ಕೊಡಲಿಯಿಂದ ಒಂದೇ ಒಂದು ಏಟು ಕೊಟ್ಟು ಹುಲಿಯನ್ನು ಹತ್ಯೆ ಮಾಡಿ, ಶೌರ್ಯ ಪ್ರಶಸ್ತಿ ಪಡೆದಿದ್ದ ಮಹಿಳೆ ಸಾವು

ಮಿಜೋರಾಂನ ಸ್ಟೇಟ್ ಮ್ಯೂಸಿಯಂಗೆ ಬರುವವರು ಅಲ್ಲಿರುವ ಬೃಹತ್ ಹುಲಿಯ ಮಮ್ಮಿಯನ್ನು ನೋಡಿರುತ್ತಾರೆ ಇದರ ಹಿಂದೆ ದೊಡ್ಡ ಕಥೆಯೇ ಇದೆ. ಕೊಡಲಿಯಿಂದ ಹುಲಿಗೆ ಒಂದೇ ಒಂದು ಏಟು ಕೊಟ್ಟು ಹತ್ಯೆ ಮಾಡಿ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದ ಲಾಲಜಾಡಿಂಗಿ ಎಂಬ ಮಹಿಳೆ ಕ್ಯಾನ್ಸರ್​ನಿಂದ ಕೊನೆಯುಸಿರೆಳೆದಿದ್ದಾರೆ.

ಕೊಡಲಿಯಿಂದ ಒಂದೇ ಒಂದು ಏಟು ಕೊಟ್ಟು ಹುಲಿಯನ್ನು ಹತ್ಯೆ ಮಾಡಿ, ಶೌರ್ಯ ಪ್ರಶಸ್ತಿ ಪಡೆದಿದ್ದ ಮಹಿಳೆ ಸಾವು
ಲಾಲ್ಜಾಡಿಂಗಿImage Credit source: ABP Live
Follow us
|

Updated on: Jul 20, 2024 | 3:27 PM

ಮಿಜೋರಾಂನ ಸ್ಟೇಟ್ ಮ್ಯೂಸಿಯಂಗೆ ಬರುವವರು ಅಲ್ಲಿರುವ ಬೃಹತ್ ಹುಲಿಯ ಮಮ್ಮಿಯನ್ನು ನೋಡಿರುತ್ತಾರೆ ಇದರ ಹಿಂದೆ ದೊಡ್ಡ ಕಥೆಯೇ ಇದೆ. ಕೊಡಲಿಯಿಂದ ಹುಲಿಗೆ ಒಂದೇ ಒಂದು ಏಟು ಕೊಟ್ಟು ಹತ್ಯೆ ಮಾಡಿ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದ ಲಾಲ್ಜಾಡಿಂಗಿ ಎಂಬ ಮಹಿಳೆ ಕ್ಯಾನ್ಸರ್​ನಿಂದ ಕೊನೆಯುಸಿರೆಳೆದಿದ್ದಾರೆ. ಅವರು ಅಂದು ಹತ್ಯೆ ಮಾಡಿದ್ದ ಹುಲಿಯ ಮಮ್ಮಿಯನ್ನೇ ನಾವು ಮ್ಯೂಸಿಯಂನಲ್ಲಿ ಕಾಣಬಹುದಾಗಿದೆ.

ಈಗ ಲಾಲ್ಜಾಡಿಂಗಿ ಅವರಿಗೆ 72 ವರ್ಷ ವಯಸ್ಸು, ಕ್ಯಾನ್ಸರ್​ನಿಂದ ಅವರು ಸಾವನ್ನಪ್ಪಿದ್ದಾರೆ. ಮ್ಯೂಸಿಯಂನಲ್ಲಿರುವ ಹುಲಿ ಯಾವಾಗಲೂ ಪ್ರವಾಸಿಗರನ್ನು ಅದರಲ್ಲೂ ಮಕ್ಕಳನ್ನು ಗಮನಸೆಳೆಯುತ್ತದೆ. ಆದರೆ ಆ ಹುಲಿ ಮ್ಯೂಸಿಯಂಗೆ ಬರುವಂತೆ ಮಾಡಿದ್ದ ಮಹಿಳೆಯನ್ನು ಜನರು ಅಷ್ಟಾಗಿ ನೆನಪಿಟ್ಟುಕೊಂಡಿಲ್ಲ.

ಲಾಲ್ಜಾಡಿಂಗಿ ಅವರು ಪತಿ, ನಾಲ್ವರು ಮಕ್ಕಳು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಅವರು 26 ವರ್ಷದವರಿದ್ದಾಗ ದೂರದ ಕಾಡಿಗೆ ಹೋಗಿದ್ದರು, ಆಗ ಹುಲಿಯೊಂದಿಗೆ ಮುಖಾಮುಖಿಯಾಗಿದ್ದಾರೆ. ‘‘ಮರವನ್ನು ಕತ್ತರಿಸುತ್ತಿದ್ದಾಗ ಏನೋ ಶಬ್ದ ಕೇಳಿಸಿತ್ತು, ಮೊದಲು ಕಾಡುಹಂದಿ ಇರಬಹುದು ಎಂದುಕೊಂಡೆ, ಸ್ನೇಹಿತರನ್ನು ಕರೆದೆ ಆದರೆ ಯಾರಿಗೂ ಕೇಳಿಸಲಿಲ್ಲ, ಪೊದೆಯಿಂದ ಒಮ್ಮೆಲೆ ಹುಲಿ ಕಾಣಿಸಿಕೊಂಡಾಗ ಭಯವಾಯಿತು.

ಮತ್ತಷ್ಟು ಓದಿ: ನಿತ್ಯವೂ ಆಫೀಸ್​ಗಾಗಿ 320 ಕಿ.ಮೀ ಪ್ರಯಾಣಿಸುವ ವ್ಯಕ್ತಿ, ಹತ್ತಿರವೆಲ್ಲೂ ಮನೆ ಇರಲಿಲ್ಲವೇ?

ಯೋಚಿಸಲು ಸಮಯ ಇರಲಿಲ್ಲ, ತಕ್ಷಣ ಅದರ ಹಣೆಗೆ ಕೊಡಲಿಯಿಂದ ಹೊಡೆದೆ ಒಂದೇ ಹೊಡೆತಕ್ಕೆ ಹುಲಿ ಸತ್ತಿದ್ದು ನನ್ನ ಅದೃಷ್ಟ, ಒಂದೊಮ್ಮೆ ಬೇರೆ ಭಾಗಕ್ಕೆ ಪೆಟ್ಟಾಗಿದ್ದರೆ ಹುಲಿ ನನಗೆ ಎರಡನೇ ಅವಕಾಶ ನೀಡುತ್ತಿರಲಿಲ್ಲ ಎಂದಿದ್ದಾರೆ.

ಲಾಲ್ಜಾಡಿಂಗಿ 1980ರಲ್ಲಿ ಶೌರ್ಯ ಪ್ರಶಸ್ತಿಯನ್ನು ಭಾರತ ಸರ್ಕಾರವು ನೀಡಿತ್ತು. ಅಂದಿನ ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದರು. ಕೊಡಲಿಯಿಂದ ಹುಲಿಯನ್ನು ಕೊಂದ ಏಕೈಕ ಮಹಿಳೆ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?