
ಪ್ರಯಾಗ್ರಾಜ್, ಫೆಬ್ರವರಿ 24: ಮಹಾಕುಂಭಮೇಳಕ್ಕೆಂದು ವ್ಯಕ್ತಿಯೊಬ್ಬ ಪತ್ನಿಯನ್ನು ಕರೆದೊಯ್ದು, ಕೊಲೆ ಮಾಡಿ, ಮಕ್ಕಳ ಬಳಿ ನಿಮ್ಮ ಅಮ್ಮ ಕಳೆದುಹೋಗಿದ್ದಾಳೆ ಎಂದು ಕಥೆ ಕಟ್ಟಿದ್ದ ವಿಚಾರ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳ ಅಂತಿಮ ಘಟ್ಟಕ್ಕೆ ತಲುಪಿದೆ. ಶಿವರಾತ್ರಿಯಂದು ಕೊನೆಗೊಳ್ಳಲಿದ್ದು ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡಿ, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ.
ದೆಹಲಿಯ ವ್ಯಕ್ತಿ ತನ್ನ ಪತ್ನಿಯೊಂದಿಗೆ ಮಹಾ ಕುಂಭದಲ್ಲಿ ಪವಿತ್ರ ಸ್ನಾನ ಮಾಡಲು ಪ್ರಯಾಗ್ರಾಜ್ಗೆ ಭೇಟಿ ನೀಡಿದ್ದರು. ಅಶೋಕ್ ಬಾಲ್ಮಿಕಿ ತ್ರಿವೇಣಿ ಸಂಗಮದಲ್ಲಿ ಅವರ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದರು.
ರಾತ್ರಿಯ ಹೊತ್ತಿಗೆ, ದಂಪತಿ ಒಂದು ಲಾಡ್ಜ್ಗೆ ಹೋದರು ಮತ್ತು ಅಶೋಕ್ ತನ್ನ ಪತ್ನಿ ಮೀನಾಕ್ಷಿಗೆ ಮರುದಿನ ಬೆಳಗ್ಗೆ ಆಕೆಯನ್ನು ಪವಿತ್ರ ಸ್ನಾನಕ್ಕೆ ಕರೆದೊಯ್ಯುವುದಾಗಿ ಭರವಸೆ ನೀಡಿದ್ದ. ಮರುದಿನ, ಮೀನಾಕ್ಷಿಯ ರಕ್ತಸಿಕ್ತ ದೇಹವು ಅವರ ಕೋಣೆಯಲ್ಲಿ ಕಂಡುಬಂದಿತ್ತು ಮತ್ತು ಅಶೋಕ್ ಎಲ್ಲಿಯೂ ಕಾಣಲಿಲ್ಲ. ಈ ಮಧ್ಯೆ, ಮೀನಾಕ್ಷಿ ಮಹಾ ಕುಂಭಮೇಳದಲ್ಲಿ ಕಳೆದುಹೋದಳು ಎಂದು ಆತ ಮಕ್ಕಳ ಬಳಿ ಹೇಳಿದ್ದ ವಿಚಾರ ಬಹಿರಂಗಗೊಂಡಿದೆ.
ದಂಪತಿ ಝುನ್ಸಿ ಪ್ರದೇಶದ ಲಾಡ್ಜ್ನಲ್ಲಿ ರೂಂ ಬುಕ್ ಮಾಡಿದ್ದರು. ಲಾಡ್ಜ್ ಮಾಲೀಕರು ದಂಪತಿಗೆ 500 ರೂ.ಗೆ ಕೊಠಡಿ ನೀಡಿದ್ದರೂ, ಅವರ ಗುರುತಿನ ಚೀಟಿಗಳನ್ನು ಕೇಳಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ರಾತ್ರಿ ವೇಳೆ ಅಶೋಕ್ ಮೀನಾಕ್ಷಿಯನ್ನು ಹರಿತವಾದ ಆಯುಧದಿಂದ ಕೊಂದು ಕೋಣೆಯಿಂದ ಹೊರಗೆ ಹೋಗಿದ್ದಾನೆ. ಪೊಲೀಸರ ಪ್ರಕಾರ, ಅಶೋಕ್ ತನ್ನ ಮಕ್ಕಳಿಗೆ ಮಹಾ ಕುಂಭಮೇಳದಲ್ಲಿ ತನ್ನ ಹೆಂಡತಿಯನ್ನು ಕಳೆದುಕೊಂಡಿರುವುದಾಗಿ ತಿಳಿಸಿದ್ದ. ಮರುದಿನ ಬೆಳಗ್ಗೆ, ಮೀನಾಕ್ಷಿಯ ರಕ್ತಸಿಕ್ತ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ಓದಿ: ಮಾಜಿ ಗರ್ಲ್ಫ್ರೆಂಡ್ಗೆ ಬೇರೊಬ್ಬನ ಜತೆ ಸಂಬಂಧ, ಸ್ನೇಹಿತರ ಜತೆ ಸೇರಿ ಆಕೆಯ ಮೇಲೆ ಅತ್ಯಾಚಾರ
ಆದರೆ, ಲಾಡ್ಜ್ ಮಾಲೀಕರು ದಂಪತಿಗಳ ಗುರುತಿನ ಚೀಟಿ ಕೇಳದ ಕಾರಣ ಅಶೋಕ್ನನ್ನು ಪತ್ತೆಹಚ್ಚುವುದು ಒಂದು ಸಮಸ್ಯೆಯಾಗಿತ್ತು.ಆದರೆ ಫೆಬ್ರವರಿ 21 ರಂದು ಮೀನಾಕ್ಷಿಯವರ ಮಗ ತನ್ನ ತಾಯಿಯನ್ನು ಹುಡುಕುತ್ತಾ ಪ್ರಯಾಗ್ರಾಜ್ಗೆ ಹೋದಾಗ ಪೊಲೀಸರಿಗೆ ಅನುಮಾನ ಬಂದಿತ್ತು.
ಝಾನ್ಸಿ ಪೊಲೀಸರಿಗೆ ಅವರ ಫೋಟೋವನ್ನು ತೋರಿಸಿ, ದೆಹಲಿಯಿಂದ ಪ್ರಯಾಗ್ರಾಜ್ಗೆ ಬಂದ ನಂತರ ಅವರು ಕುಂಭದಲ್ಲಿ ಕಾಣೆಯಾಗಿದ್ದಾರೆ ಎಂದು ಹೇಳಿದರು. ಪೊಲೀಸರು ಮಗನನ್ನು ಪ್ರಯಾಗ್ರಾಜ್ನಲ್ಲಿರುವ ಶವಾಗಾರಕ್ಕೆ ಕರೆದೊಯ್ದರು, ಅಲ್ಲಿಆತ ತನ್ನ ತಾಯಿಯ ಶವವನ್ನು ಗುರುತಿಸಿದ್ದಾನೆ.
ನಂತರ ಪೊಲೀಸರು ಮಗನಿಂದ ಅಶೋಕ್ಗೆ ಕರೆ ಮಾಡಿ, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ, ಆತನನ್ನು ಪತ್ತೆಹಚ್ಚಿ ಬಂಧಿಸಿದರು. ಅಶೋಕ್ಗೆ ಬೇರೊಬ್ಬ ಮಹಿಳೆ ಜತೆ ಅಕ್ರಮ ಸಂಬಂಧವಿತ್ತು, ಹೀಗಾಗಿ ಪದೇ ಪದೇ ಜಗಳವಾಗುತ್ತಿತ್ತು, ಪತ್ನಿಯನ್ನು ಕೊಂದರೆ ಇದಕ್ಕೆಲ್ಲಾ ಅಂತ್ಯ ಹಾಡಿದಂತಾಗುತ್ತದೆ ಎಂದು ಭಾವಿಸಿ ಕೊಲೆ ಮಾಡಿದ್ದ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ