AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯ ರೈಲ್ವೆ ಹೊಸ ಪ್ರಯತ್ನ: ರಿಸರ್ವೇಶನ್ ಇಲ್ಲದ ಎಕ್ಸ್​ಪ್ರೆಸ್ ರೈಲುಗಳ ಸಂಚಾರ

ದೇಶದಲ್ಲಿ ಕೊರೊನಾ ಪಿಡುಗು ತಗ್ಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಯು ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವ ರೈಲು ಸಂಚಾರವನ್ನು ಹಂತಹಂತವಾಗಿ ಆರಂಭಿಸಿದೆ. ಉತ್ತರ ರೈಲ್ವೆಯು ರಿಸರ್ವೇಶನ್ ಇಲ್ಲದ ಮೈಲ್ ಮತ್ತು ಎಕ್ಸ್​ಪ್ರೆಸ್​ ರೈಲುಗಳನ್ನು ಆರಂಭಿಸುವುದಾಗಿ ಘೋಷಿಸಿದೆ.

ಭಾರತೀಯ ರೈಲ್ವೆ ಹೊಸ ಪ್ರಯತ್ನ: ರಿಸರ್ವೇಶನ್ ಇಲ್ಲದ ಎಕ್ಸ್​ಪ್ರೆಸ್ ರೈಲುಗಳ ಸಂಚಾರ
ಸಂಗ್ರಹ ಚಿತ್ರ
TV9 Web
| Edited By: |

Updated on: Sep 29, 2021 | 5:42 PM

Share

ದೆಹಲಿ: ದೇಶದಲ್ಲಿ ಕೊರೊನಾ ಪಿಡುಗು ತಗ್ಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಯು ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವ ರೈಲು ಸಂಚಾರವನ್ನು ಹಂತಹಂತವಾಗಿ ಆರಂಭಿಸಿದೆ. ಉತ್ತರ ರೈಲ್ವೆಯು ರಿಸರ್ವೇಶನ್ ಇಲ್ಲದ ಮೈಲ್ ಮತ್ತು ಎಕ್ಸ್​ಪ್ರೆಸ್​ ರೈಲುಗಳನ್ನು ಆರಂಭಿಸುವುದಾಗಿ ಘೋಷಿಸಿದೆ. ಶಾಮ್ಲಿ, ದೆಹಲಿ, ಶದಾರಾ, ಪ್ರಯಾಗ್​ರಾಜ್ ಸಂಗಮ್, ಫೈಜಾಬಾದ್ ಮತ್ತು ಜೌನ್​ಪುರ್ ಮಾರ್ಗಗಳಲ್ಲಿ ಹೊಸ ರೈಲುಗಳು ಅಕ್ಟೋಬರ್ 1ರಿಂದ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ‘ಭಾನುವಾರ ಹೊರತುಪಡಿಸಿ ಅಕ್ಟೋಬರ್ 1ರಿಂದ ಪ್ರತಿದಿನ ಅನ್​ರಿಸರ್ವ್​ಡ್ ಮೈಲ್ ಮತ್ತು ಎಕ್ಸ್​ಪ್ರೆಸ್ ರೈಲುಗಳು ಸಂಚರಿಸಲಿವೆ’ ಎಂದು ರೈಲ್ವೆ ಇಲಾಖೆ ವಕ್ತಾರ ದೀಪಕ್ ಕುಮಾರ್ ಹೇಳಿದ್ದಾರೆ.

ರೈಲುಗಳ ವಿವರ ಶಾಮ್ಲಿ-ದೆಹಲಿ ಶಾಹ್​ದಾರಾ ಸ್ಪೆಷಲ್ ಟ್ರೇನ್, ಪ್ರಯಾಗ್​ರಾಜ್ ಸಂಗಮ್-ಫೈಜಾಬಾದ್-ಪ್ರಯಾಗ್​ರಾಜ್ ಸಂಗಮ್ ಅನ್​ರಿಸರ್ವಡ್​ ಎಕ್ಸ್​ಪ್ರೆಸ್​, ಪ್ರಯಾಗ್​ರಾಜ್ ಸಂಗಮ್-ಜೌನ್​ಪುರ್ ಅನ್​ರಿಸರ್ವಡ್ ಮೈಲ್ ರೈಲುಗಳ ಸಂಚಾರ ಅಕ್ಟೋಬರ್ 1ರಿಂದ ಆರಂಭವಾಗಲಿದೆ.

ಚಾರ್​ಧಾಮ್​ಗೆ ಶೀಘ್ರ ಸುಲಭ ಸಂಪರ್ಕ ಹೃಷಿಕೇಶ್-ಕರ್ಣಪ್ರಯಾಗ್ ರೈಲು ಹಳಿ ಯೋಜನೆ ಶೀಘ್ರ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವ ದರ್ಶನಾ ಜಾರ್ದೋಶ್ ಹೇಳಿದ್ದಾರೆ. ಉತ್ತರಾಖಂಡದ ಹೃಷಿಕೇಶ್-ಕರ್ಣಪ್ರಯಾಗ್ ರೈಲ್ವೆ ಮಾರ್ಗದ ಪ್ರಗತಿ ಪರಿಶೀಲನೆ ಮಾಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಈ ಮಾರ್ಗದಲ್ಲಿ 15.1 ಕಿಮೀ ಅಂತರದ ಸುರಂಗ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಹೃಷಿಕೇಶ್-ಕರ್ಣಪ್ರಯಾಗ್ ರೈಲು ಮಾರ್ಗವು 125 ಕಿಮೀ ದೂರದಲ್ಲಿ ಸಾಗಿ ಹೋಗುತ್ತದೆ. ಈ ಮಾರ್ಗದಲ್ಲಿ ಶ್ರೀನಗರ, ರುದ್ರಪ್ರಯಾಗ, ದೇವಪ್ರಯಾಗ, ಕರ್ಣಪ್ರಯಾಗ, ಗೌಚಾರ್, ಡೆಹ್ರಾಡೂನ್, ಪೌರಿ ಗರ್​ವಾಲ್, ತೆಹ್ರಿ ಗರ್​ವಾಲ್, ಚಮೋಲಿ ನಿಲ್ದಾಣಗಳು ಬರುತ್ತವೆ.

(Unreserved Trains to Start from October 1 says Indian Railways Spokesperson)

ಇದನ್ನೂ ಓದಿ: ಅದ್ದೂರಿಯಾಗಿ ಆರಂಭವಾದ 6 ತಿಂಗಳಿಗೆ ನಿಂತ ಕೆಂಪೇಗೌಡ ಏರ್ಪೋರ್ಟ್ ರೈಲು; ಲಾಕ್​ಡೌನ್​ ಮುಗಿದರೂ ಸಂಚಾರ ಸ್ಥಗಿತ

ಇದನ್ನೂ ಓದಿ: Shocking Video: ಚಲಿಸುತ್ತಿರುವ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆ

Follow Us
ಮುಡಾ ಕೇಸ್: ಸಿದ್ದರಾಮಯ್ಯ, ಪತ್ನಿ ಪಾರ್ವತಿಗೆ ಹೈಕೋರ್ಟ್​ ತುರ್ತು ನೋಟಿಸ್!
ಮುಡಾ ಕೇಸ್: ಸಿದ್ದರಾಮಯ್ಯ, ಪತ್ನಿ ಪಾರ್ವತಿಗೆ ಹೈಕೋರ್ಟ್​ ತುರ್ತು ನೋಟಿಸ್!
ಎ ಖಾತಾದಿಂದ ಬಿ ಖಾತಾಗೆ ಕನ್ವರ್ಷನ್: ಬಿಗ್ ಅಪ್ಡೇಟ್ ನೀಡಿದ ಡಿಕೆ ಶಿವಕುಮಾರ್
ಎ ಖಾತಾದಿಂದ ಬಿ ಖಾತಾಗೆ ಕನ್ವರ್ಷನ್: ಬಿಗ್ ಅಪ್ಡೇಟ್ ನೀಡಿದ ಡಿಕೆ ಶಿವಕುಮಾರ್
ಸದನದಲ್ಲಿ ಡಿಕೆಶಿ-ಮುನಿರತ್ನ ನಡುವೆ ಮಾತಿನ ಕದನ
ಸದನದಲ್ಲಿ ಡಿಕೆಶಿ-ಮುನಿರತ್ನ ನಡುವೆ ಮಾತಿನ ಕದನ
ಚಾಕಲೇಟ್ ನೀಡಿ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ ಪ್ರಾಧ್ಯಾಪಕ
ಚಾಕಲೇಟ್ ನೀಡಿ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ ಪ್ರಾಧ್ಯಾಪಕ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಕ್ ಡ್ರಿಲ್: ಏನೆಲ್ಲ ಪರಿಶೀಲನೆ ನಡೀತು?
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಕ್ ಡ್ರಿಲ್: ಏನೆಲ್ಲ ಪರಿಶೀಲನೆ ನಡೀತು?
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಸಿಸಲು ಬರುವವರಿಗೆ ಹೊಸ ರೂಲ್ಸ್!
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಸಿಸಲು ಬರುವವರಿಗೆ ಹೊಸ ರೂಲ್ಸ್!
ಅದ್ದೂರಿ ರಾಮ ನವಮಿ ಆಚರಣೆಗೆ ಸಜ್ಜಾಗಿದೆ ಅಯೋಧ್ಯೆಯ ರಾಮ ಮಂದಿರ
ಅದ್ದೂರಿ ರಾಮ ನವಮಿ ಆಚರಣೆಗೆ ಸಜ್ಜಾಗಿದೆ ಅಯೋಧ್ಯೆಯ ರಾಮ ಮಂದಿರ
ದೇವಿಯನ್ನು ಹಾಲು ತುಪ್ಪದಿಂದ ಕಾಂಗ್ರೆಸ್‌ ಶುದ್ಧೀಕರಣ
ದೇವಿಯನ್ನು ಹಾಲು ತುಪ್ಪದಿಂದ ಕಾಂಗ್ರೆಸ್‌ ಶುದ್ಧೀಕರಣ
ಶ್ರೀರಾಮ ನವಮಿ ಹಿನ್ನೆಲೆ ಕೆ.ಆರ್. ಮಾರುಕಟ್ಟೆ ಫುಲ್​​ ರಶ್​​
ಶ್ರೀರಾಮ ನವಮಿ ಹಿನ್ನೆಲೆ ಕೆ.ಆರ್. ಮಾರುಕಟ್ಟೆ ಫುಲ್​​ ರಶ್​​
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಂದ ಸುತ್ತೂರು ಮಠಕ್ಕೆ ಭೇಟಿ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಂದ ಸುತ್ತೂರು ಮಠಕ್ಕೆ ಭೇಟಿ