AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಡ್​ರೂಂನಲ್ಲೂ ಸಾಮಾಜಿಕ ಅಂತರಕಾಯ್ದುಕೊಂಡ ಗಂಡ: ಅನುಮಾನಗೊಂಡು ಅವನ ಪುರುಷತ್ವ ಪರೀಕ್ಷೆ ಮಾಡಿಸಿದ ಪತ್ನಿ

ಕೊರೊನಾಗೆ ಭಾರೀ ಹೆದರಿದ್ದ ಈ ವ್ಯಕ್ತಿ ನಿತ್ಯ ಹೆಂಡತಿಯಿಂದ ದೂರ ಮಲಗುತ್ತಿದ್ದ. ಆಕೆ ಕೆಲವು ದಿನ ಇದನ್ನು ಸಹಿಸಿಕೊಂಡಳಾದರೂ ನಂತರ ಆಕೆ ಇದರಿಂದ ಸಿಟ್ಟಾಗಿದ್ದಳು. ನೋಡುವಷ್ಟು ನೋಡಿ, ಅಪ್ಪನಮನೆ ಹಾದಿ ಹಿಡಿದಿದ್ದಳು.

ಬೆಡ್​ರೂಂನಲ್ಲೂ ಸಾಮಾಜಿಕ ಅಂತರಕಾಯ್ದುಕೊಂಡ  ಗಂಡ: ಅನುಮಾನಗೊಂಡು ಅವನ ಪುರುಷತ್ವ ಪರೀಕ್ಷೆ ಮಾಡಿಸಿದ ಪತ್ನಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Apr 07, 2022 | 5:37 PM

Share

ಭೋಪಾಲ್​: ಕೊರೊನಾ ವೈರಸ್​ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಸೂಚಿಸುತ್ತಲೇ ಇದೆ. ನಿಯಮ ಮರೆತ ಅನೇಕರಿಗೆ ದಂಡ ಕೂಡ ವಿಧಿಸಲಾಗಿದೆ. ಭೋಪಾಲ್​ನಲ್ಲೊಬ್ಬ ಕೊರೊನಾಗೆ ಭಯಬಿದ್ದು ಹೆಂಡತಿ ಜೊತೆಯೇ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾನೆ! ಇದರಿಂದ ಆತ ಅನುಭವಿಸಿದ ಫಜೀತಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕೊರೊನಾ ಕಾಣಿಸಿಕೊಳ್ಳುವುದಕ್ಕೂ ಕೆಲವೇ ದಿನಗಳ ಮೊದಲು ಈತ ಮದುವೆ ಆಗಿದ್ದ. ಕೊರೊನಾ ಎಂದರೆ ಬೆಚ್ಚಿ ಬೀಳುತ್ತಿದ್ದ ಈತ, ಸರ್ಕಾರ ಕೊಟ್ಟ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ. ದಿನಕ್ಕೆ ಒಂದು ಹತ್ತು ಬಾರಿಯಾದರೂ ಕೈ ತೊಳೆಯುತ್ತಿದ್ದ. ಇದರ ಜೊತೆಗೆ ಮನೆಯವರ ಜೊತೆಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದ!

ಕೊರೊನಾಗೆ ಭಾರಿ ಹೆದರಿದ್ದ ಈ ವ್ಯಕ್ತಿ ನಿತ್ಯ ಹೆಂಡತಿಯಿಂದ ದೂರ ಮಲಗುತ್ತಿದ್ದ. ಆಕೆ ಕೆಲವು ದಿನ ಇದನ್ನು ಸಹಿಸಿಕೊಂಡಳಾದರೂ ನಂತರ ಆಕೆ ಇದರಿಂದ ಸಿಟ್ಟಾಗಿದ್ದಳು. ಕೊನೆಗೆ ತಾಳ್ಮೆಯ ಕಟ್ಟೆ ಒಡೆದು ತಂದೆ-ತಾಯಿ ಜೊತೆ ಹೋಗಿ ವಾಸ ಮಾಡಲು ಆರಂಭಿಸಿದ್ದಳು.

ಇದನ್ನು ಸಹಿಸದ ಗಂಡ ಆಕೆಯ ಮನೆಗೆ ಹೋಗಿ ಗಲಾಟೆ ಮಾಡಿದ್ದ. ಹೆಂಡತಿಯನ್ನು ಮನೆಗೆ ಕಳುಹಿಸಿಕೊಡದಿದ್ದರೆ ಹುಷಾರ್​ ಎಂದು ಮಾವ-ಅತ್ತೆಗೆ ಅವಾಜ್​ ಹಾಕಿದ್ದ. ಇದರಿಂದ ಕೋಪಗೊಂಡ ಮಹಿಳೆ, ನೇರವಾಗಿ ಕಾನೂನು ಸೇವಾ ಪ್ರಾಧಿಕಾರದ ಮೆಟ್ಟಿಲೇರಿದ್ದಾಳೆ.  “ನನ್ನ ಗಂಡನ ಜೊತೆ ನನಗೆ ಇರಲು ಸಾಧ್ಯವಾಗುತ್ತಿಲ್ಲ. ಆತನಿಂದ ನಾನು ವಿಚ್ಛೇದನ ಪಡೆದುಕೊಳ್ಳುತ್ತಿದ್ದೇನೆ. ಆತ ಪುರುಷನೇ ಅಲ್ಲ. ಹೀಗಾಗಿ, ಆತ ನನ್ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾನೆ,” ಎಂದು ದೂರಿದ್ದಾಳೆ!

ಈ ಹೇಳಿಕೆ ಕೇಳಿದ ಗಂಡ ಕಕ್ಕಾಬಿಕ್ಕಿ ಆಗಿದ್ದಾನೆ. ನಂತರ ಆತ ಪುರಷತ್ವ ಪರೀಕ್ಷೆಗೂ ಒಳಪಟ್ಟಿದ್ದಾನೆ. ವರದಿಯಲ್ಲಿ ಆತ ಪುರುಷ ಎಂಬುದು ಸಾಬೀತಾಗಿದೆ. ಈ ವರದಿ ನೋಡಿದ ನಂತರ ದಂಪತಿ ಕೌನ್ಸಿಲರ್​ ಭೇಟಿ ಮಾಡಿದ್ದಾರೆ. ಹೆಂಡತಿಯಿಂದ ಅಂತರ ಕಾಯ್ದುಕೊಳ್ಳುವುದಿಲ್ಲ  ಎಂಬ ಭರವಸೆ ಸಿಕ್ಕ ನಂತರ ಮಹಿಳೆ ಮನೆಗೆ ಬಂದಿದ್ದಾಳೆ.

ಫಸ್ಟ್ ನೈಟ್​ನಲ್ಲೇ ಮದ್ಯ ಸಮಾರಾಧನೆ..ಒಂದೇ ತಿಂಗಳಿಗೆ ಮುರಿದು ಬಿತ್ತು ಮದುವೆ..ಯಾವೂರಲ್ಲಿ?

Published On - 6:22 pm, Sat, 5 December 20

ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ