದರು ಆಗಂತಕರು!

ಚಿನ್ನಾಭರಣ ತಂದುಕೊಟ್ಟರೆ ಅದನ್ನೂ ಹೊಳೆಯುವಂತೆ ಮಾಡಿಕೊಡುತ್ತೇವೆ ಎಂದು ಪುಸಲಾಯಿಸಿದ್ದಾರೆ. ಇದರಿಂದ ಮನವರಿಕೆಯಾದ ರಮೇಶ್ 25 ಚಿನ್ನಾಭರಣಗಳನ್ನು ತಂದು ಇಬ್ಬರು ಯುವಕರಿಗೆ ನೀಡಿದ್ದಾರೆ. ಕುಕ್ಕರ್ ತರುವುದಾಗಿ ಹೇಳಿದ ಯುವಕರು, ರಮೇಶ್ ಕಣ್ಣೆದುರೇ ಕುಕ್ಕರ್ ನೊಳಕ್ಕೆ ಚಿನ್ನಾಭರಣಗಳನ್ನು ಹಾಕಿದ್ದಾರೆ. ಬಳಿಕ ಅರಿಶಿನ ತರಬೇಕು ಎಂದಿದ್ದಾರೆ. ಅದಕ್ಕೆ ರಮೇಶ್ ಮನೆಯೊಳಗೆ ಹೋಗಿದ್ದಾರೆ. ಜಸ್ಟ್​ ಆ ವೇಳೆಯೇ

ತೆಲುಗು ಸಿನಿಮಾ ಮಾದರಿಯಲ್ಲಿ ಭಾರೀ ಚಿನ್ನಾಭರಣ ಕಳ್ಳತನ, ಕುಕ್ಕರ್​​ಗೆ ಹಾಕಿ ಹೊಳಪು ನೀಡುತ್ತೇವೆ ಎಂದಿದ್ದರು ಆಗಂತಕರು!
ತೆಲುಗು ಸಿನಿಮಾ ಮಾದರಿಯಲ್ಲಿ ಭಾರೀ ಚಿನ್ನಾಭರಣ ಕಳ್ಳತನ
Follow us
ಸಾಧು ಶ್ರೀನಾಥ್​
|

Updated on:Sep 15, 2023 | 12:43 PM

ಗುಂಟೂರು, ಸೆಪ್ಟೆಂಬರ್ 15: ಮೋಸಗಾರರು ಜನರಲ್ಲಿನ ಅಮಾಯಕತ್ವ, ಮುಗ್ಧತೆಯನ್ನು ಲಾಭ ಮಾಡಿಕೊಳ್ಲುತ್ತಾರೆ. ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಜನರೂ ಎಚ್ಚೆತ್ತಿಲ್ಲ. ಗುಂಟೂರಿನಲ್ಲಿ ಇಂತಹದ್ದೇ ಘಟನೆ ನಡೆದಿದೆ. ಚಿನ್ನಾಭರಣವನ್ನು (Gold Jewellery) ಕುಕ್ಕರ್‌ನಲ್ಲಿ ಬೇಯಿಸಿ, ಅದರ ಗುಣಮಟ್ಟ (Polishing) ಸುಧಾರಿಸುವುದಾಗಿಯೂ, ಫಳಫಳ ಹೊಳೆಯುವಂತೆ ಮಾಡುವುದಾಗಿಯೂ ಹೇಳಿ ಕಳ್ಳರ ತಂಡ (Gang Of Thieves) ಚಿನ್ನಾಭರಣ ದೋಚಿರುವ ಘಟನೆ ನಡೆದಿದೆ.

ಗುಂಟೂರು ನಗರದ ಫಂಡರಿಪುರಂ 5ನೇ ಸಾಲಿನಲ್ಲಿ ರಮೇಶ್ ಎಂಬುವವರ ಮನೆಗೆ ಇಬ್ಬರು ಬಂದಿದ್ದರು. ಮನೆಯಲ್ಲಿ ರಮೇಶ್ ಒಬ್ಬರೇ ಇರುವುದು ಪತ್ತೆಯಾಗಿದೆ. ಮನೆಯ ಬಾಗಿಲು ತಟ್ಟಿ ಒಳಗೆ ಹೋದರು. ಮನೆಯಲ್ಲಿ ಬೆಳ್ಳಿ ಮತ್ತು ತಾಮ್ರದ ಆಭರಣಗಳು ಫಳಫಳ ಹೊಳೆಯುವಂತೆ ಮಾಡುತ್ತೇವೆ ಎಂದು ಹೇಳಿದರು. ನಿಮ್ಮ ಕಣ್ಣೆದುರೇ ಇಲ್ಲೇ ಮಾಡಿಕೊಡುವುದರಿಂದ ಹೆಚ್ಚು ಖರ್ಚು ಬೀಳುವುದಿಲ್ಲ ಎಂದು ಹೇಳಿದರು. ಹೀಗಾಗಿ ರಮೇಶ್ ಅವರು ಮನೆಗೆ ಬಂದಿದ್ದ ಇಬ್ಬರ ಕೈಗೆ ಬೆಳ್ಳಿ ಮತ್ತು ತಾಮ್ರದ ವಸ್ತುಗಳನ್ನು ನೀಡಿದ್ದಾರೆ. ಅಲ್ಲಿ ಸ್ವಲ್ಪ ಹೊತ್ತು ಅದೂಇದೂ ಮಾಡಿ ಬಂದಿದ್ದ ಯುವಕರಿಬ್ಬರು ಹೊಳೆಯುತ್ತಿದ್ದ ತಾಮ್ರ, ಬೆಳ್ಳಿ ವಸ್ತುಗಳನ್ನು ರಮೇಶ್ ಗೆ ಹಿಂತಿರುಗಿಸಿದರು.

ಇಷ್ಟೇ ಅಲ್ಲ ಚಿನ್ನಾಭರಣ ತಂದುಕೊಟ್ಟರೆ ಅದನ್ನೂ ಹೊಳೆಯುವಂತೆ ಮಾಡಿಕೊಡುತ್ತೇವೆ ಎಂದು ಪುಸಲಾಯಿಸಿದ್ದಾರೆ. ಇದರಿಂದ ಮನವರಿಕೆಯಾದ ರಮೇಶ್ 25 ಚಿನ್ನಾಭರಣಗಳನ್ನು ತಂದು ಇಬ್ಬರು ಯುವಕರಿಗೆ ನೀಡಿದ್ದಾರೆ. ಕುಕ್ಕರ್ ತರುವುದಾಗಿ ಹೇಳಿದ ಯುವಕರು, ರಮೇಶ್ ಕಣ್ಣೆದುರೇ ಕುಕ್ಕರ್ ನೊಳಕ್ಕೆ ಚಿನ್ನಾಭರಣಗಳನ್ನು ಹಾಕಿದ್ದಾರೆ. ಬಳಿಕ ಅರಿಶಿನ ತರಬೇಕು ಎಂದಿದ್ದಾರೆ. ಅದಕ್ಕೆ ರಮೇಶ್ ಮನೆಯೊಳಗೆ ಹೋಗಿದ್ದಾರೆ. ಜಸ್ಟ್​ ಆ ವೇಳೆಯೇ ಬಂದಿದ್ದ ಯುವಕರು ಕುಕ್ಕರ್‌ನಲ್ಲಿದ್ದ ಚಿನ್ನಾಭರಣಗಳನ್ನು ತಮ್ಮ ಬ್ಯಾಗ್‌ನಲ್ಲಿ ಹಾಕಿಕೊಂಡಿದ್ದಾರೆ. ಅರಿಶಿನ ತಂದ ರಮೇಶ್ ಕಣ್ಣೆದುರೇ ಕುಕ್ಕರ್ ನೊಳಕ್ಕೆ ಸ್ವಲ್ಪ ಅರಿಶಿಣ ಹಾಕಿದರು. ಹತ್ತು ನಿಮಿಷಗಳ ನಂತರ ಕುಕ್ಕರ್ ತೆರೆಯಿರಿ. ಅದರಲ್ಲಿ ಫಳಫಳ ಹೊಳೆಯುವ ಚಿನ್ನದ ಆಭರಣಗಳನ್ನು ತೆಗೆದುಕೊಳ್ಳಿ ಎಂದಿದ್ದಾರೆ.

Also Read: ಕಳ್ಳತನ ಆರೋಪಕ್ಕೆ ಹೆದರಿ ವ್ಯಕ್ತಿ ಆತ್ಮಹತ್ಯೆ, ಒಂದೂವರೆ ಕೋಟಿ ರೂ. ಮೌಲ್ಯದ ಚಿನ್ನಾಭರಣ ಕದ್ದಿದ್ದು ಮೃತನ ಪತ್ನಿ

ಅಷ್ಟು ಹೇಳಿ ಇಬ್ಬರು ಯುವಕರು ಅಲ್ಲಿಂದ ಓಡಿ ಹೋದರು. ಆದರೆ ಹತ್ತು ನಿಮಿಷದ ನಂತರ ಕುಕ್ಕರ್ ತೆರೆದಾಗ ಅದರಲ್ಲಿ ಚಿನ್ನಾಭರಣ ಪತ್ತೆಯಾಗಿಲ್ಲ. ರಮೇಶ್ ಪಟ್ಟಾಭಿಪುರಂ ಪೊಲೀಸರನ್ನು ಸಂಪರ್ಕಿಸಿ, ನಡೆದಿದ್ದನ್ನು ಹೇಳಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಗಂಗಾನದಿಯಲ್ಲಿ ಅದ್ದಿದರೆ ಚಿನ್ನ ದುಪ್ಪಟ್ಟಾಗುತ್ತದೆ ಎಂದು ಇಂದ್ರ ಚಿತ್ರದಲ್ಲಿ ವಂಚಿಸಿದಂತೆಯೇ ಇಲ್ಲೂ ವಂಚನೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:42 pm, Fri, 15 September 23

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ