Video: 1000 ಕೆಜಿ ತೂಕದ ಖಾದಿ ತ್ರಿವರ್ಣಧ್ವಜ ಲೇಹ್​​ನಲ್ಲಿ ಅನಾವರಣ; ವಿಶ್ವದಲ್ಲೇ ಅತ್ಯಂತ ದೊಡ್ಡ ರಾಷ್ಟ್ರಧ್ವಜವಿದು

Gandhi Jayanti 2021: ರಾಷ್ಟ್ರಧ್ವಜವನ್ನು ಲಡಾಖ್​​ನ ಲೆಫ್ಟಿನೆಂಟ್​ ಗವರ್ನರ್​ ಆರ್​.ಕೆ.ಮಾಥುರ್​ ಅನಾವರಣಗೊಳಿಸಿದ್ದಾರೆ. ಹಾಗೇ, ಸೇನಾ ಮುಖ್ಯಸ್ಥ ಎಂ.ಎಂ.ನರವಾನೆ ಕೂಡ ಉಪಸ್ಥಿತರಿದ್ದರು.

Video: 1000 ಕೆಜಿ ತೂಕದ ಖಾದಿ ತ್ರಿವರ್ಣಧ್ವಜ ಲೇಹ್​​ನಲ್ಲಿ ಅನಾವರಣ; ವಿಶ್ವದಲ್ಲೇ ಅತ್ಯಂತ ದೊಡ್ಡ ರಾಷ್ಟ್ರಧ್ವಜವಿದು
ಲೇಹ್​​ನಲ್ಲಿ ಹಾರಿಸಲಾದ ಅತ್ಯಂತ ದೊಡ್ಡ ರಾಷ್ಟ್ರಧ್ವಜ
Follow us
| Edited By: Lakshmi Hegde

Updated on:Oct 02, 2021 | 11:20 AM

ಇಂದು ದೇಶಾದ್ಯಂತ ಮಹಾತ್ಮ ಗಾಂಧಿ (Mahatma Gandhi) 152ನೇ ಜನ್ಮದಿನ ಆಚರಣೆ ಮಾಡಲಾಗುತ್ತಿದ್ದು, ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್​, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಕೇಂದ್ರ ಸಚಿವರಾದಿಯಾಗಿ ಅನೇಕರು ಗಾಂಧಿಗೆ ನಮನ ಸಲ್ಲಿಸಿದ್ದಾರೆ.  ವಿವಿಧ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹಾಗೇ, ಇಂದು ಕೇಂದ್ರಾಡಳಿತ ಪ್ರದೇಶ ಲಡಾಖ್​​ನ ಲೇಹ್ (Leh Of Ladakh)​​ನಲ್ಲಿ ಗಾಂಧಿ ಜಯಂತಿ ನಿಮಿತ್ತ, ಅತ್ಯಂತ ದೊಡ್ಡದಾದ ತ್ರಿವರ್ಣ ಧ್ವಜ ಹಾರಿಸಲಾಗಿದೆ. ಲೇಹ್​ನ ಝಾನ್ಸ್​​ಕರ್​ ಕಣಿವೆಯಲ್ಲಿ ಹಾರಿಸಾಲದ ಈ ಖಾದಿ ರಾಷ್ಟ್ರಧ್ವಜ 225 ಅಡಿ ಉದ್ದವಿದ್ದು, 125 ಅಡಿ ಅಗಲವಿದೆ. ಹಾಗೇ, 1000 ಕೆಜಿಗಳಷ್ಟು ತೂಗುತ್ತದೆ. ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ರಾಷ್ಟ್ರಧ್ವಜ ಎನ್ನಿಸಿದ್ದು, ಮುಂಬೈನ ಮುದ್ರಣಕಂಪನಿಯೊಂದರ ಸಹಯೋಗದೊಂದಿಗೆ ಧ್ವಜ ತಯಾರಾಗಿದೆ.  

ಈ ರಾಷ್ಟ್ರಧ್ವಜವನ್ನು ಲಡಾಖ್​​ನ ಲೆಫ್ಟಿನೆಂಟ್​ ಗವರ್ನರ್​ ಆರ್​.ಕೆ.ಮಾಥುರ್​ ಅನಾವರಣಗೊಳಿಸಿದ್ದಾರೆ. ಹಾಗೇ, ಸೇನಾ ಮುಖ್ಯಸ್ಥ ಎಂ.ಎಂ.ನರವಾನೆ ಕೂಡ ಉಪಸ್ಥಿತರಿದ್ದರು. ಇಂದು ಇಲ್ಲಿ ಹಾರಿಸಲಾದ ಅತ್ಯಂತ ದೊಡ್ಡ ಖಾದಿ ರಾಷ್ಟ್ರಧ್ವಜವನ್ನು ಅಕ್ಟೋಬರ್​ 8ರಂದು ಏರ್​ಫೋರ್ಸ್​ ದಿನಾಚರಣೆ ನಿಮಿತ್ತ ಹಿಂಡನ್​ನಲ್ಲಿ ಹಾರಿಸಲಾಗುವುದು. ಅಂದಹಾಗೆ ಈ ಝಾನ್ಸ್​ಕರ್​ ವ್ಯಾಲಿ ಲಡಾಖ್​ನ ಕಾರ್ಗಿಲ್​ ಜಿಲ್ಲೆಯಲ್ಲಿದೆ. ಕಾರ್ಗಿಲ್​​ನ ರಾಷ್ಟ್ರೀಯ ಹೆದ್ದಾರಿಯಿಂದ 250 ಕಿಮೀ ದೂರದಲ್ಲಿದೆ.

ಭೌಗೋಳಿಕವಾಗಿ ಈ ಝಾನ್ಸ್​ಕರ್​ ಶ್ರೇಣಿ ಟೆಥಿಸ್​ ಹಿಮಾಲಯ ಶ್ರೇಣಿಗಳ ಭಾಗವಾಗಿದೆ. ಇದು ಸರಾಸರಿ 6000 ಮೀಟರ್​ (19,700 ಅಡಿ) ಎತ್ತರವಾಗಿದೆ. ಝಾನ್ಸ್​ಕರ್​ ಶ್ರೇಣಿಯ ಪೂರ್ವಭಾಗವನ್ನು ರೂಪ್ಶು ಎಂದು ಕರೆಯಲಾಗುತ್ತದೆ. ಈ ಝಾನ್ಸ್​ಕರ್​ ಪ್ರದೆಶವನ್ನು ಜಿಲ್ಲೆಯಾಗಿ ಪರಿವರ್ತಿಸಬೇಕು ಎಂಬ ಆಗ್ರಹವೂ ಬಹುದಿನಗಳಿಂದ ಇದೆ. ಝಾನ್ಸ್​ಕರ್ ಕಣಿವೆಯಂತೂ ಹಿಮಾಚ್ಛಾದಿತವಾಗಿದ್ದು, ಶುದ್ಧ ನದಿಗಳ ಹರಿವನ್ನು ಹೊಂದಿದೆ. ಬೌದ್ಧಧರ್ಮದ ಕೇಂದ್ರವೂ ಹೌದು.

ಇದನ್ನೂ ಓದಿ: ಯಲಹಂಕ: ಶಿವರಾಮ ಕಾರಂತ ಬಡಾವಣೆ ಭೂಸ್ವಾಧೀನಕ್ಕೆ ರೈತರ ವಿರೋಧ; ಪ್ರತಿಭಟಿಸುತ್ತಿದ್ದ ರೈತರು ಪೊಲೀಸರ ವಶಕ್ಕೆ

Youtube inspiration: ಯುಟ್ಯೂಬ್​ನಲ್ಲಿ ವೆಬ್ ​ಸಿರೀಸ್​ ನೋಡಿ ಬೈಕ್ ಕದಿಯುತ್ತಿದ್ದ ಗ್ಯಾಂಗ್​ ಬಂಧನ

Published On - 11:11 am, Sat, 2 October 21

ತಾಜಾ ಸುದ್ದಿ
ಸಿದ್ದರಾಮಯ್ಯ ಸರ್ಕಾರ ಈಗ ಮೇನಲ್ಲಿ ಪತನವಾಗುತ್ತೆ ಅಂತಿದ್ದಾರೆ ಕುಮಾರಸ್ವಾಮಿ
ಸಿದ್ದರಾಮಯ್ಯ ಸರ್ಕಾರ ಈಗ ಮೇನಲ್ಲಿ ಪತನವಾಗುತ್ತೆ ಅಂತಿದ್ದಾರೆ ಕುಮಾರಸ್ವಾಮಿ
ಇಂದು ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಇಂದು ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ