AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಡ್​ರೂಂನಲ್ಲೂ ಸಾಮಾಜಿಕ ಅಂತರಕಾಯ್ದುಕೊಂಡ ಗಂಡ: ಅನುಮಾನಗೊಂಡು ಅವನ ಪುರುಷತ್ವ ಪರೀಕ್ಷೆ ಮಾಡಿಸಿದ ಪತ್ನಿ

ಕೊರೊನಾಗೆ ಭಾರೀ ಹೆದರಿದ್ದ ಈ ವ್ಯಕ್ತಿ ನಿತ್ಯ ಹೆಂಡತಿಯಿಂದ ದೂರ ಮಲಗುತ್ತಿದ್ದ. ಆಕೆ ಕೆಲವು ದಿನ ಇದನ್ನು ಸಹಿಸಿಕೊಂಡಳಾದರೂ ನಂತರ ಆಕೆ ಇದರಿಂದ ಸಿಟ್ಟಾಗಿದ್ದಳು. ನೋಡುವಷ್ಟು ನೋಡಿ, ಅಪ್ಪನಮನೆ ಹಾದಿ ಹಿಡಿದಿದ್ದಳು.

ಬೆಡ್​ರೂಂನಲ್ಲೂ ಸಾಮಾಜಿಕ ಅಂತರಕಾಯ್ದುಕೊಂಡ  ಗಂಡ: ಅನುಮಾನಗೊಂಡು ಅವನ ಪುರುಷತ್ವ ಪರೀಕ್ಷೆ ಮಾಡಿಸಿದ ಪತ್ನಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Apr 07, 2022 | 5:37 PM

Share

ಭೋಪಾಲ್​: ಕೊರೊನಾ ವೈರಸ್​ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಸೂಚಿಸುತ್ತಲೇ ಇದೆ. ನಿಯಮ ಮರೆತ ಅನೇಕರಿಗೆ ದಂಡ ಕೂಡ ವಿಧಿಸಲಾಗಿದೆ. ಭೋಪಾಲ್​ನಲ್ಲೊಬ್ಬ ಕೊರೊನಾಗೆ ಭಯಬಿದ್ದು ಹೆಂಡತಿ ಜೊತೆಯೇ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾನೆ! ಇದರಿಂದ ಆತ ಅನುಭವಿಸಿದ ಫಜೀತಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕೊರೊನಾ ಕಾಣಿಸಿಕೊಳ್ಳುವುದಕ್ಕೂ ಕೆಲವೇ ದಿನಗಳ ಮೊದಲು ಈತ ಮದುವೆ ಆಗಿದ್ದ. ಕೊರೊನಾ ಎಂದರೆ ಬೆಚ್ಚಿ ಬೀಳುತ್ತಿದ್ದ ಈತ, ಸರ್ಕಾರ ಕೊಟ್ಟ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ. ದಿನಕ್ಕೆ ಒಂದು ಹತ್ತು ಬಾರಿಯಾದರೂ ಕೈ ತೊಳೆಯುತ್ತಿದ್ದ. ಇದರ ಜೊತೆಗೆ ಮನೆಯವರ ಜೊತೆಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದ!

ಕೊರೊನಾಗೆ ಭಾರಿ ಹೆದರಿದ್ದ ಈ ವ್ಯಕ್ತಿ ನಿತ್ಯ ಹೆಂಡತಿಯಿಂದ ದೂರ ಮಲಗುತ್ತಿದ್ದ. ಆಕೆ ಕೆಲವು ದಿನ ಇದನ್ನು ಸಹಿಸಿಕೊಂಡಳಾದರೂ ನಂತರ ಆಕೆ ಇದರಿಂದ ಸಿಟ್ಟಾಗಿದ್ದಳು. ಕೊನೆಗೆ ತಾಳ್ಮೆಯ ಕಟ್ಟೆ ಒಡೆದು ತಂದೆ-ತಾಯಿ ಜೊತೆ ಹೋಗಿ ವಾಸ ಮಾಡಲು ಆರಂಭಿಸಿದ್ದಳು.

ಇದನ್ನು ಸಹಿಸದ ಗಂಡ ಆಕೆಯ ಮನೆಗೆ ಹೋಗಿ ಗಲಾಟೆ ಮಾಡಿದ್ದ. ಹೆಂಡತಿಯನ್ನು ಮನೆಗೆ ಕಳುಹಿಸಿಕೊಡದಿದ್ದರೆ ಹುಷಾರ್​ ಎಂದು ಮಾವ-ಅತ್ತೆಗೆ ಅವಾಜ್​ ಹಾಕಿದ್ದ. ಇದರಿಂದ ಕೋಪಗೊಂಡ ಮಹಿಳೆ, ನೇರವಾಗಿ ಕಾನೂನು ಸೇವಾ ಪ್ರಾಧಿಕಾರದ ಮೆಟ್ಟಿಲೇರಿದ್ದಾಳೆ.  “ನನ್ನ ಗಂಡನ ಜೊತೆ ನನಗೆ ಇರಲು ಸಾಧ್ಯವಾಗುತ್ತಿಲ್ಲ. ಆತನಿಂದ ನಾನು ವಿಚ್ಛೇದನ ಪಡೆದುಕೊಳ್ಳುತ್ತಿದ್ದೇನೆ. ಆತ ಪುರುಷನೇ ಅಲ್ಲ. ಹೀಗಾಗಿ, ಆತ ನನ್ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾನೆ,” ಎಂದು ದೂರಿದ್ದಾಳೆ!

ಈ ಹೇಳಿಕೆ ಕೇಳಿದ ಗಂಡ ಕಕ್ಕಾಬಿಕ್ಕಿ ಆಗಿದ್ದಾನೆ. ನಂತರ ಆತ ಪುರಷತ್ವ ಪರೀಕ್ಷೆಗೂ ಒಳಪಟ್ಟಿದ್ದಾನೆ. ವರದಿಯಲ್ಲಿ ಆತ ಪುರುಷ ಎಂಬುದು ಸಾಬೀತಾಗಿದೆ. ಈ ವರದಿ ನೋಡಿದ ನಂತರ ದಂಪತಿ ಕೌನ್ಸಿಲರ್​ ಭೇಟಿ ಮಾಡಿದ್ದಾರೆ. ಹೆಂಡತಿಯಿಂದ ಅಂತರ ಕಾಯ್ದುಕೊಳ್ಳುವುದಿಲ್ಲ  ಎಂಬ ಭರವಸೆ ಸಿಕ್ಕ ನಂತರ ಮಹಿಳೆ ಮನೆಗೆ ಬಂದಿದ್ದಾಳೆ.

ಫಸ್ಟ್ ನೈಟ್​ನಲ್ಲೇ ಮದ್ಯ ಸಮಾರಾಧನೆ..ಒಂದೇ ತಿಂಗಳಿಗೆ ಮುರಿದು ಬಿತ್ತು ಮದುವೆ..ಯಾವೂರಲ್ಲಿ?

Published On - 6:22 pm, Sat, 5 December 20

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ