AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WITT Speaker Gallery Day 2: ಫೆ.26ಕ್ಕೆ ‘ರೈಸ್ ಆಫ್ ದಿ ಗ್ಲೋಬಲ್ ಸೌತ್’ ಸಂವಾದ ನಡೆಸಲಿರುವ ಸಚಿವ ಜೈ ಶಂಕರ್​​

ಟಿವಿ9 ನೆಟ್‌ವರ್ಕ್‌ ನಡೆಸುತ್ತಿರುವ 'ವಾಟ್ ಇಂಡಿಯಾ ಥಿಂಕ್ಸ್ ಟುಡೇ' ಕಾರ್ಯಕ್ರಮದಲ್ಲಿ ಭಾರತದ ವಿದೇಶಾಂಗ ಸಚಿವ ಡಾ.ಜೈಶಂಕರ್​ 'ರೈಸ್ ಆಫ್ ದಿ ಗ್ಲೋಬಲ್ ಸೌತ್' ವಿಚಾರವಾಗಿ ಸಂವಾದ ನಡೆಸಲಿದ್ದಾರೆ. ಭಾರತದ ವಿದೇಶಾಂಗ ವ್ಯವಸ್ಥೆ ಹೇಗೆ? ಭಾರತದ ರಾಜತಾಂತ್ರಿಕತೆಯ ಶಕ್ತಿ ಏನು? ಎಂಬ ಬಗ್ಗೆ ಮಾತನಾಡಲಿದ್ದಾರೆ.

WITT Speaker Gallery Day 2: ಫೆ.26ಕ್ಕೆ 'ರೈಸ್ ಆಫ್ ದಿ ಗ್ಲೋಬಲ್ ಸೌತ್' ಸಂವಾದ ನಡೆಸಲಿರುವ ಸಚಿವ ಜೈ ಶಂಕರ್​​
ಜೈಶಂಕರ್​
TV9 Web
| Edited By: |

Updated on:Feb 24, 2024 | 1:00 PM

Share

ಟಿವಿ9 ನೆಟ್‌ವರ್ಕ್‌ನ ನೇತೃತ್ವದಲ್ಲಿ ಫೆ.26ರಂದು ದೆಹಲಿಯಲ್ಲಿ ನಡೆಯಲಿರುವ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಕಾರ್ಯಕ್ರಮದಲ್ಲಿ ಭಾರತದ ವಿದೇಶಾಂಗ ಸಚಿವ ಡಾ. ಜೈ ಶಂಕರ್​​ ಭಾಗವಹಿಸಲಿದ್ದಾರೆ. ಅವರು ‘ರೈಸ್ ಆಫ್ ದಿ ಗ್ಲೋಬಲ್ ಸೌತ್’ ಎಂಬ ವಿಚಾರದ ಬಗ್ಗೆ ಈ ಕಾರ್ಯಕ್ರಮದಲ್ಲಿ ಸಂವಾದ ನಡೆಸಲಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪ್ರಧಾನಿ ಮೋದಿ ಅವರು ಕೂಡ ಭಾಗವಹಿಸಲಿದ್ದು, ಅವರ ಸಂವಾದ ಕಾರ್ಯಕ್ರಮ ಕೂಡ ನಡೆಯಲಿದೆ.

ಭಾರತದ ವಿದೇಶಾಂಗ ವ್ಯವಸ್ಥೆಯನ್ನು ತುಂಬಾ ಅಚ್ಚುಕಟ್ಟಾಗಿ ನಿಭಾಯಿಸಿದ ವ್ಯಕ್ತಿ ಜೈಶಂಕರ್​​. ವಿಶ್ವದ ಆರ್ಥಿಕತೆ ಮತ್ತು ಭೌಗೋಳಿಕ, ರಾಜಕೀಯ ವಿಚಾರದಲ್ಲಿ ಇವರ ಕೆಲಸ ಮಹತ್ವದ್ದು, ಜೈಶಂಕರ್​​​​ ಒಬ್ಬ ಸಚಿವನಾಗಿದ್ದರು, ಒಬ್ಬ ಚಿಂತಕ ಹಾಗೂ ಬರಹಗಾರ, ಅವರು ಇತ್ತಿಚೇಗೆ ‘ದಿ ಇಂಡಿಯಾ ವೇ’ ಮತ್ತು ‘ವೈ ಭಾರತ್ ಮ್ಯಾಟರ್ಸ್ ಎಂಬ ಪುಸ್ತಕಗಳನ್ನು ಬಿಡುಗಡೆ ಮಾಡಿದ್ದಾರೆ. ನೆರೆಹೊರೆಯ ವಿಚಾರಗಳನ್ನು, ಭಾರತದ ಸಮಕಾಲೀನ ವಿದೇಶಾಂಗ ನೀತಿ ಸಮಸ್ಯೆಗಳನ್ನು ತುಂಬಾ ವ್ಯವಸ್ಥಿತವಾಗಿ ನಿಭಾಯಿಸುತ್ತಾರೆ.

ಇನ್ನು ಜೈಶಂಕರ್​​ ಅವರು ‘ಆತ್ಮನಿರ್ಭರ್ ಭಾರತ್’ ಮತ್ತು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ನಂತಹ ಪ್ರಧಾನಿ ನರೇಂದ್ರ ಮೋದಿ ಅವರ ಆಲೋಚನೆಗಳು ಹೇಗೆ ವಿದೇಶದಲ್ಲಿ ಪರಿಣಾಮ ಉಂಟು ಮಾಡಿದೆ. ಎಂಬುದನ್ನು ವಿವರಿಸಿದ್ದಾರೆ. ಸಮಾಜ ಕಲ್ಯಾಣ, ದೇಶೀಯ ಉತ್ಪಾದನೆ ಮತ್ತು ಕೌಶಲ್ಯ ಅಭಿವೃದ್ಧಿಯ ವಿಷಯದಲ್ಲಿ ಕ್ರಾಂತಿಕಾರಿಯಾಗಿದೆ ಎಂದು ತಮ್ಮ ಮೊದಲ ಪುಸ್ತಕದಲ್ಲಿ ‘ದಿ ಇಂಡಿಯಾ ವೇ’ ಅಲ್ಲಿ ತಿಳಿಸಿದ್ದಾರೆ. ಜೈಶಂಕರ್​​ ಅವರ ಎರಡನೇ ಪುಸ್ತಕ ‘ವೈ ಭಾರತ್ ಮ್ಯಾಟರ್ಸ್​​ನಲ್ಲಿ ಜಾಗತಿಕ ರಂಗದಲ್ಲಿ ಭಾರತದ ಏರಿಕೆ ಹೇಗಿದೆ ಎಂಬುದುನ್ನು ತಿಳಿಸಿದ್ದಾರೆ.

ಇದನ್ನೂ ಓದಿ: ಟಿವಿ9 ನೆಟ್‌ವರ್ಕ್‌ ಕಾರ್ಯಕ್ರಮದಲ್ಲಿ ದೇಶದ ಪ್ರಧಾನ ಸೇವಕ ಮೋದಿ ಭಾಗಿ

ಜೈಶಂಕರ್​​ ವಿದೇಶಾಂಗ ಸಚಿವರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಇಲ್ಲಿಯವರೆಗೆ ಅವರು ಮಾಡಿದ ಕೆಲಸ ಅದ್ಭುತವಾಗಿದೆ. ಭಾರತದ ವಿದೇಶಾಂಗ ನೀತಿ ಇತರ ದೇಶಗಳಿಗೆ ಪ್ರೇರಣೆಯಾಗುವಂತೆ ಕೆಸಲ ಮಾಡಿದ್ದಾರೆ. ಜಿ-20 ಶೃಂಗಸಭೆಯಲ್ಲಿ ಇವರ ಪಾತ್ರ ದೊಡ್ಡದ್ದು, ವಿದೇಶಗಳ ರಾಜಕೀಯ ಬಿಕ್ಕಟ್ಟಿನ ಪರಿಹಾರದಲ್ಲಿ ಇವರ ಕೆಲಸ ಮಾದರಿಯಾಗಿದೆ. ಉಕ್ರೇನ್ ಮತ್ತು ಇತರ ಸಂಘರ್ಷ ಭಾರತ ನಿಲುವು ಎಲ್ಲದರಲ್ಲೂ ಇವರ ಪಾತ್ರ ಮಹತ್ವದ್ದು.

ಜನವರಿ 2015ರಿಂದ ಜನವರಿ 2018 ರವರೆಗೆ ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಜೈಶಂಕರ್ ಅವರು ವಯಸ್ಸು 69 ವರ್ಷ. ಮೇ 2019 ರಲ್ಲಿ ಭಾರತದ ವಿದೇಶಾಂಗ ಸಚಿವರಾಗಿ ನೇಮಕಗೊಂಡರು. ನಟವರ್ ಸಿಂಗ್ ನಂತರ ಭಾರತದ ವಿದೇಶಾಂಗ ಸಚಿವರಾಗಿ ನೇಮಕಗೊಂಡ ಎರಡನೇ ರಾಜತಾಂತ್ರಿಕ ಅಧಿಕಾರಿ.

38 ವರ್ಷಗಳ ದೇಶ ಸೇವೆಯಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಸಿಂಗಾಪುರದ ಹೈ ಕಮಿಷನರ್ (2007-2009) ಮತ್ತು ಜೆಕ್ ರಿಪಬ್ಲಿಕ್ (2001-2004), ಚೀನಾ (2009-2013) ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೂ US (2014-2015) ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಮಾತುಕತೆಯಲ್ಲಿ ಜೈಶಂಕರ್ ಪ್ರಮುಖ ಪಾತ್ರ ವಹಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:23 pm, Wed, 21 February 24

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ