AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಾಖಂಡ: ಶೀಘ್ರದಲ್ಲೇ ಏಕರೂಪ ನಾಗರಿಕ ಸಂಹಿತೆ ಕರಡು ಮಂಡನೆ

ಉತ್ತರಾಖಂಡ ವಿಧಾನಸಭೆಯಲ್ಲಿ ಮಂಡಿಸಲಿರುವ ಕರಡು ಮಸೂದೆಯಲ್ಲಿ ಬಹುಪತ್ನಿತ್ವವನ್ನು ಸಂಪೂರ್ಣ ನಿಷೇಧಿಸುವಂತೆ ಸರ್ಕಾರ ಕೋರಿದೆ ಎಂದು ಮೂಲಗಳು ತಿಳಿಸಿವೆ. ಲಿವ್-ಇನ್ ಜೋಡಿಗಳು ತಮ್ಮ ಸಂಬಂಧವನ್ನು ನೋಂದಾಯಿಸಲು ಸಹ ಒಂದು ನಿಬಂಧನೆ ಇದೆ. ಮಸೂದೆಯು ಅನುಮೋದನೆಯಾದರೆ, ಮಗ ಮತ್ತು ಮಗಳಿಬ್ಬರಿಗೂ ಸಮಾನವಾದ ಉತ್ತರಾಧಿಕಾರದ ಹಕ್ಕುಗಳನ್ನು ಸ್ಥಾಪಿಸುತ್ತದೆ ಎಂದು ಮೂಲಗಳು ತಿಳಿಸಿವೆ.

ಉತ್ತರಾಖಂಡ: ಶೀಘ್ರದಲ್ಲೇ ಏಕರೂಪ ನಾಗರಿಕ ಸಂಹಿತೆ ಕರಡು ಮಂಡನೆ
ಪುಷ್ಕರ್ ಸಿಂಗ್ ಧಾಮಿ
ರಶ್ಮಿ ಕಲ್ಲಕಟ್ಟ
|

Updated on: Nov 11, 2023 | 7:51 PM

Share

ದೆಹಲಿ ನವೆಂಬರ್ 11: ಏಕರೂಪ ನಾಗರಿಕ ಸಂಹಿತೆ ಕರಡನ್ನು (Uniform Civil Code) ಮಂಡಿಸಲು ಉತ್ತರಾಖಂಡ (Uttarakhand) ಸರ್ಕಾರ ಶೀಘ್ರದಲ್ಲೇ ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನ ನಡೆಸಲು ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಅವರು ರಚಿಸಿದ್ದ ಸಮಿತಿಯು ಈ ವರ್ಷದ ಆರಂಭದಲ್ಲಿ ಕರಡನ್ನು ಸಿದ್ಧಪಡಿಸಿದೆ. ಸಮಿತಿಯು ವಿವಿಧ ನಾಗರಿಕರ ವಿಭಾಗದೊಂದಿಗೆ ಕೆಲಸ ಮಾಡಿದೆ ಮತ್ತು 2 ಲಕ್ಷಕ್ಕೂ ಹೆಚ್ಚು ಜನರು ಮತ್ತು ಪ್ರಮುಖ ಪಾಲುದಾರರೊಂದಿಗೆ ಮಾತನಾಡಿದೆ.

ಏಕರೂಪ ನಾಗರಿಕ ಸಂಹಿತೆ ಭಾರತದ ಎಲ್ಲಾ ನಾಗರಿಕರಿಗೆ ಅನ್ವಯಿಸುವ ಸಾಮಾನ್ಯ ಕಾನೂನುಗಳನ್ನು ಸೂಚಿಸುತ್ತದೆ. ಇದು ಇತರ ವೈಯಕ್ತಿಕ ವಿಷಯಗಳ ಜೊತೆಗೆ ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ದತ್ತು ಸ್ವೀಕಾರಕ್ಕೆ ಸಂಬಂಧಿಸಿದಂತೆ ಧರ್ಮವನ್ನು ಆಧರಿಸಿಲ್ಲ. ಉತ್ತರಾಖಂಡ ವಿಧಾನಸಭೆಯಲ್ಲಿ ಮಂಡಿಸಲಿರುವ ಕರಡು ಮಸೂದೆಯಲ್ಲಿ ಬಹುಪತ್ನಿತ್ವವನ್ನು ಸಂಪೂರ್ಣ ನಿಷೇಧಿಸುವಂತೆ ಸರ್ಕಾರ ಕೋರಿದೆ ಎಂದು ಮೂಲಗಳು ತಿಳಿಸಿವೆ. ಲಿವ್-ಇನ್ ಜೋಡಿಗಳು ತಮ್ಮ ಸಂಬಂಧವನ್ನು ನೋಂದಾಯಿಸಲು ಸಹ ಒಂದು ನಿಬಂಧನೆ ಇದೆ.

ಮಸೂದೆಯು ಅನುಮೋದನೆಯಾದರೆ, ಮಗ ಮತ್ತು ಮಗಳಿಬ್ಬರಿಗೂ ಸಮಾನವಾದ ಉತ್ತರಾಧಿಕಾರದ ಹಕ್ಕುಗಳನ್ನು ಸ್ಥಾಪಿಸುತ್ತದೆ ಎಂದು ಮೂಲಗಳು ತಿಳಿಸಿವೆ.  ಕಳೆದ ವರ್ಷ ನಡೆದ ರಾಜ್ಯ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಬಿಜೆಪಿ ನೀಡಿದ ಪ್ರಮುಖ ಚುನಾವಣಾ ಭರವಸೆಗಳಲ್ಲಿ ಉತ್ತರಾಖಂಡಕ್ಕೆ ಯುಸಿಸಿ ಕೂಡ ಒಂದು. ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಆಯ್ಕೆಯಾದ ನಂತರ, ಧಾಮಿ ಅವರು ನೇತೃತ್ವದ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಯುಸಿಸಿಯ ಕರಡು ರಚಿಸಲು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಸಮಿತಿಯನ್ನು ಸ್ಥಾಪಿಸಲು ಒಪ್ಪಿಗೆ ನೀಡಿದರು.

ಇದನ್ನೂ ಓದಿVideo ನೋಡಿ -ಮೊಬೈಲ್​​ನಲ್ಲಿ ಮಾತನಾಡ್ತಾ ಉತ್ತರಾಖಂಡ ಮುಖ್ಯಮಂತ್ರಿಗೆ ಸೆಲ್ಯೂಟ್ ಹೊಡೆದ ಪೊಲೀಸ್ ಅಧಿಕಾರಿ! ಆಮೇಲೇನಾಯ್ತು?

ಇತ್ತೀಚೆಗೆ ಮೂರನೇ ಬಾರಿಗೆ ಡಿಸೆಂಬರ್‌ವರೆಗೆ ಅಧಿಕಾರಾವಧಿಯನ್ನು ವಿಸ್ತರಿಸಿದ ತಜ್ಞರ ಸಮಿತಿಯು ಕರಡು ಸಿದ್ಧಪಡಿಸುವ ಮೊದಲು 2.33 ಲಕ್ಷ ಜನರು ಮತ್ತು ವಿವಿಧ ಸಂಸ್ಥೆಗಳು, ಸಂಸ್ಥೆಗಳು ಮತ್ತು ಬುಡಕಟ್ಟು ಗುಂಪುಗಳಿಂದ ಅಭಿಪ್ರಾಯಗಳನ್ನು ಪಡೆದುಕೊಂಡಿದೆ. ಐದು ಸದಸ್ಯರ ಸಮಿತಿಯು ನವೆಂಬರ್, 2022 ರಲ್ಲಿ ಆರು ತಿಂಗಳುಗಳ ಮೊದಲ ವಿಸ್ತರಣೆಯನ್ನು ಪಡೆದುಕೊಂಡಿತು ಮತ್ತು ಈ ವರ್ಷದ ಮೇನಲ್ಲಿ ನಾಲ್ಕು ತಿಂಗಳುಗಳ ಎರಡನೇ ವಿಸ್ತರಣೆ ಪಡೆದಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ