AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಧ್ರ ಪೊಲೀಸರ ಭರ್ಜರಿ ಬೇಟೆ: ಸುಪಾರಿ ಕಿಲ್ಲರ್ ಗ್ಯಾಂಗ್ ಅರೆಸ್ಟ್​!

ಹೈದರಾಬಾದ್​: ನಾವೇನು ಮಾಡಿಲ್ಲ, ನಮ್ಗೇನು ಗೊತ್ತಿಲ್ಲ ಅನ್ನೋ ತರ ಪೋಸ್ ಕೊಡ್ತಾ ಇರೋ ಇವರು ಸಾಮಾನ್ಯ ವ್ಯಕ್ತಿಗಳು ಅಲ್ವೇ ಅಲ್ಲಾ. ಖತರ್ನಾಕ್ ಕ್ರಿಮಿಗಳು. ಸ್ಕೆಚ್ ಹಾಕಿದ್ರೆ ಅಲ್ಲಿ ಒಂದು ಹೆಣ ಬೀಳಿಸೋದೆ ಬಿಡಲ್ಲ. ಹೀಗೆ ಸುಪಾರಿ ಪಡೆದು ಕೊಲೆಗೈಯ್ಯುತ್ತಿದ್ದ ಈ ಕ್ರಿಮಿನಲ್‌ಗಳ ತಂಡವನ್ನ ಆಂಧ್ರ ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ. 9 ಜನರ ಸುಪಾರಿ ಕಿಲ್ಲರ್​ಗಳ ಪೈಕಿ 6 ಕೊಲೆಗಾರರನ್ನು ವಿಶಾಖಪಟ್ಟಣಂ ಪೊಲೀಸರು ಬಂಧಿಸಿದ್ದು, ತಲೆ ಮರೆಸಿಕೊಂಡಿರೋ ಇನ್ನೂ ಮೂವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಸುಪಾರಿ ಪಡೆದು ಕೊಲೆ […]

ಆಂಧ್ರ ಪೊಲೀಸರ ಭರ್ಜರಿ ಬೇಟೆ: ಸುಪಾರಿ ಕಿಲ್ಲರ್ ಗ್ಯಾಂಗ್ ಅರೆಸ್ಟ್​!
ಸಾಧು ಶ್ರೀನಾಥ್​
|

Updated on:Jan 04, 2020 | 10:22 AM

Share

ಹೈದರಾಬಾದ್​: ನಾವೇನು ಮಾಡಿಲ್ಲ, ನಮ್ಗೇನು ಗೊತ್ತಿಲ್ಲ ಅನ್ನೋ ತರ ಪೋಸ್ ಕೊಡ್ತಾ ಇರೋ ಇವರು ಸಾಮಾನ್ಯ ವ್ಯಕ್ತಿಗಳು ಅಲ್ವೇ ಅಲ್ಲಾ. ಖತರ್ನಾಕ್ ಕ್ರಿಮಿಗಳು. ಸ್ಕೆಚ್ ಹಾಕಿದ್ರೆ ಅಲ್ಲಿ ಒಂದು ಹೆಣ ಬೀಳಿಸೋದೆ ಬಿಡಲ್ಲ. ಹೀಗೆ ಸುಪಾರಿ ಪಡೆದು ಕೊಲೆಗೈಯ್ಯುತ್ತಿದ್ದ ಈ ಕ್ರಿಮಿನಲ್‌ಗಳ ತಂಡವನ್ನ ಆಂಧ್ರ ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ. 9 ಜನರ ಸುಪಾರಿ ಕಿಲ್ಲರ್​ಗಳ ಪೈಕಿ 6 ಕೊಲೆಗಾರರನ್ನು ವಿಶಾಖಪಟ್ಟಣಂ ಪೊಲೀಸರು ಬಂಧಿಸಿದ್ದು, ತಲೆ ಮರೆಸಿಕೊಂಡಿರೋ ಇನ್ನೂ ಮೂವರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಸುಪಾರಿ ಪಡೆದು ಕೊಲೆ ಮಾಡುತ್ತಿದ್ದ ಗ್ಯಾಂಗ್‌: ಸುಪಾರಿ ಪಡೆದು ಕೊಲೆ ಮಾಡುತ್ತಿದ್ದ ಈ ಗ್ಯಾಂಗ್‌ ವಿಶಾಖಪಟ್ಟಣಂನಲ್ಲಿ ದೊಡ್ಡ ಸ್ಕೆಚ್ ಹಾಕಿಕೊಂಡಿತ್ತು. ವೈಸಿಪಿ ನಾಯಕನನ್ನ ಕೊಲೆ ಮಾಡಲು ಬರೋಬ್ಬರಿ 50 ಲಕ್ಷ ರೂ. ಡೀಲ್ ಮಾಡ್ಕೊಂಡಿತ್ತು. ಈ ಪೈಕಿ 4 ಲಕ್ಷ ರೂಪಾಯಿಯನ್ನ ಮುಂಗಡವಾಗಿ ಪಡೆದಿತ್ತು. ಈ ಹಣದಲ್ಲಿ ಆರೋಪಿಗಳು ಆಯುಧ, ಕಾರು, ಮೊಬೈಲ್​ಗಳನ್ನು ಖರೀದಿಸಿದ್ರು. ಈ ಬಗ್ಗೆ ವಿಶಾಖಪಟ್ಟಣಂ ಪೊಲೀಸರಿಗೆ ಪಕ್ಕಾ ಮಾಹಿತಿ ಬಂದಿತ್ತು. ಪೊಲೀಸರು ಮಾಹಿತಿಯನ್ನು ಆಧಾರದಲ್ಲಿ ರಹಸ್ಯವಾಗಿ ಕಾರ್ಯಚರಣೆ ಪೊಲೀಸರ ಬಲೆಗೆ ಈ ಗ್ಯಾಂಗ್‌ ಬಿದ್ದಿದೆ.

ವಿಶಾಖಪಟ್ಟಣಂನ ಕುಖ್ಯಾತ ರೌಡಿ ಶೀಟರ್ ಕನ್ನಬಾಬು ಹಾಗೂ ಆತನ ತಂಡ ಖಾಕಿ ಕೈಯಲ್ಲಿ ಲಾಕ್‌ ಆಗಿದೆ. ಸದ್ಯ, ಇವರಿಂದ ಕೊಲೆಗೆಂದು ಖರೀದಿಸಲಾಗಿದ್ದ ಮಾರಕ ಆಯುಧಗಳು, ಸುಪಾರಿ ನೀಡಲಾಗಿದ್ದ ಹಣದ ಪೈಕಿ 70 ಸಾವಿರ ನಗದು ಪಶಪಡಿಸಿಕೊಂಡಿದ್ದಾರೆ. ಒಟ್ನಲ್ಲಿ ರಾಜಕೀಯ ನಾಯಕನ ರಕ್ತ ಹರಿಸಲು ಹದ್ದುಗಳಂತೆ ಕಾದು ಕುಳಿತಿದ್ದ ಕಿರಾತಕರು ಅಂದರ್‌ ಆಗಿದ್ದಾರೆ. ಪೊಲೀಸರು ಮುನ್ನೆಚ್ಚರಿಕೆಯಿಂದ ಭಾರಿ ಅವಘಡವೊಂದು ತಪ್ಪಿದೆ.

Published On - 10:22 am, Sat, 4 January 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More