AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಕಾಶಿ: ಕಾರ್ಮಿಕರ ಮೂಗಿಗೆ ಬಡಿದ ವೆಲ್ಡಿಂಗ್ ಹೊಗೆ!ಬದುಕುಳಿಯುವ ಭರವಸೆ ಹೆಚ್ಚಿಸಿಕೊಂಡ ಕಾರ್ಮಿಕರು

ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ನಿರಂತರವಾಗಿ ಶ್ರಮ ಹಾಕಲಾಗುತ್ತಿದೆ. ಕೆಲವೊಮ್ಮೆ ಮೆಷಿನ್​ಗಳು ಕೈಕೊಡುತ್ತಿವೆ. ಈ ಮಧ್ಯೆ ಸುರಂಗದೊಳಗೆ ಪೈಪ್​ಗಳನ್ನು ಜೋಡಿಸಲು ವೆಲ್ಡಿಂಗ್ ಮಾಡುತ್ತಿರುವ ಹೊಗೆ, ಕಾರ್ಮಿಕರ ಮೂಗಿಗೆ ಬಡಿದಿದೆ. ಇದರಿಂದ ಕಾರ್ಮಿಕರಲ್ಲಿ ಸುರಂಗದಿಂದ ಹೊರಹೋಗುತ್ತೇವೆ ಎಂಬ ಆಶಾಭಾವ ಮೂಡಿದೆ.

ಉತ್ತರಕಾಶಿ: ಕಾರ್ಮಿಕರ ಮೂಗಿಗೆ ಬಡಿದ ವೆಲ್ಡಿಂಗ್ ಹೊಗೆ!ಬದುಕುಳಿಯುವ ಭರವಸೆ ಹೆಚ್ಚಿಸಿಕೊಂಡ ಕಾರ್ಮಿಕರು
ಉತ್ತರಕಾಶಿ
ಹರೀಶ್ ಜಿ.ಆರ್​.
| Updated By: ಕಿರಣ್ ಹನುಮಂತ್​ ಮಾದಾರ್|

Updated on:Nov 24, 2023 | 7:43 PM

Share

ಉತ್ತರಕಾಶಿ, ನ.24: ಉತ್ತರಕಾಶಿ(Uttarkashi) ಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಚರಣೆ ಮುಂದುವರಿದಿದೆ. ಕಳೆದ 13 ದಿನಗಳಿಂದ ಕಾರ್ಯಚರಣೆ ನಡೆಯುತ್ತಿದ್ದು, ನಿನ್ನೆಯೇ ಕಾರ್ಯಚರಣೆ ಮುಕ್ತಾಯಗೊಳ್ಳಬೇಕಿತ್ತು, ಆದರೆ, ಕಡೆಯ ಹಂತದ ಡ್ರೀಲಿಂಗ್ ವೇಳೆ ತಾಂತ್ರಿಕ ಸಮಸ್ಯೆ ಎದುರಾದ ಬಳಿಕ ಕಾರ್ಯಚರಣೆ ನಿಲ್ಲಿಸಲಾಗಿತ್ತು‌. ಇಂದು(ನ.24) ಬೆಳಗ್ಗೆಯಿಂದ ಮತ್ತೆ ಪುನಾರಂಭಗೊಂಡಿದ್ದು, ಈವರೆಗೂ ರಕ್ಷಣಾ ತಂಡವು 50 ಮೀಟರ್‌ಗಳವರೆಗೆ ಕೊರೆದಿದೆ. ಸಿಕ್ಕಿಬಿದ್ದ ಕಾರ್ಮಿಕರನ್ನು ತಲುಪಲು ಇನ್ನೂ 10 ಮೀಟರ್‌ಗಳು ಉಳಿದಿವೆ. ಇನ್ನು ಪೈಪ್​ಗಳನ್ನು ಮೃದುವಾಗಿ ಇಳಿಸಲು 6 ಮೀಟರ್​ಗಳ ಮೂರು ಪೈಪ್​ಗಳನ್ನು ಬಳಸಲಾಗುತ್ತಿದೆ.

ಸುರಂಗದಿಂದ ಹೊರಹೋಗುತ್ತೇವೆ ಎಂಬ ಆಶಾಭಾವನೆ

ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ನಿರಂತರವಾಗಿ ಶ್ರಮ ಹಾಕಲಾಗುತ್ತಿದೆ. ಕೆಲವೊಮ್ಮೆ ಮೆಷಿನ್​ಗಳು ಕೈಕೊಡುತ್ತಿವೆ. ಈ ಮಧ್ಯೆ ಸುರಂಗದೊಳಗೆ ಪೈಪ್​ಗಳನ್ನು ಜೋಡಿಸಲು ವೆಲ್ಡಿಂಗ್ ಮಾಡುತ್ತಿರುವ ಹೊಗೆ, ಕಾರ್ಮಿಕರ ಮೂಗಿಗೆ ಬಡಿದಿದೆ. ಇದರಿಂದ ಕಾರ್ಮಿಕರಲ್ಲಿ ಸುರಂಗದಿಂದ ಹೊರಹೋಗುತ್ತೇವೆ ಎಂಬ ಆಶಾಭಾವ ಮೂಡಿದೆ. ಕಾರ್ಮಿಕರರಿಗೆ ವೆಲ್ಡಿಂಗ್ ವಾಸನೆ ತಲುಪಿರುವುದನ್ನು ವಾಕಿಟಾಕಿ ಮೂಲಕ ಕಾರ್ಮಿಕರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ:ಉತ್ತರಕಾಶಿ ಕುಸಿದ ಸುರಂಗದಿಂದ 41 ಕಾರ್ಮಿಕರನ್ನು ಹೊರತೆಗೆಯವುದು ಹೇಗೆ?; ಎನ್‌ಡಿಆರ್‌ಎಫ್ ಪ್ರಾತ್ಯಕ್ಷಿಕೆ

ಇನ್ನು ಮಾಧ್ಯಮಗಳು ರಕ್ಷಣಾ ಕಾರ್ಯದ ಸಮಯದ ಮಿತಿಯ ಬಗ್ಗೆ ಊಹಿಸಬೇಡಿ ಎಂದು ವಿಪತ್ತು ನಿರ್ವಹಣ ಪ್ರಾಧಿಕಾರ ಸಲಹೆ ನೀಡಿದೆ. ರಕ್ಷಣಾ ಕಾರ್ಯಾಚರಣೆಯನ್ನು ಪೂರ್ಣಗೊಳಿಸುವ ಸಮಯದ ಬಗ್ಗೆ ಊಹಿಸಬೇಡಿ. ಇದು ತಪ್ಪು ಅಭಿಪ್ರಾಯವನ್ನು ಸೃಷ್ಟಿಸುತ್ತದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮಾಧ್ಯಮಗಳಿಗೆ ಸಲಹೆ ನೀಡಿದೆ.

ಪ್ರಧಾನಿಯಿಂದ ಉತ್ತರಾಖಂಡ ಸಿಎಂ ಗೆ ದೂರವಾಣಿ ಕರೆ

ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿಗೆ ಜೊತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಟನಲ್ ಒಳಗೆ ಇರುವ ಕಾರ್ಮಿಕರ ಪರಿಸ್ಥಿತಿ ಮತ್ತು ರಕ್ಷಣಾ ಕಾರ್ಯಚರಣೆಯಲ್ಲಿರುವ ರಕ್ಷಣಾ ತಂಡಗಳ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ‌. ನಿನ್ನೆಯಷ್ಟೆ ಸಿಎಂ ಧಾಮಿ ಟನಲ್‌ ಒಳಗಿರುವ ಕಾರ್ಮಿಕರ ಜೊತೆಗೆ ಮಾತುಕತೆ ನಡೆಸಿ ಸಾಧ್ಯವಾದಷ್ಟು ಬೇಗ ಎಲ್ಲರನ್ನು ಹೊರ ಕರೆತರುವ ಭರವಸೆ ನೀಡಿದ್ದಾರೆ.

ಸುರಂಗದೊಳಗೆ ಸಿಲುಕಿರುವ ಕಾರ್ಮಿಕರಿಗೆ ಆಹಾರ ಪಾನೀಯ ತಯಾರಿಸಿ ರವಾನಿಸಲು ಏಳು ಮಂದಿಯನ್ನು ನೇಮಿಸಲಾಗಿದೆ. ಈ ಹಿಂದೆ ಪಫ್ ರೈಸ್ ಸರಬರಾಜು ಮಾಡಲಾಗಿತ್ತು. ಪ್ರತಿ 45 ನಿಮಿಷಗಳಿಗೊಮ್ಮೆ 4 ಇಂಚಿನ ಪೈಪ್ ಮೂಲಕ ಕಳುಹಿದಲಾಗುತ್ತಿತ್ತು. ಹುರಿದ ಬೇಳೆ, ನೆನೆಸಿದ ಬೇಳೆ, ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಮತ್ತು ಪಾಪ್‌ಕಾರ್ನ್ ಮತ್ತು ಕಡಲೆಕಾಯಿಗಳನ್ನು ನೀಡಲಾಗುತ್ತಿತ್ತು. ಈಗ ಆರು ಇಂಚಿನ ಪೈಪ್ ಮೂಲಕ ಕಾರ್ಮಿಕರಿಗೆ ಬೇಯಿಸಿದ ಆಹಾರ ನೀಡಲಾಗುತ್ತಿದೆ.

ಇನ್ನು ಉತ್ತರಕಾಶಿಯಲ್ಲಿ ನಡೆಯುತ್ತಿರುವ ಆಪರೇಷನ್ ಗಾಗಿ ಬೆಂಗಳೂರಿನ ತಂಡವು ಸೇರಿಕೊಂಡಿದೆ. ಸ್ಕ್ವಾಡ್ರನ್ ಇನ್‌ಫ್ರಾದಿಂದ ಆರು ಸುರಂಗ ಗಣಿಗಾರಿಕೆ ತಜ್ಞ ಎಂಜಿನಿಯರ್‌ಗಳ ತಂಡ ತೆರಳಿದೆ. ತಂಡವು ಡ್ರೋನ್ ಕ್ಯಾಮೆರಾಗಳ ಸಹಾಯದಿಂದ ಸುರಂಗದೊಳಗಿನ ಪರಿಸ್ಥಿತಿಗಳನ್ನು ರೆಕಾರ್ಡ್ ಮಾಡಿ ರಕ್ಷಣಾ ತಂಡದ ಜೊತೆಗೆ ಚಿಕೊಳ್ಳಲಿದೆ. ಮತ್ತು ಕೃತಕ ಬುದ್ದಿಮತ್ತೆ ಸಹಾಯದಿಂದ ಡೇಟಾವನ್ನು ಸಂಗ್ರಹಿಸಿದೆ. ಈ ಡೇಟಾ ರಕ್ಷಣಾ ಕಾರ್ಯಾಚರಣೆಗೆ ಸಾಕಷ್ಟು ಸಹಾಯ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:14 pm, Fri, 24 November 23

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ