AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೊಮೇನಿಯಾದ ಬುಕಾರೆಸ್ಟ್​ನಿಂದ ಭಾರತಕ್ಕೆ ಹೊರಟ 2ನೇ ವಿಮಾನ; 250 ವಿದ್ಯಾರ್ಥಿಗಳನ್ನು ಹೊತ್ತು ದೆಹಲಿಯತ್ತ ವಿಮಾನ ಹಾರಾಟ

ಉಕ್ರೇನ್​ ಸೂಪರ್ ಮಾರ್ಕೆಟ್‌‌ಗಳಲ್ಲಿ ಸಾಮಾಗ್ರಿಗಳು ಖಾಲಿ ಆಗಿವೆ. ಸೂಪರ್‌ ಮಾರ್ಕೆಟ್‌ನಲ್ಲಿ ಆಹಾರ ಸಾಮಗ್ರಿಗಳು ಖಾಲಿ ಖಾಲಿ ಆಗಿರುವ ಹಿನ್ನೆಲೆ ಆಹಾರ ಸಿಗದೇ ಮಾರ್‌ಕೀವ್​ನಲ್ಲಿ ನಿವಾಸಿಗಳ ಪರದಾಟ ಕಂಡುಬಂದಿದೆ.

ರೊಮೇನಿಯಾದ ಬುಕಾರೆಸ್ಟ್​ನಿಂದ ಭಾರತಕ್ಕೆ ಹೊರಟ 2ನೇ ವಿಮಾನ; 250 ವಿದ್ಯಾರ್ಥಿಗಳನ್ನು ಹೊತ್ತು ದೆಹಲಿಯತ್ತ ವಿಮಾನ ಹಾರಾಟ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Feb 26, 2022 | 10:19 PM

Share

ದೆಹಲಿ: ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಸಾರಿದೆ. ಈ ಮಧ್ಯೆ ಉಕ್ರೇನ್​ನಲ್ಲಿ ಕರ್ನಾಟಕದ ಜನರೂ ಸೇರಿ ಭಾರತದ ವಿವಿಧ ಭಾಗಗಳ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯರನ್ನು ಏರ್ ಲಿಫ್ಟ್ ಮಾಡುವ ಕಾರ್ಯ ಭರದಿಂದ ನಡೆಯುತ್ತಿದೆ. ಒಂದು ವಿಮಾನ ಮಧ್ಯಾಹ್ನ ಹೊರಟು ಸಂಜೆಗಾಗಲೇ ಮುಂಬೈ ತಲುಪಿದೆ. ಇದೀಗ ರೊಮೇನಿಯಾದ ಬುಕಾರೆಸ್ಟ್​ನಿಂದ 2ನೇ ವಿಮಾನ ಹೊರಟಿದೆ. 250 ವಿದ್ಯಾರ್ಥಿಗಳನ್ನ ಹೊತ್ತು ದೆಹಲಿಯತ್ತ ವಿಮಾನ ಹಾರಾಟ ಆರಂಭಿಸಿದೆ. ಏರ್ ​ಇಂಡಿಯಾ ವಿಮಾನ ನಾಳೆ ದೆಹಲಿಗೆ ಬಂದಿಳಿಯಲಿದೆ.

ಯುದ್ಧದಿಂದ ಉಕ್ರೇನ್​​ನಲ್ಲಿ ಊಟಕ್ಕಾಗಿ ಜನರ ಪರದಾಟ ಉಂಟಾಗಿದೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ. ಉಕ್ರೇನ್​ ಸೂಪರ್ ಮಾರ್ಕೆಟ್‌‌ಗಳಲ್ಲಿ ಸಾಮಾಗ್ರಿಗಳು ಖಾಲಿ ಆಗಿವೆ. ಸೂಪರ್‌ ಮಾರ್ಕೆಟ್‌ನಲ್ಲಿ ಆಹಾರ ಸಾಮಗ್ರಿಗಳು ಖಾಲಿ ಖಾಲಿ ಆಗಿರುವ ಹಿನ್ನೆಲೆ ಆಹಾರ ಸಿಗದೇ ಮಾರ್‌ಕೀವ್​ನಲ್ಲಿ ನಿವಾಸಿಗಳ ಪರದಾಟ ಕಂಡುಬಂದಿದೆ.

ಅಷ್ಟೇ ಅಲ್ಲದೆ, ಹಾಸ್ಟೆಲ್‌ಗಳಿಂದ ಗಡಿಗಳನ್ನ ತಲುಪಲು ಕರ್ನಾಟಕದ ವಿಧ್ಯಾರ್ಥಿಗಳು ಪರದಾಟ ಪಟ್ಟಿದ್ದಾರೆ. ಸ್ಥಳೀಯ ಸಂಸ್ಥೆಗಳ ಸೂಚನೆಯಂತೆ ಪೋಲ್ಯಾಂಡ್ ಗಡಿಗೆ ಬರಲು ಜನರು ಒದ್ದಾಡುವಂತಾಗಿದೆ. ಉಕ್ರೇನ್ ಬಾರ್ಡರ್‌ನಲ್ಲಿ ಇಂಡಿಯನ್ ವಿಧ್ಯಾರ್ಥಿಗಳನ್ನ ಬಿಡುತ್ತಿಲ್ಲ . ಕೇವಲ ಉಕ್ರೇನ್‌ನವರನ್ನ ಮಾತ್ರ ಬಾರ್ಡರ್‌ಗಳಲ್ಲಿ ಬಿಡುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ನಮಗೆ ಭಾರತ ಎಂಬಸಿ ಕಡೆಯಿಂದ ಸೂಕ್ತ ಮಾಹಿತಿ ದೊರೆಯುತ್ತಿಲ್ಲ. ಇಲ್ಲಿ ಯಾರು ಸರಿಯಾಗಿ ಸ್ಪಂದಿಸುತ್ತಿಲ್ಲ. ಇಲ್ಲಿ ಕಿಲೋಮೀಟರ್ ಗಟ್ಟಲೆ ರಸ್ತೆಗಳು ಟ್ರಾಫಿಕ್ ಜಾಂ ಆಗಿವೆ. ಟೆಂಟ್‌ಗಳಲ್ಲಿ ಉಕ್ರೇನಿಯರು ನಮ್ಮನ್ನ ಹೊರಗೆ ಕಳಿಸ್ಥಾರೆ. ಈ ಚಳಿಯಲ್ಲಿ ನಾವು ಎಲ್ಲಿಗೆ ಹೋಗೋದು ಎಂದು ಗೊತ್ತಾಗುತ್ತಿಲ್ಲ. ನಮಗೆ ದಯವಿಟ್ಟು ಸಹಾಯ ಮಾಡಿ ಎಂದು ಬೆಂಗಳೂರಿನ ಮಲ್ಲಸಂದ್ರ ಮೂಲದ, ಉಕ್ರೇನ್‌‌ನಲ್ಲಿ ಸಿಲುಕಿರುವ ವಿದ್ಯಾರ್ಥಿ ಮದನ್ ಹೇಳಿದ್ದಾರೆ.

ಉಕ್ರೇನ್​​ನಲ್ಲಿ ಸಿಲುಕಿರುವ ಚಿತ್ರದುರ್ಗ ವಿದ್ಯಾರ್ಥಿನಿ ಸುನೇಹಾಳನ್ನು ಸುರಕ್ಷಿತವಾಗಿ ಕರೆತರುವಂತೆ ಪೋಷಕರು ಮನವಿ ಮಾಡಿದ್ದಾರೆ. ಟಿವಿ9 ಬಳಿ ವಿದ್ಯಾರ್ಥಿನಿ ಸುನೇಹಾ ತಂದೆ ತಿಪ್ಪೇಸ್ವಾಮಿ ಅಳಲು ತೋಡಿಕೊಂಡಿದ್ದಾರೆ. ಉಕ್ರೇನ್​ನ ಕೀವ್ ನಗರದಿಂದ ರಾತ್ರಿಯೇ ಸುನೇಹಾ ಪ್ರಯಾಣ ಮಾಡುತ್ತಿದ್ದಾರೆ. ಸುನೇಹಾ, ರಚನಾ, ಪ್ರವೀಣ್ ಹಾಗೂ ಕುಟುಂಬ ಪ್ರಯಾಣ ಮಾಡುತ್ತಿದ್ದಾರೆ. ಖಾಸಗಿ ಕಾರಿನಲ್ಲಿ ಸುಮಾರು 500 ಕಿಲೋ ಮೀಟರ್​ ಪ್ರಯಾಣ ಮಾಡಿ, ಲಿವಿವ್ ತಲುಪಿರುವ ವಿದ್ಯಾರ್ಥಿನಿ ಸುನೇಹಾ, ಕುಟುಂಬಸ್ಥರು ತಲುಪಿದ್ದಾರೆ. ಹಣವಿಲ್ಲದೇ ಸುನೇಹಾ, ಇತರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯಾರ್ಥಿನಿಯರು ತೀವ್ರ ಭಯ ಭೀತಿಗೆ ಒಳಗಾಗಿದ್ದಾರೆ. ದಯವಿಟ್ಟು ಸುನೇಹಾ ಇತರರನ್ನ ಸುರಕ್ಷಿತವಾಗಿ ಕರೆತನ್ನಿ ಎಂದು ಹೇಳಿದ್ದಾರೆ.

ಉಕ್ರೇನ್​ನಲ್ಲಿ ಸಿಲುಕಿರುವ ಕೊಪ್ಪಳ‌ ಜಿಲ್ಲೆಯ ವಿದ್ಯಾರ್ಥಿ ಎಂಬಿಬಿಎಸ್​ ವ್ಯಾಸಂಗಕ್ಕೆ ಉಕ್ರೇನ್​ಗೆ ತೆರಳಿರುವ ಚಂದನ್, ಮೂರು ತಿಂಗಳ ಹಿಂದೆ ಉಕ್ರೇನ್​ಗೆ ತೆರಳಿದ್ದಾರೆ. ಸದ್ಯ ಯಾವುದೇ ಭಯ ಇಲ್ಲ ಎಂದು ಚಂದನ್ ಮಾಹಿತಿ ನೀಡಿದ್ದಾರೆ. ಅಲ್ಲದೆ, ಉಕ್ರೇನ್​​ನಲ್ಲಿ ಸಿಲುಕಿರುವ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿನಿ, ಉಕ್ರೇನ್​ನಲ್ಲಿರುವ ಮುಂಡಗೋಡ ಮೂಲದ ವಿದ್ಯಾರ್ಥಿನಿ ಸ್ನೇಹಾ ಉಕ್ರೇನ್​ನಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಆದಷ್ಟು ಬೇಗ ಭಾರತಕ್ಕೆ ಕರೆಸಿಕೊಳ್ಳಿ ಎಂದು ಸ್ನೇಹಾ ಮನವಿ ಮಾಡಿದ್ದಾರೆ. ನಮ್ಮ ಸುತ್ತಮುತ್ತ ಏರಿಯಾದಲ್ಲಿ ಬಾಂಬ್ ಸ್ಫೋಟವಾಗುತ್ತಿವೆ. ಆದಷ್ಟು ಬೇಗ ನಮ್ಮನ್ನು ಕರೆಸಿಕೊಳ್ಳಿ ಎಂದು ಸ್ನೇಹಾ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Ukraine Updates: ಉಕ್ರೇನ್ ದೇಶದ​ ನೆರವಿಗೆ ನಿಂತ ಅಮೆರಿಕ, ಭಾರತದ 219 ವಿದ್ಯಾರ್ಥಿಗಳಿದ್ದ ವಿಮಾನ ಮುಂಬೈಗೆ ಆಗಮನ

ಇದನ್ನೂ ಓದಿ: Russia-Ukraine War: ಮದುವೆಯಾದ ಮರುದಿನವೇ ಉಕ್ರೇನ್ ಸೇನೆ ಸೇರಿದ ದಂಪತಿ; ಫೋಟೋಗಳು ವೈರಲ್

Published On - 10:18 pm, Sat, 26 February 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ