AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಜಟಾಪಟಿ; ಚುನಾಯಿತರಲ್ಲದ ವ್ಯಕ್ತಿಯ ಅಭಿಪ್ರಾಯಗಳಿಗೆ ಅವಕಾಶವಿಲ್ಲ ಎಂದ ಸಚಿವ ತ್ಯಾಗರಾಜನ್

ಜ್ಯಪಾಲರ ಪಾತ್ರವು ಹೆಚ್ಚಿನ ಘನತೆ ಮತ್ತು ಅತ್ಯಂತ ಸಜ್ಜನಿಕೆಯನ್ನು ಹೊಂದಿರಬೇಕು ಎಂದು ನಾನು ಹೇಳುತ್ತೇನೆ. ರಾಜ್ಯಪಾಲರ ಕಚೇರಿಯಲ್ಲಿ ಕುಳಿತಿರುವ ಜನರು ಸಂವಿಧಾನವನ್ನು ಮೀರಿದ ಅಥವಾ ತಮ್ಮದೇ ಆದ ಅಭಿಪ್ರಾಯವನ್ನು ಹೊಂದಿರುವ...

ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಜಟಾಪಟಿ; ಚುನಾಯಿತರಲ್ಲದ ವ್ಯಕ್ತಿಯ ಅಭಿಪ್ರಾಯಗಳಿಗೆ ಅವಕಾಶವಿಲ್ಲ ಎಂದ ಸಚಿವ ತ್ಯಾಗರಾಜನ್
ಪಿ ತ್ಯಾಗ ರಾಜನ್
TV9 Web
| Edited By: |

Updated on:Nov 10, 2022 | 7:58 PM

Share

ದೆಹಲಿ: ಬಿಜೆಪಿಯೇತರ ರಾಜ್ಯಗಳಲ್ಲಿನ ಸರ್ಕಾರಗಳು ಗವರ್ನರ್‌ಗಳಿಂದ (Governor) ಹೆಚ್ಚಿನ ತೊಂದರೆ ಅನುಭವಿಸುತ್ತಿವೆ ಎಂದು ತಮಿಳುನಾಡು(Tamil nadu) ಹಣಕಾಸು ಸಚಿವ ಪಿ ತ್ಯಾಗ ರಾಜನ್(P Thiaga Rajan) “ಚುನಾಯಿತರಾಗದ ವ್ಯಕ್ತಿಗಳ” “ಯೋಗ್ಯವಲ್ಲದ” ನಡವಳಿಕೆಯನ್ನು ಪ್ರಶ್ನಿಸಿದ್ದಾರೆ. ನಮ್ಮ ದೇಶದ ಸಂಸ್ಥಾಪಕರ ಅಥವಾ ಸಂವಿಧಾನದ ರಚನೆಕಾರರ ದೃಷ್ಟಿಯಲ್ಲಿ ಎಲ್ಲಿಯೂ ಕೇಂದ್ರ ಸರ್ಕಾರದ ಸಲಹೆಯ ಮೇರೆಗೆ ನೇಮಕಗೊಂಡ ಚುನಾಯಿತರಲ್ಲದ ವ್ಯಕ್ತಿಯೊಬ್ಬನ ವೈಯಕ್ತಿಕ ಅಭಿಪ್ರಾಯಗಳಿಗೆ ಅವಕಾಶವಿಲ್ಲ ಎಂದು ಡಾ ತ್ಯಾಗ ರಾಜನ್ ಎನ್​ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. “ರಾಜ್ಯಪಾಲರ ಪಾತ್ರವು ಹೆಚ್ಚಿನ ಘನತೆ ಮತ್ತು ಅತ್ಯಂತ ಸಜ್ಜನಿಕೆಯನ್ನು ಹೊಂದಿರಬೇಕು ಎಂದು ನಾನು ಹೇಳುತ್ತೇನೆ. ರಾಜ್ಯಪಾಲರ ಕಚೇರಿಯಲ್ಲಿ ಕುಳಿತಿರುವ ಜನರು ಸಂವಿಧಾನವನ್ನು ಮೀರಿದ ಅಥವಾ ತಮ್ಮದೇ ಆದ ಅಭಿಪ್ರಾಯವನ್ನು ಹೊಂದಿರುವ ವಿಷಯಗಳ ಬಗ್ಗೆ ತಾತ್ವಿಕ ದೃಷ್ಟಿಕೋನಗಳನ್ನು ಪ್ರತಿಪಾದಿಸಲು ಪ್ರಾರಂಭಿಸುವುದು ತುಂಬಾ ಅಸಹಜವಾಗಿದೆ. ಸಮಾಜವನ್ನು ಹೇಗೆ ನಡೆಸಬೇಕು, ಇತ್ಯಾದಿ. ಅವುಗಳು ಬೀದಿ ಮಟ್ಟದ ರಾಜಕಾರಣಿಗಳಾಗಿ ನೀವು ಮಾಡಬಹುದಾದ ಕೆಲಸಗಳು. ಇವುಗಳು ನೀವು ಮಾಡಬೇಕಾದ ಕೆಲಸಗಳಲ್ಲ, ದೇಶದ ಎರಡನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ಅತಿದೊಡ್ಡ ಮತ್ತು ಅತ್ಯಂತ ಶ್ರಮಶೀಲ ರಾಜ್ಯಗಳ ಗವರ್ನರ್ ಆಗಿ ಕುಳಿತುಕೊಂಡಿದ್ದೀರಿ. ಆ ಪಾತ್ರಕ್ಕೆ ಇದು ಸೂಕ್ತವಲ್ಲ ಡಾ ತ್ಯಾಗ ರಾಜನ್ ಹೇಳಿದ್ದಾರೆ.

ಬಿಜೆಪಿಯೇತರ ಆಡಳಿತವಿರುವ ಮೂರು ದಕ್ಷಿಣ ರಾಜ್ಯಗಳಲ್ಲಿ ಗವರ್ನರ್‌ಗಳು ಮತ್ತು ಸರ್ಕಾರಗಳ ನಡುವಿನ ಘರ್ಷಣೆ ಉಲ್ಬಣಗೊಂಡ ಒಂದು ದಿನದ ನಂತರ ಸಚಿವರ ಈ ಹೇಳಿಕೆ ಬಂದಿದೆ. ತಮಿಳುನಾಡು ಸರ್ಕಾರ ರಾಜ್ಯಪಾಲ ಆರ್‌ಎನ್ ರವಿಯನ್ನು ಹಿಂಪಡೆಯಲು ಕೋರಿದೆ. ಇತ್ತ ಕೇರಳವು ಅಲ್ಲಿನ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿ ಸ್ಥಾನದಿಂದ ತೆರವು ಮಾಡಲು ವಿಶೇಷ ಸುಗ್ರೀವಾಜ್ಞೆಯನ್ನು ಪ್ರಸ್ತಾಪಿಸಿದೆ. ತೆಲಂಗಾಣದಲ್ಲಿ ತಮಿಳಿಸೈ ಸೌಂದರರಾಜನ್ ತನ್ನ ಫೋನ್ ಟ್ಯಾಪ್ ಆಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಡಿಎಂಕೆ ಸರ್ಕಾರವು ಅಧ್ಯಕ್ಷ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು, ರವಿ ಅವರನ್ನು ವಜಾ ಮಾಡುವಂತೆ ಕೋರಿದೆ., ಇತರರ ಜೊತೆಗೆ ಅವರು “ಕೋಮು ದ್ವೇಷವನ್ನು ಪ್ರಚೋದಿಸಿದ್ದಾರೆ” ಎಂದು ಡಿಎಂಕೆ ಆರೋಪಿಸಿದೆ. ಆಡಳಿತ ಮೈತ್ರಿಕೂಟದ ಸಂಸತ್ತಿನ ಸದಸ್ಯರು ಸಹಿ ಮಾಡಿದ ಅರ್ಜಿಯಲ್ಲಿ ರಾಜ್ಯಪಾಲರ ಕಚೇರಿಯಿಂದ ಸ್ಥಗಿತಗೊಂಡಿರುವ ಮಸೂದೆಗಳನ್ನು ಪಟ್ಟಿ ಮಾಡಲಾಗಿದೆ. ಇದರಲ್ಲಿ ರಾಜ್ಯಕ್ಕೆ NEET ವೈದ್ಯಕೀಯ ಪರೀಕ್ಷೆಯ ವ್ಯಾಪ್ತಿಯಿಂದ ವಿನಾಯಿತಿ ಕೋರಿ ಮತ್ತು ಒಪ್ಪಿಗೆ ವಿಳಂಬವನ್ನು ಪ್ರಶ್ನಿಸಲಾಗಿದೆ.

ಇವೆಲ್ಲವೂ ಬಿಜೆಪಿಯ ಸರ್ಕಾರವಲ್ಲದ ರಾಜ್ಯಗಳು ಮತ್ತು ಬಿಜೆಪಿಯು ಅತ್ಯಂತ ಕಡಿಮೆ ಚುನಾವಣಾ ಉಪಸ್ಥಿತಿಯನ್ನು ಹೊಂದಿರುವ ರಾಜ್ಯಗಳು ಎಂಬುದನ್ನು ನಾನು ಗಮನಿಸಬೇಕಾದ ಸಂಗತಿ ಎಂದು ಡಾ ತ್ಯಾಗ ರಾಜನ್ ಹೇಳಿದರು. ಬಿಜೆಪಿಯ ಹೊರತಾಗಿ ಇತರ ಪಕ್ಷಗಳು ನಡೆಸುತ್ತಿರುವ ಸರ್ಕಾರಗಳು ಬಿಜೆಪಿಯಿಂದ ನೇಮಕಗೊಂಡ ರಾಜ್ಯಪಾಲರಿಂದ ಹೆಚ್ಚಿನ ಹಸ್ತಕ್ಷೇಪ ಅಥವಾ ಹೆಚ್ಚಿನ ಅಡೆತಡೆಗಳನ್ನು ಎದುರಿಸುತ್ತಿವೆ ಎಂದು ಅವರು ಹೇಳಿದರು.

Published On - 7:57 pm, Thu, 10 November 22

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ