Video: 1000 ಕೆಜಿ ತೂಕದ ಖಾದಿ ತ್ರಿವರ್ಣಧ್ವಜ ಲೇಹ್​​ನಲ್ಲಿ ಅನಾವರಣ; ವಿಶ್ವದಲ್ಲೇ ಅತ್ಯಂತ ದೊಡ್ಡ ರಾಷ್ಟ್ರಧ್ವಜವಿದು

Gandhi Jayanti 2021: ರಾಷ್ಟ್ರಧ್ವಜವನ್ನು ಲಡಾಖ್​​ನ ಲೆಫ್ಟಿನೆಂಟ್​ ಗವರ್ನರ್​ ಆರ್​.ಕೆ.ಮಾಥುರ್​ ಅನಾವರಣಗೊಳಿಸಿದ್ದಾರೆ. ಹಾಗೇ, ಸೇನಾ ಮುಖ್ಯಸ್ಥ ಎಂ.ಎಂ.ನರವಾನೆ ಕೂಡ ಉಪಸ್ಥಿತರಿದ್ದರು.

Video: 1000 ಕೆಜಿ ತೂಕದ ಖಾದಿ ತ್ರಿವರ್ಣಧ್ವಜ ಲೇಹ್​​ನಲ್ಲಿ ಅನಾವರಣ; ವಿಶ್ವದಲ್ಲೇ ಅತ್ಯಂತ ದೊಡ್ಡ ರಾಷ್ಟ್ರಧ್ವಜವಿದು
ಲೇಹ್​​ನಲ್ಲಿ ಹಾರಿಸಲಾದ ಅತ್ಯಂತ ದೊಡ್ಡ ರಾಷ್ಟ್ರಧ್ವಜ
Follow us
| Updated By: Lakshmi Hegde

Updated on:Oct 02, 2021 | 11:20 AM

ಇಂದು ದೇಶಾದ್ಯಂತ ಮಹಾತ್ಮ ಗಾಂಧಿ (Mahatma Gandhi) 152ನೇ ಜನ್ಮದಿನ ಆಚರಣೆ ಮಾಡಲಾಗುತ್ತಿದ್ದು, ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್​, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಕೇಂದ್ರ ಸಚಿವರಾದಿಯಾಗಿ ಅನೇಕರು ಗಾಂಧಿಗೆ ನಮನ ಸಲ್ಲಿಸಿದ್ದಾರೆ.  ವಿವಿಧ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹಾಗೇ, ಇಂದು ಕೇಂದ್ರಾಡಳಿತ ಪ್ರದೇಶ ಲಡಾಖ್​​ನ ಲೇಹ್ (Leh Of Ladakh)​​ನಲ್ಲಿ ಗಾಂಧಿ ಜಯಂತಿ ನಿಮಿತ್ತ, ಅತ್ಯಂತ ದೊಡ್ಡದಾದ ತ್ರಿವರ್ಣ ಧ್ವಜ ಹಾರಿಸಲಾಗಿದೆ. ಲೇಹ್​ನ ಝಾನ್ಸ್​​ಕರ್​ ಕಣಿವೆಯಲ್ಲಿ ಹಾರಿಸಾಲದ ಈ ಖಾದಿ ರಾಷ್ಟ್ರಧ್ವಜ 225 ಅಡಿ ಉದ್ದವಿದ್ದು, 125 ಅಡಿ ಅಗಲವಿದೆ. ಹಾಗೇ, 1000 ಕೆಜಿಗಳಷ್ಟು ತೂಗುತ್ತದೆ. ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ರಾಷ್ಟ್ರಧ್ವಜ ಎನ್ನಿಸಿದ್ದು, ಮುಂಬೈನ ಮುದ್ರಣಕಂಪನಿಯೊಂದರ ಸಹಯೋಗದೊಂದಿಗೆ ಧ್ವಜ ತಯಾರಾಗಿದೆ.  

ಈ ರಾಷ್ಟ್ರಧ್ವಜವನ್ನು ಲಡಾಖ್​​ನ ಲೆಫ್ಟಿನೆಂಟ್​ ಗವರ್ನರ್​ ಆರ್​.ಕೆ.ಮಾಥುರ್​ ಅನಾವರಣಗೊಳಿಸಿದ್ದಾರೆ. ಹಾಗೇ, ಸೇನಾ ಮುಖ್ಯಸ್ಥ ಎಂ.ಎಂ.ನರವಾನೆ ಕೂಡ ಉಪಸ್ಥಿತರಿದ್ದರು. ಇಂದು ಇಲ್ಲಿ ಹಾರಿಸಲಾದ ಅತ್ಯಂತ ದೊಡ್ಡ ಖಾದಿ ರಾಷ್ಟ್ರಧ್ವಜವನ್ನು ಅಕ್ಟೋಬರ್​ 8ರಂದು ಏರ್​ಫೋರ್ಸ್​ ದಿನಾಚರಣೆ ನಿಮಿತ್ತ ಹಿಂಡನ್​ನಲ್ಲಿ ಹಾರಿಸಲಾಗುವುದು. ಅಂದಹಾಗೆ ಈ ಝಾನ್ಸ್​ಕರ್​ ವ್ಯಾಲಿ ಲಡಾಖ್​ನ ಕಾರ್ಗಿಲ್​ ಜಿಲ್ಲೆಯಲ್ಲಿದೆ. ಕಾರ್ಗಿಲ್​​ನ ರಾಷ್ಟ್ರೀಯ ಹೆದ್ದಾರಿಯಿಂದ 250 ಕಿಮೀ ದೂರದಲ್ಲಿದೆ.

ಭೌಗೋಳಿಕವಾಗಿ ಈ ಝಾನ್ಸ್​ಕರ್​ ಶ್ರೇಣಿ ಟೆಥಿಸ್​ ಹಿಮಾಲಯ ಶ್ರೇಣಿಗಳ ಭಾಗವಾಗಿದೆ. ಇದು ಸರಾಸರಿ 6000 ಮೀಟರ್​ (19,700 ಅಡಿ) ಎತ್ತರವಾಗಿದೆ. ಝಾನ್ಸ್​ಕರ್​ ಶ್ರೇಣಿಯ ಪೂರ್ವಭಾಗವನ್ನು ರೂಪ್ಶು ಎಂದು ಕರೆಯಲಾಗುತ್ತದೆ. ಈ ಝಾನ್ಸ್​ಕರ್​ ಪ್ರದೆಶವನ್ನು ಜಿಲ್ಲೆಯಾಗಿ ಪರಿವರ್ತಿಸಬೇಕು ಎಂಬ ಆಗ್ರಹವೂ ಬಹುದಿನಗಳಿಂದ ಇದೆ. ಝಾನ್ಸ್​ಕರ್ ಕಣಿವೆಯಂತೂ ಹಿಮಾಚ್ಛಾದಿತವಾಗಿದ್ದು, ಶುದ್ಧ ನದಿಗಳ ಹರಿವನ್ನು ಹೊಂದಿದೆ. ಬೌದ್ಧಧರ್ಮದ ಕೇಂದ್ರವೂ ಹೌದು.

ಇದನ್ನೂ ಓದಿ: ಯಲಹಂಕ: ಶಿವರಾಮ ಕಾರಂತ ಬಡಾವಣೆ ಭೂಸ್ವಾಧೀನಕ್ಕೆ ರೈತರ ವಿರೋಧ; ಪ್ರತಿಭಟಿಸುತ್ತಿದ್ದ ರೈತರು ಪೊಲೀಸರ ವಶಕ್ಕೆ

Youtube inspiration: ಯುಟ್ಯೂಬ್​ನಲ್ಲಿ ವೆಬ್ ​ಸಿರೀಸ್​ ನೋಡಿ ಬೈಕ್ ಕದಿಯುತ್ತಿದ್ದ ಗ್ಯಾಂಗ್​ ಬಂಧನ

Published On - 11:11 am, Sat, 2 October 21

ತಾಜಾ ಸುದ್ದಿ
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್