AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಶೂರೆನ್ಸ್​ ಹಣಕ್ಕಾಗಿ ಇಡೀ ಕುಟುಂಬವನ್ನೇ ಕೊಂದ ವ್ಯಕ್ತಿ

ವ್ಯಕ್ತಿಯೊಬ್ಬ ವಿಮೆ ಹಣಕ್ಕಾಗಿ ಇಡೀ ಕುಟುಂಬವನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ತನ್ನ ತಂದೆ-ತಾಯಿ ಹಾಗೂ ಪತ್ನಿಯನ್ನು ಕೊಂದು ರಸ್ತೆ ಅಪಘಾತ ಎಂದು ಸುಳ್ಳು ಹೇಳಿ ಬಹು ವಿಮಾ ಕಂಪನಿಗಳಿಂದ ಕೋಟ್ಯಂತರ ರೂಪಾಯಿಗಳನ್ನು ಪಡೆದಿರುವ ಆತಂಕಕಾರಿ ಪ್ರಕರಣ ಬೆಳಕಿಗೆ ಬಂದಿದೆ. ವಿಮಾ ಕಂಪನಿಗಳಿಂದ 39 ಕೋಟಿ ರೂ. ಹಣ ಪಡೆಯಲು ಮನೆಯ ಎಲ್ಲರನ್ನೂ ಹತ್ಯೆ ಮಾಡಿದ್ದಾನೆ.

ಇನ್ಶೂರೆನ್ಸ್​ ಹಣಕ್ಕಾಗಿ ಇಡೀ ಕುಟುಂಬವನ್ನೇ ಕೊಂದ ವ್ಯಕ್ತಿ
ಕ್ರೈಂ
ನಯನಾ ರಾಜೀವ್
|

Updated on: Sep 29, 2025 | 8:46 PM

Share

ಲಕ್ನೋ, ಸೆಪ್ಟೆಂಬರ್ 29: ವ್ಯಕ್ತಿಯೊಬ್ಬ ವಿಮೆ ಹಣಕ್ಕಾಗಿ ಇಡೀ ಕುಟುಂಬ ಸದಸ್ಯರನ್ನೇ ಕೊಲೆ(Murder) ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ತನ್ನ ತಂದೆ-ತಾಯಿ ಹಾಗೂ ಪತ್ನಿಯನ್ನು ಕೊಂದು ರಸ್ತೆ ಅಪಘಾತ ಎಂದು ಸುಳ್ಳು ಹೇಳಿ ಬಹು ವಿಮಾ ಕಂಪನಿಗಳಿಂದ ಕೋಟ್ಯಂತರ ರೂಪಾಯಿಗಳನ್ನು ಪಡೆದಿರುವ ಆತಂಕಕಾರಿ ಪ್ರಕರಣ ಬೆಳಕಿಗೆ ಬಂದಿದೆ. ವಿಮಾ ಕಂಪನಿಗಳಿಂದ 39 ಕೋಟಿ ರೂ. ಹಣ ಪಡೆಯಲು ಮನೆಯ ಎಲ್ಲರನ್ನೂ ಹತ್ಯೆ ಮಾಡಿದ್ದಾನೆ.

ವಿಮಾ ಕಂಪನಿ ಏಜೆಂಟ್ ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಆರೋಪಿ ಮಗ ವಿಶಾಲ್ ಸಿಂಘಾಲ್ ಮತ್ತು ಅವನ ಸ್ನೇಹಿತ ಸತೀಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಯಾರಿಗೂ ಏನೂ ಅನುಮಾನ ಬರಲಿಲ್ಲ, ಆದರೆ ಒಂದು ಕಂಪನಿಯ ವಿಮಾ ಏಜೆಂಟ್ ಮರಣೋತ್ತರ ಪರೀಕ್ಷೆ ವರದಿ ಮತ್ತು ವಿಶಾಲ್ ಹೇಳಿಕೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು ಮತ್ತು ಪೊಲೀಸ್ ದೂರು ದಾಖಲಾಗಿತ್ತು.

ಮಾಹಿತಿಯ ಪ್ರಕಾರ, ಮೀರತ್‌ನ ಗಂಗಾನಗರದಲ್ಲಿ ವಾಸಿಸುತ್ತಿದ್ದ ಛಾಯಾಗ್ರಾಹಕ ಮುಖೇಶ್ ಸಿಂಘಾಲ್ ಅವರ ತಂದೆ ಮಾರ್ಚ್ 27, 2024 ರಂದು ನಿಧನರಾದರು. ತನ್ನ ತಂದೆ ಗರ್ ಗಂಗಾದಿಂದ ಹಿಂತಿರುಗುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಾಯಗೊಂಡಿದ್ದರು, ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ ಎಂದು ಮಗ ಸುಳ್ಳು ಹೇಳಿದ್ದ. ವಿಶಾಲ್ ತನ್ನ ತಂದೆಯ ಹೆಸರಿನಲ್ಲಿದ್ದ ಪಾಲಿಸಿಗಳ ವಿರುದ್ಧ ಎಂಟು ಕ್ಕೂ ಹೆಚ್ಚು ವಿಮಾ ಕಂಪನಿಗಳಲ್ಲಿ ಕ್ಲೇಮ್ ಮಾಡಿದ್ದ.

ಮತ್ತಷ್ಟು ಓದಿ: ಪಾರ್ಕಿಂಗ್ ವಿವಾದ, ಉತ್ತರ ಪ್ರದೇಶದಲ್ಲಿ ಶಿಕ್ಷಕನ ಬರ್ಬರ ಹತ್ಯೆ, ಮೂವರ ಬಂಧನ

ಹಾಪುರ್ ನಗರ ಪೊಲೀಸ್ ಠಾಣೆಯಲ್ಲಿ ವಿಶಾಲ್ ಸಿಂಘಾಲ್ ವಿರುದ್ಧ ನಿವಾ ಬುಪಾ ಆರೋಗ್ಯ ವಿಮಾ ಕಂಪನಿಯ ಪ್ರತಿನಿಧಿ ಸಂಜಯ್ ಕುಮಾರ್ ಸಲ್ಲಿಸಿದ ಎಫ್‌ಐಆರ್‌ನಲ್ಲಿ, ವಿಮಾ ಕಂಪನಿಯ ಅಧಿಕಾರಿಗಳು ವಿಶಾಲ್ ಅವರ ತಂದೆ ಮುಖೇಶ್ ಸಿಂಘಾಲ್ ಅವರನ್ನು 39 ಕೋಟಿ ರೂ. ಆಕಸ್ಮಿಕ ಕ್ಲೈಮ್‌ಗಾಗಿ ತನಿಖೆ ನಡೆಸಿದಾಗ, ಅವರು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದರು ಎಂದು ಹೇಳಲಾಗಿದೆ.

ರಸ್ತೆ ಅಪಘಾತದಲ್ಲಿ ಉಂಟಾದ ಗಾಯಗಳಿಂದ ತಮ್ಮ ತಂದೆ ಸಾವನ್ನಪ್ಪಿದ್ದಾರೆ ಎಂದು ವಿಶಾಲ್ ಹೇಳಿದ್ದರೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವರ ಸಾವು ಆಘಾತದಿಂದ ಉಂಟಾಗಿದೆ ಎಂದು ತಿಳಿದುಬಂದಿದೆ. ಕೆಲವು ದಾಖಲೆಗಳು ನಕಲಿ ಎಂದು ಕಂಡುಬಂದಿದೆ. ವಿಮಾ ಕಂಪನಿಯ ಪ್ರತಿನಿಧಿ ಸಂಜಯ್ ಕುಮಾರ್ ಪೊಲೀಸರಿಗೆ ತಿಳಿಸಿದ್ದು, ಮುಖೇಶ್ ಸಿಂಘಾಲ್ ಅವರ ಸಾವು ಆಕಸ್ಮಿಕವಲ್ಲ, ಬದಲಿಗೆ ಅವರ ಮಗ ವಿಶಾಲ್ ಸಿಂಘಾಲ್ ಅವರು ಮಾಡಿರುವ ಕೊಲೆಯಂತೆ ಕಾಣುತ್ತದೆ. ಈ ವಿಷಯದ ಬಗ್ಗೆ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ವಿಶಾಲ್ ಸಿಂಘಾಲ್ ತಮ್ಮ ತಂದೆಗೆ ನಿವಾ ಬುಪಾ ಹೆಲ್ತ್ ಇನ್ಶುರೆನ್ಸ್ ಕಂಪನಿಯಲ್ಲಿ ಮಾತ್ರವಲ್ಲದೆ, ಟಾಟಾ ಎಐಜಿ, ಮ್ಯಾಕ್ಸ್ ಲೈಫ್, ಟಾಟಾ ಎಐಎ, ಆದಿತ್ಯ ಬಿರ್ಲಾ, ಬಜಾಜ್ ಅಲಿಯಾನ್ಸ್, ಎಚ್‌ಡಿಎಫ್‌ಸಿ ಎರ್ಗೊ, ಮ್ಯಾಕ್ಸ್ ಲೈಫ್ ಸೇರಿದಂತೆ ಹಲವು ಕಂಪನಿಗಳಲ್ಲಿ ವಿಮೆ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ತನಿಖೆಯ ಸಮಯದಲ್ಲಿ, ವಿಶಾಲ್ ಈ ಹಿಂದೆ ತನ್ನ ತಾಯಿ ಪ್ರಭಾ ದೇವಿಯವರ ಸಾವು ಆಕಸ್ಮಿಕ ಎಂದು ಹೇಳಿ ವಿಮಾ ಕಂಪನಿಯಿಂದ 80 ಲಕ್ಷ ರೂ. ಕ್ಲೇಮ್ ಮಾಡಿದ್ದರು ಎಂದು ತಿಳಿದುಬಂದಿದೆ. ಜೂನ್ 21, 2017 ರಂದು ಪಿಲ್ಖುವಾದಲ್ಲಿ ತನ್ನ ತಾಯಿ ಪ್ರಭಾ ದೇವಿ ಬೈಕ್​​ನಲ್ಲಿ ಕುಳಿತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಅವರು ಸಾವನ್ನಪ್ಪಿದ್ದರು ಎಂದು ಹೇಳಿದ್ದ.

ವಿಶಾಲ್ ಅವರ ಪತ್ನಿಯೂ ಮೃತಪಟ್ಟಿದ್ದಾರೆ. ಆಕೆಯ ಮರಣದ ನಂತರ ಅವರಿಗೆ 30 ಲಕ್ಷ ರೂ. ವಿಮಾ ಕ್ಲೇಮ್ ಸಿಕ್ಕಿದೆ. ಇಲ್ಲಿಯೂ ಸಹ, ಅವರ ಸಾವಿಗೆ ಸಂಚು ರೂಪಿಸಿದ ಆರೋಪ ಅವರ ಮೇಲಿದೆ. ವಿಶಾಲ್ ತನ್ನ ಪತ್ನಿ ಸಾವಿಗೆ ಕೆಲವು ವರ್ಷಗಳ ಮೊದಲು ವಿಮೆ ಮಾಡಿದ್ದ. ತನ್ನ ಪತ್ನಿ, ತಾಯಿ ಮತ್ತು ತಂದೆಯನ್ನು ಕೊಲೆ ಮಾಡುವ ಮೂಲಕ, ವಿಶಾಲ್ ಅವರ ಸಾವುಗಳನ್ನು ಆಕಸ್ಮಿಕವೆಂದು ಬಿಂಬಿಸಿ ವಿಮಾ ಕಂಪನಿಗಳಿಂದ ಭಾರಿ ಮೊತ್ತವನ್ನು ಪಡೆದಿದ್ದಾನೆ ಎಂದು ಶಂಕಿಸಲಾಗಿದೆ.

ದೂರಿನ ಆಧಾರದ ಮೇಲೆ ವಿಶಾಲ್ ಮತ್ತು ಅವರ ಸ್ನೇಹಿತ ಸತೀಶ್ ಅವರನ್ನು ಬಂಧಿಸಲಾಗಿದೆ ಎಂದು ಎಎಸ್ಪಿ ವಿನೀತ್ ಭಟ್ನಾಗರ್ ತಿಳಿಸಿದ್ದಾರೆ. ಸತ್ಯಗಳನ್ನು ತನಿಖೆ ಮಾಡಲಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ