ಜನವರಿ 22 ರಂದು ಕೊಲ್ಕತ್ತಾದಲ್ಲಿ ಐಕ್ಯತಾ ಯಾತ್ರೆಗೆ ಮಮತಾ ಕರೆ; ಮಂದಿರ, ಮಸೀದಿ, ಚರ್ಚ್​​​​ಗೆ ಭೇಟಿ

|

Updated on: Jan 19, 2024 | 6:44 PM

ಈ ಐಕ್ಯತಾ ಮೆರವಣಿಗೆಯನ್ನು ವಿರೋಧಿಸಿ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಕಲ್ಕತ್ತಾ ಹೈಕೋರ್ಟ್‌ಗೆ ಹೋಗಿದ್ದರು. ಗುರುವಾರ ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಷರತ್ತುಗಳಿಗೆ ಒಳಪಟ್ಟು ಈ ಒಗ್ಗಟ್ಟಿನ ಯಾತ್ರೆ ಕೈಗೊಳ್ಳಬಹುದು ಎಂದು ಕೋರ್ಟ್ ಆದೇಶ ನೀಡಿದೆ

ಜನವರಿ 22 ರಂದು ಕೊಲ್ಕತ್ತಾದಲ್ಲಿ ಐಕ್ಯತಾ ಯಾತ್ರೆಗೆ ಮಮತಾ ಕರೆ; ಮಂದಿರ, ಮಸೀದಿ, ಚರ್ಚ್​​​​ಗೆ ಭೇಟಿ
ಮಮತಾ ಬ್ಯಾನರ್ಜಿ
Follow us on

ಕೋಲ್ಕತ್ತಾ ಜನವರಿ 19 : ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ (Ram mandir) ಉದ್ಘಾಟನೆಯಾಗುತ್ತಿದೆ. ಈ ದಿನ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಂಗಾಳದಲ್ಲಿ ಮತ್ತೊಂದು ಕಾರ್ಯಕ್ರಮಕ್ಕೆ ಕರೆ ನೀಡಿದರು. ಮಮತಾ ಕರೆ ಮೇರೆಗೆ ಈ ದಿನ ‘ಐಕ್ಯತಾ ಯಾತ್ರೆ’ (sanhati yatra) ನಡೆಯಲಿದೆ. ಈ ದಿನ ಸ್ವತಃ ಮಮತಾ ಬ್ಯಾನರ್ಜಿ (Mamata Banerjee) ಬೀದಿಗಿಳಿಯಲಿದ್ದಾರೆ. ದಿನದ ಒಗ್ಗಟ್ಟಿನ ಕಾರ್ಯಕ್ರಮವು ಕಾಳಿಘಾಟ್‌ನಲ್ಲಿ ಪೂಜೆಯೊಂದಿಗೆ ಪ್ರಾರಂಭವಾಗುತ್ತದೆ.

ಸೋಮವಾರ 22 ರಂದು ಮಧ್ಯಾಹ್ನ 3 ಗಂಟೆಗೆ ಕಾಳಿಘಾಟ್‌ನಲ್ಲಿ ಮಮತಾ ಬ್ಯಾನರ್ಜಿ ಪೂಜೆ ಸಲ್ಲಿಸಲಿದ್ದಾರೆ. ಆಮೇಲೆ ಅಲ್ಲಿಂದ ಹೊರಡುತ್ತಾರೆ. ಹಜ್ರಾದಿಂದ ಒಗ್ಗಟ್ಟಿನ ಯಾತ್ರೆ ಆರಂಭವಾಗಲಿದೆ. ಆ ಬಳಿಕ ಮುಖ್ಯಮಂತ್ರಿಗಳು ಗಾರ್ಚಾ ರಸ್ತೆಯಲ್ಲಿರುವ ಹಜ್ರಾ ಕಾನೂನು ಕಾಲೇಜು ಎದುರಿನ ಗುರುದ್ವಾರಕ್ಕೆ ತೆರಳಲಿದ್ದಾರೆ.

ಅಲ್ಲಿಂದ ಪಾರ್ಕ್ ಸರ್ಕಸ್. ಪಾರ್ಕ್ ಸರ್ಕಸ್ ತಲುಪಿದ ಬಳಿಕ ಮಸೀದಿಗೆ ತೆರಳಲಿದ್ದಾರೆ. ಮುಂದೆ ಒಂದು ಚರ್ಚ್ ಇದೆ. ಅಲ್ಲಿಗೆ ಮಮತಾ ಬ್ಯಾನರ್ಜಿ ಕೂಡ ಹೋಗಲಿದ್ದಾರೆ. ನಂತರ ಪಾರ್ಕ್ ಸರ್ಕಸ್ ನಲ್ಲಿಯೇ ಸಭೆ ನಡೆಯಲಿದೆ. ವೇದಿಕೆಯಲ್ಲಿ ಮುಖ್ಯಮಂತ್ರಿ ಜತೆ ಎಲ್ಲ ಧಾರ್ಮಿಕ ಮುಖಂಡರು ಇರುತ್ತಾರೆ. ಆ ದಿನ ಬೇರೆ ಯಾವ ರಾಜಕೀಯ ವ್ಯಕ್ತಿಯೂ ವೇದಿಕೆಯಲ್ಲಿ ಇರುವುದಿಲ್ಲ ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: Ram Lalla: ಅಯೋಧ್ಯೆ ರಾಮಮಂದಿರದ ರಾಮಲಲ್ಲಾ ಹೇಗಿದ್ದಾನೆ? ವೈರಲ್ ಆಯ್ತು ಫೋಟೋ

ಈ ಐಕ್ಯತಾ ಮೆರವಣಿಗೆಯನ್ನು ವಿರೋಧಿಸಿ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಕಲ್ಕತ್ತಾ ಹೈಕೋರ್ಟ್‌ಗೆ ಹೋಗಿದ್ದರು. ಗುರುವಾರ ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಷರತ್ತುಗಳಿಗೆ ಒಳಪಟ್ಟು ಈ ಒಗ್ಗಟ್ಟಿನ ಯಾತ್ರೆ ಕೈಗೊಳ್ಳಬಹುದು ಎಂದು ಕೋರ್ಟ್ ಆದೇಶ ನೀಡಿದೆ. ಒಗ್ಗಟ್ಟಿನ ಮೆರವಣಿಗೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಭಾಷಣ ಮಾಡುವಂತಿಲ್ಲ ಎಂದು ಕೋರ್ಟ್ ಹೇಳಿದೆ. ಟ್ರಾಫಿಕ್ ಸಮಸ್ಯೆಗಳು ಅಥವಾ ಆಂಬ್ಯುಲೆನ್ಸ್‌ನಲ್ಲಿ ಸಿಲುಕಿಕೊಳ್ಳುವುದು ಮುಂತಾದ ಸಮಸ್ಯೆಗಳ ಮೇಲೆ ನಿಗಾ ಇಡಲು ನ್ಯಾಯಾಲಯ ಕೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ