AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಾಲೋವರ್ಸ್​ ಹೆಚ್ಚಿಸಿಕೊಳ್ಳಲು ಬೈಕ್​ ಮೇಲೆ ಡ್ಯಾನ್ಸ್ ಮಾಡಿದ ಯುವಕ; ಅದಾದ ಮೇಲೆ 9000 ರೂ.ಖರ್ಚು ಮಾಡಬೇಕಾಯ್ತು !

ಯುವಕನನ್ನು ಖಲೀದ್​ ಅಹ್ಮದ್​ ಎಂದು ಹೇಳಲಾಗಿದೆ. ಕಾನ್ಪುರದ ಕಲ್ಯಾಣಪುರ ಏರಿಯಾದ ಮಸ್ವಾನ್​​ಪುರದ ನಿವಾಸಿ. ಸುಮಾರು ಒಂದು ವಾರದ ಹಿಂದೆ ಈತ ತನ್ನ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದ.

ಫಾಲೋವರ್ಸ್​ ಹೆಚ್ಚಿಸಿಕೊಳ್ಳಲು ಬೈಕ್​ ಮೇಲೆ ಡ್ಯಾನ್ಸ್ ಮಾಡಿದ ಯುವಕ; ಅದಾದ ಮೇಲೆ 9000 ರೂ.ಖರ್ಚು ಮಾಡಬೇಕಾಯ್ತು !
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Dec 09, 2021 | 4:57 PM

Share

ಯುವಜನರು ಎಂಥೆಂಥದ್ದೋ ಕ್ರೇಜ್​ಗೆ ಬಿದ್ದು ತಮ್ಮ ಭವಿಷ್ಯ ಹಾಳುಮಾಡಿಕೊಂಡ ಸುದ್ದಿಗಳನ್ನು ಈಗಾಗಲೇ ಹಲವು ಬಾರಿ ಓದಿದ್ದೇವೆ. ಹಾಗೇ, ಉತ್ತರ ಪ್ರದೇಶದ ಕಾನ್ಪುರದಲ್ಲಿ ಒಬ್ಬ ಯುವಕ ಸೋಷಿಯಲ್​ ಮೀಡಿಯಾದಲ್ಲಿ ಫಾಲೋವರ್ಸ್​ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳು ಹೋಗಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಈತನಿಗೆ ಆರಕ್ಷಕರು ದಂಡವನ್ನೂ ವಿಧಿಸಿದ್ದಾರೆ. ಯುವಕ ಬಾಲಿವುಡ್​ ಸಿನಿಮಾಗಳಲ್ಲಿ ತೋರಿಸುವಂತೆ ಸ್ಟಂಟ್ ಮಾಡಲು ಹೋಗಿದ್ದೇ ಇದಕ್ಕೆಲ್ಲ ಕಾರಣ. ಈತ ಹೆಲ್ಮೆಟ್ ಧರಿಸದೆ ಬೈಕ್​ ಮೇಲೆ ನಿಂತು ಡ್ಯಾನ್ಸ್​ ಮಾಡಿದ್ದ ವಿಡಿಯೋ ನೋಡಿದ ಪೊಲೀಸರು ಇವನಿಗೆ ದಂಡ ವಿಧಿಸಿದ್ದಾರೆ. 

ಈ ಯುವಕನನ್ನು ಖಲೀದ್​ ಅಹ್ಮದ್​ ಎಂದು ಹೇಳಲಾಗಿದೆ. ಕಾನ್ಪುರದ ಕಲ್ಯಾಣಪುರ ಏರಿಯಾದ ಮಸ್ವಾನ್​​ಪುರದ ನಿವಾಸಿ. ಸುಮಾರು ಒಂದು ವಾರದ ಹಿಂದೆ ಈತ ತನ್ನ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದ. ಅದರಲ್ಲಿ ಯುವಕ ನಟ ಗೋವಿಂದ್ ಅಭಿನಯದ ಏಕ್​ ಲಡಕೀ ಚಾಹಿಯೇ ಖಾಸ್​ ಖಾಸ್​ ಹಾಡಿಗೆ ಮೋಟಾರ್ ಸೈಕಲ್​ ಮೇಲೆ ನಿಂತು ನೃತ್ಯ ಮಾಡುತ್ತಿರುವುದನ್ನು ನೋಡಬಹುದು. ಆತ ಈ ಸ್ಟಂಟ್ ಮಾಡುವಾಗ ಹೆಲ್ಮೆಟ್​ ಕೂಡ ಧರಿಸಿರಲಿಲ್ಲ.   ವಿಡಿಯೋ ನೋಡಿದ ಟ್ರಾಫಿಕ್​ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಖಲೀದ್​​ನಿಗೆ 9000 ರೂಪಾಯಿ ದಂಡ ವಿಧಿಸಿದ್ದಾರೆ. ಖಲೀದ್​​ ಹಿಂದೆ ಬ್ರೇಕ್​ ಟ್ರಾಫಿಕ್​ ರೂಲ್ಸ್​​​ಗಳನ್ನೆಲ್ಲ ಬ್ರೇಕ್​ ಮಾಡಿದ್ದನ್ನು ಸೇರಿಸಿ ಇದೀಗ ಒಮ್ಮೆಲೇ ಪೊಲೀಸರು ದಂಡ ವಿಧಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಅನಧಿಕೃತ ಕಟ್ಟಡ ನಿರ್ಮಿಸಿದ ಪ್ರಭಾವಿಗಳ ವಿರುದ್ಧ ಮೊದಲು ಕ್ರಮ ಕೈಗೊಳ್ಳಿ; ಬಿಬಿಎಂಪಿಗೆ ಹೈಕೋರ್ಟ್​ ಸೂಚನೆ

Follow Us
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ