ಒಡಿಶಾ: ಅಮೃತ ಕಲಶ ಯಾತ್ರೆಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭಾಗಿ

ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಧರ್ಮೇಂದ್ರ ಪ್ರಧಾನ್ , ಇಂದು ಅದೃಷ್ಟದ ದಿನ ಪ್ರಧಾನಿ ಮೋದಿಯವರ ಕರೆಯ ಮೇರೆಗೆ ಧೀರಯೋಧರ ಹಳ್ಳಿಗಳು, ನಗರಗಳು ಮತ್ತು ಪಂಚಾಯತ್‌ಗಳಿಂದ ಮಣ್ಣು ಸಂಗ್ರಹಿಸುವ ಅಭಿಯಾನವು ಅಂತಿಮ ಹಂತಕ್ಕೆ ತಲುಪಿದೆ. ಒಡಿಶಾದ 13250 ಹಳ್ಳಿಗಳಿಂದ ಮಣ್ಣು ಸಂಗ್ರಹಿಸಿದ್ದೇವೆ. ಸ್ವಾತಂತ್ರ್ಯದಿಂದ ಇಲ್ಲಿಯವರೆಗೆ ಪ್ರಾಣ ತ್ಯಾಗ ಮಾಡಿದ ಎಲ್ಲರ ಗ್ರಾಮಗಳನ್ನು ತಲುಪಿದೆವು

ಒಡಿಶಾ: ಅಮೃತ ಕಲಶ ಯಾತ್ರೆಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭಾಗಿ
ಧರ್ಮೇಂದ್ರ ಪ್ರಧಾನ್
Follow us
|

Updated on: Oct 28, 2023 | 3:52 PM

ಭುವನೇಶ್ವರ ಅಕ್ಟೋಬರ್ 28: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ಶನಿವಾರ ಭುವನೇಶ್ವರದಲ್ಲಿ (Bhubaneswar) ‘ಅಮೃತ ಕಲಶ ಯಾತ್ರೆ’ಯ (Amrit Kalash Yatra) ಅಂಗವಾಗಿ ‘ಪಾದಯಾತ್ರೆ’ಯಲ್ಲಿ ಭಾಗವಹಿಸಿದರು. ಬಿಜೆಪಿ ಅಧ್ಯಕ್ಷ ಮನಮೋಹನ್ ಸಮಾಲ್ ಮತ್ತು ಪಕ್ಷದ ಸಂಸದ ಅಪರಾಜಿತಾ ಸಾರಂಗಿ ಕೂಡ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಪಕ್ಷದ ಕೇಂದ್ರ ಕಚೇರಿಯಿಂದ ಆರಂಭವಾದ ಯಾತ್ರೆ ಭುವನೇಶ್ವರ ರೈಲು ನಿಲ್ದಾಣದಲ್ಲಿ ಕೊನೆಗೊಳ್ಳಲಿದೆ.

‘ಮೇರಿ ಮಾಟಿ ಮೇರಾ ದೇಶ್’ (MMMD) ಅಭಿಯಾನದ ಭಾಗವಾಗಿ, ದೇಶದ ಮೂಲೆ ಮೂಲೆಗಳಿಂದ 7,500 ಕಲಶಗಳಲ್ಲಿ ಮಣ್ಣನ್ನು ಹೊತ್ತ ‘ಅಮೃತ ಕಲಶ ಯಾತ್ರೆ’ ಅಕ್ಟೋಬರ್ 28 ರಿಂದ 30 ರವರೆಗೆ ರಾಷ್ಟ್ರ ರಾಜಧಾನಿಯನ್ನು ತಲುಪುವ ನಿರೀಕ್ಷೆಯಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಧರ್ಮೇಂದ್ರ ಪ್ರಧಾನ್ , ಇಂದು ಅದೃಷ್ಟದ ದಿನ ಪ್ರಧಾನಿ ಮೋದಿಯವರ ಕರೆಯ ಮೇರೆಗೆ ಧೀರಯೋಧರ ಹಳ್ಳಿಗಳು, ನಗರಗಳು ಮತ್ತು ಪಂಚಾಯತ್‌ಗಳಿಂದ ಮಣ್ಣು ಸಂಗ್ರಹಿಸುವ ಅಭಿಯಾನವು ಅಂತಿಮ ಹಂತಕ್ಕೆ ತಲುಪಿದೆ. ಒಡಿಶಾದ 13250 ಹಳ್ಳಿಗಳಿಂದ ಮಣ್ಣು ಸಂಗ್ರಹಿಸಿದ್ದೇವೆ. ಸ್ವಾತಂತ್ರ್ಯದಿಂದ ಇಲ್ಲಿಯವರೆಗೆ ಪ್ರಾಣ ತ್ಯಾಗ ಮಾಡಿದ ಎಲ್ಲರ ಗ್ರಾಮಗಳನ್ನು ತಲುಪಿದೆವು.ಇಂದು 1400 ಪ್ರತಿನಿಧಿಗಳು ದೆಹಲಿಗೆ ತೆರಳಿದ್ದಾರೆ. ಅಮೃತ ಮಹೋತ್ಸವದ ಸಮಾಪ್ತಿಯಲ್ಲಿ ಅಮೃತ ವಾಟಿಕಾ ನಿರ್ಮಿಸಲಾಗುತ್ತದೆ ಎಂದು ಹೇಳಿದ್ದಾರೆ.

ರಾಷ್ಟ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ ನಮ್ಮ ಧೀರರ  ಗೌರವಾರ್ಥ ಅಮೃತ ವಾಟಿಕಾ ರಚನೆಗೆ ದೇಶದ ಮೂಲೆ ಮೂಲೆಗಳಿಂದ ಮಣ್ಣನ್ನು ಬಳಸಲಾಗುವುದು.

ಇದಕ್ಕೂ ಮುನ್ನ ಶುಕ್ರವಾರದಂದು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಅಭಿಯಾನದ ಅಡಿಯಲ್ಲಿ ಗುವಾಹಟಿ ರೈಲು ನಿಲ್ದಾಣದಲ್ಲಿ ಮಣ್ಣು ತುಂಬಿದ ಕಲಶಗಳನ್ನು ಹೊತ್ತ ದೆಹಲಿಗೆ ಹೋಗುವ ರಾಜಧಾನಿ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದರು. ಅಸ್ಸಾಂನ ವಿವಿಧ ಭಾಗಗಳಿಂದ ಮಣ್ಣನ್ನು ಹೊಂದಿರುವ 270 ಕಲಶಗಳು ಶನಿವಾರ ರಾಷ್ಟ್ರ ರಾಜಧಾನಿಯನ್ನು ತಲುಪಲಿವೆ.

ಮಣ್ಣನ್ನು ಹೊತ್ತ 24 ಜನರನ್ನು ಕರಾವಳಿ ರಾಜ್ಯದಿಂದ ರಾಷ್ಟ್ರ ರಾಜಧಾನಿಗೆ ಕಳುಹಿಸಲಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಶುಕ್ರವಾರ ಹೇಳಿದ್ದಾರೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಶುಕ್ರವಾರ ಅಹಮದಾಬಾದ್‌ನ ಸಬರಮತಿ ರೈಲು ನಿಲ್ದಾಣದಿಂದ ‘ಅಮೃತ ಕಲಶ ಯಾತ್ರೆ’ ರೈಲಿಗೆ ಧ್ವಜಾರೋಹಣ ಮಾಡಿದರು.

ಇದನ್ನೂ ಓದಿಆಜಾದಿ ಕಾ ಅಮೃತ್ ಮಹೋತ್ಸವ್ ಸಮಾರೋಪದೊಂದಿಗೆ ಮೇರಿ ಮಾಟಿ ಮೇರಾ ದೇಶ್ ಅಭಿಯಾನಕ್ಕೆ ಚಾಲನೆ; ದೇಶದ ಹುತಾತ್ಮರಿಗೆ ನಮನ

‘ಏಕ ಭಾರತ ಶ್ರೇಷ್ಠ ಭಾರತ’ದ ಭವ್ಯ ಸಂಕೇತವಾಗಿ ರೂಪಿಸಲಾಗಿರುವ ‘ಅಮೃತ ವಾಟಿಕಾ’ (ಉದ್ಯಾನ) ನಿರ್ಮಿಸಲು ದೇಶದ 6 ಲಕ್ಷಕ್ಕೂ ಹೆಚ್ಚು ಹಳ್ಳಿಗಳಲ್ಲಿ 25 ಕೋಟಿ ಮನೆಗಳಿಂದ ಮಣ್ಣು ಸಂಗ್ರಹಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಉದ್ಯಾನವನ್ನು ನಿರ್ಮಾಣವಾಗಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ