AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

13 ಡೆಸಿಮಲ್ ಭೂಮಿಯನ್ನು ತೆರವು ಮಾಡುವಂತೆ ಅಮರ್ತ್ಯ ಸೇನ್​​ಗೆ ವಿಶ್ವ ಭಾರತಿ ವಿಶ್ವವಿದ್ಯಾನಿಲಯ ನೋಟಿಸ್

ಈ ಮೂಲಕ ಸೇನ್ ಅವರು ನಿಗದಿತ ಆವರಣದಲ್ಲಿ ಕಾನೂನು ರೀತಿಯಲ್ಲಿ 1.25 ಎಕರೆ ಭೂಮಿಯನ್ನು ಮಾತ್ರ ಲೀಸ್ ಪ್ರಕಾರ ತಮ್ಮದಾಗಿಸಿಕೊಳ್ಳಬಹುದು. ಅದೇ ಆವರಣದಲ್ಲಿ ಅವರು 1.38 ಎಕರೆ ಭೂಮಿಯನ್ನು ಸ್ವಾಧೀನ ಪಡಿಸುವ ಯಾವುದೇ ಹಕ್ಕನ್ನು ಅವರು ಹೊಂದಿಲ್ಲ ಎಂದು ಜಂಟಿ ರಿಜಿಸ್ಟಾರರ್ ಆಶಿಶ್ ಮಹತೊ ಹೇಳಿದ್ದಾರೆ.

13 ಡೆಸಿಮಲ್ ಭೂಮಿಯನ್ನು ತೆರವು ಮಾಡುವಂತೆ ಅಮರ್ತ್ಯ ಸೇನ್​​ಗೆ ವಿಶ್ವ ಭಾರತಿ ವಿಶ್ವವಿದ್ಯಾನಿಲಯ ನೋಟಿಸ್
ಅಮರ್ತ್ಯ ಸೇನ್
ರಶ್ಮಿ ಕಲ್ಲಕಟ್ಟ
|

Updated on: Apr 20, 2023 | 12:34 PM

Share

ಕೋಲ್ಕತ್ತಾ: ನೋಬೆಲ್ ಪ್ರಶಸ್ತಿ (Nobel laureate) ಪುರಸ್ಕೃತ ಅಮರ್ತ್ಯ ಸೇನ್ (Amartya Sen )ಅನಧಿಕೃತವಾಗಿ ತನ್ನ ಬಳಿ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿರುವ ಭೂಮಿಯಲ್ಲಿ 13 ಡೆಸಿಮಲ್ ಭೂಮಿಯನ್ನು (5,662.8 ಚದರ ಅಡಿ) ಮೇ 6 ಅಥವಾ 15 ದಿನಗಳ ಒಳಗೆ ತೆರವು ಮಾಡಬೇಕು ಎಂದು ವಿಶ್ವ ಭಾರತಿ ವಿಶ್ವವಿದ್ಯಾನಿಲಯ (Visva Bharati Univeristy) ಆದೇಶಿಸಿದೆ. ಭಾರತ ಸರ್ಕಾರದ ಸಲಹೆಗಾರರು ಮತ್ತು ಸಿಎಜಿ ವರದಿಗಳ ಪ್ರಕಾರ ಶತಮಾನದಷ್ಟು ಹಳೆಯದಾದ ಕೇಂದ್ರೀಯ ಸಂಸ್ಥೆಯು ಅತಿಕ್ರಮಣಗಳ ನಿಯಂತ್ರಣವನ್ನು ಪಡೆಯುವುದು ಮತ್ತು ಸಚಿವಾಲಯಕ್ಕೆ ವರದಿಯನ್ನು ಸಲ್ಲಿಸುವುದು ತುರ್ತು ಅಗತ್ಯವಾಗಿದೆ ಎಂದು ವಾದಿಸಿದ್ದು, ಅಮರ್ತ್ಯ ಕುಮಾರ್ ಸೇನ್ ಮತ್ತು ಎಲ್ಲಾ ಸಂಬಂಧಿತ ವ್ಯಕ್ತಿಗಳನ್ನು ಹೊರಹಾಕಲು ಹೊಣೆಗಾರರಾಗಿದ್ದಾರೆ. ಅಗತ್ಯವಿದ್ದಲ್ಲಿ ಬಲ ಪ್ರಯೋಗವನ್ನೂ ಮಾಡಲಾಗುವುದು. ನಿಗದಿತ ಆವರಣದ ವಾಯುವ್ಯ ಮೂಲೆಯಲ್ಲಿ 50 ಅಡಿ x 111 ಅಡಿ ಆಯಾಮವನ್ನು ಹೊಂದಿರುವ 13 ಡೆಸಿಮಲ್ ಭೂಮಿಯನ್ನು ಅವರಿಂದ ವಶಪಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಏಪ್ರಿಲ್ 19ರಂದು ಹೊರಡಿಸಲಾದ ಆದೇಶದಲ್ಲಿ ಹೇಳಿದೆ.

ಈ ಮೂಲಕ ಸೇನ್ ಅವರು ನಿಗದಿತ ಆವರಣದಲ್ಲಿ ಕಾನೂನು ರೀತಿಯಲ್ಲಿ 1.25 ಎಕರೆ ಭೂಮಿಯನ್ನು ಮಾತ್ರ ಲೀಸ್ ಪ್ರಕಾರ ತಮ್ಮದಾಗಿಸಿಕೊಳ್ಳಬಹುದು. ಅದೇ ಆವರಣದಲ್ಲಿ ಅವರು 1.38 ಎಕರೆ ಭೂಮಿಯನ್ನು ಸ್ವಾಧೀನ ಪಡಿಸುವ ಯಾವುದೇ ಹಕ್ಕನ್ನು ಅವರು ಹೊಂದಿಲ್ಲ ಎಂದು ಜಂಟಿ ರಿಜಿಸ್ಟಾರರ್ ಆಶಿಶ್ ಮಹತೊ ಹೇಳಿದ್ದಾರೆ.

ನೊಬೆಲ್ ಪ್ರಶಸ್ತಿ ವಿಜೇತರು ವಾಸಿಸುತ್ತಿದ್ದ ಶಾಂತಿನಿಕೇತನದಲ್ಲಿರುವ ಅವರ ಪೂರ್ವಜರ ಮನೆ ‘ಪ್ರತಿಚಿ’ಗೆ ಸಂಬಂದಿಸಿದಂತೆ ಕೆಲವು ದಿನಗಳ ಹಿಂದೆ ಕೇಂದ್ರೀಯ ವಿಶ್ವ ವಿದ್ಯಾಲಯವು ಅಮರ್ತ್ಯ ಸೇನ್ಅವರಿಗೆ ಇನ್ನೊಂದು ನೋಟಿಸ್ ನೀಡಿತ್ತು. ಈ ನೋಟಿಸ್ ಗೆ ಪ್ರತಿಕ್ರಿಯಿಸಲು ಮತ್ತು ತೆರವು ಮಾಡಲು ಏಪ್ರಿಲ್ 19 ರವರೆಗೆ ಅವರಿಗೆ ಸಮಯ ನೀಡಿತು. ಅನಧಿಕೃತ ಭೂಮಿಯಿಂದ ತೆರವು ಆಗಬೇಕು ಇಲ್ಲವೇ ಕ್ರಮ ಎದುರಿಸಬೇಕು ಎಂದು ನೋಟಿಸ್​​ನಲ್ಲಿ ಹೇಳಲಾಗಿತ್ತು.

ಈ ಹಿಂದೆ ಶೋಕಾಸ್ ನೋಟಿಸ್​ಗೆ ಸೇನ್ ಅವರು ಕಳುಹಿಸಿದ ಉತ್ತರವು ತಪ್ಪಾಗಿತ್ತು ಎಂದು ಹೇಳಿದ ವಿವಿ, ಈ ಭೂಮಿಯ ಮಾಲೀಕರು ವಿಶ್ವ ಭಾರತಿಯೇ ಆಗಿದೆ. ಇದರಲ್ಲಿ 13 ಡೆಸಿಮಲ್ ಭೂಮಿಯನ್ನು ಸೇನ್ ಅತಿಕ್ರಮಿಸಿಕೊಂಡಿದ್ದಾರೆ ಎಂದಿತ್ತು.

ಇದನ್ನೂ ಓದಿ: ಮಾನನಷ್ಟ ಪ್ರಕರಣ: ಶಿಕ್ಷೆಗೆ ತಡೆ ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಾಲಯ

ಆದರೆ ಈ ಆರೋಪವನ್ನು ಪದೇ ಪದೇ ನಿರಾಕರಿಸಿದ ಸೇನ್ ವಿಶ್ವಭಾರತಿ ತನ್ನ ಅಪ್ಪನಿಗೆ 1.25 ಎಕರೆ ಭೂಮಿಯನ್ನು ಲೀಸ್​ಗೆ ನೀಡಿದ್ದು, 13 ಡೆಸಿಮಲ್ ಭೂಮಿ ತನ್ನ ಅಪ್ಪ ಖರೀದಿಸಿದ್ದಾಗಿದೆ. ಇದನ್ನು ಸಾಬೀತು ಪಡಿಸಲು ನನ್ನಲ್ಲಿ ಅಗತ್ಯ ದಾಖಲೆಗಳಿವೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
ಬಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ, ಮಗು ಸಾವು ಆರೋಪ!
ಬಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ, ಮಗು ಸಾವು ಆರೋಪ!
ನಾರಿ ಶಕ್ತಿ ವಂದನ ಸಮ್ಮೇಳನ, ಪ್ರಧಾನಿ ಮೋದಿ ಭಾಷಣದ ನೇರ ಪ್ರಸಾರ
ನಾರಿ ಶಕ್ತಿ ವಂದನ ಸಮ್ಮೇಳನ, ಪ್ರಧಾನಿ ಮೋದಿ ಭಾಷಣದ ನೇರ ಪ್ರಸಾರ
ಬಿಯರ್ ಬಾಕ್ಸ್ ಲಾರಿ ಪಲ್ಟಿ, ಅಡಿಕೆ ತೋಟದಲ್ಲಿ ಬಿಯರ್ ಬಾಟಲಿಗಳ ಸುರಿಮಳೆ!
ಬಿಯರ್ ಬಾಕ್ಸ್ ಲಾರಿ ಪಲ್ಟಿ, ಅಡಿಕೆ ತೋಟದಲ್ಲಿ ಬಿಯರ್ ಬಾಟಲಿಗಳ ಸುರಿಮಳೆ!