WITT Speaker Gallery Day 1: ಕ್ರೀಡಾ ಕ್ಷೇತ್ರದಲ್ಲಿ ಭವಿಷ್ಯದ ಯೋಜನೆ ಬಗ್ಗೆ ಸಂವಾದ ನಡೆಸಲಿರುವ ಅನುರಾಗ್ ಠಾಕೂರ್

ಕೇಂದ್ರ ಸರ್ಕಾರ ಮಾಹಿತಿ ಮತ್ತು ಪ್ರಸಾರ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಟಿವಿ9 ನೆಟ್‌ವರ್ಕ್‌ ನಡೆಸುತ್ತಿರುವ 'ವಾಟ್ ಇಂಡಿಯಾ ಥಿಂಕ್ಸ್ ಟುಡೇ' ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

WITT Speaker Gallery Day 1:  ಕ್ರೀಡಾ ಕ್ಷೇತ್ರದಲ್ಲಿ ಭವಿಷ್ಯದ ಯೋಜನೆ ಬಗ್ಗೆ ಸಂವಾದ ನಡೆಸಲಿರುವ ಅನುರಾಗ್ ಠಾಕೂರ್
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 24, 2024 | 1:00 PM

ಟಿವಿ9 ನೆಟ್‌ವರ್ಕ್‌ ನಡೆಸುತ್ತಿರುವ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಕಾರ್ಯಕ್ರಮದಲ್ಲಿ ಭಾರತದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭಾಗವಹಿಸಲಿದ್ದಾರೆ. ಫೆ.25ರಂದು ನಡೆಯಲಿರುವ ಈ ಕಾರ್ಯಕ್ರಮದ ಮೊದಲು ಅತಿಥಿಯಾಗಿ ಇವರು ಭಾಗವಹಿಸಲಿದ್ದಾರೆ. ಭಾರತದ ಕ್ರೀಡೆಗೆ ಅವರ ನೀಡಿರುವ ಯೋಜನೆಗಳ ಕುರಿತು ಸಂವಾದ ನಡೆಸಲಿದ್ದಾರೆ. ಮೂರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಅಶ್ವಿನ್​​​ ವೈಷವ್, ಜೈಶಂಕರ್​​​​, ಸ್ಮೃತಿ ಇರಾನಿ ಹಾಗೂ ಇನ್ನು ಅನೇಕ ಉದದ್ಯಮಿಗಳು ಕೂಡ ಭಾಗವಹಿಸಲಿದ್ದಾರೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಠಾಕೂರ್ ಅವರು ಭಾರತದ ಯುವಶಕ್ತಿಗಳ ಭವಿಷ್ಯದ ಹಾದಿ ಹೇಗಿರಬೇಕು ಎಂದು ಹೇಳಿದರು. ಯುವಕರನ್ನು ಭಾರತದ ಮಹಾಶಕ್ತಿಯಾಗಿ ರೂಪಿಸುವ ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ್​​ ಭಾರತ್​​​ @ 2047′ ಮಿಷನ್​​ನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಠಾಕೂರ್ ಭಾರತದ ನೆಲದಲ್ಲಿ ಯುವಕ ಸಾಧನೆಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಯುವ ಸಮೂಹವನ್ನು ಬೆಂಬಲಿಸು ಕೆಲಸವನ್ನು ಮಾಡುತ್ತಿದ್ದಾರೆ. ಹೊಸ ತಂತ್ರಜ್ಞಾನಗಳನ್ನು ಭಾರತದಲ್ಲಿ ಉತ್ಪಾಧಿಸಲು ಹೊಸ ಹೊಸ ಯೋಜನೆಯನ್ನು ನೀಡಿದ್ದಾರೆ. ತಮ್ಮ ಯೋಜನೆ ಮೂಲಕ ಕೋಟ್ಯಾಂತರ ಯುವಕರಿಗೆ ಉದ್ಯೋಗ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಈ ಮೂಲಕ ಯುವಕರಿಗೆ ಒಂದು ಮಾತನ್ನು ಕೂಡ ಹೇಳಿದ್ದಾರೆ. ನೀವು ದೇಶದ ಆರ್ಥಿಕತೆಯ ಭವಿಷ್ಯದ ಚಾಲಕರು. ಅವಕಾಶಗಳನ್ನು ಬಳಸಿಕೊಳ್ಳಿ, ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಿ ಎಂದು ಹೇಳಿದರು.

2047ರ ವೇಳೆಗೆ, ಜಾಗತಿಕ ಉದ್ಯೋಗಿಗಳಲ್ಲಿ ಅಂದಾಜು 21 ಪ್ರತಿಶತದಷ್ಟು ಜನರು ಭಾರತದವರೆ ಇರಬೇಕು ಎಂದು ಹೇಳಿದ್ದಾರೆ. ನಮ್ಮ ಯುವಕರು ಭಾರತ ಭವಿಷ್ಯದ ವಾಸ್ತುಶಿಲ್ಪಿಗಳು ಮಾತ್ರವಲ್ಲದೆ ರಾಷ್ಟ್ರದ ಆಕಾಂಕ್ಷೆಗಳು, ನೀತಿಗಳು ಮತ್ತು ಹಣೆಬರಹದ ಪಾಲಕರು ಎಂದು ಹೇಳಿದ್ದಾರೆ. ಠಾಕೂರ್ ಸಮಾಜ ಸೇವೆಯಲ್ಲಿ ಉತ್ತಮ ಹೆಸರು ಮಾಡಿದ್ದಾರೆ. ಹಿಮಾಚಲ ಪ್ರದೇಶದ ಹಮೀರ್‌ಪುರ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಅವರು ಪ್ರಸ್ತುತ ಕೇಂದ್ರ ಕ್ರೀಡಾ, ಯುವ ವ್ಯವಹಾರಗಳ ಸಚಿವರಾಗಿ ಮತ್ತು ಭಾರತ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: ಫೆ.26ಕ್ಕೆ ‘ರೈಸ್ ಆಫ್ ದಿ ಗ್ಲೋಬಲ್ ಸೌತ್’ ಸಂವಾದ ನಡೆಸಲಿರುವ ಸಚಿವ ಜೈ ಶಂಕರ್​​

ಅವರು ಮೇ 2015 ರಿಂದ ಫೆಬ್ರವರಿ 2017 ರವರೆಗೆ ಬಿಸಿಸಿಐ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಹೆಚ್ಚು ಒತ್ತು ನೀಡಿ ಶ್ರಮಿಸಿದ್ದಾರೆ. ಇವರು ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಅವರ ಕಿರಿಯ ಪುತ್ರ, ಪಂಜಾಬ್‌ನ ಜಲಂಧರ್‌ನ ದೋಬಾ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿ, 2008ರಲ್ಲಿ ಪ್ರಥಮ ಬಾರಿಗೆ ಲೋಕಸಭೆ ಕ್ಷೇತ್ರಕ್ಕೆ ಆಯ್ಕೆಯಾದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 6:11 pm, Wed, 21 February 24