AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಣಿಪುರ ಹಿಂಸಾಚಾರ: ರಾಹುಲ್ ಗಾಂಧಿ ಆರೋಪ ವಿರುದ್ಧ ಗುಡುಗಿದ ಸ್ಮೃತಿ ಇರಾನಿ

ಸ್ಮೃತಿ ಇರಾನಿ ಅವರು ಪ್ರತಿಕ್ರಿಯೆಯ ನಡುವೆಯೇ  ರಾಹುಲ್ ಗಾಂಧಿ ಅವರು ಸಂಸತ್​​ನಿಂದ ಹೊರಗೆ ಹೋದಾಗ, ಮಣಿಪುರದ ಬಗ್ಗೆ ಚರ್ಚೆಯಿಂದ ಸರ್ಕಾರ ಓಡಿಹೋಗಿಲ್ಲ, ಆದರೆ ಪ್ರತಿಪಕ್ಷಗಳು ಓಡಿಹೋದವು ಎಂದು ಅವರು ಹೇಳಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಣಿಪುರ ವಿಷಯದ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧವಾಗಿದೆ ಎಂದು ಪದೇ ಪದೇ ಹೇಳಿದರು. ಆದರೆ ಪ್ರತಿಪಕ್ಷಗಳು ಅದರಿಂದ ಓಡಿಹೋದವು ಎಂದಿದ್ದಾರೆ ಸ್ಮೃತಿ.

ಮಣಿಪುರ ಹಿಂಸಾಚಾರ: ರಾಹುಲ್ ಗಾಂಧಿ ಆರೋಪ ವಿರುದ್ಧ ಗುಡುಗಿದ ಸ್ಮೃತಿ ಇರಾನಿ
ಸ್ಮೃತಿ ಇರಾನಿ
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on:Aug 10, 2023 | 12:17 PM

Share

ದೆಹಲಿ ಆಗಸ್ಟ್ 09: ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಅವರು ಎನ್‌ಡಿಎ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ (Rahul Gandhi) ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಸಂಸತ್​​ನಲ್ಲಿ ಮೊದಲ ಬಾರಿ ಒಬ್ಬ ಸಂಸದ ‘ಭಾರತ ಮಾತೆಯ ಸಾವಿನ ಬಗ್ಗೆ ಮಾತನಾಡಿದ್ದಾರೆ. ಅವರ ಮೈತ್ರಿಕೂಟದ ಸದಸ್ಯರು ಇದಕ್ಕೆ ಚಪ್ಪಾಳೆ ತಟ್ಟಿದ್ದಾರೆ. ಮಣಿಪುರದಲ್ಲಿ ತನ್ನ ತಾಯಿಯನ್ನು ಕೊಲ್ಲಲಾಗಿದೆ. ಎನ್‌ಡಿಎ ಸರ್ಕಾರ ಮಣಿಪುರವನ್ನು (Manipur) ಇಬ್ಭಾಗ ಮಾಡಿದೆ ಎಂದು ರಾಹುಲ್ ಹೇಳಿದ್ದಾರೆ. ನೀವು ಭಾರತವಲ್ಲ, ಭಾರತ ಭ್ರಷ್ಟವಾಗಿಲ್ಲ. ಭಾರತವು ಅರ್ಹತೆಯನ್ನು ನಂಬುತ್ತದೆ ರಾಜವಂಶದಲ್ಲಿ ಅಲ್ಲ. ಇಂದು ಎಲ್ಲಾ ದಿನಗಳು ನಿಮ್ಮಂತಹವರು ಬ್ರಿಟಿಷರಿಗೆ ಹೇಳಿದ್ದನ್ನು ನೆನಪಿಟ್ಟುಕೊಳ್ಳಬೇಕು – ಭಾರತ ಬಿಟ್ಟು ತೊಲಗಿ, ಭ್ರಷ್ಟಾಚಾರ ಭಾರತ ಬಿಟ್ಟು ತೊಲಗಲಿ, ವಂಶಾಡಳಿತ ಭಾರತ ಬಿಟ್ಟು ತೊಲಗಲಿ. ಮೆರಿಟ್ ಈಗ ಭಾರತದಲ್ಲಿ ಸ್ಥಾನ ಪಡೆಯುತ್ತದೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.

1984 ರ ಗಲಭೆಗಳು, ತುರ್ತು ಪರಿಸ್ಥಿತಿ ಮತ್ತು ಗಿರಿಜಾ ಟಿಕೂ ಅವರ ಹತ್ಯೆಯನ್ನು ಉಲ್ಲೇಖಿಸಿದ ಸ್ಮೃತಿ ಇರಾನಿ, ಇದು ರಕ್ತದಲ್ಲಿ ನೆನೆದ ಕಾಂಗ್ರೆಸ್ ಇತಿಹಾಸ ಎಂದು ಹೇಳಿದರು. ಗಿರಿಜಾ ಟಿಕೂ ಎಂಬ ಕಾಶ್ಮೀರಿ ಪಂಡಿತರನ್ನು ಕಾಶ್ಮೀರದಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದನ್ನು ಸಿನಿಮಾದಲ್ಲಿ ತೋರಿಸಿದಾಗ ಕಾಂಗ್ರೆಸ್ಸಿನ ಕೆಲ ಮುಖಂಡರು ಅಪಪ್ರಚಾರ ಎಂದರು. ಅದೇ ಪಕ್ಷದ ನಾಯಕರು ಇಂದು ಮಣಿಪುರದ ಬಗ್ಗೆ ಮಾತನಾಡುತ್ತಿದ್ದಾರೆ.

ತಾನು ಕೈಗೊಂಡಿದ್ದ ಯಾತ್ರೆ ಬಗ್ಗೆ ರಾಹುಲ್ ಸದನದಲ್ಲಿ ಹೇಳಿದ್ದಾರೆ. ಯಾತ್ರೆ ವೇಳೆ 370 ನೇ ವಿಧಿಯನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡಿದ್ದರು. ದೇಶದಲ್ಲಿ ಆರ್ಟಿಕಲ್ 370 ಅನ್ನು ಮರುಸ್ಥಾಪಿಸುವುದಿಲ್ಲ ಅಥವಾ ಕಾಶ್ಮೀರಿ ಪಂಡಿತರನ್ನು “ರಲಿಬ್ ಗಾಲಿಬ್ ಚಾಲಿಬ್ (ಮತಾಂತರ ಮಾಡಿ, ಸಾಯಿರಿ ಅಥವಾ ಬಿಟ್ಟುಬಿಡಿ)” ಎಂದು ಬೆದರಿಕೆ ಹಾಕುವವರನ್ನು ಉಳಿಸುವುದಿಲ್ಲ” ಎಂದು ಸದನದಿಂದ ಓಡಿ ಹೋದ ಆ ವ್ಯಕ್ತಿಯಲ್ಲಿ ನಾನು ಹೇಳುತ್ತಿದ್ದೇನೆ ಎಂದಿದ್ದಾರೆ ಸ್ಮೃತಿ ಇರಾನಿ

ಅವರು ಓಡಿಹೋದರು, ನಾವು ಹಾಗೆ ಮಾಡಿಲ್ಲ

ಸ್ಮೃತಿ ಇರಾನಿ ಅವರು ಪ್ರತಿಕ್ರಿಯೆಯ ನಡುವೆಯೇ  ರಾಹುಲ್ ಗಾಂಧಿ ಅವರು ಸಂಸತ್​​ನಿಂದ ಹೊರಗೆ ಹೋದಾಗ, ಮಣಿಪುರದ ಬಗ್ಗೆ ಚರ್ಚೆಯಿಂದ ಸರ್ಕಾರವು ಓಡಿಹೋಗಿಲ್ಲ, ಆದರೆ ಪ್ರತಿಪಕ್ಷಗಳು ಓಡಿಹೋದವು ಎಂದು ಅವರು ಹೇಳಿದ್ದಾರೆ.ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಣಿಪುರ ವಿಷಯದ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧವಾಗಿದೆ ಎಂದು ಪದೇ ಪದೇ ಹೇಳಿದರು, ಪ್ರತಿಪಕ್ಷಗಳು ಅದರಿಂದ ಓಡಿಹೋದವು. ನಾವು ಈ ರೀತಿ ಮಾಡಲಿಲ್ಲ ಎಂದು ಸ್ಮೃತಿ ಇರಾನಿ ಹೇಳಿದರು.

ಇದನ್ನೂ ಓದಿ:  ಭಾರತ ಜನರ ಧ್ವನಿ, ಈ ಧ್ವನಿಗಳನ್ನು ಆಲಿಸಲು ನಾವು ಅಹಂ, ದ್ವೇಷಗಳನ್ನು ಬಿಟ್ಟುಬಿಡಬೇಕು: ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾತು

‘ರಾಹುಲ್ ಗಾಂಧಿ, ಬೆಂಕಿಪೆಟ್ಟಿಗೆಯನ್ನು ಹುಡುಕಲು ಎಲ್ಲಿಗೆ ಹೋಗಿದ್ದೀರಿ?

ರಾಹುಲ್ ಗಾಂಧಿಯವರ ವಿದೇಶಿ ಭೇಟಿಗಳ ಬಗ್ಗೆ ಮಾತನಾಡಿದ ಸ್ಮೃತಿ ಇರಾನಿ, ರಾಹುಲ್ ಗಾಂಧಿ ಅವರು ದೇಶದಾದ್ಯಂತ ಸೀಮೆಎಣ್ಣೆ ಸುರಿದಿದ್ದಾರೆ ಎಂದು ಹೇಳಿದರು. ರಾಹುಲ್ ಗಾಂಧಿಯವರೇ, ಬೆಂಕಿಪೆಟ್ಟಿಗೆಯನ್ನು ಹುಡುಕಲು ನೀವು ಎಲ್ಲಿಗೆ ಹೋಗಿದ್ದೀರಿ? ನೀವು ಅಮೇರಿಕಾಕ್ಕೆ ಹೋಗಲಿಲ್ಲವೇ? ಅದಾನಿಗೆ ಕಾಂಗ್ರೆಸ್ ಏಕೆ ಯೋಜನೆಗಳನ್ನು ನೀಡಿದೆ ಎಂದು ಕೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:41 pm, Wed, 9 August 23

Follow Us
Rashmi Kallakatta
Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ