AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಲಿಯಿಂದ ಒಂದೇ ಒಂದು ಏಟು ಕೊಟ್ಟು ಹುಲಿಯನ್ನು ಹತ್ಯೆ ಮಾಡಿ, ಶೌರ್ಯ ಪ್ರಶಸ್ತಿ ಪಡೆದಿದ್ದ ಮಹಿಳೆ ಸಾವು

ಮಿಜೋರಾಂನ ಸ್ಟೇಟ್ ಮ್ಯೂಸಿಯಂಗೆ ಬರುವವರು ಅಲ್ಲಿರುವ ಬೃಹತ್ ಹುಲಿಯ ಮಮ್ಮಿಯನ್ನು ನೋಡಿರುತ್ತಾರೆ ಇದರ ಹಿಂದೆ ದೊಡ್ಡ ಕಥೆಯೇ ಇದೆ. ಕೊಡಲಿಯಿಂದ ಹುಲಿಗೆ ಒಂದೇ ಒಂದು ಏಟು ಕೊಟ್ಟು ಹತ್ಯೆ ಮಾಡಿ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದ ಲಾಲಜಾಡಿಂಗಿ ಎಂಬ ಮಹಿಳೆ ಕ್ಯಾನ್ಸರ್​ನಿಂದ ಕೊನೆಯುಸಿರೆಳೆದಿದ್ದಾರೆ.

ಕೊಡಲಿಯಿಂದ ಒಂದೇ ಒಂದು ಏಟು ಕೊಟ್ಟು ಹುಲಿಯನ್ನು ಹತ್ಯೆ ಮಾಡಿ, ಶೌರ್ಯ ಪ್ರಶಸ್ತಿ ಪಡೆದಿದ್ದ ಮಹಿಳೆ ಸಾವು
ಲಾಲ್ಜಾಡಿಂಗಿImage Credit source: ABP Live
ನಯನಾ ರಾಜೀವ್
|

Updated on: Jul 20, 2024 | 3:27 PM

Share

ಮಿಜೋರಾಂನ ಸ್ಟೇಟ್ ಮ್ಯೂಸಿಯಂಗೆ ಬರುವವರು ಅಲ್ಲಿರುವ ಬೃಹತ್ ಹುಲಿಯ ಮಮ್ಮಿಯನ್ನು ನೋಡಿರುತ್ತಾರೆ ಇದರ ಹಿಂದೆ ದೊಡ್ಡ ಕಥೆಯೇ ಇದೆ. ಕೊಡಲಿಯಿಂದ ಹುಲಿಗೆ ಒಂದೇ ಒಂದು ಏಟು ಕೊಟ್ಟು ಹತ್ಯೆ ಮಾಡಿ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದ ಲಾಲ್ಜಾಡಿಂಗಿ ಎಂಬ ಮಹಿಳೆ ಕ್ಯಾನ್ಸರ್​ನಿಂದ ಕೊನೆಯುಸಿರೆಳೆದಿದ್ದಾರೆ. ಅವರು ಅಂದು ಹತ್ಯೆ ಮಾಡಿದ್ದ ಹುಲಿಯ ಮಮ್ಮಿಯನ್ನೇ ನಾವು ಮ್ಯೂಸಿಯಂನಲ್ಲಿ ಕಾಣಬಹುದಾಗಿದೆ.

ಈಗ ಲಾಲ್ಜಾಡಿಂಗಿ ಅವರಿಗೆ 72 ವರ್ಷ ವಯಸ್ಸು, ಕ್ಯಾನ್ಸರ್​ನಿಂದ ಅವರು ಸಾವನ್ನಪ್ಪಿದ್ದಾರೆ. ಮ್ಯೂಸಿಯಂನಲ್ಲಿರುವ ಹುಲಿ ಯಾವಾಗಲೂ ಪ್ರವಾಸಿಗರನ್ನು ಅದರಲ್ಲೂ ಮಕ್ಕಳನ್ನು ಗಮನಸೆಳೆಯುತ್ತದೆ. ಆದರೆ ಆ ಹುಲಿ ಮ್ಯೂಸಿಯಂಗೆ ಬರುವಂತೆ ಮಾಡಿದ್ದ ಮಹಿಳೆಯನ್ನು ಜನರು ಅಷ್ಟಾಗಿ ನೆನಪಿಟ್ಟುಕೊಂಡಿಲ್ಲ.

ಲಾಲ್ಜಾಡಿಂಗಿ ಅವರು ಪತಿ, ನಾಲ್ವರು ಮಕ್ಕಳು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಅವರು 26 ವರ್ಷದವರಿದ್ದಾಗ ದೂರದ ಕಾಡಿಗೆ ಹೋಗಿದ್ದರು, ಆಗ ಹುಲಿಯೊಂದಿಗೆ ಮುಖಾಮುಖಿಯಾಗಿದ್ದಾರೆ. ‘‘ಮರವನ್ನು ಕತ್ತರಿಸುತ್ತಿದ್ದಾಗ ಏನೋ ಶಬ್ದ ಕೇಳಿಸಿತ್ತು, ಮೊದಲು ಕಾಡುಹಂದಿ ಇರಬಹುದು ಎಂದುಕೊಂಡೆ, ಸ್ನೇಹಿತರನ್ನು ಕರೆದೆ ಆದರೆ ಯಾರಿಗೂ ಕೇಳಿಸಲಿಲ್ಲ, ಪೊದೆಯಿಂದ ಒಮ್ಮೆಲೆ ಹುಲಿ ಕಾಣಿಸಿಕೊಂಡಾಗ ಭಯವಾಯಿತು.

ಮತ್ತಷ್ಟು ಓದಿ: ನಿತ್ಯವೂ ಆಫೀಸ್​ಗಾಗಿ 320 ಕಿ.ಮೀ ಪ್ರಯಾಣಿಸುವ ವ್ಯಕ್ತಿ, ಹತ್ತಿರವೆಲ್ಲೂ ಮನೆ ಇರಲಿಲ್ಲವೇ?

ಯೋಚಿಸಲು ಸಮಯ ಇರಲಿಲ್ಲ, ತಕ್ಷಣ ಅದರ ಹಣೆಗೆ ಕೊಡಲಿಯಿಂದ ಹೊಡೆದೆ ಒಂದೇ ಹೊಡೆತಕ್ಕೆ ಹುಲಿ ಸತ್ತಿದ್ದು ನನ್ನ ಅದೃಷ್ಟ, ಒಂದೊಮ್ಮೆ ಬೇರೆ ಭಾಗಕ್ಕೆ ಪೆಟ್ಟಾಗಿದ್ದರೆ ಹುಲಿ ನನಗೆ ಎರಡನೇ ಅವಕಾಶ ನೀಡುತ್ತಿರಲಿಲ್ಲ ಎಂದಿದ್ದಾರೆ.

ಲಾಲ್ಜಾಡಿಂಗಿ 1980ರಲ್ಲಿ ಶೌರ್ಯ ಪ್ರಶಸ್ತಿಯನ್ನು ಭಾರತ ಸರ್ಕಾರವು ನೀಡಿತ್ತು. ಅಂದಿನ ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದರು. ಕೊಡಲಿಯಿಂದ ಹುಲಿಯನ್ನು ಕೊಂದ ಏಕೈಕ ಮಹಿಳೆ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

VIDEO: ರಣರೋಚಕ ಪಂದ್ಯ ರನೌಟ್​ನೊಂದಿಗೆ ಅಂತ್ಯ
VIDEO: ರಣರೋಚಕ ಪಂದ್ಯ ರನೌಟ್​ನೊಂದಿಗೆ ಅಂತ್ಯ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು