AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಘಾಟನೆಯಾದ ಒಂದೇ ವಾರದಲ್ಲಿ ಕುಸಿದ ಬುಂದೇಲ್​ಖಂಡ್ ಎಕ್ಸ್​ಪ್ರೆಸ್​ವೇ: ಮೋದಿ, ಯೋಗಿ ವಿರುದ್ಧ ಹರಿಹಾಯ್ದ ಪ್ರತಿಪಕ್ಷಗಳು

ಬಿಜೆಪಿ ಜನರನ್ನು ದಿಕ್ಕುತಪ್ಪಿಸುತ್ತಿದೆ ಎಂದು ಸಮಾಜವಾದಿ ಪಕ್ಷ, ಡಬಲ್ ಎಂಜಿನ್ ಸರ್ಕಾರದ ಕಾರ್ಯವೈಖರಿಗೆ ಈ ಹೆದ್ದಾರಿ ಕನ್ನಡಿ ಹಿಡಿದಿದೆ ಎಂದು ಆಪ್ ವ್ಯಂಗ್ಯವಾಡಿವೆ.

ಉದ್ಘಾಟನೆಯಾದ ಒಂದೇ ವಾರದಲ್ಲಿ ಕುಸಿದ ಬುಂದೇಲ್​ಖಂಡ್ ಎಕ್ಸ್​ಪ್ರೆಸ್​ವೇ: ಮೋದಿ, ಯೋಗಿ ವಿರುದ್ಧ ಹರಿಹಾಯ್ದ ಪ್ರತಿಪಕ್ಷಗಳು
ಬುಂದೇಲ್​ಖಂಡ್ ಎಕ್ಸ್​ಪ್ರೆಸ್​ವೇ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದೆ.
TV9 Web
| Edited By: |

Updated on:Jul 22, 2022 | 8:08 AM

Share

ಲಖನೌ: ಬುಂದೇಲ್​ಖಂಡ್ ಎಕ್ಸ್​ಪ್ರೆಸ್​ವೇ (Bundelkhand Expressway) ಹೆದ್ದಾರಿಯ ಒಂದು ಭಾಗ ಕುಸಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಪ್ರತಿಪಕ್ಷಗಳು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ವಿರುದ್ಧ ಹರಿಹಾಯ್ದಿವೆ. ಕಳೆದ ವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ (PM Narendra Modi) ಉದ್ಘಾಟಿಸಿದ್ದ ಈ ಹೆದ್ದಾರಿಯು ಜಾಲೌನ್ ತೆಹ್​ಸೀಲ್​ಗೆ ಸೇರಿದ ಚಿರಿಯಾ ಸಾಲೆಮ್​ಪುರ್​ ಎಂಬಲ್ಲಿ ಕುಸಿದಿದೆ. ಈ ಸಂಬಂಧ ಸಮಾಜವಾದಿ ಪಕ್ಷ ಮತ್ತು ಆಮ್ ಆದ್ಮಿ ಪಕ್ಷಗಳು ವಿಡಿಯೊ ಟ್ವೀಟ್ ಮಾಡಿ, ಹಾಳಾಗಿರುವ ರಸ್ತೆಯ ಭಾಗವನ್ನು ಜೆಸಿಬಿ ಬಳಸಿ ರಿಪೇರಿ ಕೆಲಸ ನಡೆಸುತ್ತಿರುವುದನ್ನು ತೋರಿಸಿವೆ. ‘ಬುಂದೇಲ್​ಖಂಡ್ ಎಕ್ಸ್​ಪ್ರೆಸ್​ವೇ ಗುಣಮಟ್ಟ ಎಂಥದ್ದು ಎನ್ನುವುದನ್ನು ಮಳೆ ಬಹಿರಂಗಪಡಿಸಿವೆ. ಬಿಜೆಪಿ ಜನರನ್ನು ದಿಕ್ಕುತಪ್ಪಿಸುತ್ತಿದೆ’ ಎಂದು ಸಮಾಜವಾದಿ ಪಕ್ಷವು (Samajwadi Party – SP) ಟ್ವೀಟ್ ಮಾಡಿದೆ.

ರಸ್ತೆ ಕುಸಿದಿರುವ ಬಗ್ಗೆ ವ್ಯಂಗ್ಯವಾಡಿರುವ ಆಮ್ ಆದ್ಮಿ ಪಕ್ಷವು (Aam Aadmi Party – AAM) ‘ಡಬಲ್ ಎಂಜಿನ್ ಸರ್ಕಾರದ ಕಾರ್ಯವೈಖರಿಗೆ ಈ ಹೆದ್ದಾರಿ ಕನ್ನಡಿ ಹಿಡಿದಿದೆ. ಒಂದು ವಾರವೂ ಈ ರಸ್ತೆ ಸುಸ್ಥಿತಿಯಲ್ಲಿ ಇರಲಿಲ್ಲ’ ಎಂದು ಹೇಳಿದೆ. ಹಾಳಾಗಿರುವ ರಸ್ತೆಯಲ್ಲಿ ಕಾರ್ ಒಂದು ಸಿಲುಕಿ, ಜಖಂಗೊಂಡ ಬಗ್ಗೆ ‘ನವಭಾರತ್ ಟೈಮ್ಸ್​’ ದಿನಪತ್ರಿಕೆ ವರದಿ ಮಾಡಿದೆ. ಹೆದ್ದಾರಿ ಕುಸಿತದ ಕುರಿತು ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳು ಆದೇಶ ಮಾಡಿದ್ದಾರೆ. ಈ ನಡುವೆ ಬುಂದೇಲ್​ಖಂಡ್ ಹೆದ್ದಾರಿ ಕುಸಿದಿರುವ ದೃಶ್ಯಗಳವಿರುವ ವಿಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ಜುಲೈ 16ರಂದು ಪ್ರಧಾನಿ ನರೇಂದ್ರ ಮೋದಿ ‘ಬುಂದೇಲ್​ಖಂಡ್ ಎಕ್ಸ್​ಪ್ರೆಸ್​ವೇ’ಗೆ ಚಾಲನೆ ನೀಡಿದ್ದರು. ಫೆಬ್ರುವರಿ 29, 2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಕೇವಲ 28 ತಿಂಗಳಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. 296 ಕಿಮೀ ಉದ್ದದ ಬುಂದೇಲ್​ಖಂಡ್ ಎಕ್ಸ್​ಪ್ರೆಸ್​ವೇ ಉತ್ತರ ಪ್ರದೇಶದ 7 ಜಿಲ್ಲೆಗಳನ್ನು ಹಾದು ಹೋಗುತ್ತದೆ. ಚಿತ್ರಕೂಟ, ಬಂಡಾ, ಮಹೋಬಾ, ಹಮೀರ್​ಪುರ್, ಜಲೌನ್, ಔರಿಯಾ ಮತ್ತು ಇಟಾ ಜಿಲ್ಲೆಗಳಿಗೆ ಈ ಹೆದ್ದಾರಿಯು ಸಂಪರ್ಕ ಕಲ್ಪಿಸುತ್ತದೆ. ಈ ಹೆದ್ದಾರಿಯನ್ನು ₹ 14,850 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು.

ಚಿತ್ರಕೂಟ ಜಿಲ್ಲೆಯ ಭರತ್​ಕೂಪ್​ ಸಮೀಪದ ಗೋಂಡಾ ಹಳ್ಳಿಯ ರಾಷ್ಟ್ರೀಯ ಹೆದ್ದಾರಿ 35ರಿಂದ ಆರಂಭವಾಗುವ ಎಕ್ಸ್​ಪ್ರೆಸ್​ವೇ ಇಟಾವ ಜಿಲ್ಲೆಯ ಕುದ್ರೈಲ್ ಗ್ರಾಮದ ಸಮೀಪ ಅಂತ್ಯಗೊಳ್ಳುತ್ತದೆ. ಅಲ್ಲಿ ಇದು ಆಗ್ರಾ-ಲಖನೌ ಹೆದ್ದಾರಿಗೆ ಸೇರುತ್ತದೆ. ನಾಲ್ಕು ಲೇನ್​ಗಳಿರುವ ಚತುಷ್ಪಥ ಎಕ್ಸ್​ಪ್ರೆಸ್​ವೇ ಅನ್ನು ಮುಂದಿನ ದಿನಗಳಲ್ಲಿ ಆರು ಲೇನ್​ಗೆ (ಷಟ್​ಪಥ) ವಿಸ್ತರಿಸಲು ಅನುವಾಗುವಂತೆ ನಿರ್ಮಿಸಲಾಗಿದೆ.

Published On - 7:16 am, Fri, 22 July 22

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು