Video: 1000 ಕೆಜಿ ತೂಕದ ಖಾದಿ ತ್ರಿವರ್ಣಧ್ವಜ ಲೇಹ್​​ನಲ್ಲಿ ಅನಾವರಣ; ವಿಶ್ವದಲ್ಲೇ ಅತ್ಯಂತ ದೊಡ್ಡ ರಾಷ್ಟ್ರಧ್ವಜವಿದು

Gandhi Jayanti 2021: ರಾಷ್ಟ್ರಧ್ವಜವನ್ನು ಲಡಾಖ್​​ನ ಲೆಫ್ಟಿನೆಂಟ್​ ಗವರ್ನರ್​ ಆರ್​.ಕೆ.ಮಾಥುರ್​ ಅನಾವರಣಗೊಳಿಸಿದ್ದಾರೆ. ಹಾಗೇ, ಸೇನಾ ಮುಖ್ಯಸ್ಥ ಎಂ.ಎಂ.ನರವಾನೆ ಕೂಡ ಉಪಸ್ಥಿತರಿದ್ದರು.

Video: 1000 ಕೆಜಿ ತೂಕದ ಖಾದಿ ತ್ರಿವರ್ಣಧ್ವಜ ಲೇಹ್​​ನಲ್ಲಿ ಅನಾವರಣ; ವಿಶ್ವದಲ್ಲೇ ಅತ್ಯಂತ ದೊಡ್ಡ ರಾಷ್ಟ್ರಧ್ವಜವಿದು
ಲೇಹ್​​ನಲ್ಲಿ ಹಾರಿಸಲಾದ ಅತ್ಯಂತ ದೊಡ್ಡ ರಾಷ್ಟ್ರಧ್ವಜ
Follow us
| Updated By: Lakshmi Hegde

Updated on:Oct 02, 2021 | 11:20 AM

ಇಂದು ದೇಶಾದ್ಯಂತ ಮಹಾತ್ಮ ಗಾಂಧಿ (Mahatma Gandhi) 152ನೇ ಜನ್ಮದಿನ ಆಚರಣೆ ಮಾಡಲಾಗುತ್ತಿದ್ದು, ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್​, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಕೇಂದ್ರ ಸಚಿವರಾದಿಯಾಗಿ ಅನೇಕರು ಗಾಂಧಿಗೆ ನಮನ ಸಲ್ಲಿಸಿದ್ದಾರೆ.  ವಿವಿಧ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹಾಗೇ, ಇಂದು ಕೇಂದ್ರಾಡಳಿತ ಪ್ರದೇಶ ಲಡಾಖ್​​ನ ಲೇಹ್ (Leh Of Ladakh)​​ನಲ್ಲಿ ಗಾಂಧಿ ಜಯಂತಿ ನಿಮಿತ್ತ, ಅತ್ಯಂತ ದೊಡ್ಡದಾದ ತ್ರಿವರ್ಣ ಧ್ವಜ ಹಾರಿಸಲಾಗಿದೆ. ಲೇಹ್​ನ ಝಾನ್ಸ್​​ಕರ್​ ಕಣಿವೆಯಲ್ಲಿ ಹಾರಿಸಾಲದ ಈ ಖಾದಿ ರಾಷ್ಟ್ರಧ್ವಜ 225 ಅಡಿ ಉದ್ದವಿದ್ದು, 125 ಅಡಿ ಅಗಲವಿದೆ. ಹಾಗೇ, 1000 ಕೆಜಿಗಳಷ್ಟು ತೂಗುತ್ತದೆ. ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ರಾಷ್ಟ್ರಧ್ವಜ ಎನ್ನಿಸಿದ್ದು, ಮುಂಬೈನ ಮುದ್ರಣಕಂಪನಿಯೊಂದರ ಸಹಯೋಗದೊಂದಿಗೆ ಧ್ವಜ ತಯಾರಾಗಿದೆ.  

ಈ ರಾಷ್ಟ್ರಧ್ವಜವನ್ನು ಲಡಾಖ್​​ನ ಲೆಫ್ಟಿನೆಂಟ್​ ಗವರ್ನರ್​ ಆರ್​.ಕೆ.ಮಾಥುರ್​ ಅನಾವರಣಗೊಳಿಸಿದ್ದಾರೆ. ಹಾಗೇ, ಸೇನಾ ಮುಖ್ಯಸ್ಥ ಎಂ.ಎಂ.ನರವಾನೆ ಕೂಡ ಉಪಸ್ಥಿತರಿದ್ದರು. ಇಂದು ಇಲ್ಲಿ ಹಾರಿಸಲಾದ ಅತ್ಯಂತ ದೊಡ್ಡ ಖಾದಿ ರಾಷ್ಟ್ರಧ್ವಜವನ್ನು ಅಕ್ಟೋಬರ್​ 8ರಂದು ಏರ್​ಫೋರ್ಸ್​ ದಿನಾಚರಣೆ ನಿಮಿತ್ತ ಹಿಂಡನ್​ನಲ್ಲಿ ಹಾರಿಸಲಾಗುವುದು. ಅಂದಹಾಗೆ ಈ ಝಾನ್ಸ್​ಕರ್​ ವ್ಯಾಲಿ ಲಡಾಖ್​ನ ಕಾರ್ಗಿಲ್​ ಜಿಲ್ಲೆಯಲ್ಲಿದೆ. ಕಾರ್ಗಿಲ್​​ನ ರಾಷ್ಟ್ರೀಯ ಹೆದ್ದಾರಿಯಿಂದ 250 ಕಿಮೀ ದೂರದಲ್ಲಿದೆ.

ಭೌಗೋಳಿಕವಾಗಿ ಈ ಝಾನ್ಸ್​ಕರ್​ ಶ್ರೇಣಿ ಟೆಥಿಸ್​ ಹಿಮಾಲಯ ಶ್ರೇಣಿಗಳ ಭಾಗವಾಗಿದೆ. ಇದು ಸರಾಸರಿ 6000 ಮೀಟರ್​ (19,700 ಅಡಿ) ಎತ್ತರವಾಗಿದೆ. ಝಾನ್ಸ್​ಕರ್​ ಶ್ರೇಣಿಯ ಪೂರ್ವಭಾಗವನ್ನು ರೂಪ್ಶು ಎಂದು ಕರೆಯಲಾಗುತ್ತದೆ. ಈ ಝಾನ್ಸ್​ಕರ್​ ಪ್ರದೆಶವನ್ನು ಜಿಲ್ಲೆಯಾಗಿ ಪರಿವರ್ತಿಸಬೇಕು ಎಂಬ ಆಗ್ರಹವೂ ಬಹುದಿನಗಳಿಂದ ಇದೆ. ಝಾನ್ಸ್​ಕರ್ ಕಣಿವೆಯಂತೂ ಹಿಮಾಚ್ಛಾದಿತವಾಗಿದ್ದು, ಶುದ್ಧ ನದಿಗಳ ಹರಿವನ್ನು ಹೊಂದಿದೆ. ಬೌದ್ಧಧರ್ಮದ ಕೇಂದ್ರವೂ ಹೌದು.

ಇದನ್ನೂ ಓದಿ: ಯಲಹಂಕ: ಶಿವರಾಮ ಕಾರಂತ ಬಡಾವಣೆ ಭೂಸ್ವಾಧೀನಕ್ಕೆ ರೈತರ ವಿರೋಧ; ಪ್ರತಿಭಟಿಸುತ್ತಿದ್ದ ರೈತರು ಪೊಲೀಸರ ವಶಕ್ಕೆ

Youtube inspiration: ಯುಟ್ಯೂಬ್​ನಲ್ಲಿ ವೆಬ್ ​ಸಿರೀಸ್​ ನೋಡಿ ಬೈಕ್ ಕದಿಯುತ್ತಿದ್ದ ಗ್ಯಾಂಗ್​ ಬಂಧನ

Published On - 11:11 am, Sat, 2 October 21

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್