AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಬ್ಬರಲ್ಲ ಇಬ್ಬರಲ್ಲ ಗಂಡ ಸೇರಿ ಬರೋಬ್ಬರಿ 139 ಜನರಿಂದ ಗ್ಯಾಂಗ್‌ರೇಪ್‌!

ಹೈದರಾಬಾದ್: ಆಕೆ ನೂರಾರು ಆಸೆ-ಕನಸುಗಳನ್ನ ಇಟ್ಕೊಂಡು ಮದ್ವೆ ಆಗಿದ್ಲು. ಆದ್ರೆ ಮೂರೇ ತಿಂಗಳಿಗೆ ಕನಸುಗಳೆಲ್ಲ ನುಚ್ಚು ನೂರಾಗಿದ್ವು. ತಾಳಿಕಟ್ಟಿದ ಗಂಡನೇ ಆಕೆಗೆ ನರಕ ತೋರಿಸಿದ್ದ. ಹೀಗಾಗಿ ಪತಿ ಸೇರಿದಂತೆ 139 ಜನರ ವಿರುದ್ಧ ಗ್ಯಾಂಗ್ ರೇಪ್ ಕೇಸ್ ದಾಖಲಿಸಿದ್ದಾಳೆ. ತೆಲಂಗಾಣದ ನಲ್ಗೊಂಡ ಜಿಲ್ಲೆಯ ಸೆತ್ತಿಪಲ್ಲೇಮ್ ಗ್ರಾಮದ ಯುವತಿ ಅಪ್ಪ-ಅಮ್ಮನ ನಿರ್ಧಾರದಂತೆ ಮಿರ್ಯಾಲಗೂಡಾದ ಕೊಂಡರೆಡ್ಡಿ ರಮೇಶ್ ಎಂಬಾತನನ್ನ ಮದ್ವೆಯಾಗಿದ್ಲು. ಆದ್ರೆ ಮದ್ವೆಯಾಗಿದ್ದ 3 ತಿಂಗಳು ಯುವತಿ ಖುಷಿಯಾಗಿದ್ಲು. ತದನಂತ್ರ ಗಂಡ ನರಕ ತೋರಿಸೋಕೆ ಶುರು ಮಾಡಿದ್ನಂತೆ. ಆ ಬಳಿಕ […]

ಒಬ್ಬರಲ್ಲ ಇಬ್ಬರಲ್ಲ ಗಂಡ ಸೇರಿ ಬರೋಬ್ಬರಿ 139 ಜನರಿಂದ ಗ್ಯಾಂಗ್‌ರೇಪ್‌!
ಪ್ರಾತಿನಿಧಿಕ ಚಿತ್ರ
ಆಯೇಷಾ ಬಾನು
|

Updated on: Aug 22, 2020 | 7:10 AM

Share

ಹೈದರಾಬಾದ್: ಆಕೆ ನೂರಾರು ಆಸೆ-ಕನಸುಗಳನ್ನ ಇಟ್ಕೊಂಡು ಮದ್ವೆ ಆಗಿದ್ಲು. ಆದ್ರೆ ಮೂರೇ ತಿಂಗಳಿಗೆ ಕನಸುಗಳೆಲ್ಲ ನುಚ್ಚು ನೂರಾಗಿದ್ವು. ತಾಳಿಕಟ್ಟಿದ ಗಂಡನೇ ಆಕೆಗೆ ನರಕ ತೋರಿಸಿದ್ದ. ಹೀಗಾಗಿ ಪತಿ ಸೇರಿದಂತೆ 139 ಜನರ ವಿರುದ್ಧ ಗ್ಯಾಂಗ್ ರೇಪ್ ಕೇಸ್ ದಾಖಲಿಸಿದ್ದಾಳೆ.

ತೆಲಂಗಾಣದ ನಲ್ಗೊಂಡ ಜಿಲ್ಲೆಯ ಸೆತ್ತಿಪಲ್ಲೇಮ್ ಗ್ರಾಮದ ಯುವತಿ ಅಪ್ಪ-ಅಮ್ಮನ ನಿರ್ಧಾರದಂತೆ ಮಿರ್ಯಾಲಗೂಡಾದ ಕೊಂಡರೆಡ್ಡಿ ರಮೇಶ್ ಎಂಬಾತನನ್ನ ಮದ್ವೆಯಾಗಿದ್ಲು. ಆದ್ರೆ ಮದ್ವೆಯಾಗಿದ್ದ 3 ತಿಂಗಳು ಯುವತಿ ಖುಷಿಯಾಗಿದ್ಲು. ತದನಂತ್ರ ಗಂಡ ನರಕ ತೋರಿಸೋಕೆ ಶುರು ಮಾಡಿದ್ನಂತೆ. ಆ ಬಳಿಕ ನಡೆದಿದ್ದೆಲ್ಲ ಬೆಚ್ಚಿಬೀಳಿಸೋ ಘಟನೆ.

ಸ್ನೇಹಿತರ ಜೊತೆ ಸೇರಿ ಹೆಂಡತಿಯ ಮೇಲೆ ಗ್ಯಾಂಗ್​​ರೇಪ್! ಹೌದು, ಇದು ನಂಬೋಕೆ ಕಷ್ಟ ಆದ್ರೂ ನಂಬಲೇಬೇಕಾದ ಸ್ಟೋರಿ. ಸ್ವತಃ ಕಟ್ಕೊಂಡ ಗಂಡನೇ ಸ್ನೇಹಿತರ ಜೊತೆ ಸೇರ್ಕೊಂಡು ಹೆಂಡ್ತಿ ಮೇಲೆ ಗ್ಯಾಂಗ್​ರೇಪ್ ಮಾಡಿದ್ದಾನೆ. ಬಲವಂತವಾಗಿ ಮದ್ಯ ಕುಡಿಸಿ, ಗಾಂಜಾ, ಡ್ರಗ್ಸ್ ತಿನ್ನಿಸಿ, ಕುಟುಂಬಸ್ಥರನ್ನ ಕೊಲೆ ಮಾಡೋದಾಗಿ ಬ್ಲ್ಯಾಕ್​ಮೇಲ್ ಮಾಡಿ, ಬರೋಬ್ಬರಿ 9 ತಿಂಗಳು ನಿರಂತರ ಅತ್ಯಾಚಾರ ನಡೆಸಲಾಗಿದೆ. ಅಷ್ಟೇ ಅಲ್ಲದೆ ಫೋಟೋ, ವಿಡಿಯೋ ತೆಗೆದು ಫೋರ್ನ್ ಸೈಟ್​ಗಳಿಗೆ ಅಪ್​ಲೋಡ್ ಮಾಡಿದ್ದಾರೆ. ಹೀಗಾಗಿ ಗಂಡನಿಂದ ದೂರ ಆಗಿರೋ ಯುವತಿ, ಸದ್ಯ ತನಗಾದ ಅನ್ಯಾಯದ ವಿರುದ್ಧ ಹೋರಾಟಕ್ಕಿಳಿದಿದ್ದಾಳೆ. 139 ಜನರ ವಿರುದ್ಧ ಗ್ಯಾಂಗ್​ರೇಪ್, ಕೊಲೆ ಬೆದರಿಕೆ, ಌಸಿಡ್ ಹಾಕೋ ಬೆದರಿಕೆ ಹಾಗೂ ಜೀವಭಯದ ಬಗ್ಗೆ ದೂರು ನೀಡಿದ್ದಾಳೆ. ಹೈದರಾಬಾದ್​ನ ಪಂಜಾಗುಟ್ಟಾ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಇನ್ನು ರೇಪ್ ವಿಡಿಯೋಗಳು ಈಗ್ಲೂ ಪೋರ್ನ್ ವೆಬ್​​ಸೈಟಲ್ಲಿ ಹರಿದಾಡ್ತಿವೆ. ಈಕೆಯ ಹೆಸ್ರಲ್ಲಿ ಫೇಸ್​ಬುಕ್ ಅಕೌಂಟ್, ಇನ್​ಸ್ಟಾಗ್ರಾಂ, ಜಿಮೇಲ್ ಅಕೌಂಟ್​ಗಳ ಮೂಲಕ ಸೆಕ್ಸ್ ದಂಧೆ ಮಾಡ್ತಿರೋದು ಗೊತ್ತಾಗಿದೆ. ಆಕೆಯ ಸ್ವಂತ ಅಕೌಂಟ್ ಕೂಡ ಹ್ಯಾಕ್ ಮಾಡಲಾಗಿದ್ದು, ಅಸಭ್ಯ ಮೆಸೇಜ್​ಗಳು ಬರ್ತಿವೆಯಂತೆ. ಇನ್ನು ಆರೋಪಿಗಳೆಲ್ಲ ಸಾಕಷ್ಟು ರಾಜಕೀಯ ಬೆಂಬಲವಿದ್ದು, ಮದ್ವೆ ಹೆಸ್ರಲ್ಲಿ ಗ್ರಾಮೀಣಭಾಗದ ಹೆಣ್ಣುಮಕ್ಕಳನ್ನ ವಂಚಿಸಿ ಕರೆತರ್ತಾರೆ. ಇವ್ರಿಂದ ಬ್ಲೂ ಫಿಲ್ಮ್ & ಸೆಕ್ಸ್ ರಾಕೆಟ್ ದಂಧೆ ನಡೆಸ್ತಾರೆ. ಇವ್ರಿಂದ ಜೀವಕ್ಕೆ ಅಪಾಯವಿದೆ. ನನಗೆ ನ್ಯಾಯ ಕೊಡಿಸಿ, ನನ್ನಂತೆ ಯಾವ ಹೆಣ್ಣುಮಕ್ಕಳಿಗೆ ಅನ್ಯಾಯವಾಗ್ಬಾರದು ಅಂತಾ ಯುವತಿ ಮನವಿ ಮಾಡಿಕೊಂಡಿದ್ದಾಳೆ.

ಸದ್ಯ ಕೇಸ್ ದಾಖಲಿಸಿಕೊಂಡಿರೋ ಪೊಲೀಸ್ರು ಸತ್ಯಾಸತ್ಯಾತೆ ಪರಿಶೀಲಿಸಿ ತನಿಖೆ ನಡೆಸಲು ನಿರ್ಧರಿಸಿದ್ದಾರೆ. ಆದ್ರೆ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಹೀಗಾಗಿ ಪೊಲೀಸರು ಕೂಡಲೇ ಆರೋಪಿಗಳನ್ನ ಬಂಧಿಸಿ ಜೈಲಿಗೆ ಕಳಿಸ್ಬೇಕು. ಮಹಿಳೆಯರಿಗಾಗೋ ಅನ್ಯಾಯ ತಡೆಯಬೇಕು ಅನ್ನೋದೇ ಸಾರ್ವಜನಿಕರ ಒತ್ತಾಯವಾಗಿದೆ.

Follow Us
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!