ಉತ್ತರ ಪ್ರದೇಶ: ಮುಸ್ಲಿಂ ಮಹಿಳೆಯರನ್ನು ಕಿಡ್ನಾಪ್ ಮಾಡಿ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ ಸ್ವಾಮೀಜಿ; ಚಪ್ಪಾಳೆ ತಟ್ಟಿ ಜೈಶ್ರೀರಾಮ್ ಕೂಗಿದ ಜನ

"ಯಾವುದೇ ಮುಸ್ಲಿಂ ಪುರುಷ ಹಿಂದೂ ಮಹಿಳೆಯರನ್ನು ಹಿಂಬಾಲಿಸಿದರೆ, ನಾನು ಸಾರ್ವಜನಿಕವಾಗಿ ಮುಸ್ಲಿಂ ಮಹಿಳೆಯರನ್ನು ಅಪಹರಿಸಿ ಬಹಿರಂಗವಾಗಿ ಅತ್ಯಾಚಾರ ಮಾಡುತ್ತೇನೆ" ಎಂದು ಸ್ಥಳೀಯ ದೇವಸ್ಥಾನದ ಮಹಂತ್ ಬಜರಂಗದಾಸ್ ಎಂದು ಗುರುತಿಸಲ್ಪಟ್ಟಿರುವ ವ್ಯಕ್ತಿ ಹೇಳಿದ್ದಾರೆ.

ಉತ್ತರ ಪ್ರದೇಶ: ಮುಸ್ಲಿಂ ಮಹಿಳೆಯರನ್ನು ಕಿಡ್ನಾಪ್ ಮಾಡಿ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ ಸ್ವಾಮೀಜಿ; ಚಪ್ಪಾಳೆ ತಟ್ಟಿ ಜೈಶ್ರೀರಾಮ್ ಕೂಗಿದ ಜನ
ಭಾಷಣ ಮಾಡುತ್ತಿರುವ ಮಹಂತ್ ಬಜರಂಗ್ ದಾಸ್
Updated By: ರಶ್ಮಿ ಕಲ್ಲಕಟ್ಟ

Updated on: Apr 08, 2022 | 2:28 PM

ಸೀತಾಪುರ(ಉತ್ತರಪ್ರದೇಶ): ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊವೊಂದು ಹರಿದಾಡಿದ್ದು, ಕೇಸರಿ ತೊಟ್ಟಿರುವ ಹಿಂದೂ ಸ್ವಾಮೀಜಿಯೊಬ್ಬರು ಸಾರ್ವಜನಿಕವಾಗಿ ಮುಸ್ಲಿಂ (Muslim) ಮಹಿಳೆಯರನ್ನು ಅಪಹರಿಸಿ ಅತ್ಯಾಚಾರ ಮಾಡುವಂತೆ ಕರೆ ನೀಡಿದ್ದಾರೆ. ಉತ್ತರ ಪ್ರದೇಶ(Uttar Pradesh) ಸೀತಾಪುರದಲ್ಲಿನ ಕಾರ್ಯಕ್ರಮದ ದೃಶ್ಯ ಇದಾಗಿದ್ದು ಸ್ವಾಮೀಜಿ ಹೇಳಿಕೆಗೆ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿರುವುದು ಕಾಣುತ್ತದೆ. ವಿಡಿಯೊ ವೈರಲ್ (Viral Video) ಆದ ನಂತರ ಇದನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. “ಯಾವುದೇ ಮುಸ್ಲಿಂ ಪುರುಷ ಹಿಂದೂ ಮಹಿಳೆಯರನ್ನು ಹಿಂಬಾಲಿಸಿದರೆ, ನಾನು ಸಾರ್ವಜನಿಕವಾಗಿ ಮುಸ್ಲಿಂ ಮಹಿಳೆಯರನ್ನು ಅಪಹರಿಸಿ ಬಹಿರಂಗವಾಗಿ ಅತ್ಯಾಚಾರ ಮಾಡುತ್ತೇನೆ” ಎಂದು ಸ್ಥಳೀಯ ದೇವಸ್ಥಾನದ ಮಹಂತ್ ಬಜರಂಗದಾಸ್ ಎಂದು ಗುರುತಿಸಲ್ಪಟ್ಟಿರುವ ವ್ಯಕ್ತಿ ಹೇಳಿದ್ದಾರೆ. ಸೀತಾಪುರವು ರಾಜ್ಯದ ರಾಜಧಾನಿ ಲಖನೌದಿಂದ ಸುಮಾರು 100 ಕಿ.ಮೀ.ದೂರದಲ್ಲಿದೆ. ಈ ವಿಡಿಯೊವನ್ನು ಪತ್ರಕರ್ತರೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಉತ್ತರ ಪ್ರದೇಶ ಪೊಲೀಸರ ಅಧಿಕೃತ ಹ್ಯಾಂಡಲ್‌ಗೆ ಟ್ಯಾಗ್ ಮಾಡಲಾಗಿದೆ. 41 ಸೆಕೆಂಡುಗಳ ಕ್ಲಿಪ್‌ನಲ್ಲಿ, ಹಿನ್ನಲೆಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿರುವ ವ್ಯಕ್ತಿಯನ್ನು ಸಹ ಕಾಣಬಹುದು.


ಇದಲ್ಲದೆ, ತನ್ನನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿ ತನ್ನ ತಲೆಗೆ 28 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ ಎಂದು ಮಹಂತ್ ಹೇಳಿದ್ದಾರೆ.

ವಿಡಿಯೊವನ್ನು ಏಪ್ರಿಲ್ 2 ರಂದು ಚಿತ್ರೀಕರಿಸಲಾಗಿದೆ ಆದರೆ “ಐದು ದಿನಗಳ ನಂತರವೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಪತ್ರಕರ್ತ ಹೇಳಿದ್ದಾರೆ. ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಸೀತಾಪುರ ಪೊಲೀಸರು, ತನಿಖೆ ಆರಂಭಿಸಲಾಗಿದ್ದು, ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆಕಾರ್ ಪಟೇಲ್ ವಿದೇಶ ಪ್ರಯಾಣ ಮಾಡದಂತೆ ತಡೆ! ಕೋರ್ಟ್ ಆದೇಶದ ವಿರುದ್ಧ ನಡೆದಕೊಂಡ ಸಿಬಿಐ

Published On - 1:41 pm, Fri, 8 April 22